• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಗೋಮಟೇಶ್ವರ ಉಳಿಬೇಕಾದರೆ ನಾವೇನಾದರೂ ಮಾಡಲೇಬೇಕು!

Hanumantha Kamath Posted On November 24, 2017
0


0
Shares
  • Share On Facebook
  • Tweet It

ಗೋಮಟೇಶ್ವರ ಏಕ್ಸಪ್ರೆಸ್ ರೈಲನ್ನು ರಾತ್ರಿ ರೈಲಾಗಿ ಮಾಡಿದರೆ ಅದು ಖಂಡಿತ ಒಂದು ತಿಂಗಳೊಳಗೆ ಲಾಭದ ಮುಖ ನೋಡುತ್ತೆ, ಸಂಶಯವೇ ಇಲ್ಲ. ಬೆಸ್ಟ್ ಏನೆಂದರೆ ಗೋಮಟೇಶ್ವರ ಏಕ್ಸಪ್ರೆಸ್ ಅನ್ನು ರಾತ್ರಿ 9.30 ಕ್ಕೆ ಸರಿಯಾಗಿ ಮಂಗಳೂರು ಸೆಂಟ್ರಲ್ ನಿಂದ ಬಿಡುವುದು. ಹೆಚ್ಚು ಸ್ಟಾಪ್ ಇಲ್ಲ. ಇಲ್ಲಿ ಬಿಟ್ಟರೆ ಹಾಸನ. ಅಲ್ಲಿ ಬಿಟ್ಟರೆ ಸೀದಾ ಬೆಂಗಳೂರು ಸಿಟಿ. ಇಷ್ಟು ಮಾಡಿ ನೋಡಿ ರೈಲ್ವೆ ಸಚಿವರೇ. ನೀವು ಬರಗಾಲ ಎಂದುಕೊಂಡಿರುವ ಕಡೆಯಲ್ಲಿಯೂ ಬಂಗಾರದ ಫಸಲು ಬರಲಿದೆ. ಹೀಗೆ ಮಾಡಿದರೆ ಜನರಿಗೂ ಅನುಕೂಲವಾಗುತ್ತದೆ. ಬಸ್ಸುಗಳು ಜಾತ್ರೆ, ಹಬ್ಬ ಸಂದರ್ಭ ಏರಿಸುವ ಹೊನ್ನಶೂಲದಿಂದ ಜನರನ್ನು ನೀವು ಪಾರು ಮಾಡಿದ ಹಾಗೆ ಆಗುತ್ತೆ.
ಇಷ್ಟಾಗಿಯೂ ಗೋಮಟೇಶ್ವರ ಏಕ್ಸಪ್ರೆಸ್ ಅನ್ನು ರಾತ್ರಿ ರೈಲು ಮಾಡಲು ಸಾಧ್ಯವೇ ಇಲ್ಲ ಎಂದು ನೀವು ಅಂದುಕೊಳ್ಳುವುದಾದರೆ ಆ ರೈಲನ್ನು ದಯವಿಟ್ಟು ಬೆಳಿಗ್ಗೆ ಬೇಗ ಮಂಗಳೂರಿನಿಂದ ಬಿಡುವ ಹಾಗೆ ಮಾಡಿ. ಬೆಳಿಗ್ಗೆ 6.20 ರಿಂದ 9 ಗಂಟೆಯ ಒಳಗೆ ಮಂಗಳೂರು ಸೆಂಟ್ರಲ್ ನಲ್ಲಿ ಅಷ್ಟು ಟ್ರಾಫಿಕ್ ಇರುವುದಿಲ್ಲ. ಅದು ಪ್ರಶಸ್ತ ಸಮಯ. ಬೇಕಾದರೆ ನೀವು ನಮ್ಮ ಮೇಲೆ ಬಹುಪ್ರೀತಿಯಿಂದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕೊಟ್ಟಿರುವ ಮೂರು ರೈಲುಗಳನ್ನು ಇಲ್ಲಿ ಕ್ಯಾನ್ಸಲ್ ಮಾಡಿ ಜಂಕ್ಷನ್ ನಿಂದ ಓಡಿಸಿ. ಮಂಗಳೂರು ಸೆಂಟ್ರಲ್ ನಿಂದ ಕೊಚುವೇಲಿಗೆ ಹೋಗುವ, ಮಂಗಳೂರಿನಿಂದ ಹೈದ್ರಾಬಾದ್ ಗೆ ಹೋಗುವ, ಮಂಗಳೂರಿನಿಂದ ಪಾಂಡಿಚೇರಿಗೆ ಹೋಗುವ ಮೂರು ರೈಲುಗಳನ್ನು ಬೇಕಾದರೆ ಸೆಂಟ್ರಲ್ ನಿಂದ ಜಂಕ್ಷನ್ ಗೆ ಶಿಫ್ಟ್ ಮಾಡಿಸಿ. ಅದೇನು ಮಂಗಳೂರು ಸೆಂಟ್ರಲ್ ನಿಂದಲೇ ಓಡಬೇಕೆಂದು ಹಟ ನಮಗಿಲ್ಲ. ಅವುಗಳ ಬದಲಿಗೆ ಗೋಮಟೇಶ್ವರ ಏಕ್ಸಪ್ರೆಸ್ ಮತ್ತು ಮಂಗಳೂರು ಸಿಎಸ್ ಟಿಯನ್ನು ಸೆಂಟ್ರಲ್ ಗೆ ತನ್ನಿ.

