• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ನಿಲ್ಲುವುದೆಂದು? ದೌರ್ಜನ್ಯ ಖಂಡಿಸಲು ಬುದ್ಧಿಜೀವಿಗಳು ಎಲ್ಲಿದ್ದಾರೆ?

TNN Correspondent Posted On March 12, 2018
0


0
Shares
  • Share On Facebook
  • Tweet It

ರಾಂಚಿ: ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಿದರೆ ಸರ್ಕಾರದ ದೌರ್ಜನ್ಯ ಎನ್ನುತ್ತಾರೆ, ಗೌರಿ ಲಂಕೇಶ್ ಹತ್ಯೆಯಾದರೆ ಇದು ಸಿದ್ಧಾಂತದ ಭಿನ್ನಾಭಿಪ್ರಾಯದ ಹಿನ್ನೆಲೆ ಮಾಡಿದ ಕೊಲೆ ಎನ್ನುತ್ತಾರೆ. ಆದರೆ ಅದೇ, ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ, ಅವರನ್ನು ಹಾಡಹಗಲೇ ಹತ್ಯೆ ಮಾಡಿದರೆ? ದೇಶದ, ರಾಜ್ಯದ ಬುದ್ಧಿಜೀವಿಗಳು ಬಾಯಿಗೆ ಫೆವಿಕಾಲ್ ಹಾಕಿಕೊಂಡವರಂತೆ ಮಗುಮ್ಮಾಗಿಬಿಡುತ್ತಾರೆ.

ಇದಕ್ಕೆ ಸಾಕ್ಷಿಯಾಗಿ, ಜಾರ್ಖಂಡಿನ ರಾಂಚಿಯಲ್ಲಿ ಬಿಜೆಪಿ ಮುಖಂಡ ಪಂಕಜ್ ಗುಪ್ತಾರನ್ನು ಹಾಡಹಗಲೇ ಗುಂಡಿಕ್ಕಿ ಕೊಲ್ಲಲಾಗಿದೆ. ಗುಂಡಿನ ದಾಳಿಗೆ ನಲುಗಿದ ಅವರು ಅಲ್ಲೇ ಕುಸಿದು ಬಿದ್ದರೂ ಸುಮ್ಮನಿರದ ದುಷ್ಕರ್ಮಿಗಳು ಮತ್ತೂ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಆದರೆ ಬಂದೂಕಿನ ನಳಿಕೆಗೂ ಪಕ್ಷಿಯ ಗೂಡು ಕಟ್ಟುವಂತಾಗಬೇಕು, ಎಲ್ಲರ ಜೀವವೂ ಒಂದೇ, ಎಲ್ಲರ ರಕ್ತವೂ ಒಂದೇ ಎಂದೆಲ್ಲ ಪುಸ್ತಕದ ಬದನೆಕಾಯಿ ಮಾತನಾಡುವ ಬುದ್ಧಿಜೀವಿಗಳಾಗಲಿ, ಪ್ರಶಸ್ತಿ ವಾಪಸ್ ನೀಡುವವರಾಗಲಿ, ಪ್ರಕಾಶ್ ರೈ ಆಗಲಿ ಒಂದೇ ಒಂದು ಖಂಡನೆಯನ್ನೂ ವ್ಯಕ್ತಪಡಿಸಿಲ್ಲ. ಇದೆಂಥಾ ಬೌದ್ಧಿಕ ದಾರಿದ್ರ್ಯ ಇರಬೇಕು?

ರಾಂಚಿಯ ಹೋಟೆಲ್ ಎದುರು ಟೀ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿ ಬಿಜೆಪಿ ಮುಖಂಡರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೇರಳ ಹಾಗೂ ಕರ್ನಾಟಕದಲ್ಲೂ ಇದೇ ಮಾದರಿಯಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹತ್ಯೆಗಳಾಗುತ್ತಲೇ ಇವೆ. ಇವುಗಳನ್ನು ಖಂಡಿಸುವ ಮೂಲಕ ಬುದ್ಧಿಜೀವಿಗಳು ವಿಚಾರಶೀಲತೆ ತೋರಿಸಲಿ. ಇಲ್ಲ, ವಿಚಾರದದ್ದಾರೂ ಏನೂ, ಶೀಲ ಕಳೆದುಕೊಂಡವರಿಗೆ ಏನೆನ್ನುತ್ತಾರೆ ಎಂಬುದು ಗೊತ್ತಲ್ಲವೇ?

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search