• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗಂಡ ಹುತಾತ್ಮನಾದ ಎಂದು ಸೈನ್ಯವನ್ನು ಶಪಿಸದ ಆ ದಿಟ್ಟ ಮಹಿಳೆಯೂ ಸೇನೆಯ ಭಾಗವಾಗುತ್ತಾಳೆಂದರೆ…

TNN Correspondent Posted On February 14, 2018
0


0
Shares
  • Share On Facebook
  • Tweet It

ದೆಹಲಿ: ಅದು ಯಾವುದೇ ಯುದ್ಧವಿರಲಿ, ಉಗ್ರರ ದಾಳಿಯಿರಲಿ ಸೈನಿಕನೊಬ್ಬ ಹುತಾತ್ಮನಾದರೆ ಇಡೀ ದೇಶವ ಆತನಿಗೆ ಗೌರವ ನೀಡುತ್ತದೆ. ಸತ್ತರೆ ಹೀಗೆ ಸಾಯಬೇಕು ಎನ್ನುತ್ತೇವೆ. ದೇಶಕ್ಕಾಗಿ ಸಾಯೋದು ಸಹ ಪುಣ್ಯ ಎನ್ನುತ್ತೇವೆ. ಆದರೆ ಆತನ ಕುಟುಂಬಸ್ಥರು ಮಾತ್ರ ದುಃಖದ ಮಡುವಿನಲ್ಲಿ ಮುಳುಗಿರುತ್ತಾರೆ. ಸೈನ್ಯ ಸೇರದಿದ್ದರೆ ನನ್ನ ಮಗ, ಗಂಡ ಉಳಿಯುತ್ತಿದ್ದನಲ್ಲ ಎಂದು ಒಮ್ಮೆಯಾದರೂ ಯೋಚಿಸುತ್ತಾರೆ.

ಹೀಗೆ ಯೋಚಿಸುವವರ ಮಧ್ಯೆಯೂ ಡೆಹ್ರಾಡೂನ್ ನ ಸಂಗೀತಾ ಎಂಬ ದಿಟ್ಟ ಮಹಿಳೆ ಸೈನ್ಯ ಸೇರಿ ಗಂಡ ಸತ್ತರೂ, ಸೈನ್ಯದ ಬಗ್ಗೆ ಒಂದು ಚೂರು ಸಹ ಅಸಮಾಧಾನವಿರದೆ, ಈಗ ಸೈನ್ಯದ ಒಂದು ಭಾಗವಾಗಿ ಕಾರ್ಯನಿರ್ವಹಿಸಲು ಅಣಿಯಾಗಿದ್ದಾರೆ.

ಹೌದು, 2015ರ ಸೆಪ್ಟೆಂಬರ್ 2ರಂದು ಸಂಗೀತಾ ಗಂಡ ಶಿಶಿರ್ ಮಲ್ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಹುತಾತ್ಮನಾಗಿದ್ದ. ಸಾಯುವ ಮುನ್ನ ಒಬ್ಬ ಯೋಧನನ್ನು ಕೊಂದು, ಮತ್ತೊಬ್ಬನನ್ನು ಗಾಯಗೊಳಿಸಿದ್ದ. ಆತನ ಶೂರತನ ನೆನೆಯಬೇಕು, ಪತಿಯೇ ಸತ್ತನಲ್ಲ ಎಂದು ಕಣ್ಣೀರಿಡಬೇಕೋ ಎಂದು ತಿಳಿಯದಾದ ಸಂಗೀತಾ ಡಿಪ್ರೆಶನ್ ಗೆ ಒಳಗಾಗಿ ಹೋದರು.

ಆದರೆ, ಜೀವನದ ಬಂಡಿ ಸಾಗಬೇಕಲ್ಲ? ಅದಕ್ಕಾಗಿ ಪತಿ ತೀರಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಯೊಂದನ್ನು ಬರೆದು, ಉತ್ತೀರ್ಣರೂ ಆಗಿ ಬ್ಯಾಂಕೊಂದರಲ್ಲಿ ದುಡಿದು ಅತ್ತೆ, ಮಾವರನ್ನು ಸಾಕುತ್ತಿದ್ದರು.

ಆದರೆ, ಅದೊಂದು ದಿನ ಕಾರ್ಯಕ್ರಮವೊಂದರಲ್ಲಿ ಶಿಶಿರ್ ಮಲ್ ಅವರ ಗೆಳೆಯರು, “ನೀವ್ಯಾಕೆ ಸೈನ್ಯದ ಭಾಗವೇ ಆದ ಅಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಬಾರದು” ಎಂದಿದ್ದಾರೆ.

ಮೊದಲೇ ಸೈನಿಕನ ಪತ್ನಿಯಾಗಿ ಸೈನ್ಯದ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದ ಸಂಗೀತಾ ಕೊನೆಗೂ ಶಾರ್ಟ್ ಸರ್ವೀಸ್ ಕಮಿಷನ್ (ಎಸ್ಎಸ್ಸಿ) ಪರೀಕ್ಷೆ ಬರೆದು ಈಗ ಅಕಾಡೆಮಿ ಸೇರುವ ಮೂಲಕ ಗಂಡನಿಗೆ ತಕ್ಕ ಪತ್ನಿ ಎನಿಸಿದ್ದಾರೆ. ಇಂತಹ ದಿಟ್ಟ ಮಹಿಳೆಗೆ ನಮ್ಮದೊಂದು ಸಲಾಂ ಇರಲಿ.

0
Shares
  • Share On Facebook
  • Tweet It




Trending Now
ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
Tulunadu News January 3, 2026
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
Tulunadu News January 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
  • Popular Posts

    • 1
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • 2
      ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • 3
      ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • 4
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ

  • Privacy Policy
  • Contact
© Tulunadu Infomedia.

Press enter/return to begin your search