ಇದೆಲ್ಲ ಮನವಿ ಪತ್ರ ಬರೆದು ಫಾಲ್ಗಾಟ್ ರೈಲ್ವೆ ಡಿವಿಜನ್ ಗೆ ಕಳುಹಿಸಿಕೊಡಲಾಗಿದೆ. ಅವರು ಅಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಈಗ ಅದು ಅಲ್ಲಿಂದ ಚೆನೈ ವಿಭಾಗಕ್ಕೆ ಹೋಗಿದೆ. ಅಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ಕಂಡುಬಂದಿಲ್ಲ.
ಈಗ ನಮ್ಮ ಜನಪ್ರತಿನಿಧಿಗಳು ನಿಜವಾದ ಜವಾಬ್ದಾರಿ ತೋರಿಸಬೇಕು. ಕರ್ನಾಟಕದಿಂದ ನಮ್ಮದೇ ಊರಿನವರಾದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ನಮ್ಮ ರಾಜ್ಯವನ್ನು ಚೆನೈಯಲ್ಲಿ ರೈಲ್ವೆ ವಿಭಾಗದ ಮೀಟಿಂಗ್ ಗಳಲ್ಲಿ ಪ್ರತಿನಿಧಿಸುತ್ತಾರೆ. ಏನೂ ಚಿಕ್ಕ ಸ್ಥಾನಮಾನ ಅಲ್ಲ ಅದು. ನಮ್ಮ ರಾಜ್ಯ ಸರಕಾರದ ಪ್ರತಿನಿಧಿ. ನಮ್ಮ ಜಿಲ್ಲೆಯ ಒಂದು ರೈಲು ಇಂತಿಂತಹ ಸಮಯದಲ್ಲಿ ಓಡಿದರೆ ಜನರಿಗೂ ಉಪಯುಕ್ತ, ರೈಲ್ವೆ ಇಲಾಖೆಗೂ ಉಪಯುಕ್ತ ಎಂದು ಅವರು ಅಲ್ಲಿ ಮನವರಿಕೆ ಕೊಡಬೇಕು. ಇತ್ತ ಕಡೆಯಿಂದ ನಮ್ಮ ಮಂಗಳೂರು ನಗರ ದಕ್ಷಿಣದ ಶಾಸಕರಾದ ಜೆ ಆರ್ ಲೋಬೋ ಅವರು ಮುಖ್ಯಮಂತ್ರಿಗಳ ಮೂಲಕ ಮಂಗಳೂರು-ಬೆಂಗಳೂರು ರೈಲಿನ ಇವತ್ತಿನ ಪರಿಸ್ಥಿತಿ ಮತ್ತು ಸಮಯ ಹಾಗೂ ಸ್ಟೇಶನ್ ಬದಲಾದರೆ ಹೇಗೆ ಜನರಿಗೆ ಅನುಕೂಲಕರವಾಗಲಿದೆ ಎಂದು ರೈಲ್ವೆ ಅಧಿಕಾರಿಗಳ ಮೂಲಕ ಒತ್ತಡ ತರಬೇಕು. ಇನ್ನು ನಮ್ಮ ಜಿಲ್ಲೆಯ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೆ ಸಚಿವರ ಮೇಲೆ ಒತ್ತಡ ಹಾಕಬೇಕು. ಮೂರು ಕಡೆಯಿಂದ ಏನಾದರೂ ನಡೆದರೆ ಆಗ ರೈಲು ನಮಗೆ ಉಳಿಯಬಹುದು.


