• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಿಟ್ಟಿಂಗ್ ಗೆ 1600 ರೂಪಾಯಿ ತೆಗೆದುಕೊಂಡು ಮೀನಿನೂಟ ಮಾಡಿ ಹೋದರೆ ಮಂಗಳೂರು ವಿವಿ ಉದ್ಧಾರವಾಗುತ್ತಾ!

Vikram Posted On January 1, 2018


  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಅಂದರೆ ಸಿಂಡಿಕೇಟ್ ಸದಸ್ಯರು ಒಟ್ಟು 24. ಕುಲಪತಿ ಭೈರಪ್ಪನವರು ಅದರ ಅಧ್ಯಕ್ಷರು. 24 ರಲ್ಲಿ ಆರು ಜನ ಸರಕಾರದ ನೇಮಕಾತಿ. ಇಬ್ಬರು ರಾಜ್ಯಪಾಲರ ನೇಮಕಾತಿ. ಉಳಿದವರೆಲ್ಲರು ಕುಲಪತಿಗಳ ಅಧೀನ ಅಧಿಕಾರಿಗಳು. ಅವರೆಲ್ಲ ಸಭೆಗೆ ಬರಲು ಕಷ್ಟವಿರುವವರು. ಬಂದವರಿಗೆಲ್ಲ 1600 ರೂಪಾಯಿ ಸಿಟ್ಟಿಂಗ್ ಫೀಸ್. ಬಂಗುಡೆ ಸಾರಿನ ಊಟ ಮಾಡಿ ಹೋಗುವುದು ಬಿಟ್ಟರೆ ಬೇರೆ ಟೆನ್ಷನ್ ಅವರು ಮಾಡುವುದಿಲ್ಲ. ಭೈರಪ್ಪನವರ ಎದುರಿಗೆ ನಿಂತು ಮಾತನಾಡಲು ಅವರಿಗೆ ಧೈರ್ಯ ಇಲ್ಲ. ಸರಕಾರದ ನೇಮಕಾತಿಯ ಆರು ಜನ ಮತ್ತು ರಾಜ್ಯಪಾಲರ ನೇಮಕಾತಿಯ ಇಬ್ಬರನ್ನು ಕುಲಪತಿಗಳು ಸಂಭಾಳಿಸಿದ್ದಾರೆ. ಅವರಿಗೆ ತಮಗೆ ಬೇಕಾದ ಒಂದೆರಡು ಕೆಲಸ ಮಾಡಿಕೊಟ್ಟರೆ ಸಾಕು. ಅವರು ತೃಪ್ತರಾಗುತ್ತಾರೆ ನಂತರ ಭೈರಪ್ಪನವರು ಮಾಡುವ ಎಲ್ಲಾ ಸ್ವಹಿತಾಸಕ್ತಿಯ ಕೆಲಸಗಳಿಗೂ ಅವರು ಮೌನ ಸಮ್ಮತಿ ನೀಡುವುದರಿಂದ ಭೈರಪ್ಪನವರಿಗೆ ಏನೂ ಸಮಸ್ಯೆಯಾಗಿಲ್ಲ. ಅದರಲ್ಲಿ ಒಬ್ಬರ “ಹರಿ”ಕಥೆಯನ್ನು ಈಗಾಗಲೇ ಹೇಳಿಯಾಗಿದೆ. ಮೊನ್ನೆ ತನಕ ಲ್ಯಾಂಬಿ ಸ್ಕೂಟರ್ ನಲ್ಲಿ ತಿರುಗಾಡುತ್ತಿದ್ದ ವ್ಯಕ್ತಿ ಈಗ 15 ಲಕ್ಷದ ಕಾರು, 70 ಲಕ್ಷದ ಮನೆ ಕಟ್ಟಿಸಿಕೊಂಡು ಸುಖವಾಗಿದ್ದಾರೆ. ಅವರು ತಮ್ಮ ಮನೆ ಮತ್ತು ಕಾರಿನ ಮೇಲೆ ವಿಶ್ವವಿದ್ಯಾನಿಲಯದ ಪ್ರಸಾದ, ಭೈರಪ್ಪನವರ ಕೃಪೆ ಎಂದು