• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗಂಡ ಹುತಾತ್ಮನಾದ ಎಂದು ಸೈನ್ಯವನ್ನು ಶಪಿಸದ ಆ ದಿಟ್ಟ ಮಹಿಳೆಯೂ ಸೇನೆಯ ಭಾಗವಾಗುತ್ತಾಳೆಂದರೆ…

TNN Correspondent Posted On February 14, 2018
0


0
Shares
  • Share On Facebook
  • Tweet It

ದೆಹಲಿ: ಅದು ಯಾವುದೇ ಯುದ್ಧವಿರಲಿ, ಉಗ್ರರ ದಾಳಿಯಿರಲಿ ಸೈನಿಕನೊಬ್ಬ ಹುತಾತ್ಮನಾದರೆ ಇಡೀ ದೇಶವ ಆತನಿಗೆ ಗೌರವ ನೀಡುತ್ತದೆ. ಸತ್ತರೆ ಹೀಗೆ ಸಾಯಬೇಕು ಎನ್ನುತ್ತೇವೆ. ದೇಶಕ್ಕಾಗಿ ಸಾಯೋದು ಸಹ ಪುಣ್ಯ ಎನ್ನುತ್ತೇವೆ. ಆದರೆ ಆತನ ಕುಟುಂಬಸ್ಥರು ಮಾತ್ರ ದುಃಖದ ಮಡುವಿನಲ್ಲಿ ಮುಳುಗಿರುತ್ತಾರೆ. ಸೈನ್ಯ ಸೇರದಿದ್ದರೆ ನನ್ನ ಮಗ, ಗಂಡ ಉಳಿಯುತ್ತಿದ್ದನಲ್ಲ ಎಂದು ಒಮ್ಮೆಯಾದರೂ ಯೋಚಿಸುತ್ತಾರೆ.

ಹೀಗೆ ಯೋಚಿಸುವವರ ಮಧ್ಯೆಯೂ ಡೆಹ್ರಾಡೂನ್ ನ ಸಂಗೀತಾ ಎಂಬ ದಿಟ್ಟ ಮಹಿಳೆ ಸೈನ್ಯ ಸೇರಿ ಗಂಡ ಸತ್ತರೂ, ಸೈನ್ಯದ ಬಗ್ಗೆ ಒಂದು ಚೂರು ಸಹ ಅಸಮಾಧಾನವಿರದೆ, ಈಗ ಸೈನ್ಯದ ಒಂದು ಭಾಗವಾಗಿ ಕಾರ್ಯನಿರ್ವಹಿಸಲು ಅಣಿಯಾಗಿದ್ದಾರೆ.

ಹೌದು, 2015ರ ಸೆಪ್ಟೆಂಬರ್ 2ರಂದು ಸಂಗೀತಾ ಗಂಡ ಶಿಶಿರ್ ಮಲ್ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಹುತಾತ್ಮನಾಗಿದ್ದ. ಸಾಯುವ ಮುನ್ನ ಒಬ್ಬ ಯೋಧನನ್ನು ಕೊಂದು, ಮತ್ತೊಬ್ಬನನ್ನು ಗಾಯಗೊಳಿಸಿದ್ದ. ಆತನ ಶೂರತನ ನೆನೆಯಬೇಕು, ಪತಿಯೇ ಸತ್ತನಲ್ಲ ಎಂದು ಕಣ್ಣೀರಿಡಬೇಕೋ ಎಂದು ತಿಳಿಯದಾದ ಸಂಗೀತಾ ಡಿಪ್ರೆಶನ್ ಗೆ ಒಳಗಾಗಿ ಹೋದರು.

ಆದರೆ, ಜೀವನದ ಬಂಡಿ ಸಾಗಬೇಕಲ್ಲ? ಅದಕ್ಕಾಗಿ ಪತಿ ತೀರಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಯೊಂದನ್ನು ಬರೆದು, ಉತ್ತೀರ್ಣರೂ ಆಗಿ ಬ್ಯಾಂಕೊಂದರಲ್ಲಿ ದುಡಿದು ಅತ್ತೆ, ಮಾವರನ್ನು ಸಾಕುತ್ತಿದ್ದರು.

ಆದರೆ, ಅದೊಂದು ದಿನ ಕಾರ್ಯಕ್ರಮವೊಂದರಲ್ಲಿ ಶಿಶಿರ್ ಮಲ್ ಅವರ ಗೆಳೆಯರು, “ನೀವ್ಯಾಕೆ ಸೈನ್ಯದ ಭಾಗವೇ ಆದ ಅಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಬಾರದು” ಎಂದಿದ್ದಾರೆ.

ಮೊದಲೇ ಸೈನಿಕನ ಪತ್ನಿಯಾಗಿ ಸೈನ್ಯದ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದ ಸಂಗೀತಾ ಕೊನೆಗೂ ಶಾರ್ಟ್ ಸರ್ವೀಸ್ ಕಮಿಷನ್ (ಎಸ್ಎಸ್ಸಿ) ಪರೀಕ್ಷೆ ಬರೆದು ಈಗ ಅಕಾಡೆಮಿ ಸೇರುವ ಮೂಲಕ ಗಂಡನಿಗೆ ತಕ್ಕ ಪತ್ನಿ ಎನಿಸಿದ್ದಾರೆ. ಇಂತಹ ದಿಟ್ಟ ಮಹಿಳೆಗೆ ನಮ್ಮದೊಂದು ಸಲಾಂ ಇರಲಿ.

0
Shares
  • Share On Facebook
  • Tweet It




Trending Now
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
Tulunadu News March 11, 2026
ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
Tulunadu News March 11, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
  • Popular Posts

    • 1
      ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • 2
      ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • 3
      ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • 4
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!

  • Privacy Policy
  • Contact
© Tulunadu Infomedia.

Press enter/return to begin your search