• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗೋಮಟೇಶ್ವರ ಉಳಿಬೇಕಾದರೆ ನಾವೇನಾದರೂ ಮಾಡಲೇಬೇಕು!

Hanumantha Kamath Posted On November 24, 2017


  • Share On Facebook
  • Tweet It

ಗೋಮಟೇಶ್ವರ ಏಕ್ಸಪ್ರೆಸ್ ರೈಲನ್ನು ರಾತ್ರಿ ರೈಲಾಗಿ ಮಾಡಿದರೆ ಅದು ಖಂಡಿತ ಒಂದು ತಿಂಗಳೊಳಗೆ ಲಾಭದ ಮುಖ ನೋಡುತ್ತೆ, ಸಂಶಯವೇ ಇಲ್ಲ. ಬೆಸ್ಟ್ ಏನೆಂದರೆ ಗೋಮಟೇಶ್ವರ ಏಕ್ಸಪ್ರೆಸ್ ಅನ್ನು ರಾತ್ರಿ 9.30 ಕ್ಕೆ ಸರಿಯಾಗಿ ಮಂಗಳೂರು ಸೆಂಟ್ರಲ್ ನಿಂದ ಬಿಡುವುದು. ಹೆಚ್ಚು ಸ್ಟಾಪ್ ಇಲ್ಲ. ಇಲ್ಲಿ ಬಿಟ್ಟರೆ ಹಾಸನ. ಅಲ್ಲಿ ಬಿಟ್ಟರೆ ಸೀದಾ ಬೆಂಗಳೂರು ಸಿಟಿ. ಇಷ್ಟು ಮಾಡಿ ನೋಡಿ ರೈಲ್ವೆ ಸಚಿವರೇ. ನೀವು ಬರಗಾಲ ಎಂದುಕೊಂಡಿರುವ ಕಡೆಯಲ್ಲಿಯೂ ಬಂಗಾರದ ಫಸಲು ಬರಲಿದೆ. ಹೀಗೆ ಮಾಡಿದರೆ ಜನರಿಗೂ ಅನುಕೂಲವಾಗುತ್ತದೆ. ಬಸ್ಸುಗಳು ಜಾತ್ರೆ, ಹಬ್ಬ ಸಂದರ್ಭ ಏರಿಸುವ ಹೊನ್ನಶೂಲದಿಂದ ಜನರನ್ನು ನೀವು ಪಾರು ಮಾಡಿದ ಹಾಗೆ ಆಗುತ್ತೆ.
ಇಷ್ಟಾಗಿಯೂ ಗೋಮಟೇಶ್ವರ ಏಕ್ಸಪ್ರೆಸ್ ಅನ್ನು ರಾತ್ರಿ ರೈಲು ಮಾಡಲು ಸಾಧ್ಯವೇ ಇಲ್ಲ ಎಂದು ನೀವು ಅಂದುಕೊಳ್ಳುವುದಾದರೆ ಆ ರೈಲನ್ನು ದಯವಿಟ್ಟು ಬೆಳಿಗ್ಗೆ ಬೇಗ ಮಂಗಳೂರಿನಿಂದ ಬಿಡುವ ಹಾಗೆ ಮಾಡಿ. ಬೆಳಿಗ್ಗೆ 6.20 ರಿಂದ 9 ಗಂಟೆಯ ಒಳಗೆ ಮಂಗಳೂರು ಸೆಂಟ್ರಲ್ ನಲ್ಲಿ ಅಷ್ಟು ಟ್ರಾಫಿಕ್ ಇರುವುದಿಲ್ಲ. ಅದು ಪ್ರಶಸ್ತ ಸಮಯ. ಬೇಕಾದರೆ ನೀವು ನಮ್ಮ ಮೇಲೆ ಬಹುಪ್ರೀತಿಯಿಂದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕೊಟ್ಟಿರುವ ಮೂರು ರೈಲುಗಳನ್ನು ಇಲ್ಲಿ ಕ್ಯಾನ್ಸಲ್ ಮಾಡಿ ಜಂಕ್ಷನ್ ನಿಂದ ಓಡಿಸಿ. ಮಂಗಳೂರು ಸೆಂಟ್ರಲ್ ನಿಂದ ಕೊಚುವೇಲಿಗೆ ಹೋಗುವ, ಮಂಗಳೂರಿನಿಂದ ಹೈದ್ರಾಬಾದ್ ಗೆ ಹೋಗುವ, ಮಂಗಳೂರಿನಿಂದ ಪಾಂಡಿಚೇರಿಗೆ ಹೋಗುವ ಮೂರು ರೈಲುಗಳನ್ನು ಬೇಕಾದರೆ ಸೆಂಟ್ರಲ್ ನಿಂದ ಜಂಕ್ಷನ್ ಗೆ ಶಿಫ್ಟ್ ಮಾಡಿಸಿ. ಅದೇನು ಮಂಗಳೂರು ಸೆಂಟ್ರಲ್ ನಿಂದಲೇ ಓಡಬೇಕೆಂದು ಹಟ ನಮಗಿಲ್ಲ. ಅವುಗಳ ಬದಲಿಗೆ ಗೋಮಟೇಶ್ವರ ಏಕ್ಸಪ್ರೆಸ್ ಮತ್ತು ಮಂಗಳೂರು ಸಿಎಸ್ ಟಿಯನ್ನು ಸೆಂಟ್ರಲ್ ಗೆ ತನ್ನಿ.

