• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕ್ಲಾಕ್ ಟವರ್ ಬ್ಯಾಟರಿ ಬದಲಾಯಿಸಲಾಗದವರಿಂದ ಅಭಿವೃದ್ಧಿ ನಿರೀಕ್ಷೆ!!

Hanumantha Kamath Posted On March 11, 2022


  • Share On Facebook
  • Tweet It

ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿಯವರು ಮಾಡುತ್ತಿರುವ ಕೆಲಸ ಕಂಡು ನಮ್ಮ ಜನಪ್ರತಿನಿಧಿಗಳು ತಾವೇ ಬೆನ್ನು ತಟ್ಟಿಕೊಳ್ಳುವುದು ತುಂಬಾ ಆಯಿತು. ಕಾಮಗಾರಿಗಳಿಂದ ಯಾರಿಗೆ ಲಾಭ ಆಗುತ್ತಿದೆಯೋ ಅವರು ಮಾತ್ರ ಖುಷಿ ಪಟ್ಟಿದ್ದಾರೆ ಬಿಟ್ಟರೆ ಸಾಮಾನ್ಯ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಮೊದಲನೇಯದಾಗಿ ಸ್ಮಾರ್ಟ್ ಸಿಟಿ ಮಂಡಳಿಯವರು ಸರಿಯಾಗಿ ಕೆಲಸ ಮಾಡಲ್ಲ. ಯಾವುದು ಮಾಡುತ್ತಿದ್ದಾರೋ ಅದರಿಂದ ಜನರಿಗೆ ತೊಂದರೆ ತಪ್ಪುತ್ತಿಲ್ಲ. ಸ್ಮಾರ್ಟ್ ಸಿಟಿ ಗುತ್ತಿಗೆದಾರರು ಯಾರು ಕೆಲಸವನ್ನು ತೆಗೆದುಕೊಂಡಿದ್ದಾರೋ ಅವರು ಅದೇ ಕೆಲಸವನ್ನು ಉಪಗುತ್ತಿಗೆ ಕೊಟ್ಟಿರುತ್ತಾರೆ. ಉಪಗುತ್ತಿಗೆದಾರರು ಅದನ್ನು ಪೂರ್ಣವಾಗಿ ನಿರ್ವಹಿಸಲಾರದೇ ಅದನ್ನು ಅಲ್ಲಲ್ಲಿಗೆ ಬಿಟ್ಟಿರುತ್ತಾರೆ. ರಸ್ತೆ ಮಾಡಿದರೋ ಅದನ್ನೊಂದು ಫಿನಿಶಿಂಗ್ ಮಾಡದೇ ಹಾಗೆ ಬಿಟ್ಟು ಹೋಗಿರುತ್ತಾರೆ. ಫುಟ್ ಪಾತ್ ಕತೆ ಕೂಡ ಹಾಗೆ. ನೀಟಾಗಿ ಫಿನಿಶಿಂಗ್ ಇಲ್ಲ. ಕಾಮಗಾರಿಗಳಂತೂ ಆಮೆಗತಿಯ ವೇಗದಲ್ಲಿ ಸಾಗುತ್ತಿವೆ. ಇದರಿಂದ ಏನಾಗುತ್ತದೆ ಎನ್ನುವುದಕ್ಕೆ ಬಂದರು ಪ್ರದೇಶದಲ್ಲಿ ಇರುವ ಪೋರ್ಟ್ ರಸ್ತೆಯ 400 ಮೀಟರ್ ಒಳಚರಂಡಿ ಕೆಲಸವೇ ಸಾಕ್ಷಿ. ಎರಡು ವರ್ಷಗಳಿಂದ ಮುಗಿಯುತ್ತಿಲ್ಲ. ಇದರಿಂದ ಆ ರಸ್ತೆಯಲ್ಲಿ ಇರುವ ಅಂಗಡಿಯವರಿಗೆ ನಿತ್ಯ ಧೂಳಿನ ಅಭಿಷೇಕ. ಗ್ರಾಹಕರು ಬರಲು ಹಿಂದೇಟು ಹಾಕುವುದರಿಂದ ವ್ಯಾಪಾರಕ್ಕೆ ಹೊಡೆತ. ಅದರೊಂದಿಗೆ ಅಂಗಡಿಯ ಒಳಗಿರುವ ವಸ್ತುಗಳಿಗೂ ಧೂಳಿನೊಂದಿಗೆ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದರೆ ಅಂಗಡಿಯ ಒಳಗೆ ಕಾಲಿಡಲು ಗ್ರಾಹಕರಿಗೆ ಬಿಡಿ, ಮಾಲೀಕರಿಗೆ ಮನಸ್ಸು ಆಗುತ್ತಿಲ್ಲ. ಅವರು ಇದಕ್ಕೆ ದೂಷಿಸುತ್ತಿರುವುದು ಜನಪ್ರತಿನಿಧಿಗಳನ್ನು. ಆದರೆ ಇದಕ್ಕೆ ನೇರ ಕಾರಣೀಕರ್ತರಾಗಿರುವ ಅಧಿಕಾರಿಗಳು ಮಾತ್ರ ತಮ್ಮ ಸ್ಮಾರ್ಟ್ ಸಿಟಿ ಕಚೇರಿಯ ಒಳಗೆ ಕುಳಿತು ಚೇರ್ ಬಿಸಿ ಮಾಡುತ್ತಿದ್ದಾರೆ. ಅವರು ಫೀಲ್ಡಿಗೆ ಇಳಿಯದೇ ಇರುವುದರಿಂದ ಅವರಿಗೆ ಜನ ನೇರವಾಗಿ ಬೈಯುವ ಸಾಧ್ಯತೆ ಇಲ್ಲ. ಅವರಿಗೆ ಜೋರು ಮಾಡಿ ರಸ್ತೆಗೆ ಇಳಿಸಬೇಕಾದ ಪೂರ್ಣಕಾಲಿಕ ಐಎಎಸ್ ಅಧಿಕಾರಿ ಎಂಡಿಯಾಗಿ ಸ್ಮಾರ್ಟ್ ಸಿಟಿ ಮಂಡಳಿಗೆ ಸಿಗಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದೆ ಕಾಮಗಾರಿಗಳು ಅರ್ಧಂಬರ್ಧ ಆಗಿವೆ. ಇದೇ ಕಾರಣದಿಂದ ಮೊನ್ನೆ ಬೆಳಗಿನ ಜಾವ ಒಂದು ಗಂಟೆ ಬಂದ ಮಳೆ ಹೃದಯಭಾಗ ಕ್ಲಾರ್ಕ್ ಟವರ್ ನ ಅಂಗಡಿಗಳ ಒಳಗೆ ನೀರು ನುಗ್ಗಿಸಿಬಿಟ್ಟಿದೆ. ಫುಟ್ ಪಾತ್ ಮೇಲೆ ಹಾಕಿರುವ ಮರಳು, ಟೈಲ್ಸ್ ಅಲ್ಲಿಯೇ ಬಿಟ್ಟಿರುವುದರಿಂದ ಮತ್ತು ರಸ್ತೆಯ ಮೇಲೆ ಬಿದ್ದ ಮಳೆ ನೀರು ಚರಂಡಿಗೆ ಹರಿದು ಹೋಗಲು ಇವರು ಸೂಕ್ತ ವ್ಯವಸ್ಥೆ ಮಾಡದೇ ಇದ್ದ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಇದಕ್ಕೆ ಕಾರಣ ನೀರಿಗೆ ಇವರು ಕನ್ ಫ್ಯೂಸ್ ಮಾಡಿಬಿಟ್ಟ ಕಾರಣ ಇದು ಮುಂದಿನ ಮಳೆಗಾಲಕ್ಕೆ ನಮಗೆ ಎಚ್ಚರಿಕೆಯ ಗಂಟೆ ಕೂಡ ಹೌದು.

