• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಏನಾಗಿದೆ ಈ ಆರ್ಚ್ ಬಿಷಪ್ ಗಳಿಗೆ, ಯಾರ ಬೆಂಬಲದಿಂದ ಇವರು ಹೀಗೆ ಆಡುತ್ತಿದ್ದಾರೆ?

TNN Correspondent Posted On June 5, 2018
0


0
Shares
  • Share On Facebook
  • Tweet It

ಇತ್ತೀಚೆಗೆ ದೆಹಲಿಯ ಆರ್ಚ್ ಬಿಷಪ್ ಅನಿಲ್ ಕೌಂಟೋ ಒಂದು ಹೇಳಿಕೆ ಮೂಲಕ ಭಾರತದಾದ್ಯಂತ ವಿವಾದ ಸೃಷ್ಟಿಸಿದ್ದರು. ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸರ್ಕಾರ ಬದಲಾಯಿಸಬೇಕು ಎಂದು ಎಲ್ಲರೂ ಪ್ರಾರ್ಥಿಸಬೇಕು ಎಂಬುದಾಗಿ ಪ್ರಕಟಣೆ ಹೊರಡಿಸಿದರು. ಕ್ರೈಸ್ತ ಮತೀಯರು ಪ್ರಾರ್ಥನೆ ಮಾಡಬೇಕು ಎಂದು ಕೋರಿದ್ದರು.

ಇವರ ಬೆನ್ನಲ್ಲೇ ಈಗ ಗೋವಾ ಆರ್ಚ್ ಬಿಷಪ್ ಫಿಲಿಪ್ ನೆರಿ ಪೆರಾವೋ ಎಂಬಾತ ಸಹ ಇಂಥಾದ್ದೇ ಹೇಳಿಕೆ ನೀಡಿದ್ದು, ಇಡೀ ದೇಶದ ಗಮನ ಸೆಳೆದಿದ್ದಾರೆ. ಸಂವಿಧಾನ ಅಪಾಯದಲ್ಲಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಉರುಳಿಸುವುದೇ ತಮ್ಮ ಉದ್ದೇಶ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅಷ್ಟಕ್ಕೂ ದೇಶದಲ್ಲಿ ಮತಪ್ರಚಾರಕರಾಗಿ ಬಂದಿರು, ಏಸು ಕ್ರಿಸ್ತನ ಸಂದೇಶ ಸಾರುವುದರಲ್ಲಿ ನಿರತರಾಗಿರುವ, ವ್ಯಾಟಿಕನ್ ಸಿಟಿ ಹಾಗೂ ವಿದೇಶಿ ಎನ್ ಜಿಒಗಳ ಹಣ ಪಡೆಯುವ ಈ ಕ್ರೈಸ್ತ ಪಾದ್ರಿಗಳಿಗೂ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಏನು ಸಂಬಂಧ? ಯಾವ ಜನ್ಮದ ದ್ವೇಷ ಇದು? ಯಾಕಾಗಿ ಆರ್ಚ್ ಬಿಷಪ್ ಗಳು ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ?

ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಮೊದಲಿಗೆ ನೋಂದಣಿಯಾಗದ, ಲೆಕ್ಕಪತ್ರ ಸಲ್ಲಿಸದ ಸುಮಾರು 20 ಸಾವಿರಕ್ಕೂ ಎನ್ಜಿಒಗಳನ್ನು ಬ್ಯಾನ್ ಮಾಡಿದ್ದಾರೆ. ನೋಟು ನಿಷೇಧ ಮಾಡಿದ ಕಾರಣ ಎನ್ ಜಿಒಗಳು ಬೇಕಾಬಿಟ್ಟಿ ಸಹಾಯಧನ ಪಡೆಯಲು ಕಡಿವಾಣ ಹಾಕಿದ್ದಾರೆ. ಇದರಿಂದ ಕ್ರೈಸ್ತ ಮಿಷನರಿಗಳಿಗೆ ಭಾರತದಲ್ಲಿ ಮತಾಂತರಕ್ಕಾಗಿ ಹಣ ವ್ಯಯಿಸಲು ಆಗುತ್ತಿಲ್ಲ. ಭಾರತದ ಸಮಸ್ಯೆ ತೋರಿಸಿ ಹಣ ಪೀಕಲು ಆಗುತ್ತಿಲ್ಲ.

ಹೌದು, ಇಷ್ಟು ದಿನ ಇಲ್ಲದೆ ಈಗ ಏಕಾಏಕಿ ನರೇಂದ್ರ ಮೋದಿ ವಿರುದ್ಧ ತಿರುಗಿಬೀಳುತ್ತಿದ್ದಾರೆ ಎಂದರೆ, ಅದರಲ್ಲೂ ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಇವರು ಪರೋಕ್ಷವಾಗಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದರೆ ಇವರಿಗೆ ದೇಶದೊಳಗಿನ ಪಕ್ಷಗಳೇ ಬೆಂಬಲ ನೀಡುತ್ತಿವೆ ಹಾಗೂ ದೇಶದೊಳಗಿನ ಪಕ್ಷಗಳಿಗೆ ಕ್ರೈಸ್ತ ಮಿಷನರಿಗಳು ಬೆಂಬಲ ನೀಡುತ್ತಿವೆ ಎಂದರೆ ಇದರೊಳಗೆ ಏನೋ ಮಸಲತ್ತು ಇದೆ ಎಂದಾಯಿತಲ್ಲ.

ಅಷ್ಟಕ್ಕೂ ಈ ಕ್ರೈಸ್ತ ಮಿಷನರಿಗಳು, ಆರ್ಚ್ ಬಿಷಪ್ ಗಳು ಭಾರತದ ಸಂವಿಧಾನ ಹೇಗೆ ಅಪಾಯದಲ್ಲಿದೆ? ಸಂವಿಧಾನಕ್ಕೆ ಏನು ಅನ್ಯಾಯವಾಗಿದೆ? ಸಂವಿಧಾನದ ನಿಯಮ ಪಾಲಿಸದೆ ಯಾರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಕುರಿತು ಉದಾಹರಣೆ ಮೂಲಕ ತಿಳಿಸುವುದಿಲ್ಲ. ಬದಲಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ, ಹುರುಳಿಲ್ಲದೆ ಹೀಗೆ ಸಂವಿಧಾನ ಅಪಾಯದಲ್ಲಿದೆ ಎಂದು ಜನರ ತಲೆ ಕೆಡಿಸುತ್ತಿದ್ದಾರೆ. ಏಸು ಸಂದೇಶ ಸಮಾಧಿ ಮಾಡಿ ರಾಜಕೀಯ ಕಟ್ಟಡ ಕಟ್ಟಲು ಹೊರಟಿದ್ದಾರೆ. ಇಂತಹವರನ್ನು ನಂಬುವುದಾದರೂ ಹೇಗೆ?

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search