• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅತ್ತು ಕರೆದು ಸಚಿವರಾಗಿ ಔತಣ ಉಣ್ಣುವ ದರ್ದು ಕರಾವಳಿಗೆ ಬರಬಾರದು!!

Hanumantha Kamath Posted On February 7, 2020


  • Share On Facebook
  • Tweet It

ಅತ್ತು ಕರೆದು ಔತಣ ಮಾಡಿಸಿಕೊಂಡರು ಎನ್ನುವ ಮಾತಿದೆ. ಕರ್ನಾಟಕ ರಾಜ್ಯದಲ್ಲಿ ಈಗ ಇರುವ ಸರಕಾರದಲ್ಲಿ ಯಡಿಯೂರಪ್ಪನವರು ಅತ್ತು ಕರೆದು ಔತಣ ಮಾಡಿಸಿಕೊಂಡರೋ ಅಥವಾ ಬಿಜೆಪಿ ಸರಕಾರ ಬರಲು ಕಾರಣರಾದ ಅನರ್ಹ ಶಾಸಕರು ಮಂತ್ರಿಯಾಗಲು ಅತ್ತು ಕರೆದು ಔತಣ ಮಾಡಿಸಿಕೊಂಡರೋ ಎನ್ನುವುದೇ ಈಗ ಉಳಿದಿರುವ ಪ್ರಶ್ನೆ.

ಯಡಿಯೂರಪ್ಪನವರಿಗೆ ಸಿಎಂ ಆಗಬೇಕಿತ್ತು. ಅದಕ್ಕೆ ಅತ್ತು ಕರೆದು ಅನರ್ಹ ಶಾಸಕರನ್ನು ಒಳಗೆ ಸೇರಿಸಿಕೊಂಡರು. ಇನ್ನು ಅನರ್ಹ ಶಾಸಕರಾಗಿದ್ದವರಿಗೆ ಮಂತ್ರಿಯಾಗಬೇಕಿತ್ತು, ಅದಕ್ಕೆ ಗೆದ್ದು ಎಂಭತ್ತು ದಿನಗಳ ಬಳಿಕ ಅತ್ತು ಕರೆದು ಮಂತ್ರಿಯಾದರು. ಈ ನಡುವೆ ವಿಪಕ್ಷದವರು ಅಧಿಕಾರ ಹೋಗಿರುವ ದು:ಖದಲ್ಲಿ ಅತ್ತು ಕರೆದು ತಮ್ಮೊಳಗಿನ ಗುಂಪುಗಾರಿಕೆ, ನಾಯಕತ್ವ ಗೊಂದಲಕ್ಕೆ ಅಂತ್ಯ ಸಿಗದೇ ಹೈರಾಣಾಗಿ ವಿವಾದ ಎನ್ನುವ ಔತಣ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಇನ್ನು ಭಾರತೀಯ ಜನತಾ ಪಾರ್ಟಿಯ ಮೂಲ ಶಾಸಕರು ಸಚಿವರಾಗದೇ ಇದ್ದದ್ದಕ್ಕೆ ಅತ್ತು ಕರೆದು ಮಂತ್ರಿ ಎನ್ನುವ ಔತಣ ಯಾವಾಗ ಸಿಗುತ್ತದೋ ಎಂದು ಕಾಯುವಂತಹ ಪರಿಸ್ಥಿತಿ ಇದೆ. ಇನ್ನು ಬಿಜೆಪಿ ಅಧಿಕಾರದ ಹೊಸ್ತಿಲು ತುಳಿಯಲು ಕಾರಣಿಕೃತರಾಗಿರುವ ಸವದಿ ಹಾಗೂ ಯೋಗೀಶ್ವರ್ ಮತ್ತು ಅವರೊಂದಿಗೆ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಉಮೇಶ್ ಕತ್ತಿ ಅತ್ತು ಕರೆದು ಔತಣ ಸಿಗುತ್ತದೆಯಾ ಇಲ್ಲವಾ ಎನ್ನುವ ಹಂತಕ್ಕೆ ಬಂದು ಮುಟ್ಟಿದ್ದಾರೆ. ಸವದಿ ಉಪಮುಖ್ಯಮಂತ್ರಿಯಾಗಿರಬಹುದು. ಆದರೆ ಅವರು ಚುನಾವಣೆಯಲ್ಲಿ ಸೋತಿರುವುದರಿಂದ ಅವರು ಎಂಎಲ್ ಸಿ ಆಗುವ ತನಕ ಅವರಿಗೂ ಕಿರಿಕಿರಿಯೇ. ಈ ಎಲ್ಲ ಅತ್ತು ಕರೆದು ಔತಣ ಮಾಡಿಸಿಕೊಳ್ಳುವವರ ನಡುವೆ ನಿಜಕ್ಕೂ ಅತ್ತು ಕರೆದು ಔತಣ ಅಂದರೆ ಅಭಿವೃದ್ಧಿ ಮಾಡಿಸಿಕೊಳ್ಳುವ ಪರಿಸ್ಥಿತಿ ಈ ರಾಜ್ಯದ ಮತದಾರರದ್ದು.

