• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ದೇಶದ ಹಿಂದೂಗಳೆಲ್ಲ ಇಲ್ಲಿಯ ಮೂಲನಿವಾಸಿಗಳೇ ಎಂದು ಸಾಬೀತುಪಡಿಸಲು ಮೋದಿ ಸರ್ಕಾರ ಏನು ಮಾಡಿದೆ ಗೊತ್ತಾ?

TNN Correspondent Posted On March 9, 2018
0


0
Shares
  • Share On Facebook
  • Tweet It

ದೆಹಲಿ: ಬೌದ್ಧ ಧರ್ಮ ಸ್ಥಾಪನೆಯಾಗುವ ಮೊದಲು ಗೌತಮ ಬುದ್ಧ ಹಿಂದೂವಾಗಿದ್ದ, ಜೈನ ಧರ್ಮ ಸ್ಥಾಪನೆಗೂ ಮುನ್ನ ತೀರ್ಥಂಕರ ಹಿಂದೂ, ಸಿಂಧೂ ನಾಗರಿಕತೆ ಹಿಂದೂ ಧರ್ಮದ ಮೂಲ ಬೇರು, ಸಿಂಧೂ ನಾಗರಿಕೆಯಿಂದಲೇ ಭಾರತಕ್ಕೆ ಹಿಂದೂಸ್ಥಾನ ಎಂಬ ಹೆಸರು ಬಂತು ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆಯಾದರೂ, ಕೆಲವು ಕುತ್ಸಿತ ಮನಸ್ಸುಗಳು ಮಾತ್ರ ದೇಶದಲ್ಲಿರುವ ಹಿಂದೂಗಳು ಇಲ್ಲಿಯ ಮೂಲ ನಿವಾಸಿಗಳು ಅಲ್ಲ, ಬೇರೆ ಕಡೆಯಿಂದ ವಲಸೆ ಬಂದವರು ಎಂದು ಬೊಬ್ಬೆ ಹಾಕುತ್ತವೆ. ಹಿಂದೂಸ್ಥಾನದಲ್ಲೇ ಹಿಂದೂ ಎಂಬ ಪದ ಇದ್ದರೂ, ತಮ್ಮ ಬಾಯಿ ತೆವಲು ತೀರಿಸಿಕೊಳ್ಳಲು ಕಪಟತನ ತೋರುತ್ತವೆ.

ಹಾಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಹಿಂದೂಗಳೆಲ್ಲ ಇಲ್ಲಿಯ ಮೂಲ ನಿವಾಸಿಗಳೇ ಎಂಬುದನ್ನು ಸಾಬೀತುಪಡಿಸಲು ಮಾಸ್ಟರ್ ಪ್ಲಾನ್ ಮಾಡಿದ್ದು, ಭಾರತದ ಹಿಂದೂಗಳು ಹೆಮ್ಮೆಯಿಂದ ನಾವು ಹಿಂದೂಸ್ಥಾನಿಗಳೇ, ನಮ್ಮ ನೆಲ ಇದೇ ಎಂದು ಹೇಳಿಕೊಳ್ಳುವ ಕಾಲ ದೂರವಿಲ್ಲ ಎಂದೇ ಹೇಳಲಾಗುತ್ತಿದೆ.

ನಿಜ, ಭಾರತದ ಹಿಂದೂಗಳು ಇಲ್ಲಿಯ ಮೂಲ ನಿವಾಸಿಗಳೇ ಎಂದು ಸಾಕ್ಷ್ಯಾಧಾರದ ಸಮೇತ ಸಾಬೀತುಪಡಿಸಲು ಕೇಂದ್ರ ಸರ್ಕಾರ 2016ರಲ್ಲೇ ತಜ್ಞರ ಸಮಿತಿ ರಚಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸರ್ಕಾರ ರಚಿಸಿದ ತಜ್ಞರ ಸಮಿತಿ ಸದಸ್ಯರೊಂದಿಗೆ ರಾಯಿಟರ್ಸ್ ವರದಿಗಾರರು ಸಂದರ್ಶನ ನಡೆಸಿದ್ದು, ದೇಶದ ಹಿಂದೂಗಳೆಲ್ಲ ಮೂಲ ನಿವಾಸಿಗಳೇ ಎಂಬುದು ಎಲ್ಲರಿಗೂ ತಿಳಿಯಲಿ ಹಾಗೂ ಇತಿಹಾಸದಲ್ಲಿ ಈ ಅಂಶ ದಾಖಲಾಗಲಿ ಎಂಬ ದಿಸೆಯಲ್ಲಿ ಸರ್ಕಾರ ಮುಂದಡಿಯಿಟ್ಟಿರುವುದಾಗಿ ತಜ್ಞರ ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಆದಾಗ್ಯೂ, ಈ ಕುರಿತು ಸಮಿತಿ ಅಧ್ಯಕ್ಷ ಕೆ.ಎನ್.ದೀಕ್ಷಿತ್ ರಾಯಿಟರ್ಸ್ ಸಂಸ್ಥೆಯೊಂದಿಗೆ ಮಾತನಾಡಿದ್ದು, ದೇಶದ ಇತಿಹಾಸದ ಪುಟಗಳಲ್ಲಿ ಹಿಂದೂಗಳೆಲ್ಲ ಭಾರತದ ಮೂಲ ನಿವಾಸಿಗಳೇ ಎಂಬುದನ್ನು ಸಾಬೀತುಪಡಿಸುವ ದಿಸೆಯಲ್ಲಿ ಸಂಶೋಧನೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಈ ಕುರಿತು ವರದಿ ನೀಡುವಂತೆ ನಿರ್ದೇಶಿಸಿದೆ. ಈ ದಿಸೆಯಲ್ಲಿ ನಮ್ಮ ತಂಡ ಕಾರ್ಯೋನ್ಮುಖವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಮಹೋನ್ನತ ನಡೆಯಿಂದ ಭಾರತೀಯ ಹಿಂದೂಗಳಿಗೆಲ್ಲ ಸಿಹಿ ಸುದ್ದಿ ಕಾದಿದೆ ಎಂದೇ ಹೇಳಲಾಗುತ್ತಿದ್ದು, ಸತ್ಯಾಂಶ ಬಯಲಾದರೆ ಅದೆಷ್ಟು ಜನರ ಎದೆ ಧಸಕ್ ಎನ್ನುವುದೋ ಎಂಬ ಕುತೂಹಲ ಸಹ ಮೂಡಿದೆ.

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!

  • Privacy Policy
  • Contact
© Tulunadu Infomedia.

Press enter/return to begin your search