• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಫತ್ವಾ ಹೊರಡಿಸುವ ಮೂಲಭೂತವಾದಿಗಳೇ ಕೇಳಿ ಸೌದಿಯಲ್ಲೂ ಮಹಿಳಾ ಸೈನಿಕರು

TNN Correspondent Posted On February 27, 2018
0


0
Shares
  • Share On Facebook
  • Tweet It

ಮನಾಮ: ಕಠೋರ ಮುಸ್ಲಿಂ ರಾಷ್ಟ್ರ ಎಂದೇ ಬಿಂಬಿತವಾಗಿದ್ದ ಸೌದಿ ಅರೇಬಿಯಾ ಮುಸ್ಲಿಂ ಧರ್ಮದ ಅಂಧಾಚರಣೆಗಳಿಗೆ ವಿರಾಮ ಹೇಳುತ್ತಿದ್ದು, ನಿರಂತರವಾಗಿ ಕ್ರಾಂತಿಕಾರಕ ನಿರ್ಧಾರ ಕೈಗೊಳ್ಳುವ ಮೂಲಕ, ವಿಶೇಷವಾಗಿ ಮುಸ್ಲಿಂ ಧರ್ಮದಲ್ಲಿ ಅತ್ಯಂತ ಹೀನ ಸ್ಥಿತಿಯಲ್ಲಿದ್ದ ಮಹಿಳೆಯರ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯ ನೀಡುತ್ತ ವಿಶ್ವದ ಗಮನ ಸೆಳೆದಿದೆ. ಅಲ್ಲದೇ ಮುಸ್ಲಿಂ ಧರ್ಮದಲ್ಲೂ ಬದಲಾವಣೆಗೆ ಮುನ್ನಡೆ ಬರೆಯುವ ಮೂಲಕ ಮೂಲಭೂತವಾದಿಗಳಿಗೆ ಸ್ವಾತಂತ್ರ್ಯ, ಸಮಾನತೆಯ ಸಂದೇಶ ನೀಡಿದ್ದಾರೆ. ಇದೀಗ ಸೌದಿ ಅರೇಬಿಯಾ ಸರ್ಕಾರ ಮಹಿಳೆಯರಿಗೆ ಸೈನ್ಯದಲ್ಲಿ ಸೇರಲು ಅವಕಾಶ ನೀಡುವ ಐತಿಹಾಸಿಕ, ಕ್ರಾಂತಿಕಾರಿ ನಿರ್ಧಾರ ಪ್ರಕಟಿಸಿದೆ.

ಮಹಿಳೆಯರನ್ನು ಸರ್ವ ಕ್ಷೇತ್ರಗಳಲ್ಲಿ ತೊಡಗಿಸಬೇಕು ಎಂಬ ನಿರ್ಧಾರದೊಂದಿಗೆ ಕಳೆದ ವಾರವೇ ಸೇನೆಗೆ ಸೇರಲು ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಮಾರ್ಚ್ 1ರಂದು ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಸೇನೆ ಸೇರುವ ಮಹಿಳೆಯರು ಕಡ್ಡಾಯವಾಗಿ ಸೌದಿ ನಾಗರಿಕರಾಗಿರಬೇಕು. ಪ್ರೌಢ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು ಎಂಬ ಅರ್ಹತೆ ವಿಧಿಸಲಾಗಿದೆ. 25 ರಿಂದ 35 ವರ್ಷ ವಯಸ್ಸಯ ಇರಬೇಕು, ಕನಿಷ್ಠ 155 ಸೆಂ.ಮೀ ಉದ್ದ ಇರಬೇಕು ಎಂದು ಸರ್ಕಾರ ಪ್ರಕಟಣೆ ಹೊರಡಿಸಿತ್ತು.

ಪರೀಕ್ಷೆ ಪಾಸಾದ ಬಳಿಕ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳು ಇರುತ್ತವೆ ಎಂದು ತಿಳಿಸಿದೆ. ಅದೇ ರೀತಿ ಅಭ್ಯರ್ಥಿ ಸೌದಿಯೇತರ ವ್ಯಕ್ತಿಯನ್ನು ವಿವಾಹವಾಗಿರಬಾರದು ಎಂಬ ನಿಯಮವನ್ನೂ ವಿಧಿಸಿದೆ. ಆಯ್ಕೆಯಾದ ಮಹಿಳೆಯರನ್ನು ರಿಯಾದ್, ಮೆಕ್ಕಾ, ಮದೀನಾ, ಖಾಸಿಮ್, ಅಸ್ಸೆರ್, ಅಲ್ ಬಹಾ, ಈಸ್ಟ್ರನ್ ಪ್ರಾವಿನ್ಸ್‌ಗಳಲ್ಲಿ ನಿಯಮಿಸಲಾಗುವುದು ಎಂದು ಪಬ್ಲಿಕ್ ಸೆಕ್ಯುರಿಟಿ ಜನರಲ್ ಡೈರೆಕ್ಟರ್ ತಿಳಿಸಿದೆ.

ಇತ್ತೀಚೆಗೆ ಸೌದಿ ಸರ್ಕಾರ ಯೋಗಕ್ಕೆ, ಮಹಿಳೆಯರು ಫುಟ್ಬಾಲ್ ನೋಡಲು ಅವಕಾಶ, ಸ್ವಂತ ಉದ್ದಿಮೆ ನಡೆಸಲು ಅವಕಾಶ ನೀಡುವುದು ಸೇರಿ ಹಲವು ಮಹತ್ತರ ಕ್ರಾಂತಿಕಾರಿ ನಿರ್ಧಾರಗಳನ್ನು ಸೌದಿ ಸರ್ಕಾರ ತೆಗೆದುಕೊಂಡಿತ್ತು.

0
Shares
  • Share On Facebook
  • Tweet It




Trending Now
ಕೇರಳ ಇನ್ನು ಮುಂದೆ ಕೇರಳಂ!
Tulunadu News February 24, 2026
ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
Tulunadu News February 19, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
  • Popular Posts

    • 1
      ಕೇರಳ ಇನ್ನು ಮುಂದೆ ಕೇರಳಂ!
    • 2
      ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • 3
      ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!

  • Privacy Policy
  • Contact
© Tulunadu Infomedia.

Press enter/return to begin your search