• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ವರ್ಷ ಒಂದು, ದೇಶಕ್ಕಾದ ಅನುಕೂಲಗಳು ನೂರೊಂದು!

TNN Correspondent Posted On July 1, 2018
0


0
Shares
  • Share On Facebook
  • Tweet It

ಪ್ರಧಾನಿ ನರೇಂದ್ರ ಮೋದಿ ಅವರು ಐನೂರು ಹಾಗೂ ಸಾವಿರ ರೂಪಾಯಿಗಳ ನೋಟು ನಿಷೇಧಗೊಳಿಸುವ ಮೂಲಕ ಹೇಗೆ ಕಪ್ಪು ಹಣ ನಿಯಂತ್ರಣಕ್ಕೆ ಮುಂದಾದರೋ, ಅದೇ ರೀತಿ ಕಳೆದ ವರ್ಷ ತೆರಿಗೆ ಸುಧಾರಿಸುವ ಮಹತ್ ಕಾರ್ಯಕ್ಕೆ ಅಣಿಯಾದರು. ಆ ಮೂಲಕ ದೇಶದಲ್ಲಿ ಜಿಡ್ಡು ತಿನ್ನುತ್ತಿದ್ದ ತೆರಿಗೆ ಯೋಜನೆ ಸುಧಾರಣೆಗೆ ಮೋದಿ ಮನಸ್ಸು ಮಾಡಿದ್ದರು.

ಹೌದು, ಕಳೆದ ವರ್ಷ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿದರು. ಆ ಮೂಲಕ ವಿಶ್ವಮಟ್ಟದಲ್ಲಿ ಮೋದಿ ಹೆಸರು ರಾರಾಜಿಸುವಂತಾಯಿತು. ಇದರಿಂದ ವಿಚಲಿತರಾದ ವಿರೋಧ ಪಕ್ಷದವರು ಸುಖಾಸುಮ್ಮನೆ ಜಿಎಸ್ಟಿ ಜಾರಿಗೆ ವಿರೋಧ ವ್ಯಕ್ತಪಡಿಸಿದರು. ಮೋದಿ ಅವರ ಮೇಲಿನ ಸಿಟ್ಟಿಗಾಗಿ ದೇಶಕ್ಕೆ ಅನುಕೂಲವಾಗುವ ಯೋಜನೆ ವಿರೋಧಿಸಿದರು.

ಅಷ್ಟೇ ಅಲ್ಲ ಜಿಎಸ್ಟಿ ಜಾರಿಯಿಂದ ದೇಶದ ವಿತ್ತೀಯ ಸ್ಥಿತಿ ಅಧೋಗತಿಗೆ ಇಳಿಯಲಿದೆ, ನೋಡಿ ಜಿಎಸ್ಟಿ ಜಾರಿಯಾಗುತ್ತಲೇ ಜಿಡಿಪಿ ಹೇಗೆ ಕುಸಿಯುತ್ತಿದೆ, ಇದಕ್ಕೆಲ್ಲ ನರೇಂದ್ರ ಮೋದಿ ಅವರೇ ಕಾರಣ, ಈ ಯೋಜನೆಯಿಂದಲೇ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದೆಲ್ಲ ಬೊಬ್ಬೆ ಹಾಕಿದರು.

ಆದರೆ ಕಳೆದ ವರ್ಷದ ಜುಲೈ 1ರಂದು ಜಾರಿಗೊಳಿಸಿದ ಸರಕು ಮತ್ತು ಸೇವಾ ಯೋಜನೆಗೆ ಇಂದಿಗೆ ಒಂದು ವರ್ಷವಾಗಿದೆ. ಇದೊಂದು ಯಶಸ್ವಿ ಯೋಜನೆ ಎಂದು ವಿಶ್ವದ ಹಲವು ಸಂಸ್ಥೆಗಳು ಹಾಡಿ ಹೊಗಳಿವೆ. ಇದಕ್ಕೆ ಮುಕುಟಪ್ರಾಯದಂತೆ ದೇಶದ ವಿತ್ತೀಯ ಸ್ಥಿತಿ ಸುಧಾರಣೆಯಾಗಿದೆ. ಜಿಎಸ್ಟಿ ಒಂದು ಯಶಸ್ವಿ ಯೋಜನೆಯಾಗಿ ಮುನ್ನುಗ್ಗುತ್ತಿದೆ. ಹಾಗಾದರೆ ಜಿಎಸ್ಟಿ ಜಾರಿಯಾದ ಈ ಒಂದು ವರ್ಷದಲ್ಲಿ ಭಾರತಕ್ಕೆ ಹೇಗೆ ಅನುಕೂಲವಾಗಿದೆ ಎಂಬ ಕುರಿತ ಅಂಶಗಳು ಇಲ್ಲಿವೆ ನೋಡಿ.