ಇದೆಲ್ಲ ಮನವಿ ಪತ್ರ ಬರೆದು ಫಾಲ್ಗಾಟ್ ರೈಲ್ವೆ ಡಿವಿಜನ್ ಗೆ ಕಳುಹಿಸಿಕೊಡಲಾಗಿದೆ. ಅವರು ಅಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಈಗ ಅದು ಅಲ್ಲಿಂದ ಚೆನೈ ವಿಭಾಗಕ್ಕೆ ಹೋಗಿದೆ. ಅಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ಕಂಡುಬಂದಿಲ್ಲ.
ಈಗ ನಮ್ಮ ಜನಪ್ರತಿನಿಧಿಗಳು ನಿಜವಾದ ಜವಾಬ್ದಾರಿ ತೋರಿಸಬೇಕು. ಕರ್ನಾಟಕದಿಂದ ನಮ್ಮದೇ ಊರಿನವರಾದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ನಮ್ಮ ರಾಜ್ಯವನ್ನು ಚೆನೈಯಲ್ಲಿ ರೈಲ್ವೆ ವಿಭಾಗದ ಮೀಟಿಂಗ್ ಗಳಲ್ಲಿ ಪ್ರತಿನಿಧಿಸುತ್ತಾರೆ. ಏನೂ ಚಿಕ್ಕ ಸ್ಥಾನಮಾನ ಅಲ್ಲ ಅದು. ನಮ್ಮ ರಾಜ್ಯ ಸರಕಾರದ ಪ್ರತಿನಿಧಿ. ನಮ್ಮ ಜಿಲ್ಲೆಯ ಒಂದು ರೈಲು ಇಂತಿಂತಹ ಸಮಯದಲ್ಲಿ ಓಡಿದರೆ ಜನರಿಗೂ ಉಪಯುಕ್ತ, ರೈಲ್ವೆ ಇಲಾಖೆಗೂ ಉಪಯುಕ್ತ ಎಂದು ಅವರು ಅಲ್ಲಿ ಮನವರಿಕೆ ಕೊಡಬೇಕು. ಇತ್ತ ಕಡೆಯಿಂದ ನಮ್ಮ ಮಂಗಳೂರು ನಗರ ದಕ್ಷಿಣದ ಶಾಸಕರಾದ ಜೆ ಆರ್ ಲೋಬೋ ಅವರು ಮುಖ್ಯಮಂತ್ರಿಗಳ ಮೂಲಕ ಮಂಗಳೂರು-ಬೆಂಗಳೂರು ರೈಲಿನ ಇವತ್ತಿನ ಪರಿಸ್ಥಿತಿ ಮತ್ತು ಸಮಯ ಹಾಗೂ ಸ್ಟೇಶನ್ ಬದಲಾದರೆ ಹೇಗೆ ಜನರಿಗೆ ಅನುಕೂಲಕರವಾಗಲಿದೆ ಎಂದು ರೈಲ್ವೆ ಅಧಿಕಾರಿಗಳ ಮೂಲಕ ಒತ್ತಡ ತರಬೇಕು. ಇನ್ನು ನಮ್ಮ ಜಿಲ್ಲೆಯ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೆ ಸಚಿವರ ಮೇಲೆ ಒತ್ತಡ ಹಾಕಬೇಕು. ಮೂರು ಕಡೆಯಿಂದ ಏನಾದರೂ ನಡೆದರೆ ಆಗ ರೈಲು ನಮಗೆ ಉಳಿಯಬಹುದು.


