• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸದಾ ಚೈತನ್ಯಶೀಲ ಪ್ರಧಾನಿಗೆ ಹೀಯಾಳಿಸುವ ಅಲ್ಪಮತಿ ಜಿಗ್ನೇಶ್ ನಿಗೆ ಏನೆನ್ನಬೇಕು..?

ತೇಜಸ್ವಿ ಪ್ರತಾಪ, ಮಂಗಳೂರು Posted On December 21, 2017
0


0
Shares
  • Share On Facebook
  • Tweet It

ದಿನದ 19 ಗಂಟೆ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ, ಇಡೀ ವಿಶ್ವಕ್ಕೆ ಭಾರತದ ತಾಕತ್ತನ್ನು ತೋರಿಸಿರುವ, ದೇಶದ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಗ್ನೇಶ್ ಮೇವಾನಿ ಎಂಬ ಅಲ್ಪಮತಿ ಹಿಯಾಳಿಸುತ್ತಾನೆ ಎಂದರೆ ಆತನ ಕೊಳಕು ಮನಸ್ಥಿತಿ ಎಂಥಾದಿರಬೇಕು?

‘ಪ್ರಧಾನಿಗೆ ವಯಸ್ಸಾಗಿದೆ, ಅವರು ಹಿಮಾಲಯದ ಯಾತ್ರೆ ಮಾಡಬೇಕು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ತಲೆಯಲ್ಲಿ ಏನು ಇಲ್ಲ.’ ಇದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿಗ್ನೇಶ್ ಮೇವಾನಿ ಎಂಬ ಅಧಿಕಾರಕ್ಕೆ ದಲಿತರ ಹೋರಾಟ ಬಳಸಿಕೊಂಡವನ ಮಾತು.

‘ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ’  ಎಂಬ ಗಾದೆ ಮಾತಂತೆ ತನ್ನ ಶಾಸಕ ಸ್ಥಾನದ ಘನತೆ ಮತ್ತು ದೇಶದ ಪ್ರಧಾನಿಯ ಸ್ಥಾನದ ಘನತೆ ಅವರ ಕಾರ್ಯಶೈಲಿಯ ಅರಿವು ಇಲ್ಲದೇ ಹೀಯಾಳಿಸುವ ಜಿಗ್ನೇಶನಿಗೆ ಅದ್ಯಾವ ಮಟ್ಟಿಗೆ ಅಧಿಕಾರದ ಮಧ ಏರಿರಬೇಕು ಎಂಬುದಕ್ಕೆ ಸಾಕ್ಷಿ ಈ ಮಾತುಗಳು.

ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ವಿಜಯೋತ್ಸವದ ಗುಂಗಿನಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಓಖಿ ಚಂಡಮಾರುತದಿಂದ ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸಲು ರಾತ್ರಿಯೇ ಪ್ರಯಾಣ ಬೆಳೆಸಿದರು. ಆದರೇ ಜಿಗ್ನೇಶ್ ನಿಗೆ ಸಾಥ್ ನೀಡಿದ ಅಲ್ಲ ಜಿಗ್ನೇಶ್ ಸಾಥ್ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಿನೆಮಾ ನೋಡಲು ಹೋಗಿದ್ದರು.

ದೇಶವಾಸಿಗಳ ನೋವಿಗೆ ಕ್ಷಣಮಾತ್ರದಲ್ಲಿ ಮಿಡಿಯುವ, ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿಗೆ ಅವರನ್ನು ವಯಸ್ಸಾಗಿದೆ ಎಂದು ಹೀಯಾಳಿಸುವ ಜಿಗ್ನೇಶ್ ತನ್ನ ಸಾಮರ್ಥ್ಯವೇನು ಎಂಬುದನ್ನು ಅರಿತು ಮಾತಾಡುವುದು ಒಳಿತು.

ಸತತ 22 ವರ್ಷಗಳ ನಂತರವೂ ಗುಜರಾತ್ ನಲ್ಲಿ ಬಿಜೆಪಿಗೆ ಜನರು ಅಧಿಕಾರಕ್ಕೆ ತರುತ್ತಾರೆ ಎಂದರೆ ಅದಕ್ಕೆ ನರೇಂದ್ರ ಮೋದಿ ಗುಜರಾತ್ ನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ಜಿಗ್ನೇಶ್ ಬೆಂಬಲಿಸಿದ ಕಾಂಗ್ರೆಸ್ ಪಕ್ಷದವರು ದೇಶಕ್ಕೆ ನೀಡಿದ ಕೊಡುಗೆ ಏನು ಎಂಬುದಕ್ಕೆ ಇಷ್ಟು ವರ್ಷವಾದರೂ ದೇಶದಲ್ಲಿ ಸಮಾನತೆ ಸಾಧಿಸಲು ಆಗದೇ ಒಂದೇ ಕುಟುಂಬಕ್ಕೆ ಜೋತು ಬಿದ್ದು ಒದ್ದಾಡುತ್ತಿರುವುದೇ ಸಾಕ್ಷಿ.

ಜಿಗ್ನೇಶ ಮೇವಾನಿ ದೇಶದ ಕೋಟ್ಯಂತರ ದಲಿತ ಸಮುದಾಯ ಒಂದು ಸಣ್ಣ ಎಚ್ಚರಿಕೆ ಕಣ್ಣನ್ನು ಬಹು ನಿರೀಕ್ಷೆಯೊಂದಿಗೆ ಇಟ್ಟುಕೊಂಡಿದೆ. ತಾನು ದಲಿತ ನಾಯಕ ಎಂದು ಅಧಿಕಾರಕ್ಕೆ ಬಂದು, ವೋಟು ಪಡೆದು ಮೂಲ ಸಮಸ್ಯೆ ಮರೆತು ದೇಶದ ಕೋಟ್ಯಂತರ ಜನರು ಅಧಿಕಾರಕ್ಕೆ ತಂದಿರುವ ಮೋದಿ ಅವರನ್ನು ನಿಂದಿಸುವುದು ಸರ್ವತಾ ಸಲ್ಲ.

ಮೇವಾನಿ ತನ್ನ ಸೃಜನಶೀಲ ಕಾರ್ಯಚಟುವಟಿಗಳ ಮೂಲಕ ಹೆಸರು ಮಾಡಬೇಕೇ ಹೊರತು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಿರಿಯರ ವಿರುದ್ಧ ಅಗೌರವದ ಮಾತುಗಳನ್ನಾಡಿ ಖ್ಯಾತಿ ಪಡೆಯುವ ಉದ್ದೇಶವಿದ್ದರೇ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
ತೇಜಸ್ವಿ ಪ್ರತಾಪ, ಮಂಗಳೂರು November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
ತೇಜಸ್ವಿ ಪ್ರತಾಪ, ಮಂಗಳೂರು November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!

  • Privacy Policy
  • Contact
© Tulunadu Infomedia.

Press enter/return to begin your search