ಯಾವಾಗೆಲ್ಲ ರಾಜಕೀಯ ಅತಂತ್ರ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬಂದಿದ್ದೆಯೋ ಆವಾಗೆಲ್ಲ ಕೆಲವರು ಅತ್ತಿದ್ದಾರೆ, ಕೆಲವರು ಕರೆದಿದ್ದಾರೆ, ಇನ್ನು ಕೆಲವು ಔತಣ ಮಾಡಿಸಿಕೊಂಡಿದ್ದಾರೆ. ಆದರೆ ಆಡಳಿತ ಮಾತ್ರ ಸತ್ತುಹೋಗಿದೆ. ನಾನು ಈಗ ವಿನಂತಿಸುವುದೇನೆಂದರೆ ಮೊದಲ ಎರಡು ವರ್ಷ ಹೇಗೋ ನಡೆದುಹೋಗಿದೆ. ಇನ್ನು ಭರ್ತಿ ಮೂರು ವರ್ಷ ಉಳಿದುಕೊಂಡಿದೆ. ಜನ ಕೊನೆಗೆ ಲೆಕ್ಕ ಹಾಕುವುದು ಯಡಿಯೂರಪ್ಪ ಆಗಲಿ ಇನ್ನೊಬ್ಬರಾಗಲಿ ಎಷ್ಟು ದಿನ ಸಿಎಂ ಆಗಿದ್ರು ಎಂದಲ್ಲ, ಎಷ್ಟು ಅಭಿವೃದ್ಧಿ ಮಾಡಿದ್ರು ಎನ್ನುವುದು ಮಾತ್ರ. ಆದ್ದರಿಂದ ಬಿಜೆಪಿಯ ಮೂಲ ಶಾಸಕರು ಒಂದಿಷ್ಟು ತಾಳ್ಮೆ ಇಟ್ಟುಕೊಂಡು ಕಾಯುವುದು ಒಳ್ಳೆಯದು. ಯಾರೂ ಹುಟ್ಟುವಾಗ ಸಚಿವರಾಗಿಯೇ ಹುಟ್ಟಿರುವುದಿಲ್ಲ. ಸಚಿವರಾಗಿಯೇ ಸತ್ತರೂ ಮೇಲೆ ಸ್ವರ್ಗ ಗ್ಯಾರಂಟಿ ಎಂದು ಭಗವಂತ ಹೇಳಿಲ್ಲ. ಹಾಗಿರುವಾಗ ನೀವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅಂಗಾರ, ಹಾಲಾಡಿಯವರಂತೆ ಐದಾರು ಬಾರಿ ಆರಾಮವಾಗಿ ಶಾಸಕರಾಗಿಯೇ ಇರಬಹುದು.

ಕರಾವಳಿಯ ಶಾಸಕರು ಸಾಮಾನ್ಯವಾಗಿ ಲಾಬಿ ಮಾಡುವುದಿಲ್ಲ. ಈ ಬಾರಿಯೂ ಮಾಡಿಲ್ಲ. ಕೋಟಾ ಶ್ರೀನಿವಾಸ ಪೂಜಾರಿಯವರಂತಹ ಭ್ರಷ್ಟಾಚಾರರಹಿತ ಸಚಿವರು ನಮಗೆ ಸಿಕ್ಕಿದ್ದಾರೆ. ಅವರಿಂದ ಕೆಲಸ ಮಾಡಿಸಿಕೊಳ್ಳುವ ಬಗ್ಗೆ ಇಲ್ಲಿನ ಶಾಸಕರು ಪ್ರಯತ್ನಿಸಬಹುದು. ಇನ್ನು ನಮ್ಮ ಕೆಲವು ಶಾಸಕರಿಗೆ ರಾಜ್ಯದ ಪ್ರಭಾವಿ ಸಚಿವರ ಕೃಪಾಕಟಾಕ್ಷ ಇದೆ. ಇನ್ನು ಕೆಲವರಿಗೆ ನಳಿನ್ ಕುಮಾರ್ ಕಟೀಲ್ ಅವರ ಬೆಂಬಲವಿದೆ. ಎಲ್ಲವೂ ಸೇರಿದರೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನುದಾನ ಹೆಚ್ಚಿಗೆ ತರಲು ಕೆಲಸ ಮಾಡಬಹುದಾಗಿದೆ. ಇನ್ನು ರಸ್ತೆ, ಚರಂಡಿ, ತಡೆಗೋಡೆ ಅಭಿವೃದ್ಧಿ ಎಲ್ಲರೂ ಮಾಡುತ್ತಲೇ ಇದ್ದೀರಿ. ಅದರೊಂದಿಗೆ ಪಚ್ಚನಾಡಿ, ತುಂಬೆ ಡ್ಯಾಂ, ಕದ್ರಿ ಪಾರ್ಕ್, ಮಂಗಳಾ ಕಾರ್ನೀಶ್ ಯೋಜನೆ ತರಹದ ದೂರದೃಷ್ಟಿ ಇರುವ ಕೆಲಸವೂ ಮಾಡಿ. ಮೂರು ವರ್ಷಗಳ ಬಳಿಕ ಜನರು ಪ್ರಶ್ನೆ ಕೇಳಲಿದ್ದಾರೆ. ಸಚಿವರಾಗಿದ್ದು ನೀವು ಏನು ಮಾಡದಿದ್ದರೂ ಮನೆಗೆ ಕಳುಹಿಸುತ್ತಾರೆ, ಕೇವಲ ಶಾಸಕರಾಗಿಯೂ ಅನೇಕ ಕೆಲಸ ಮಾಡಿದರೆ ಜೈ ಎನ್ನುತ್ತಾರೆ. ಆಯ್ಕೆ ನಿಮ್ಮ ಕೈಯಲ್ಲಿದೆ. ಜನ ಬಿಜೆಪಿ ಸರಕಾರವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ ಹಾಗೇ ವಿಪಕ್ಷವನ್ನು ಕೂಡ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search