• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸದಾ ಚೈತನ್ಯಶೀಲ ಪ್ರಧಾನಿಗೆ ಹೀಯಾಳಿಸುವ ಅಲ್ಪಮತಿ ಜಿಗ್ನೇಶ್ ನಿಗೆ ಏನೆನ್ನಬೇಕು..?

ತೇಜಸ್ವಿ ಪ್ರತಾಪ, ಮಂಗಳೂರು Posted On December 21, 2017
0


0
Shares
  • Share On Facebook
  • Tweet It

ದಿನದ 19 ಗಂಟೆ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ, ಇಡೀ ವಿಶ್ವಕ್ಕೆ ಭಾರತದ ತಾಕತ್ತನ್ನು ತೋರಿಸಿರುವ, ದೇಶದ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಗ್ನೇಶ್ ಮೇವಾನಿ ಎಂಬ ಅಲ್ಪಮತಿ ಹಿಯಾಳಿಸುತ್ತಾನೆ ಎಂದರೆ ಆತನ ಕೊಳಕು ಮನಸ್ಥಿತಿ ಎಂಥಾದಿರಬೇಕು?

‘ಪ್ರಧಾನಿಗೆ ವಯಸ್ಸಾಗಿದೆ, ಅವರು ಹಿಮಾಲಯದ ಯಾತ್ರೆ ಮಾಡಬೇಕು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ತಲೆಯಲ್ಲಿ ಏನು ಇಲ್ಲ.’ ಇದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿಗ್ನೇಶ್ ಮೇವಾನಿ ಎಂಬ ಅಧಿಕಾರಕ್ಕೆ ದಲಿತರ ಹೋರಾಟ ಬಳಸಿಕೊಂಡವನ ಮಾತು.

‘ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ’  ಎಂಬ ಗಾದೆ ಮಾತಂತೆ ತನ್ನ ಶಾಸಕ ಸ್ಥಾನದ ಘನತೆ ಮತ್ತು ದೇಶದ ಪ್ರಧಾನಿಯ ಸ್ಥಾನದ ಘನತೆ ಅವರ ಕಾರ್ಯಶೈಲಿಯ ಅರಿವು ಇಲ್ಲದೇ ಹೀಯಾಳಿಸುವ ಜಿಗ್ನೇಶನಿಗೆ ಅದ್ಯಾವ ಮಟ್ಟಿಗೆ ಅಧಿಕಾರದ ಮಧ ಏರಿರಬೇಕು ಎಂಬುದಕ್ಕೆ ಸಾಕ್ಷಿ ಈ ಮಾತುಗಳು.

ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ವಿಜಯೋತ್ಸವದ ಗುಂಗಿನಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಓಖಿ ಚಂಡಮಾರುತದಿಂದ ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸಲು ರಾತ್ರಿಯೇ ಪ್ರಯಾಣ ಬೆಳೆಸಿದರು. ಆದರೇ ಜಿಗ್ನೇಶ್ ನಿಗೆ ಸಾಥ್ ನೀಡಿದ ಅಲ್ಲ ಜಿಗ್ನೇಶ್ ಸಾಥ್ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಿನೆಮಾ ನೋಡಲು ಹೋಗಿದ್ದರು.

ದೇಶವಾಸಿಗಳ ನೋವಿಗೆ ಕ್ಷಣಮಾತ್ರದಲ್ಲಿ ಮಿಡಿಯುವ, ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿಗೆ ಅವರನ್ನು ವಯಸ್ಸಾಗಿದೆ ಎಂದು ಹೀಯಾಳಿಸುವ ಜಿಗ್ನೇಶ್ ತನ್ನ ಸಾಮರ್ಥ್ಯವೇನು ಎಂಬುದನ್ನು ಅರಿತು ಮಾತಾಡುವುದು ಒಳಿತು.

ಸತತ 22 ವರ್ಷಗಳ ನಂತರವೂ ಗುಜರಾತ್ ನಲ್ಲಿ ಬಿಜೆಪಿಗೆ ಜನರು ಅಧಿಕಾರಕ್ಕೆ ತರುತ್ತಾರೆ ಎಂದರೆ ಅದಕ್ಕೆ ನರೇಂದ್ರ ಮೋದಿ ಗುಜರಾತ್ ನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ಜಿಗ್ನೇಶ್ ಬೆಂಬಲಿಸಿದ ಕಾಂಗ್ರೆಸ್ ಪಕ್ಷದವರು ದೇಶಕ್ಕೆ ನೀಡಿದ ಕೊಡುಗೆ ಏನು ಎಂಬುದಕ್ಕೆ ಇಷ್ಟು ವರ್ಷವಾದರೂ ದೇಶದಲ್ಲಿ ಸಮಾನತೆ ಸಾಧಿಸಲು ಆಗದೇ ಒಂದೇ ಕುಟುಂಬಕ್ಕೆ ಜೋತು ಬಿದ್ದು ಒದ್ದಾಡುತ್ತಿರುವುದೇ ಸಾಕ್ಷಿ.

ಜಿಗ್ನೇಶ ಮೇವಾನಿ ದೇಶದ ಕೋಟ್ಯಂತರ ದಲಿತ ಸಮುದಾಯ ಒಂದು ಸಣ್ಣ ಎಚ್ಚರಿಕೆ ಕಣ್ಣನ್ನು ಬಹು ನಿರೀಕ್ಷೆಯೊಂದಿಗೆ ಇಟ್ಟುಕೊಂಡಿದೆ. ತಾನು ದಲಿತ ನಾಯಕ ಎಂದು ಅಧಿಕಾರಕ್ಕೆ ಬಂದು, ವೋಟು ಪಡೆದು ಮೂಲ ಸಮಸ್ಯೆ ಮರೆತು ದೇಶದ ಕೋಟ್ಯಂತರ ಜನರು ಅಧಿಕಾರಕ್ಕೆ ತಂದಿರುವ ಮೋದಿ ಅವರನ್ನು ನಿಂದಿಸುವುದು ಸರ್ವತಾ ಸಲ್ಲ.

ಮೇವಾನಿ ತನ್ನ ಸೃಜನಶೀಲ ಕಾರ್ಯಚಟುವಟಿಗಳ ಮೂಲಕ ಹೆಸರು ಮಾಡಬೇಕೇ ಹೊರತು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಿರಿಯರ ವಿರುದ್ಧ ಅಗೌರವದ ಮಾತುಗಳನ್ನಾಡಿ ಖ್ಯಾತಿ ಪಡೆಯುವ ಉದ್ದೇಶವಿದ್ದರೇ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ.

0
Shares
  • Share On Facebook
  • Tweet It




Trending Now
ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
ತೇಜಸ್ವಿ ಪ್ರತಾಪ, ಮಂಗಳೂರು July 31, 2025
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
ತೇಜಸ್ವಿ ಪ್ರತಾಪ, ಮಂಗಳೂರು July 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
  • Popular Posts

    • 1
      ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • 2
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 3
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 4
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 5
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!

  • Privacy Policy
  • Contact
© Tulunadu Infomedia.

Press enter/return to begin your search