• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮತದಾರರಿಗೆ ಕೊರಿಯರ್ ಮೂಲಕ ಗಿಫ್ಟ್!?

Tulunadu News Posted On May 17, 2024


  • Share On Facebook
  • Tweet It

ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಅವರು ಕೋರಿಯರ್‌ ಮೂಲಕ ಪದವೀಧರ ಮತದಾರರಿಗೆ ಕಳುಹಿಸಿದ್ದಾರೆ ಎನ್ನಲಾದ ಉಡುಗೊರೆಗಳನ್ನು ಚುನಾವಣಾ ನಿಗಾ ಘಟಕದ (ಎಫ್‌ಎಸ್‌ಟಿ) ಸಿಬ್ಬಂದಿ ಗುರುವಾರ ಜಪ್ತಿ ಮಾಡಿಕೊಂಡಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಪಟ್ಟಣದ ಹೊಸ ಬಸ್‌ ನಿಲ್ದಾಣದ ಹಿಂಭಾಗದಲ್ಲಿರುವ ಡಿಟಿಡಿಸಿ ಕೊರಿಯರ್‌ ಕಚೇರಿ ಮೇಲೆ ದಾಳಿ ನಡೆಸಿದ ಚುನಾವಣಾ ನಿಗಾ ಘಟಕದ ಅಧಿಕಾರಿಗಳ ತಂಡವು ಮತದಾರರ ವಿಳಾಸಕ್ಕೆ ರವಾನೆಯಾಗಬೇಕಿದ್ದ ಉಡುಗೊರೆಗಳ ಬಾಕ್ಸ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಡಿನ್ನರ್‌ ಸೆಟ್‌ ಸೇರಿದಂತೆ ಅಡುಗೆ ಮನೆ ಸಾಮಗ್ರಿಗಳಿರುವ 109ಕ್ಕೂ ಹೆಚ್ಚು ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ಬಾಕ್ಸ್‌ ಮೇಲೆ ರಾಮೋಜಿ ಗೌಡ ಭಾವಚಿತ್ರ ಅಚ್ಚು ಹಾಕಿಸಲಾಗಿದೆ. ಮತ ನೀಡುವಂತೆ ಮನವಿ ಮಾಡಿದ ಕರಪತ್ರ ಅಂಟಿಸಲಾಗಿದೆ.

‘ಕೋರಿಯರ್‌ ಮೂಲಕ ಮತದಾರರ ಮನೆಗೆ ನೇರವಾಗಿ ಉಡುಗೊರೆ ತಲುಪಿಸುವ ‌ತಂತ್ರ ರೂಪಿಸಲಾಗಿತ್ತು. ಅದನ್ನು ವಿಫಲಗೊಳಿಸಲಾಗಿದೆ. ಈ ಉಡುಗೊರೆ ಬಾಕ್ಸ್‌ಗಳು ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡರಿಗೆ ಸೇರಿವೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮೋಜಿ ಗೌಡ ವಿರುದ್ಧ ದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಗೊರೆ ಬಾಕ್ಸ್ ಮೇಲೆ ಕಂಡು ಬಂದ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ ಭಾವಚಿತ್ರ ಉಡುಗೊರೆ ಬಾಕ್ಸ್‌ನಲ್ಲಿ ಕಂಡಬಂದ ಕರಪತ್ರ ಆನೇಕಲ್‌ ತಾಲ್ಲೂಕಿನ ನೆರಳೂರು ಸಮೀಪದ ತಿರುಮಗೊಂಡನಹಳ್ಳಿಯ ಕಾಂಗ್ರೆಸ್‌ ಅಭ್ಯರ್ಥಿ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿದೆ ಎನ್ನಲಾದ ಗಿಫ್ಟ್‌ ಬಾಕ್ಸ್‌ಗಳನ್ನು ಬಿಜೆಪಿ ಕಾರ್ಯಕರ್ತರು ಪ್ರದರ್ಶಿಸಿದರು ಆನೇಕಲ್‌ ತಾಲ್ಲೂಕಿನ ನೆರಳೂರು ಸಮೀಪದ ತಿರುಮಗೊಂಡನಹಳ್ಳಿಯಲ್ಲಿ ಮತದಾರರಿಗೆ ಹಂಚಲು ತರಲಾಗಿದ್ದ ಉಡುಗೊರೆ
ಖಚಿತ ಮಾಹಿತಿ ಮೇರೆಗೆ ಎಫ್‌ಎಸ್‌ಟಿ ತಂಡ ದಾಳಿ ಮಾಡಿ ಮತದಾರರಿಗೆ ಹಂಚಲು ಇಟ್ಟಿದ್ದ ಉಡುಗೊರೆಗಳನ್ನು ಜಪ್ತಿ ಮಾಡಿದೆ. ಪೊಲೀಸ್‌ ಇಲಾಖೆಗೆ ಪ್ರಕರಣ ದಾಖಲು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಆನೇಕಲ್‌ನಲ್ಲೂ ಸಾವಿರಾರು ಉಡುಗೊರೆ ಬಾಕ್ಸ್‌ ಜಪ್ತಿ ಆನೇಕಲ್:

ಪದವೀಧರ ಕ್ಷೇತ್ರದ ಮತದಾರರಿಗೆ ಹಂಚಲು ತಾಲ್ಲೂಕಿನ ನೆರಳೂರು ಸಮೀಪದ ತಿರುಮಗೊಂಡನಹಳ್ಳಿಯ ಡಿಟಿಡಿಸಿ ಕೋರಿಯರ್‌ ಗೋದಾಮಿನಲ್ಲಿದ್ದ ನೂರಾರು ಗಿಫ್ಟ್‌ ಬಾಕ್ಸ್‌ಗಳನ್ನು ಬಿಜೆಪಿ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಗಿಫ್ಟ್‌ ಬಾಕ್ಸ್‌ ಕೂಡ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ ಅವರಿಗೆ ಸೇರಿವೆ ಎನ್ನಲಾಗಿದ್ದು ಅತ್ತಿಬೆಲೆ ಪೊಲೀಸರು ಮತ್ತು ಚುನಾವಣೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬುಧವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ತಿರುಮಗೊಂಡನಹಳ್ಳಿ ಬಳಿಯ ಡಿಟಿಡಿಸಿ ಗೋದಾಮ ಬಳಿ ಜಮಾಯಿಸಿದ್ದರು. ಕೋರಿಯರ್ ಮೂಲಕ ಮತದಾರರಿಗೆ ಹಂಚಲು ಕಳುಹಿಸುತ್ತಿದ್ದಾರೆ ಎನ್ನಲಾದ ನೂರಾರು ಬಾಕ್ಸ್‌ ಡಿಟಿಡಿಸಿ ಗೋದಾಮನಲ್ಲಿರುವುದು ಕಂಡು ಬಂದ ಕೂಡಲೇ ಅತ್ತಿಬೆಲೆ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗುರುವಾರ ಬೆಳಗ್ಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಡಿಟಿಡಿಸಿ ಕೋರಿಯರ್ ಗೋದಾಮಿಗೆ ಬಾಗಿಲು ಹಾಕಿ ತಪಾಸಣೆ ನಡೆಸಿದ್ದಾರೆ. ಕೋರಿಯರ್ ಕಚೇರಿ ಒಳಗಡೆ ಇದ್ದ ರಾಮೋಜಿ ಗೌಡ ಚುನಾವಣೆ ಪ್ರಚಾರದ ಭಿತ್ತಿ ಪತ್ರಗಳು ಹಾಗೂ ಬಂಟಿಂಗ್ಸ್‌ ವಶಕ್ಕೆ ಪಡೆದಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search