ಇದರೊಂದಿಗೆ ಅವರು ಮಾಡುತ್ತಾರೆ ಸಾಕು, ನಾವು ಏನು ಮಾಡಲು ಆಗುತ್ತೆ ಜನಸಾಮಾನ್ಯರಾಗಿ ಎಂದು ಅಂದುಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ರೈಲ್ವೆ ಇಲಾಖೆಯ ವೆಬ್ ಸೈಟ್ ಗಳಿವೆ. ಅಲ್ಲಿ ದೂರು ದಾಖಲಿಸಬಹುದು. ನಿಮ್ಮ ಅಭಿಪ್ರಾಯ ಬರೆದು ಹಾಕಬಹುದು. ಪೋಸ್ಟ್ ಕಾರ್ಡ್ ಚಳುವಳಿಯನ್ನು ಪ್ರಾರಂಭಿಸಬೇಕು. ಮಂಗಳೂರು ಸೆಂಟ್ರಲ್ ನಿಂದ ಬೆಂಗಳೂರು ಸಿಟಿ ತನಕ ರಾತ್ರಿ ಗೋಮಟೇಶ್ವರ ಏಕ್ಸಪ್ರೆಸ್ ಓಡಿಸಿ ಎಂದು ಎಲ್ಲರೂ ಬರೆದು ಹಾಕೋಣ. ಸಾಧ್ಯವಾದರೆ ಒಂದಿಷ್ಟು ಸಂಘಟನೆಗಳು ಸೇರಿ ರೈಲು ರೋಕೋ ಮಾಡಬೇಕಾದಿತು. ಹತ್ತು ನಿಮಿಷ ರೈಲು ರೋಕೋ ಮಾಡಿದರೆ ಅದು ಸೀದಾ ದೆಹಲಿಯ ರೈಲ್ವೆ ಭವನಕ್ಕೆ ಇಂಜೆಕ್ಷನ್ ಕೊಟ್ಟ ಹಾಗೆ. ಅವರಿಗೆ ಅದು ಮುಟ್ಟುತ್ತದೆ.
ಇದೆಲ್ಲ ಆದಷ್ಟು ಬೇಗ ಆದ್ರೆ ಒಳ್ಳೆಯದು. ಯಾಕೆಂದರೆ ಮುಂದಿನ ವರ್ಷದ ಆರಂಭದ ನಂತರ ಎಪ್ರಿಲ್ ವರೆಗೆ ನಮ್ಮ ಜನರು ಪ್ರವಾಸಕ್ಕೆ ಹೋಗುವುದು ಕಡಿಮೆ. ಪರೀಕ್ಷೆ ಅದು ಇದು ಎಂದು ಮನೆಯಲ್ಲಿಯೇ ಇರುತ್ತಾರೆ. ಈಗಲೇ ಸರಾಸರಿ 37% ನಾಗರಿಕರು ಮಾತ್ರ ಗೋಮಟೇಶ್ವರ ಏಕ್ಸಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಇನ್ನೂ ಕೆಳಗೆ ಹೋಗಿ 30% ಕ್ಕೆ ಹೋಗಿ ನಿಂತರೆ ನಂತರ ಈ ರೈಲು ಸೆಂಟ್ರಲ್ ಕೂಡ ಇಲ್ಲ. ಜಂಕ್ಷನ್ ಕೂಡ ಇಲ್ಲದ ಹಾಗೆ ಆಗುತ್ತದೆ. ಕೇರಳದವರಿಗೆ ಈ ರೈಲು ಲಾಭದಲ್ಲಿ ಓಡಬೇಕಾಗಿಲ್ಲ. ಏಕೆಂದರೆ ಒಮ್ಮೆ ಲಾಸ್ ಎಂದು ಪ್ರೂವ್ ಆದರೆ ಅವರು ತಕ್ಷಣ ಇದೇ ರೈಲನ್ನು ತಮ್ಮ ರಾಜ್ಯದಿಂದ ಓಡಿಸಲು ಹೊರಡುತ್ತಾರೆ. ಮತ್ತೆ ನಾವು ತಪಸ್ಸು ಮಾಡಿದರೂ ಸಿಗುವುದಿಲ್ಲ. ಅದರೊಂದಿಗೆ ಕೊನೆಯದಾಗಿ ಈ ಅಂಕಣವನ್ನು ಮುಗಿಸುವ ಮೊದಲು ಒಂದು ಮಾತು ಹೇಳುತ್ತೇನೆ. ನಾವು ರೈಲ್ಲನ್ನು ಹೆಚ್ಚೆಚ್ಚು ಬಳಸದೇ ಹೋದರೆ ನಷ್ಟ ನಮಗೆ. ಇಲ್ಲಿಂದ ಭಟ್ಕಳಕ್ಕೆ ರೈಲಿನಲ್ಲಿ ಹೋಗಿ, ಎಷ್ಟಾಗುತ್ತೆ. ಅದೇ ಬಸ್ಸಿನಲ್ಲಿ ಹೋಗಿ ಎಷ್ಟಾಗುತ್ತೆ. ಅದರೊಂದಿಗೆ ರೈಲಿನಲ್ಲಿ ಹೋದರೆ ಮೈಕೈ ನೋವೆ ಇಲ್ಲ. ಕಾಲು ಚಾಚಿ ಕುಳಿತುಕೊಳ್ಳಬಹುದು. ಬೋರಾದರೆ ಒಂದತ್ತು ನಿಮಿಷ ಆಚೀಚೆ ಹೋಗಬಹುದು. ಮೂತ್ರ ಕಟ್ಟಿ ಹೆಣಗಬೇಕಿಲ್ಲ. ಇದೆಲ್ಲ ಬಸ್ಸಿನಲ್ಲಿ ಆಗುತ್ತಾ

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search