• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜೂನ್ 20 ರಂದು ಹಸೆಮಣೆ ಏರಬೇಕಿದ್ದ ಯೋಧ, ವೀರ ಮರಣ ಹೊಂದಿ ತ್ರಿವರ್ಣ ಧ್ವಜ ಹೊದ್ದು ಹುತಾತ್ಮನಾದ

TNN Correspondent Posted On June 4, 2018


  • Share On Facebook
  • Tweet It

ದೆಹಲಿ: ಯೋಧರು ದೇಶಕ್ಕಾಗಿ ತಮ್ಮ ಜೀವನವನ್ನೆ ಪಣಕ್ಕಿಟ್ಟು ಹೋರಾಡುತ್ತಾರೆ. ತಮ್ಮ ನೂರಾರು ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ದೇಶಕ್ಕಾಗಿ ಗಡಿಯಲ್ಲಿ ವಿರೋಧಿ ರಾಷ್ಟ್ರದೊಂದಿಗೆ ಕಾದಾಟ ನಡೆಸಿ ಜೀವ ನೀಡುತ್ತಾರೆ. ಆದರೆ ಅವರ ಹಲವು ಆಸೆಗಳು ಈಡೇರುವುದಿಲ್ಲ ಎಂಬುದಕ್ಕೆ ಸೋಮವಾರ ಪಾಕಿಸ್ತಾನದ ಗಡಿ ನಿಯಮ ಉಲ್ಲಂಘಿಸಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಯೋಧ ವಿಜಯ ಪಾಂಡೆ ಜ್ವಲಂತ ನಿದರ್ಶನವಾಗಿದ್ದಾರೆ.

ಪಾಕಿಸ್ತಾನದ ಅಪ್ರಚೋಧಿತ ದಾಳಿಗೆ ಸೋಮವಾರ ಬಲಿಯಾದ ಬಿಎಸ್ ಎಫ್ ಯೋಧ ವಿಜಯ ಪಾಂಡೆ ಮದುವೆ ಜೂನ್ 20 ರಂದು ನಿಶ್ಚಯವಾಗಿತ್ತು. ಜೂನ್ 15 ರಂದು ವಿಜಯ ಪಾಂಡೆ ಅವರ ತಿಲಕ ಕಾರ್ಯಕ್ರಮವಿತ್ತು. ಪಾಕಿಗಳ ಅಟ್ಟಹಾಸ ಅವರನ್ನು ಹಸೆ ಮಣೆ ಏರುವ ಮುನ್ನವೇ ಹುತಾತ್ಮರನ್ನಾಗಿಸಿದೆ. ವಿಜಯ ಹುತಾತ್ಮರಾಗುವ ಮುನ್ನ ಕೆಲವು ದಿನಗಳ ಹಿಂದೆ ವಿಜಯ ಅವರ ತಂದೆ ಕರೆ ಮಾಡಿ ‘ಮದುವೆ ತಯಾರಿ ನಡೆದಿವೆ. ಆಮಂತ್ರಣ ಪತ್ರ ಸಿದ್ಧಪಡಿಸಲಾಗಿದೆ. ಮದುವೆಗೆ ನಾನಾ ಕಾರ್ಯಗಳು ಬಾಕಿ ಇವೆ. ಬೇಗ ಬಾ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿಜಯ ಎಲ್ಲವೂ ಸರಿಯಾಗಲಿದೆ. ಶೀಘ್ರದಲ್ಲಿ ಮನೆಗೆ ಬರಲಿದ್ದೇನೆ ಎಂದು ಹೇಳಿದ್ದರು. ಅಲ್ಲದೇ ರಜೆಗೆ ಹಿರಿಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿದ್ದರು ಎನ್ನಲಾಗಿದೆ.

ಉತ್ತರ ಪ್ರದೇಶದ ಫತೇಪುರದ ಸಾಠಿಗಾಂವ್ ನ ವಿಜಯ ಪಾಂಡೆ ವೀರ ಮರಣ ಹೊಂದಿರುವುದಕ್ಕೆ ಇದೀಗ ಇಡೀ ಗ್ರಾಮ ಶೋಕತಪ್ತವಾಗಿದ್ದು, ಮನೆ ಮಗನನ್ನು ಕಳೆದುಕೊಂಡ ದುಖಃ ಇಡೀ ಗ್ರಾಮಕ್ಕೆ ಆವರಿಸಿದೆ. ಅಲ್ಲದೇ ವಿಜಯ ಪಾಂಡೆ ಅವರಿಗೆ ನಿಶ್ಚಿತವಾಗಿದ್ದ ಯುವತಿಯ ಗ್ರಾಮ ಬುಠವಾದಲ್ಲೂ ಮೌನ ಆವರಿಸಿದೆ.  ಜೂನ್ 20ರಂದು ಹಸೆ ಮಣೆ ಏರಬೇಕಿದ್ದ ಯೋಧನಿಗೆ ಜೂನ್ .4ರಂದು ಚಿತೆಗೆ ಅಗ್ನಿ ಸ್ಪರ್ಷ ನೀಡಲಾಗಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search