• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಮಸೇತು ಸುಳ್ಳು ಎನ್ನುವವರೇ ಕೇಳಿ ವಿಜ್ಞಾನದ ಆ ಚಾನೆಲ್ ಹೇಳಿದ ಸತ್ಯದ ಮಾತು..!

TNN Correspondent Posted On December 13, 2017
0


0
Shares
  • Share On Facebook
  • Tweet It

ದೆಹಲಿ: ಭಾರತ ಮತ್ತು ಶ್ರೀಲಂಕಾ ಮಧ್ಯೆ ಕೋಟ್ಯಂತರ ಭಾರತೀಯರ ಆರಾಧ್ಯ ದೈವ ಶ್ರೀರಾಮ ನಿರ್ಮಿಸಿದ ರಾಮಸೇತು ಸತ್ಯ ಎಂಬುದನ್ನು ವಿಜ್ಞಾನದ ಚಾನೆಲ್ ರಚಿಸಿರುವ ಸಾಕ್ಷ್ಯಚಿತ್ರದಲ್ಲಿ ಬಹಿರಂಗಪಡಿಸಿದೆ.

ಕೋಟ್ಯಂತರ ಭಾರತೀಯರ ಶ್ರದ್ಧಾಕೇಂದ್ರವಾಗಿರುವ ರಾಮಸೇತುವಿನ ಅಸ್ತಿತ್ವದ ಬಗ್ಗೆ ಇದ್ದ ಹಲವು ಅನುಮಾನಗಳನ್ನು ಸೈನ್ಸ್ ಚಾನೆಲ್ ಬಗೆಹರಿಸಿದೆ. ಅಮೆರಿಕ ಮೂಲದ ಡಿಸ್ಕವರಿ ಕಮ್ಯುನಿಕೇಷನ್ ನೆಟ್ ವರ್ಕ್ ನ ಈ ಸೈನ್ಸ್ ಚಾನೆಲ್ ಗೆ ಅಮೆರಿಕದ 75.48 ಲಕ್ಷ ಜನರು ಸಸ್ಕ್ರೈಬ್ ಆಗಿದ್ದಾರೆ.

ಅಮೆರಿಕದ ಸೈನ್ಸ್ ಚಾನೆಲ್ ‘ವಾಟ್ ಆನ್ ಅರ್ಥ್’ ಎಂಬ ಖ್ಯಾತ ಸಂಶೋಧಿತ ಕಾರ್ಯಕ್ರಮ ಪ್ರಸಾರ ಮಾಡುತ್ತದೆ. ಆ ಕಾರ್ಯಕ್ರಮದಲ್ಲಿ ಶ್ರೀಲಂಕಾ ಮತ್ತು ಭಾರತ ಮಧ್ಯೆ ಇರುವ ರಾಮಸೇತುವೆ ಬಗ್ಗೆ  ಸಂಶೋಧನೆ ಮಾಡಿದ ಕಾರ್ಯಕ್ರಮ ಪ್ರಸಾರ ಮಾಡಿದೆ. ಅದರಲ್ಲಿ ರಾಮಸೇತು ನಿರ್ಮಿಸಿದ್ದು ಮನುಷ್ಯರೇ ಎಂಬುದನ್ನು ದಾಖಲೆ ಮತ್ತು ಪ್ರಬಲ ವಾದಗಳ ಮೂಲಕ ಮಂಡಿಸಿದೆ.

ರಾಮಸೇತು ನಿರ್ಮಾಣಕ್ಕೆ ಕಲ್ಲು ಜೋಡಿಸಿರುವುದನ್ನು ನಾಸಾ ಸ್ಯಾಟ್ ಲೈಟ್ ತೆಗೆದ ಚಿತ್ರಗಳನ್ನು ವಿಶ್ಲೇಷಿಸಿದೆ. ಸಮುದ್ರಶಾಸ್ತ್ರಜ್ಞರ ಪ್ರಕಾರ ಸೇತುವೆಗೆ ಆಳವಿಲ್ಲದಿದ್ದಾಗ, ಮರುಳಿನ ಮೇಲೆ ಕಲ್ಲುಗಳನ್ನು ಜೋಡಿಸಲಾಗಿದೆ. ಅಲ್ಲದೇ ಕಲ್ಲುಗಳು ಮರುಳಿನ ಮೇಲೆ ಉಳಿದುಕೊಳ್ಳುವಂತೆ ನಿರ್ಮಿಸಲಾಗಿದೆ. ಇಂತಹ ನಿರ್ಮಾಣ ನೈಸರ್ಗಿಕವಾಗಿ ಆಗಿರಲು ಸಾಧ್ಯವೇ ಇಲ್ಲ. ಇದು ಮನುಷ್ಯರೇ ನಿರ್ಮಿಸಿದ್ದು ಎಂದು ಸೈನ್ಸ್ ಚಾನೆಲ್ ತಾನು ರಚಿಸಿರುವ ಸಾಕ್ಷ್ಯ ಚಿತ್ರದಲ್ಲಿ ವಿಶ್ಲೇಷಿಸಿದೆ.

ಸೈನ್ಸ್ ಚಾನೆಲ್ ತನ್ನ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿದ್ದು, ಅದಕ್ಕೆ ಭಾರಿ ಪ್ರಕ್ರಿಯೆಗಳು ಮತ್ತು ಕೋಟ್ಯಂತರ ಷೇರ್ ಗಳು ಆಗಿದ್ದು, ರಾಮಭಕ್ತರಿಗೆ ಮತ್ತು ಹಿಂದೂಗಳಿಗೆ ಭಾರಿ ಖುಷಿ ನೀಡಿದೆ.

https://twitter.com/ScienceChannel/status/940259901166600194

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search