• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಓಲಾ ಕ್ಯಾಬ್ ಓಡಿಸುತ್ತಿದ್ದ ಆತ ಸೈನ್ಯ ಸೇರಿದ ಕತೆಯೇ ನಮಗೆಲ್ಲರಿಗೂ ಮಾದರಿ!

TNN Correspondent Posted On March 7, 2018


  • Share On Facebook
  • Tweet It

ನಾವು ಹಾಗೇನೆ, ನಮ್ಮ ಮನಸ್ಥಿತಿಯೂ ಒಂದೇನೇ. ನಮಗೆ ಉದ್ಯೋಗಕ್ಕೆ ಸರ್ಕಾರಿ ನೌಕರಿಯೇ ಬೇಕು, ಆದರೆ ಎಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು. ಐದು, ಆರಂಕಿ ಸಂಬಳ ಬರುತ್ತಿರಬೇಕು ಹಾಗೂ ನಾವು ಎಂಟು ತಾಸು ಕೆಲಸ ಮಾಡಿ ರೆಸ್ಟ್ ತೆಗೆದುಕೊಳ್ಳಬೇಕು. ಆದರೆ ದೇಶಸೇವೆಯ ವಿಷಯ ಬಂದಾಗ ಮಾತ್ರ ಪಕ್ಕದ ಮನೆಯವನೇ ಸೈನ್ಯಕ್ಕೆ ಸೇರಬೇಕು.

ಹೀಗೆ, ಪಕ್ಕದ ಮನೆಯವನೊಬ್ಬ, ಓಲಾ ಕ್ಯಾಬ್ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಸೈನ್ಯಕ್ಕೆ ಸೇರಿದ್ದಾನೆ ಎಂಬುದೇ ನಮಗೆ ಮೆಚ್ಚುಗೆಯ ವಿಷಯ. ಹೌದು, ಚೆನ್ನೈನ ಜಿ.ಸಿ. ಓಂ ಪೈಥಾನೆ ಎಂಬಾತನೇ ಓಲಾ ಕ್ಯಾಬ್ ಓಡಿಸುತ್ತ, ಓಡಿಸುತ್ತ, ಈಗ ದೇಶಸೇವೆ ಮಾಡುವ ಅದೃಷ್ಟ ಗಿಟ್ಟಿಸಿಕೊಂಡಾತ.

ನನ್ನ ತಂದೆ ಕಾರು ಚಾಲಕನಾಗಿದ್ದ. ಆದರೆ ಒಂದು ದಿನ ನಡೆದ ರಸ್ತೆ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡ. ಆಗ, ಬಿಎಸ್ಸಿ ಕೊನೇ ವರ್ಷದಲ್ಲಿ ಓದುತ್ತಿದ್ದ ನಾನು ಕುಟುಂಬಕ್ಕೆ ನೆರವಾಗಲೇಬೇಕಿತ್ತು. ಹಾಗಾಗಿ ನಾನೂ ಓಲಾ ಕ್ಯಾಬ್ ಡ್ರೈವರ್ ಆದೆ ಎನ್ನುತ್ತಾರೆ ಪೈಥಾನೆ.

ಆದರೆ ಅದೊಂದು ದಿನ ನಿವೃತ್ತ ಕರ್ನಲ್ ಒಬ್ಬರು ನನ್ನ ಕಾರು ಹತ್ತಿದರು. ನನ್ನ ಆಸಕ್ತಿ, ವಿಚಾರ ತಿಳಿದ ಅವರು ನೀನೇಕೆ ಸೇನೆ ಸೇರಬಾರದು ಎಂದರು. ಬಳಿಕ ಅವರೇ ಮಾರ್ಗದರ್ಶನ ನೀಡಿದರು. ಹಾಗಾಗಿ ನಾನು ಸೇನೆ ಸೇರಲು ಅನುಕೂಲವಾಯಿತು ಎಂದು ಸ್ಮರಿಸುತ್ತಾರೆ.

ಪ್ರಸ್ತುತ ಚೆನ್ನೈನ ಆಫೀಸರ್ ಟ್ರೇನಿಂಗ್ ಅಕಾಡೆಮಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪೈಥಾನೆ, ಸೇನಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಸುಮಾರು 257 ಕೆಡೆಟ್ಸ್ ಗಳಲ್ಲಿ ಈ ಮಾಜಿ ಓಲಾ ಚಾಲಕನೂ ಒಬ್ಬ ಎಂಬುದೇ ಹೆಮ್ಮೆಯ ವಿಷಯವಲ್ಲವೇ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search