ಕಾಂಕ್ರೀಟ್ ರಸ್ತೆ ಮಾಡಿ ಫುಟ್ ಪಾತ್ ನಿರ್ಮಾಣವಾದ ನಂತರ ಮಳೆಯ ನೀರು ಹರಿದುಹೋಗಲು ಗಲ್ಲಿ ಟ್ರಾಪ್ ಎನ್ನುವ ವ್ಯವಸ್ಥೆ ಮಾಡಬೇಕು. ಅದು ಇವರು ಮಾಡಿಯೇ ಇಲ್ಲ. ಇವರು ಎಲ್ಲಿ ಹಣ ಹೊಡೆಯಲಾಗುತ್ತದೆಯೋ ಅದನ್ನೇ ಮಾಡುತ್ತಾರೆ ವಿನ: ಜನೋಪಯೋಗಿ ಯಾವುದೇ ಕೆಲಸ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಕ್ಲಾರ್ಕ್ ಟವರ್, ಗೋವಿಂದ ಪೈ ವೃತ್ತ, ತಾಲೂಕು ಕಚೇರಿ, ಬಂದರು ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಕೃಪೆಯಿಂದ ಉಚಿತ ಕೃತಕ ಈಜುಕೊಳ ನಿರ್ಮಾಣವಾಗಿದೆ. ಇವರು ಮಾಡುವುದು ಅಗತ್ಯ ಇಲ್ಲದ ಯೋಜನೆ ಎನ್ನುವುದು ಇವರು ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಕ್ಲಾರ್ಕ್ ಟವರ್ ಮಾಡಿದಾಗಲೇ ಗೊತ್ತಾಗಿದೆ. ಈಗ ಕೆಲವು ದಿನಗಳಿಂದ ಟವರ್ ನಲ್ಲಿರುವ ಗಂಟೆ ನಡೆಯುತ್ತಿಲ್ಲ. ಅದಕ್ಕೆ ಒಂದು ಬ್ಯಾಟರಿ ಹಾಕಲು ಗತಿ ಇಲ್ಲದವರಿಂದ ನಾವು ಮಂಗಳೂರನ್ನು ಅಭಿವೃದ್ಧಿ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವಲ್ಲ. ಇವರು ಕಾಂಕ್ರೀಟ್ ರಸ್ತೆ ಮಾಡುವುದು ಮತ್ತು ಫುಟ್ ಪಾತ್ ಅನ್ನು ಅಗಲ ಮಾಡಿ ಅದಕ್ಕೆ ಕೆಂಪು ಬಣ್ಣ ಬಳಿಯುವುದೇ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದಾರೆ. ಮೂಲಭೂತ ಸೌಲಭ್ಯಗಳಾದ ಒಳಚರಂಡಿ, ಕುಡಿಯುವ ನೀರು ಸರಿಯಾಗದೇ ಮಂಗಳೂರು ಹೇಗೆ ಅಭಿವೃದ್ಧಿ ಆಗಲಿದೆ. ಇದರಿಂದಾಗಿ ಹಿಂದಿನ ಬಾರಿ ಕುಂಡ್ಸೆಪು ಯೋಜನೆಗೆ ಬಂದ 305 ಕೋಟಿ ರೂಪಾಯಿಯಿಂದ ಮಂಗಳೂರಿಗೆ ಏನೂ ಉಪಯೋಗವಾಗಿಲ್ಲ. ಲಾಭ ಪಡೆದುಕೊಂಡವರು ಖುಷಿಯಾಗಿದ್ದಾರೆ. ಆಗ ಕಾಂಗ್ರೆಸ್ ಪಾಳಯದಲ್ಲಿದ್ದವರು ಈಗ ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಗಳ ಹಿಂದೆ ನಿಂತಿದ್ದಾರೆ. ಮಂಗಳೂರಿನ ಒಳಚರಂಡಿ ಹಾಗೂ 24*7 ಕುಡಿಯುವ ನೀರು ಯೋಜನೆ ಹಾಗೆ ಪೋಲಾಯಿತು. ಜನ ಕೂಡ ಬದಲಾವಣೆ ಬಯಸಿ ಹೊಸ ಸರಕಾರಕ್ಕೆ ಅವಕಾಶ ಕೊಟ್ಟರು. ಈ ಬಾರಿಯೂ ಹೀಗೆ ಆದರೆ ಜನರಿಗೆ ಪರ್ಯಾಯ ಏನು? ಹಾಗಂತ ಮಂಗಳೂರಿನ ಜನರು ಮನಸ್ಸಿನಲ್ಲಿ ಬೈದುಕೊಂಡು ಸುಮ್ಮನಿರುತ್ತಾರೆ ವಿನ: ಹೊರಗೆ ಧ್ವನಿ ಎತ್ತುವುದಿಲ್ಲ. ಇದರಿಂದ ನಮ್ಮ ಜನಪ್ರತಿನಿಧಿಗಳು ಕೂಡ ಅಧಿಕಾರಿಗಳ ಮರ್ಜಿಗೆ ಕಾಮಗಾರಿ ಬಿಟ್ಟು ಆರಾಮವಾಗಿ ಇರುತ್ತಾರೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search