• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ರಾಷ್ಟ್ರೀಯವಾದಿಗಳಿಗೆ ಮತ ನೀಡಬೇಡಿ ಎನ್ನು ಚರ್ಚ್ ಬಿಷಪ್ ನಿಗೆ ಆದ ಗಾಯವೇನು ಗೊತ್ತೆ?

ಸೌಮ್ಯ ಭಾಗವತ್ ಕುಮಟಾ. Posted On November 24, 2017
0


0
Shares
  • Share On Facebook
  • Tweet It

ಬಂಧುಗಳೇ..

ಗುಜರಾತ್ ಚುನಾವಣೆ ದಿನಾಂಕ ನಿಗದಿಯಾಗಿದೆ. ಈ ಚುನಾವಣೆ ಫಲಿತಾಂಶ ರಾಷ್ಟ್ರದ ಮೇಲೆ ಪರಿಣಾಮ ಬೀರಲಿದೆ. ನಮ್ಮ ಮುಂದಿನ ಗುರಿ ತಲುಪಲು ಕೂಡ ಈ ಚುನಾವಣೆ ಪ್ರಭಾವ ಬೀರಲಿದ್ದಾರೆ. ಆದ್ದರಿಂದ ಗುಜರಾತ್ ನಲ್ಲಿ ರಾಷ್ಟ್ರೀಯವಾದಿಗಳು ಅಧಿಕಾರಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು. ಅವರಿಗೆ ಮತ ನೀಡಬಾರದು. ರಾಷ್ಟ್ರೀಯವಾದಿಗಳು ಅಧಿಕಾರಕ್ಕೆ ಬಂದರೆ ದೇಶಾದ್ಯಂತ ನಮಗೆ ಸಂಕಷ್ಟ ಎದುರಾಗಲಿದೆ. ಸಾಮೂಹಿಕ ಪ್ರಾರ್ಥನೆ ಏರ್ಪಡಿಸಿ ಕ್ರಿಶ್ಚಿಯನ್ ಸಮುದಾಯದವರಲ್ಲಿ ಜಾಗೃತಿ ಮೂಡಿಸಿ. ರಾಷ್ಟ್ರೀಯವಾದಿಗಳಿಗೆ ಮತ ನೀಡಬೇಡಿ.

ಆರ್ಚ್ ಬಿಷಪ್ ಥಾಮಸ್ ಮ್ಯಾಕವಾನ್

ಆರ್ಚ್ ಬಿಷಪ್ ಗಾಂಧಿ ನಗರ

 

ಸುಮ್ಮನೆ ಧರ್ಮ ಪ್ರಚಾರ ಮಾಡುತ್ತ, ಬಡ, ಮುಗ್ಧ ಹಿಂದೂಗಳನ್ನು ಮತಾಂತರ ಮಾಡುತ್ತ ಇದ್ದ ಈ ಬಿಷಫ್ ಗೇಕೆ ಈ ಪತ್ರ ರಾಜಕೀಯ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಪ್ರಬಲ ಕಾರಣವಿದೆ. ಯಾವಾಗ ಈ ಬಿಷಫ್ ಗಳ ಬುಡಕ್ಕೆ ಬೆಂಕಿ ಬಿದ್ದಿತೋ, ಆಗಲೇ ಇವರು ರಾಷ್ಟ್ರೀಯ ವಾದಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ… ಅದಕ್ಕೆ ಸಾಕ್ಷಿ ರಾಷ್ಟ್ರೀಯ ವಾದಿಗಳಿಗೆ ಮತ ನೀಡಬೇಡಿ ಎಂಬ ಗಾಂಧಿ ನಗರದ ಆರ್ಚ್ ಬಿಷಫ್ ನ ಈ ಪತ್ರ.

