• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜೂನ್ 20 ರಂದು ಹಸೆಮಣೆ ಏರಬೇಕಿದ್ದ ಯೋಧ, ವೀರ ಮರಣ ಹೊಂದಿ ತ್ರಿವರ್ಣ ಧ್ವಜ ಹೊದ್ದು ಹುತಾತ್ಮನಾದ

TNN Correspondent Posted On June 4, 2018


  • Share On Facebook
  • Tweet It

ದೆಹಲಿ: ಯೋಧರು ದೇಶಕ್ಕಾಗಿ ತಮ್ಮ ಜೀವನವನ್ನೆ ಪಣಕ್ಕಿಟ್ಟು ಹೋರಾಡುತ್ತಾರೆ. ತಮ್ಮ ನೂರಾರು ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ದೇಶಕ್ಕಾಗಿ ಗಡಿಯಲ್ಲಿ ವಿರೋಧಿ ರಾಷ್ಟ್ರದೊಂದಿಗೆ ಕಾದಾಟ ನಡೆಸಿ ಜೀವ ನೀಡುತ್ತಾರೆ. ಆದರೆ ಅವರ ಹಲವು ಆಸೆಗಳು ಈಡೇರುವುದಿಲ್ಲ ಎಂಬುದಕ್ಕೆ ಸೋಮವಾರ ಪಾಕಿಸ್ತಾನದ ಗಡಿ ನಿಯಮ ಉಲ್ಲಂಘಿಸಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಯೋಧ ವಿಜಯ ಪಾಂಡೆ ಜ್ವಲಂತ ನಿದರ್ಶನವಾಗಿದ್ದಾರೆ.

ಪಾಕಿಸ್ತಾನದ ಅಪ್ರಚೋಧಿತ ದಾಳಿಗೆ ಸೋಮವಾರ ಬಲಿಯಾದ ಬಿಎಸ್ ಎಫ್ ಯೋಧ ವಿಜಯ ಪಾಂಡೆ ಮದುವೆ ಜೂನ್ 20 ರಂದು ನಿಶ್ಚಯವಾಗಿತ್ತು. ಜೂನ್ 15 ರಂದು ವಿಜಯ ಪಾಂಡೆ ಅವರ ತಿಲಕ ಕಾರ್ಯಕ್ರಮವಿತ್ತು. ಪಾಕಿಗಳ ಅಟ್ಟಹಾಸ ಅವರನ್ನು ಹಸೆ ಮಣೆ ಏರುವ ಮುನ್ನವೇ ಹುತಾತ್ಮರನ್ನಾಗಿಸಿದೆ. ವಿಜಯ ಹುತಾತ್ಮರಾಗುವ ಮುನ್ನ ಕೆಲವು ದಿನಗಳ ಹಿಂದೆ ವಿಜಯ ಅವರ ತಂದೆ ಕರೆ ಮಾಡಿ ‘ಮದುವೆ ತಯಾರಿ ನಡೆದಿವೆ. ಆಮಂತ್ರಣ ಪತ್ರ ಸಿದ್ಧಪಡಿಸಲಾಗಿದೆ. ಮದುವೆಗೆ ನಾನಾ ಕಾರ್ಯಗಳು ಬಾಕಿ ಇವೆ. ಬೇಗ ಬಾ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿಜಯ ಎಲ್ಲವೂ ಸರಿಯಾಗಲಿದೆ. ಶೀಘ್ರದಲ್ಲಿ ಮನೆಗೆ ಬರಲಿದ್ದೇನೆ ಎಂದು ಹೇಳಿದ್ದರು. ಅಲ್ಲದೇ ರಜೆಗೆ ಹಿರಿಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿದ್ದರು ಎನ್ನಲಾಗಿದೆ.

ಉತ್ತರ ಪ್ರದೇಶದ ಫತೇಪುರದ ಸಾಠಿಗಾಂವ್ ನ ವಿಜಯ ಪಾಂಡೆ ವೀರ ಮರಣ ಹೊಂದಿರುವುದಕ್ಕೆ ಇದೀಗ ಇಡೀ ಗ್ರಾಮ ಶೋಕತಪ್ತವಾಗಿದ್ದು, ಮನೆ ಮಗನನ್ನು ಕಳೆದುಕೊಂಡ ದುಖಃ ಇಡೀ ಗ್ರಾಮಕ್ಕೆ ಆವರಿಸಿದೆ. ಅಲ್ಲದೇ ವಿಜಯ ಪಾಂಡೆ ಅವರಿಗೆ ನಿಶ್ಚಿತವಾಗಿದ್ದ ಯುವತಿಯ ಗ್ರಾಮ ಬುಠವಾದಲ್ಲೂ ಮೌನ ಆವರಿಸಿದೆ.  ಜೂನ್ 20ರಂದು ಹಸೆ ಮಣೆ ಏರಬೇಕಿದ್ದ ಯೋಧನಿಗೆ ಜೂನ್ .4ರಂದು ಚಿತೆಗೆ ಅಗ್ನಿ ಸ್ಪರ್ಷ ನೀಡಲಾಗಿದೆ.

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Tulunadu News June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Tulunadu News June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search