ಇದರೊಂದಿಗೆ ಅವರು ಮಾಡುತ್ತಾರೆ ಸಾಕು, ನಾವು ಏನು ಮಾಡಲು ಆಗುತ್ತೆ ಜನಸಾಮಾನ್ಯರಾಗಿ ಎಂದು ಅಂದುಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ರೈಲ್ವೆ ಇಲಾಖೆಯ ವೆಬ್ ಸೈಟ್ ಗಳಿವೆ. ಅಲ್ಲಿ ದೂರು ದಾಖಲಿಸಬಹುದು. ನಿಮ್ಮ ಅಭಿಪ್ರಾಯ ಬರೆದು ಹಾಕಬಹುದು. ಪೋಸ್ಟ್ ಕಾರ್ಡ್ ಚಳುವಳಿಯನ್ನು ಪ್ರಾರಂಭಿಸಬೇಕು. ಮಂಗಳೂರು ಸೆಂಟ್ರಲ್ ನಿಂದ ಬೆಂಗಳೂರು ಸಿಟಿ ತನಕ ರಾತ್ರಿ ಗೋಮಟೇಶ್ವರ ಏಕ್ಸಪ್ರೆಸ್ ಓಡಿಸಿ ಎಂದು ಎಲ್ಲರೂ ಬರೆದು ಹಾಕೋಣ. ಸಾಧ್ಯವಾದರೆ ಒಂದಿಷ್ಟು ಸಂಘಟನೆಗಳು ಸೇರಿ ರೈಲು ರೋಕೋ ಮಾಡಬೇಕಾದಿತು. ಹತ್ತು ನಿಮಿಷ ರೈಲು ರೋಕೋ ಮಾಡಿದರೆ ಅದು ಸೀದಾ ದೆಹಲಿಯ ರೈಲ್ವೆ ಭವನಕ್ಕೆ ಇಂಜೆಕ್ಷನ್ ಕೊಟ್ಟ ಹಾಗೆ. ಅವರಿಗೆ ಅದು ಮುಟ್ಟುತ್ತದೆ.
ಇದೆಲ್ಲ ಆದಷ್ಟು ಬೇಗ ಆದ್ರೆ ಒಳ್ಳೆಯದು. ಯಾಕೆಂದರೆ ಮುಂದಿನ ವರ್ಷದ ಆರಂಭದ ನಂತರ ಎಪ್ರಿಲ್ ವರೆಗೆ ನಮ್ಮ ಜನರು ಪ್ರವಾಸಕ್ಕೆ ಹೋಗುವುದು ಕಡಿಮೆ. ಪರೀಕ್ಷೆ ಅದು ಇದು ಎಂದು ಮನೆಯಲ್ಲಿಯೇ ಇರುತ್ತಾರೆ. ಈಗಲೇ ಸರಾಸರಿ 37% ನಾಗರಿಕರು ಮಾತ್ರ ಗೋಮಟೇಶ್ವರ ಏಕ್ಸಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಇನ್ನೂ ಕೆಳಗೆ ಹೋಗಿ 30% ಕ್ಕೆ ಹೋಗಿ ನಿಂತರೆ ನಂತರ ಈ ರೈಲು ಸೆಂಟ್ರಲ್ ಕೂಡ ಇಲ್ಲ. ಜಂಕ್ಷನ್ ಕೂಡ ಇಲ್ಲದ ಹಾಗೆ ಆಗುತ್ತದೆ. ಕೇರಳದವರಿಗೆ ಈ ರೈಲು ಲಾಭದಲ್ಲಿ ಓಡಬೇಕಾಗಿಲ್ಲ. ಏಕೆಂದರೆ ಒಮ್ಮೆ ಲಾಸ್ ಎಂದು ಪ್ರೂವ್ ಆದರೆ ಅವರು ತಕ್ಷಣ ಇದೇ ರೈಲನ್ನು ತಮ್ಮ ರಾಜ್ಯದಿಂದ ಓಡಿಸಲು ಹೊರಡುತ್ತಾರೆ. ಮತ್ತೆ ನಾವು ತಪಸ್ಸು ಮಾಡಿದರೂ ಸಿಗುವುದಿಲ್ಲ. ಅದರೊಂದಿಗೆ ಕೊನೆಯದಾಗಿ ಈ ಅಂಕಣವನ್ನು ಮುಗಿಸುವ ಮೊದಲು ಒಂದು ಮಾತು ಹೇಳುತ್ತೇನೆ. ನಾವು ರೈಲ್ಲನ್ನು ಹೆಚ್ಚೆಚ್ಚು ಬಳಸದೇ ಹೋದರೆ ನಷ್ಟ ನಮಗೆ. ಇಲ್ಲಿಂದ ಭಟ್ಕಳಕ್ಕೆ ರೈಲಿನಲ್ಲಿ ಹೋಗಿ, ಎಷ್ಟಾಗುತ್ತೆ. ಅದೇ ಬಸ್ಸಿನಲ್ಲಿ ಹೋಗಿ ಎಷ್ಟಾಗುತ್ತೆ. ಅದರೊಂದಿಗೆ ರೈಲಿನಲ್ಲಿ ಹೋದರೆ ಮೈಕೈ ನೋವೆ ಇಲ್ಲ. ಕಾಲು ಚಾಚಿ ಕುಳಿತುಕೊಳ್ಳಬಹುದು. ಬೋರಾದರೆ ಒಂದತ್ತು ನಿಮಿಷ ಆಚೀಚೆ ಹೋಗಬಹುದು. ಮೂತ್ರ ಕಟ್ಟಿ ಹೆಣಗಬೇಕಿಲ್ಲ. ಇದೆಲ್ಲ ಬಸ್ಸಿನಲ್ಲಿ ಆಗುತ್ತಾ

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Hanumantha Kamath September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Hanumantha Kamath September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search