ಹೀಗೊಂದು ಸಂದೇಶವನ್ನು ಗುಜರಾತ್ ನ ಎಲ್ಲ ಚರ್ಚ್ ಗಳಿಗೆ ಕಳುಹಿಸಲು ಕಾರಣ ಏನು ಪ್ರಶ್ನೆ ಮತ್ತು ರಾಷ್ಟ್ರೀಯವಾದಿಗಳ ವಿರುದ್ಧವೇ ಬಿಷಫ್ ಮಾತನಾಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇನ್ನು ರಾಷ್ಟ್ರೀಯ ವಾದಿಗಳ ಪಕ್ಷ ಎಂದರೆ ಬಿಜೆಪಿ ಎಂಬುದರ ಅರ್ಥದಲ್ಲೇ ಈ ಬಿಷಫ್ ಹೇಳಿದ್ದಾರೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ದೇಶದಲ್ಲಿ ಮೊದಲ ಬಾರಿಗೆ ಪ್ರಬಲ ರಾಷ್ಟ್ರೀಯವಾದದ ನಿಲುವುಗಳನ್ನು ಹೊಂದಿರುವ ಪಕ್ಷ ಅಧಿಕಾರದಲ್ಲಿದೆ. ಅಲ್ಲದೇ ಅದು ಯಶಸ್ವಿಯಾಗಿ ದೇಶವನ್ನು ಮುನ್ನಡೆಸುತ್ತಿದೆ. ಭಯೋತ್ಪಾದಕರಿಗೆ, ದೇಶದಲ್ಲಿ ಮತಾಂತರದ ಮೂಲಕ ಜನರನ್ನು ಸೆಳೆಯುತ್ತಿರುವ ಕ್ರಿಶ್ಚಿಯನ್ ಮಿಶನರಿಗಳಿಗೆ ತೊಡಕುಂಟಾಗಿದೆ. ಈ ಕ್ರಿಶ್ಚಿಯನ್ ಸಂಘಟನೆಗಳ ನವರಂದ್ರಗಳನ್ನು ಮುಚ್ಚಿಸಿ, ಅವರ ಮತಾಂತರದ ಕಾರ್ಯಕ್ಕೆ ತೊಡಕ್ಕುಂಟು ಮಾಡಿದ್ದೇ ಅವರು ಈ ರೀತಿ ರಾಷ್ಟ್ರೀಯ ವಾದಿ ಸರ್ಕಾರದ ವಿರುದ್ಧ ಉರಿದು ಬೀಳಲು ಕಾರಣ ಎಂಬುದು ಮಾತ್ರ ಸ್ಪಷ್ಟ.

