• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಿಟ್ಟಿಂಗ್ ಗೆ 1600 ರೂಪಾಯಿ ತೆಗೆದುಕೊಂಡು ಮೀನಿನೂಟ ಮಾಡಿ ಹೋದರೆ ಮಂಗಳೂರು ವಿವಿ ಉದ್ಧಾರವಾಗುತ್ತಾ!

Vikram Posted On January 1, 2018
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಅಂದರೆ ಸಿಂಡಿಕೇಟ್ ಸದಸ್ಯರು ಒಟ್ಟು 24. ಕುಲಪತಿ ಭೈರಪ್ಪನವರು ಅದರ ಅಧ್ಯಕ್ಷರು. 24 ರಲ್ಲಿ ಆರು ಜನ ಸರಕಾರದ ನೇಮಕಾತಿ. ಇಬ್ಬರು ರಾಜ್ಯಪಾಲರ ನೇಮಕಾತಿ. ಉಳಿದವರೆಲ್ಲರು ಕುಲಪತಿಗಳ ಅಧೀನ ಅಧಿಕಾರಿಗಳು. ಅವರೆಲ್ಲ ಸಭೆಗೆ ಬರಲು ಕಷ್ಟವಿರುವವರು. ಬಂದವರಿಗೆಲ್ಲ 1600 ರೂಪಾಯಿ ಸಿಟ್ಟಿಂಗ್ ಫೀಸ್. ಬಂಗುಡೆ ಸಾರಿನ ಊಟ ಮಾಡಿ ಹೋಗುವುದು ಬಿಟ್ಟರೆ ಬೇರೆ ಟೆನ್ಷನ್ ಅವರು ಮಾಡುವುದಿಲ್ಲ. ಭೈರಪ್ಪನವರ ಎದುರಿಗೆ ನಿಂತು ಮಾತನಾಡಲು ಅವರಿಗೆ ಧೈರ್ಯ ಇಲ್ಲ. ಸರಕಾರದ ನೇಮಕಾತಿಯ ಆರು ಜನ ಮತ್ತು ರಾಜ್ಯಪಾಲರ ನೇಮಕಾತಿಯ ಇಬ್ಬರನ್ನು ಕುಲಪತಿಗಳು ಸಂಭಾಳಿಸಿದ್ದಾರೆ. ಅವರಿಗೆ ತಮಗೆ ಬೇಕಾದ ಒಂದೆರಡು ಕೆಲಸ ಮಾಡಿಕೊಟ್ಟರೆ ಸಾಕು. ಅವರು ತೃಪ್ತರಾಗುತ್ತಾರೆ ನಂತರ ಭೈರಪ್ಪನವರು ಮಾಡುವ ಎಲ್ಲಾ ಸ್ವಹಿತಾಸಕ್ತಿಯ ಕೆಲಸಗಳಿಗೂ ಅವರು ಮೌನ ಸಮ್ಮತಿ ನೀಡುವುದರಿಂದ ಭೈರಪ್ಪನವರಿಗೆ ಏನೂ ಸಮಸ್ಯೆಯಾಗಿಲ್ಲ. ಅದರಲ್ಲಿ ಒಬ್ಬರ “ಹರಿ”ಕಥೆಯನ್ನು ಈಗಾಗಲೇ ಹೇಳಿಯಾಗಿದೆ. ಮೊನ್ನೆ ತನಕ ಲ್ಯಾಂಬಿ ಸ್ಕೂಟರ್ ನಲ್ಲಿ ತಿರುಗಾಡುತ್ತಿದ್ದ ವ್ಯಕ್ತಿ ಈಗ 15 ಲಕ್ಷದ ಕಾರು, 70 ಲಕ್ಷದ ಮನೆ ಕಟ್ಟಿಸಿಕೊಂಡು ಸುಖವಾಗಿದ್ದಾರೆ. ಅವರು ತಮ್ಮ ಮನೆ ಮತ್ತು ಕಾರಿನ ಮೇಲೆ ವಿಶ್ವವಿದ್ಯಾನಿಲಯದ ಪ್ರಸಾದ, ಭೈರಪ್ಪನವರ ಕೃಪೆ ಎಂದು ಬರೆಸಿಕೊಂಡರೆ ಒಳ್ಳೆಯದು. ಈಗ ಅವರಿಗೆ ಎಂಎಲ್ ಸಿಯಾಗುವ ಆಸೆ ಹುಟ್ಟಿಕೊಂಡಿದೆ. ಇದ್ದ ಅಷ್ಟು ಸದಸ್ಯರಲ್ಲಿ ಸ್ವಲ್ಪ ಕಾನೂನು ನಿಯಮಾವಳಿ ಗೊತ್ತಿರುವುದು ಅವರಿಗೆ ಮಾತ್ರ. ಇದು ಅವರ ಮೂರನೇ ಅವಧಿ ಎನ್ನುವುದು ಮತ್ತು ಇಂತಹ ಅವಕಾಶ ವಿಶ್ವವಿದ್ಯಾನಿಲಯದ ಕಾನೂನು ನಿಯಮಾವಳಿಗಳಲ್ಲಿ ಇಲ್ಲದೆ ಇದ್ದರೂ ಅವರನ್ನು ನೇಮಕ ಮಾಡಿರುವುದು ವಿವಿಯ ಎಲ್ಲರ ಹುಬ್ಬೇರಿಸಿದೆ.
ಸುಂದರ ನೈಕ್ ಬೆಂಗಳೂರಿನಿಂದ ಬರಬೇಕು. ಅವರು ಹೇಳಿದ ಸಣ್ಣಪುಟ್ಟ ಕೆಲಸಗಳು ಆಗುತ್ತವೆ. ನ್ಯಾಯವಾದಿ ಪ್ರಸನ್ನ ಕುಮಾರ್ ರೈ, ಮೋಹನ ಚಂದ್ರ ನಂಬಿಯಾರ್ ಸ್ವಲ್ಪ ಧ್ವನಿ ಎತ್ತುತ್ತಾರೆ. ಕಡೆಗೆ ಉಳಿದವರೆಲ್ಲರೂ ಅದಕ್ಕೆ ಸಮಜಾಯಿಷಿಕೆ ನೀಡುತ್ತಾರೆ. ಮಡಿಕೇರಿಯ ಪುಷ್ಪಾ ಅವರು ಸಾತ್ವಿಕರು. ಮೀಟಿಂಗ್ ಗೆ ಬಂದು ಹೋಗುವುದೇ ಅವರಿಗೆ ಹರಸಾಹಸ. ಇಲ್ಲಿ ಆಟ ನಡೆಯುವುದೇ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೊ ಅವರ ಆತ್ಮೀಯ ಕ್ರೈಸ್ತ ಮುಖಂಡರೊಬ್ಬರದ್ದು. ಕ್ರೈಸ್ತ ಶಿಕ್ಷಣ ಸಂಸ್ಥೆಗಳನ್ನು ಕಾಯುವುದೇ ಅವರ ಉದ್ದೇಶ. ಅದರೊಂದಿಗೆ ಕಳೆದ ಕೆಲವು ವರ್ಷಗಳ ಹಿಂದೆ ಮಂಗಳೂರು ವಿವಿಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಬಿಬಿಎಂ ಅಂಕಪಟ್ಟಿ ಅವ್ಯವಹಾರಿಯ ಕುತ್ತಿಗೆ ಕಾಯುವ ಗುರುತರ ಹೊಣೆ ಇದೆ. ಈ ವಿವರವನ್ನು ಮುಂದಿನ ಬಾರಿ ಪ್ರತ್ಯೇಕವಾಗಿ ನೀಡಲಾಗುವುದು!

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Vikram June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Vikram June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ

  • Privacy Policy
  • Contact
© Tulunadu Infomedia.

Press enter/return to begin your search