• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಇರುವ ಶಸ್ತ್ರಾಸ್ತ್ರದಲ್ಲೇ ನಮ್ಮ ಸೈನಿಕರು ಸಮರ್ಥವಾಗಿ ಹೋರಾಟಬಲ್ಲರು ಎಂದ ರಾವತ್, ಕೇಂದ್ರ ವಿರೋಧಿಗಳಿಗೆ ಉರಿ

TNN Correspondent Posted On March 19, 2018
0


0
Shares
  • Share On Facebook
  • Tweet It

ದೆಹಲಿ: ಇತ್ತೀಚೆಗಷ್ಟೇ ಬಿಪಿನ್ ರಾವತ್ ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ಖರೀದಿಗೆ ನೀಡುತ್ತಿರುವ ಹಣ ಸಮರ್ಪಕ ಎನಿಸುತ್ತಿಲ್ಲ ಎಂದು ತುಸು ಅಸಮಾಧಾನ ಹೊರಹಾಕುತ್ತಲೇ, ಕೆಲ ಮೋದಿ ವಿರೋಧಿಗಳು, ಎಡಬಿಡಂಗಿಗಳು, ಸ್ವಯಂಘೋಷಿತ ಬುದ್ಧಿಜೀವಿಗಳು ಕೇಂದ್ರ ಸರ್ಕಾರವನ್ನು ತೆಗಳಿದ್ದರು. ಕೇಂದ್ರ ಸರ್ಕಾರ ಸುಮ್ಮನೆ ದೇಶಪ್ರೇಮ, ಸೈನಿಕರ ಗುಣಗಾನ ಮಾಡುತ್ತದೆ. ಆದರೆ ಅವರಿಗೆ ಸರಿಯಾದ ಶಸ್ತ್ರಾಸ್ತ್ರ ನೀಡಿಲ್ಲ ಎಂದು ಬೊಬ್ಬೆ ಹಾಕಿದರು.

ಇದಾದ ಬಳಿಕ ಎಚ್ಚೆತ್ತುಕೊಂಡ ಸಂಸದೀಯ ಸಮಿತಿ, ಶಸ್ತ್ರಾಸ್ತ್ರ ಖರೀದಿಗಾಗಿ ವರದಿಯೊಂದನ್ನು ಸಂಸತ್ತಿಗೆ ನೀಡಿದೆ. ಆದಾಗಲೇ ಶಸ್ತ್ರಾಸ್ತ್ರ ಸಂಗ್ರಹಣೆಗೆ ಏನೇನು ತಯಾರಿ ಬೇಕೋ, ಅದೆಲ್ಲವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ.

ಇದರಿಂದ ಸಮಾಧಾನಗೊಂಡ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೈನ್ಯದಲ್ಲಿರುವ ಶಸ್ತ್ರಾಸ್ತ್ರಗಳು ಹಳೆಯದಾಗಿವೆ ನಿಜ. ಈಗ ಅವುಗಳ ಸಂಗ್ರಹಣೆ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಆದರೂ, ಪರಿಸ್ಥಿತಿ ಹೇಗೆಯೇ ಇದ್ದರು. ಎಂತಹ ವಿಷಮ ಪರಿಸ್ಥಿತಿಯೇ ಎದುರಾದರೂ, ಇರುವ ಶಸ್ತ್ರಾಸ್ತ್ರಗಳನ್ನೇ ಬಳಸಿಕೊಂಡು ಹೇಗೆ ಹೋರಾಡಬೇಕು ಎಂಬುದು ಭಾರತೀಯ ಸೈನಿಕರಿಗೆ ಗೊತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಸೈನ್ಯಕ್ಕೆ ಕೇಂದ್ರ ಸರ್ಕಾರ ನೀಡುವ ಎಲ್ಲ ಹಣವೂ ಸೈನಿಕರ ನಿರ್ಹವಣೆಗೆ ಮಾತ್ರ ಖರ್ಚಾಗುತ್ತದೆ ಎಂಬ ಮಾತು ಸುಳ್ಳು. ಸೈನ್ಯಕ್ಕೆ ವಿನಿಯೋಗಿಸುವ ಹಣದಲ್ಲಿ ಶೇ.35ರಷ್ಟನ್ನು ಶಸ್ತ್ರಾಸ್ತ್ರ ಖರೀದಿಗೆ ನೀಡಲಾಗುತ್ತದೆ. ನಮ್ಮ ಸೈನ್ಯ ಎಂದಿಗೂ ಸಮರ್ಥವಾಗಿದ್ದು, ಯಾವುದೇ ವಿಷಮ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.

ಬಿಪಿನ್ ರಾವತ್ ಅವರ ಈ ಹೇಳಿಕೆಯಿಂದ, ಸಣ್ಣ ಲೋಪವನ್ನೇ ದೊಡ್ಡದು ಮಾಡಿ, ಕೇಂದ್ರ ಸರ್ಕಾರವನ್ನು ತೆಗಳಿದ್ದ ಕೆಲ ಅತೃಪ್ತ ಮನಸ್ಸುಗಳಿಗೆ ಉರಿ ಆರಂಭವಾಗಿದ್ದು ಮಾತ್ರ ಸುಳ್ಳಲ್ಲ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!

  • Privacy Policy
  • Contact
© Tulunadu Infomedia.

Press enter/return to begin your search