ಚರ್ಚ್ ಬಿಷಪ್ ನಿಗ್ಯಾಕೆ ಉಸಾಬರಿ ಎನ್ನಲು ಇಲ್ಲಿವೆ ಕಾರಣ

  • ಅಂತಾರಾಷ್ಟ್ರೀಯ ಸಮುದಾಯದಿಂದ ತಮ್ಮ ಚರ್ಚ್ ಗೆ ಹರಿದು ಬರುತ್ತಿರುವ ಅಕ್ರಮ ಹಣಕ್ಕೆ ಕೇಂದ್ರದ ನರೇಂದ್ರ ಮೋದಿ ಸರಕಾರ ಲಗಾಮು ಹಾಕಿದೆ.
  • ಅಕ್ರಮ ಹಣಕ್ಕೆ ಲಗಾಮು ಹಾಕಿದ್ದರಿಂದ ಬಡವಾಗಿ ಸೋತು ಹೋಗಿರುವ ಕ್ರಿಶ್ಚಿಯನ್ ಸಂಘಟನೆಗಳು ಅನಿವಾರ್ಯವಾಗಿ ಮೋದಿ ಅವರನ್ನು ಕೆಳಗಿಳಿಸುವ ಹುನ್ನಾರ ಮಾಡುತ್ತಿವೆ.
  • ಕ್ರಿಶ್ಚಿಯನ್ ಸಂಘಟನೆಗಳಿಗೆ ಅನ್ನದಾತೆಯಾಗಿದ್ದ, ಕ್ರಿಶ್ಚಿಯನ್ನಳೇ ಆದ ಹೈಕಮಾಂಡ್ ನಾಯಕಿಯನ್ನು ಅಥವಾ ಅವಳ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಆಶಯ.
  • ದೇಶದಲ್ಲಿ ಮತಾಂತರವನ್ನು ಅವ್ಯಾಹತವಾಗಿ ಮಾಡಿಕೊಂಡು ಬರುತ್ತಿರುವ ಕ್ರಿಶ್ಚಿಯನ್ ಸಂಘಟನೆಗಳ ಕಾರ್ಯಚಟುವಟಿಕೆಗೆ ರಾಷ್ಟ್ರೀಯ ವಾದಿಗಳು ಬಲವಾದ ಪೆಟ್ಟು ನೀಡುತ್ತಿರುವುದು.
  • ನಾವು ರಾಷ್ಟ್ರೀಯ ವಾದಿಗಳಲ್ಲ, ವ್ಯಾಟಿಕನ್ ಸಿಟಿಯ ಅಡಿಯಾಳುಗಳು ಎಂಬುದನ್ನು ಸಾಬೀತುಪಡಿಸಲು ಹೀಗೋಂದು ಹೀನ ಮನಸ್ಥಿತಿಯ ಪತ್ರವನ್ನು ಬರೆಯಲಾಗಿದೆ.
  • ನಾವು ಕಾಶ್ಮೀರ ಅಜಾದಿಗೆ ಬೆಂಬಲಿಸುವವರು, ಬುದ್ಧಿಜೀವಿಗಳು ಎಂಬುದನ್ನು ಸಾಬೀತುಪಡಿ ಗಂಜಿ ಸಂಗ್ರಹಿಸಲು ಬಕೆಟ್ ಹಿಡಿಯಲೂ ಈ ಪತ್ರ ಬರೆದಿರಬಹುದು.
  • ಹೈ(ಕೈ)ಕಮಾಂಡ್ ಅಧಿನಾಯಕಿ ಆಜ್ಞೆಯಂತೆ ಅವರ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ಯತ್ನಿಸಿರಬಹುದು.

ಇಡೀ ಪತ್ರದಲ್ಲಿ ರಾಷ್ಟ್ರೀಯವಾದಿಗಳು ಎಂಬುದನ್ನೇ ಗುರಿಯಾಗಿಸಿಕೊಂಡಿರುವ ಬಿಷಫ್ ನ ಎಲ್ಲ ವಿಚಾರಗಳು ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಬೊಬ್ಬಿರಿದ ಅದೇ ಗುಂಪಿನ ಮಾದರಿಯಲ್ಲಿದೆ. ಇನ್ನು ಬಿಷಫ್ ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯವಾದಿಗಳ ಪಕ್ಷ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಅವರ ಕೈಕಮಾಂಡ್ ಪಕ್ಷ  ರಾಷ್ಟ್ರದ ಪರವಲ್ಲ, ಕ್ರಿಶ್ಚಿಯನ್ ಸಂಘಟನೆಗಳು, ಮಿಶನರಿಗಳು ಚರ್ಚ್ ಗಳು ರಾಷ್ಟ್ರೀಯವಾದಿಗಳು ಅಲ್ಲ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ.

ಹಾಂ.. ಬಿಷಪ್ ಅವರೇ..

ನೀವೆಷ್ಟೇ ಪ್ರಯತ್ನಿಸಿದ್ದರೂ ಕೊನೆಗೆ ಉಳಿಯುವುದು ಪ್ರಬಲ ರಾಷ್ಟ್ರೀಯ ತತ್ವ, ರಾಷ್ಟ್ರೀಯಯತೆ, ಸ್ವದೇಶಿ ಚಿಂತನೆಗಳೇ ಹೊರತು, ಇಟಲಿಯಿಂದ ಆಮದು ಆದ ಸರಕ್ಕಲ್ಲ.

0
Shares
  • Share On Facebook
  • Tweet It




Trending Now
ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
ಸೌಮ್ಯ ಭಾಗವತ್ ಕುಮಟಾ. October 21, 2025
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
ಸೌಮ್ಯ ಭಾಗವತ್ ಕುಮಟಾ. October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
  • Popular Posts

    • 1
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search