  • ಸರಕು ಮತ್ತು ಸೇವಾ ತೆರಿಗೆ ಯೋಜನೆಯಿಂದ ಭಾರತದ ಜಿಡಿಪಿ ಚೀನಾ ಜಿಡಿಪಿಯನ್ನೇ ಹಿಂದಿಕ್ಕುವ ಮಟ್ಟಕ್ಕೆ ಬೆಳೆದಿದೆ. ಕಳೆದ ವರ್ಷ ಶೇ.6.7ರಷ್ಟಿದ್ದ ಜಿಡಿಪಿ ಈಗ ಶೇ.7.7ಕ್ಕೆ ತಲುಪಿದೆ. ಆ ಮೂಲಕ ಜಿಎಸ್ಟಿ ದೇಶದ ಅಭಿವೃದ್ಧಿಗೆ ಇಂಧನವಾಗಿದೆ.
  • ಜಿಎಸ್ಟಿ ಜಾರಿಯಿಂದ ದೇಶದಲ್ಲಿ ಆದಾಯ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಜಾಸ್ತಿಯಾಗಿದೆ. 2017-18ನೇ ಸಾಲಿನಲ್ಲಿ ಸುಮಾರು 6.86 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ. ಇದರಲ್ಲಿ 1.06 ಕೋಟಿ ನೂತನ ರಿಟರ್ನ್ಸ್ ಎಂಬುದು ಗಮನಾರ್ಹ ಅಂಶವಾಗಿದೆ.
  • ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಭಾರತದ ತೆರಿಗೆ ಸಂಗ್ರಹಣೆ ಜಾಸ್ತಿಯಾಗಿದೆ. 2017-18ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟು ಹತ್ತು ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.57ರಷ್ಟು ತೆರಿಗೆ ಸಂಗ್ರಹ ಪ್ರಮಾಣ ಜಾಸ್ತಿಯಾಗಿದೆ.
  • ಜಿಎಸ್ಟಿ ಜಾರಿಗೂ ಮೊದಲು ದೇಶದಲ್ಲಿ 17 ತೆರಿಗೆ ಪದ್ಧತಿಗಳಿದ್ದವು. ದಲ್ಲಾಳಿಗಳು ತೆರಿಗೆ ಹಣ ಲಪಟಾಯಿಸುತ್ತಿದ್ದರು. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆಯಿತ್ತು. ಆದರೆ ಜಿಎಸ್ಟಿ ಜಾರಿಯಿಂದ ದೇಶಾದ್ಯಂತ ಒಂದೇ ತೆರಿಗೆ ಪದ್ಧತಿಯಿದೆ. ಅಲ್ಲದೆ ದಲ್ಲಾಳಿಗಳ ಹಣ ಹೊಡೆಯುವುದು ಸಹ ನಿಂತಂತಾಗಿದೆ.
  • ಯೋಜನೆ ಜಾರಿಗೂ ಮುನ್ನ ಜಿಎಸ್ಟಿ ಉದ್ಯಮದ ಮೇಲೆ, ಅದರಲ್ಲೂ ಮಧ್ಯಮ ಉದ್ಯಮಗಳ ಮೇಲೆ ಹೊಡೆತ ಬೀಳುತ್ತದೆ ಎಂದು ಬೊಬ್ಬೆ ಹಾಕಲಾಗಿತ್ತು. ಆದರೆ ಜಿಎಸ್ಟಿ ಜಾರಿಯಾದ ಬಳಿಕ 1.3 ಕೋಟಿ ಉದ್ಯಮ ನೋಂದಣಿಯಾಗಿದ್ದು, ಅವುಗಳಲ್ಲಿ 50 ಲಕ್ಷ ಉದ್ಯಮ ನೂತನ ಎಂಬುದು ವಿಶೇಷವಾಗಿದೆ.
0
Shares
  • Share On Facebook
  • Tweet It




Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
Tulunadu News June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
Tulunadu News June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search