• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ನಂಬಿದ್ರೆ ನಂಬಿ

ಅಬ್ಬಬ್ಬ! ಮಂಗಳೂರಿಗೆ ಇಷ್ಟೆಲ್ಲ ಹೆಸರಿದಿಯಾ?..

TNN Correspondent Posted On July 15, 2017
1


0
Shares
  • Share On Facebook
  • Tweet It

ಮಂಗಳೂರು ಅನೇಕರ ಕನಸಿನ ನಗರ. ಇಲ್ಲಿ ವಿವಿಧ ದೇಶ, ರಾಜ್ಯ, ಜಿಲ್ಲೆಗಳ ಜನರು ವಾಸಿಸುತಿದ್ದಾರೆ.ಅತ್ಯಂತ ಸುಂದರ, ರಮಣೀಯ ತಾಣ ಮಂಗಳೂರು.. ಇಲ್ಲಿನ ಜನರು ಅತ್ಯಂತ ಸಹೃದಯಿಗಳು ಹೀಗೆಲ್ಲಾ ಮಂಗಳೂರನ್ನ ವರ್ಣಿಸಲಾಗುತ್ತದೆ. ಹೌದು ಈ ವರ್ಣನೆಯಲ್ಲಿ ಯಾವುದೇ ಮೋಸ ಇಲ್ಲ ಯಾಕೆಂದರೆ ನಿಜಕ್ಕೂ ಮಂಗಳೂರು ಸ್ವರ್ಗವಿದ್ದಂತೆ.

ಮಂಗಳೂರು ಮೀನುಗಾರಿಕೆ, ಆಸ್ಪತ್ರೆ, ಬಿಸಿನೆಸ್, ಎಜುಕೇಶನ್ ಹೀಗೆ ಅನೇಕ ವಿಚಾರಗಳಲ್ಲಿ ಎತ್ತಿದ ಕೈ. ಇಷ್ಟಲ್ಲದೇ ವಿವಿಧ ಕಡೆಯಿಂದ ಬರುವ ಜನರನ್ನ ಪ್ರೀತಿಯಿಂದ ಅತಿಥಿ ದೇವೋಭವ ಎಂದು ಒಳಗೆ ಕರೆಯುವ ಪ್ರೀತಿ ತೊರೋ ನಾಡು. ದೇವಸ್ಥಾನ, ಚರ್ಚ್, ಮಸೀದಿಗಳ ಪುಣ್ಯ ಭೂಮಿ ಅಂತ ಕೂಡ ಕರೆಯುತ್ತಾರೆ. ಸಮುದ್ರ, ನದಿಗಳಿಂದ ಅವೃತವಾದ ಪ್ರದೇಶ ಕೂಡ ಹೌದು.

ಇನ್ನು ಇತ್ತಿಚೇಗಷ್ಟೆ ಒಂದು ವರದಿ ಕೂಡ ಮಂಗಳೂರಿಗೆ ಗರಿಮೆ ಅನ್ನುವಂತೆ ಹರಿದಾಡುತಿತ್ತು. ಅದೆನೇಂದರೆ, ಭಾರತದಲ್ಲಿ ಉತ್ತಮ ಜನಜೀವನ ಗುಣ ಮಟ್ಟದ ನಗರವಾಗಿ ಮಂಗಳೂರು ಹೊರ ಹೊಮ್ಮಿದೆ. ಇದರಿಂದ ಮಂಗಳೂರಿನಲ್ಲಿ ಜೀವಿಸುತ್ತಿರುವವರಿಗೆ ಒಂದು ಉತ್ತಮ ನಗರದಲ್ಲಿ ವಾಸಿಸುತಿದ್ದೇವೆ ಅನ್ನೋ ಖುಷಿ ಕೂಡ ಇದೆ.ಇಷ್ಟೆಲ್ಲ ಗುಣ ಲಕ್ಷಣವನ್ನ ಹೊಂದಿರುವ ಮಂಗಳೂರಿಗೆ ಹಲವು ಹೆಸರುಗಳಿವೆ, ಅದು ಕೂಡ ಏಳು ಭಾಷೆಯಲ್ಲಿ? ಹೌದು ಮಂಗಳೂರಿಗೆ ಹಲವು ಹೆಸರುಗಳನ್ನು ಬೇರೆ ಬೇರೆ ಭಾಷೆಯಲ್ಲಿ ಕರೆಯಲಾಗುತ್ತೆ. ಈಗಲೂ ಕೂಡ ಅದು ರೂಢಿಯಲ್ಲಿದೆ. ಇಲ್ಲಿದೆ ನೋಡಿ ಅದರ ಬಗ್ಗೆ ಒಂದು ನೋಟ.

ಕನ್ನಡದಲ್ಲಿ ಮಂಗಳೂರು ಅಂತ ಕರೆದರೆ, ತುಳು ಭಾಷೆಯಲ್ಲಿ ಕುಡ್ಲ ಎಂದು ಕರೆಯಲಾಗುತ್ತೆ. ಇನ್ನೂ ಕೊಂಕಣಿಯಲ್ಲಿ ಕೊಡಿಯಾಲ್ ಎಂದು ಕರೆಯುವುದು ವಾಡಿಕೆ, ಇನ್ನು ಬ್ಯಾರಿ ಭಾಷೆಯಲ್ಲಿ ಮೈಕಲ ಎಂದು ಕರೆದರೆ, ಕೇರಳದ ಮಾಲಯಾಳಂ ಭಾಷೆಯಲ್ಲಿ ಮಂಗಲಪುರಂ ಅಂತಾ ಕರೆಯುತ್ತಾರೆ. ಬ್ರಾಹ್ಮಣರ ಹವ್ಯಾಕ ಭಾಷೆಯಲ್ಲಿ ಕೊಡೆಯಾಲ ಎನ್ನುತ್ತಾರೆ, ಸಂಸ್ಕೃತದಲ್ಲಿ ಮಂಜರುನ್ ಎಂದು ಕರೆದರೆ. ಇಂಗ್ಲೀಷ್ ಭಾಷೆಯಲ್ಲಿ ಮ್ಯಾಂಗ್ಳೂರ್ ಎಂದು ಹೇಳಾಲಾಗುತ್ತೆ.

 

ಇಷ್ಟೆಲ್ಲ ಹೆಸರು ಮಂಗಳೂರಿಗೆ ಇದೆ ಅಂತಾ ಶಾಕ್ ಆಯ್ತಾ.. ಶಾಕ್ ಅಗ್ಲೇ ಬೇಕು ಅಂತಾ ತಾನೇ ಹೇಳಿದ್ದು. ಇನ್ಮುಂದೆ ನಾವು ಈ ವಿವಿಧ ಹೆಸರುಗಳನ್ನ ಉಪಯೋಗಿಸುವ ಮೂಲಕ ಮುಂದಿನ ಪೀಳಿಗೆಗೆ ಮಂಗಳೂರಿನ ಈ ಹೆಸರುಗಳು ನೆನಪಿನಲ್ಲಿಡುವಂತಾಗಲಿ.

 

ಕಿರಣ್ ದೊಂಡೋಲೆ

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
1 Comment

Riyaz Mohammed
July 16, 2017 at 9.48
Reply

ಚರಿತ್ರ ಪುಸ್ತಕಗಳನ್ನು ನೋಡಿದರೆ ಅರಬಿಕ್ ಬಾಷೆಯಲ್ಲಿ ಮಂಜರೂರ್ ಎಂದು ಕೂಡಾ ಕರೆಯಲ್ಪಟ್ಟಿದೆ ಎಂದು ಗೊತ್ತಾಗುತ್ತದೆ!


Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search