• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಏನಾಗಿದೆ ಈ ಆರ್ಚ್ ಬಿಷಪ್ ಗಳಿಗೆ, ಯಾರ ಬೆಂಬಲದಿಂದ ಇವರು ಹೀಗೆ ಆಡುತ್ತಿದ್ದಾರೆ?

TNN Correspondent Posted On June 5, 2018
0


0
Shares
  • Share On Facebook
  • Tweet It

ಇತ್ತೀಚೆಗೆ ದೆಹಲಿಯ ಆರ್ಚ್ ಬಿಷಪ್ ಅನಿಲ್ ಕೌಂಟೋ ಒಂದು ಹೇಳಿಕೆ ಮೂಲಕ ಭಾರತದಾದ್ಯಂತ ವಿವಾದ ಸೃಷ್ಟಿಸಿದ್ದರು. ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸರ್ಕಾರ ಬದಲಾಯಿಸಬೇಕು ಎಂದು ಎಲ್ಲರೂ ಪ್ರಾರ್ಥಿಸಬೇಕು ಎಂಬುದಾಗಿ ಪ್ರಕಟಣೆ ಹೊರಡಿಸಿದರು. ಕ್ರೈಸ್ತ ಮತೀಯರು ಪ್ರಾರ್ಥನೆ ಮಾಡಬೇಕು ಎಂದು ಕೋರಿದ್ದರು.

ಇವರ ಬೆನ್ನಲ್ಲೇ ಈಗ ಗೋವಾ ಆರ್ಚ್ ಬಿಷಪ್ ಫಿಲಿಪ್ ನೆರಿ ಪೆರಾವೋ ಎಂಬಾತ ಸಹ ಇಂಥಾದ್ದೇ ಹೇಳಿಕೆ ನೀಡಿದ್ದು, ಇಡೀ ದೇಶದ ಗಮನ ಸೆಳೆದಿದ್ದಾರೆ. ಸಂವಿಧಾನ ಅಪಾಯದಲ್ಲಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಉರುಳಿಸುವುದೇ ತಮ್ಮ ಉದ್ದೇಶ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅಷ್ಟಕ್ಕೂ ದೇಶದಲ್ಲಿ ಮತಪ್ರಚಾರಕರಾಗಿ ಬಂದಿರು, ಏಸು ಕ್ರಿಸ್ತನ ಸಂದೇಶ ಸಾರುವುದರಲ್ಲಿ ನಿರತರಾಗಿರುವ, ವ್ಯಾಟಿಕನ್ ಸಿಟಿ ಹಾಗೂ ವಿದೇಶಿ ಎನ್ ಜಿಒಗಳ ಹಣ ಪಡೆಯುವ ಈ ಕ್ರೈಸ್ತ ಪಾದ್ರಿಗಳಿಗೂ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಏನು ಸಂಬಂಧ? ಯಾವ ಜನ್ಮದ ದ್ವೇಷ ಇದು? ಯಾಕಾಗಿ ಆರ್ಚ್ ಬಿಷಪ್ ಗಳು ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ?

ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಮೊದಲಿಗೆ ನೋಂದಣಿಯಾಗದ, ಲೆಕ್ಕಪತ್ರ ಸಲ್ಲಿಸದ ಸುಮಾರು 20 ಸಾವಿರಕ್ಕೂ ಎನ್ಜಿಒಗಳನ್ನು ಬ್ಯಾನ್ ಮಾಡಿದ್ದಾರೆ. ನೋಟು ನಿಷೇಧ ಮಾಡಿದ ಕಾರಣ ಎನ್ ಜಿಒಗಳು ಬೇಕಾಬಿಟ್ಟಿ ಸಹಾಯಧನ ಪಡೆಯಲು ಕಡಿವಾಣ ಹಾಕಿದ್ದಾರೆ. ಇದರಿಂದ ಕ್ರೈಸ್ತ ಮಿಷನರಿಗಳಿಗೆ ಭಾರತದಲ್ಲಿ ಮತಾಂತರಕ್ಕಾಗಿ ಹಣ ವ್ಯಯಿಸಲು ಆಗುತ್ತಿಲ್ಲ. ಭಾರತದ ಸಮಸ್ಯೆ ತೋರಿಸಿ ಹಣ ಪೀಕಲು ಆಗುತ್ತಿಲ್ಲ.

ಹೌದು, ಇಷ್ಟು ದಿನ ಇಲ್ಲದೆ ಈಗ ಏಕಾಏಕಿ ನರೇಂದ್ರ ಮೋದಿ ವಿರುದ್ಧ ತಿರುಗಿಬೀಳುತ್ತಿದ್ದಾರೆ ಎಂದರೆ, ಅದರಲ್ಲೂ ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಇವರು ಪರೋಕ್ಷವಾಗಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದರೆ ಇವರಿಗೆ ದೇಶದೊಳಗಿನ ಪಕ್ಷಗಳೇ ಬೆಂಬಲ ನೀಡುತ್ತಿವೆ ಹಾಗೂ ದೇಶದೊಳಗಿನ ಪಕ್ಷಗಳಿಗೆ ಕ್ರೈಸ್ತ ಮಿಷನರಿಗಳು ಬೆಂಬಲ ನೀಡುತ್ತಿವೆ ಎಂದರೆ ಇದರೊಳಗೆ ಏನೋ ಮಸಲತ್ತು ಇದೆ ಎಂದಾಯಿತಲ್ಲ.

ಅಷ್ಟಕ್ಕೂ ಈ ಕ್ರೈಸ್ತ ಮಿಷನರಿಗಳು, ಆರ್ಚ್ ಬಿಷಪ್ ಗಳು ಭಾರತದ ಸಂವಿಧಾನ ಹೇಗೆ ಅಪಾಯದಲ್ಲಿದೆ? ಸಂವಿಧಾನಕ್ಕೆ ಏನು ಅನ್ಯಾಯವಾಗಿದೆ? ಸಂವಿಧಾನದ ನಿಯಮ ಪಾಲಿಸದೆ ಯಾರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಕುರಿತು ಉದಾಹರಣೆ ಮೂಲಕ ತಿಳಿಸುವುದಿಲ್ಲ. ಬದಲಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ, ಹುರುಳಿಲ್ಲದೆ ಹೀಗೆ ಸಂವಿಧಾನ ಅಪಾಯದಲ್ಲಿದೆ ಎಂದು ಜನರ ತಲೆ ಕೆಡಿಸುತ್ತಿದ್ದಾರೆ. ಏಸು ಸಂದೇಶ ಸಮಾಧಿ ಮಾಡಿ ರಾಜಕೀಯ ಕಟ್ಟಡ ಕಟ್ಟಲು ಹೊರಟಿದ್ದಾರೆ. ಇಂತಹವರನ್ನು ನಂಬುವುದಾದರೂ ಹೇಗೆ?

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search