• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

Tulunadu News Posted On March 27, 2026
0


0
Shares
  • Share On Facebook
  • Tweet It

ಸುಳ್ಯದ ಹಿಂದೂ ಬಾಂಧವರೇ, ಗೋ ಪ್ರೇಮಿಗಳೇ ದಯವಿಟ್ಟು ಗಮನಿಸಿ:

ಮರ್ಕಂಜ ಮತ್ತು ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ, ದೊಡ್ಡತೋಟ, ಚೊಕ್ಕಾಡಿ, ದುಗಳಡ್ಕ, ಏಳಿಮಲೆ, ಕಂದಡ್ಕ, ಮುಂಡಕಜೆ, ಉಬರಡ್ಕ ಈ ಪರಿಸರದ ಅನೇಕ ಗೋವುಗಳನ್ನು ನಿನ್ನೆ ಮೊನ್ನೆಯವರೆಗೆ ನಾವು ನೀವೆಲ್ಲ ಕಟುಕರ ಪಾಲಾಗಬಾರದು ಎಂಬ ಕಾರಣಕ್ಕೆ ನಮ್ಮ ಪರಿಚಯದ ಅಮರಮುನ್ನೂರು ಗ್ರಾಮದ ಮುಂಡಕಜೆ ಸಂತೋಷ್ ಭಟ್ ಗೆ ಕೊಟ್ಟು ಬಿಡುತ್ತಿದ್ದೆವು ಅಲ್ವಾ?

ಆ ಸಂತೋಷ್ ಭಟ್ ಹತ್ತಿರ ತೋಟ ಇರುವ ಕಾರಣ ಇವನ ಬಳಿ ಆ ಮುಗ್ದ ಗೋವುಗಳು ಇದ್ದರೆ ಅವನು, ಮಗುವಿನಂತೆ ನೋಡಿಕೊಳ್ಳುತ್ತಾನೆ, ಚೆನ್ನಾಗಿ ಸಾಕುತ್ತಾನೆ, ಅವನಿಗೂ ಸಹಾಯವಾಗುತ್ತದೆ ಎಂದು ನಾವೆಲ್ಲರೂ ನಂಬಿದ್ದೆವು. ಅವನೂ ಸಹ ನಮ್ಮನ್ನು ಹಾಗೆ ನಂಬಿಸಿ ಗೋವುಗಳನ್ನು ಕರೆದುಕೊಂಡು ಹೋಗುತ್ತಿದ್ದ.

ಆದರೆ ಈ ಖದೀಮ ಮಾಡಿದ್ದೇನು.?

ಮುಗ್ಧ ಗೋವುಗಳು ಯಾವ ಕಟುಕರ ಪಾಲಾಗಬಾರದು ಎಂದು ನಾವು ಬಯಸುತ್ತಿದ್ದೆವೋ, ಅದೇ ಕಟುಕರ ಬಾಯಿಗೆ ಕೇವಲ ಹಣದಾಸೆಗೆ ಹಾಕಿ ಬರುತ್ತಿದ್ದ.!

ನಿನ್ನೆ ರಾತ್ರಿ (ಮಾರ್ಚ್ 25) ಆಲೆಟ್ಟಿಯಿಂದ ಕೇರಳಕ್ಕೆ ಪಿಕಪ್ ನಲ್ಲಿ ಮಾಂಸದ ಉದ್ದೇಶಕ್ಕೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಗೋಕಳ್ಳರನ್ನು, ನಾರ್ಕೊಡು ಮಿತ್ತಡ್ಕ ಎಂಬಲ್ಲಿ ಪೊಲೀಸರು ಜೀವದ ಹಂಗು ತೊರೆದು ಹಿಡಿದು ಮೂರು ಗೋವುಗಳನ್ನು ರಕ್ಷಿಸಿದ್ದಾರೆ.

ಈ ವೇಳೆ ಸೆರೆ ಸಿಕ್ಕ ಗೋಕಳ್ಳ ಇಸಾಕ್ ನ ನೀಡಿದ ಮಾಹಿತಿಯಂತೆ ಸುಳ್ಯದ ನಾವೂರು ನಿವಾಸಿ ಇಬ್ರಾಹಿಂ ಹಾಗೂ ನಾವು ನೀವೆಲ್ಲ ಅತ್ಯಂತ ವಿಶ್ವಾಸವಿಟ್ಟು ನಂಬಿದ್ದ ಅಮರಮುನ್ನೂರು ಗ್ರಾಮದ ಸಂತೋಷ್ ಭಟ್ ನನ್ನು ಬಂಧಿಸಲಾಗಿದೆ.

ಇಡೀ ಹಿಂದೂ ಸಮಾಜಕ್ಕೆ ನಂಬಿಕೆ ದ್ರೋಹ ಬಗೆದು ನೀಚ ಮಟ್ಟಕ್ಕಿಳಿದ ಈತನನ್ನು ಇನ್ನು ಮುಂದೆ ಹಿಂದೂ ಸಮಾಜ ನಂಬಬಾರದು. ಇನ್ನು ಮೇಲೆ ದಯವಿಟ್ಟು ಮುಗ್ದ ಗೋವುಗಳನ್ನು ಇವನ ಬಳಿ ಬಿಡಬೇಡಿ, ಈಗಾಗಲೇ ಬಿಟ್ಟಿದ್ದರೆ ದಯವಿಟ್ಟು ವಾಪಾಸ್ ತನ್ನಿ, ಸಾಕಲು ತೊಂದರೆ ಇದ್ದರೆ ಗೋಶಾಲೆಗೆ ನೀಡಿ.

ಮುಗ್ದ ಗೋವಿನ ಶಾಪ ಇವನಿಗೆ ತಟ್ಟದೇ ಬಿಡದು. ಇವನು ಜೀವನದಲ್ಲಿ ಬರ್ಬಾರ್ ಆಗುವುದನ್ನು ನಾವೆಲ್ಲರೂ ಕಾಣಲಿದ್ದೇವೆ.

ಇವ ನಮ್ಮವ ಅಂತ ನಂಬಿ ಮುಗ್ಧ ಗೋವುಗಳನ್ನು ಇಂತಹ ದ್ರೋಹಿಗಳಿಗೆ ಕೊಡುವ ಮೊದಲು ದಯವಿಟ್ಟು ಯೋಚಿಸಿ.

ಇಂತಹ ಗೋ ಕಳ್ಳರನ್ನು ಬಂಧಿಸಿದ ಸುಳ್ಯ ಪೊಲೀಸರಿಗೆ ಗೋಮಾತೆಯ ಶ್ರೀ ರಕ್ಷೆ ಇರಲಿ ಎಂದು ಹಾರೈಸೋಣ.

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search