ಬರೆಸಿಕೊಂಡರೆ ಒಳ್ಳೆಯದು. ಈಗ ಅವರಿಗೆ ಎಂಎಲ್ ಸಿಯಾಗುವ ಆಸೆ ಹುಟ್ಟಿಕೊಂಡಿದೆ. ಇದ್ದ ಅಷ್ಟು ಸದಸ್ಯರಲ್ಲಿ ಸ್ವಲ್ಪ ಕಾನೂನು ನಿಯಮಾವಳಿ ಗೊತ್ತಿರುವುದು ಅವರಿಗೆ ಮಾತ್ರ. ಇದು ಅವರ ಮೂರನೇ ಅವಧಿ ಎನ್ನುವುದು ಮತ್ತು ಇಂತಹ ಅವಕಾಶ ವಿಶ್ವವಿದ್ಯಾನಿಲಯದ ಕಾನೂನು ನಿಯಮಾವಳಿಗಳಲ್ಲಿ ಇಲ್ಲದೆ ಇದ್ದರೂ ಅವರನ್ನು ನೇಮಕ ಮಾಡಿರುವುದು ವಿವಿಯ ಎಲ್ಲರ ಹುಬ್ಬೇರಿಸಿದೆ.
ಸುಂದರ ನೈಕ್ ಬೆಂಗಳೂರಿನಿಂದ ಬರಬೇಕು. ಅವರು ಹೇಳಿದ ಸಣ್ಣಪುಟ್ಟ ಕೆಲಸಗಳು ಆಗುತ್ತವೆ. ನ್ಯಾಯವಾದಿ ಪ್ರಸನ್ನ ಕುಮಾರ್ ರೈ, ಮೋಹನ ಚಂದ್ರ ನಂಬಿಯಾರ್ ಸ್ವಲ್ಪ ಧ್ವನಿ ಎತ್ತುತ್ತಾರೆ. ಕಡೆಗೆ ಉಳಿದವರೆಲ್ಲರೂ ಅದಕ್ಕೆ ಸಮಜಾಯಿಷಿಕೆ ನೀಡುತ್ತಾರೆ. ಮಡಿಕೇರಿಯ ಪುಷ್ಪಾ ಅವರು ಸಾತ್ವಿಕರು. ಮೀಟಿಂಗ್ ಗೆ ಬಂದು ಹೋಗುವುದೇ ಅವರಿಗೆ ಹರಸಾಹಸ. ಇಲ್ಲಿ ಆಟ ನಡೆಯುವುದೇ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೊ ಅವರ ಆತ್ಮೀಯ ಕ್ರೈಸ್ತ ಮುಖಂಡರೊಬ್ಬರದ್ದು. ಕ್ರೈಸ್ತ ಶಿಕ್ಷಣ ಸಂಸ್ಥೆಗಳನ್ನು ಕಾಯುವುದೇ ಅವರ ಉದ್ದೇಶ. ಅದರೊಂದಿಗೆ ಕಳೆದ ಕೆಲವು ವರ್ಷಗಳ ಹಿಂದೆ ಮಂಗಳೂರು ವಿವಿಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಬಿಬಿಎಂ ಅಂಕಪಟ್ಟಿ ಅವ್ಯವಹಾರಿಯ ಕುತ್ತಿಗೆ ಕಾಯುವ ಗುರುತರ ಹೊಣೆ ಇದೆ. ಈ ವಿವರವನ್ನು ಮುಂದಿನ ಬಾರಿ ಪ್ರತ್ಯೇಕವಾಗಿ ನೀಡಲಾಗುವುದು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Vikram May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Vikram May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search