• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತನ್ನ ಮಗು ಎರಡು ತಿಂಗಳಲ್ಲಿ ಕಣ್ಣು ಬಿಡುವ ಮೊದಲೇ ಹುತಾತ್ಮನಾದ ಹಾಸನದ ಯೋಧ!

TNN Correspondent Posted On March 14, 2018
0


0
Shares
  • Share On Facebook
  • Tweet It

ಹಾಸನ: ಒಂದು ವರ್ಷದ ಹಿಂದೆ ಆ ಯೋಧನ ಮದುವೆಯಾಗಿತ್ತು. ವರ್ಷ ತುಂಬುವ ಮೊದಲೇ ಆ ಯೋಧನಿಗೆ ಸಿಹಿ ಸುದ್ದಿ ಕಾದಿತ್ತು. ಇನ್ನೆರಡು ತಿಂಗಳು ಕಳೆದಿದ್ದರೆ ತಮ್ಮ ದಾಂಪತ್ಯದ ಕುರುಹಾಗಿ ಮನೆ ಹಾಗೂ ಮನಕ್ಕೊಂದು ಕಂದಮ್ಮನ ಪ್ರವೇಶವಾಗುವುದಿತ್ತು. ಆ ಯೋಧನಿಗೂ ಗಡಿಯಲ್ಲಿ ಮಗ ಹುಟ್ಟಿದರೆ ಹೇಗಿರಬಹುದು, ಮಗಳು ಹುಟ್ಟಿದರೆ ಏನು ಹೆಸರಿಡುವುದು ಎಂದು ನೆನಪು ಬರುತ್ತಿತ್ತೇನೋ?

ಆದರೆ ವಿಧಿಯಾಟವೇ ಬೇರೆ ಇತ್ತು. ಅದರ ಲೆಕ್ಕಾಚಾರವೇ ಬೇರೆಯಾಗಿತ್ತು. ಹೊಸ ಚಿಗುರು ಹೊರಬರುವ ಮುನ್ನವೇ ಅಪ್ಪ ಎಂಬ ಆಲದ ಮರವೇ ಇಲ್ಲ ಎಂಬ ಮಾತೇ ಕರಳು ಚುರುಕ್ ಎನಿಸುತ್ತದೆ. ಅಂತಹ ದುರದೃಷ್ಟ ಶತ್ರುವಿನದ್ದೂ ಆಗಬಾರದು ಎನಿಸುತ್ತದೆ.

ಆದರೆ ಹಾಸನದ ಯೋಧರೊಬ್ಬರ ಬಾಳಲ್ಲಿ ವಿಧಿ ಇಂತಹ ಕ್ರೂರ ಆಟವೊಂದು ಆಡಿಬಿಟ್ಟಿದೆ. ಹೌದು, ಛತ್ತೀಸ್ ಗಡದ ಸುಕ್ಮಾದಲ್ಲಿ ನಕ್ಸಲರು ಮಾಡಿದ ಅಟ್ಟಹಾಸದಲ್ಲಿ ಹಾಸನದ ಹರದೂರು ಗ್ರಾಮದ ಯೋಧ, 29 ವರ್ಷದ ಚಂದ್ರು ಹುತಾತ್ಮರಾಗಿದ್ದಾರೆ. ದಾಳಿ ವೇಳೆ ಭಾರತದ ಒಂಬತ್ತು ಯೋಧರು ಹುತಾತ್ಮರಾಗಿದ್ದು, ಹಾಸನದ ಈ ವೀರಯೋಧನೂ ಸೇರಿದ್ದಾನೆ ಎಂಬುದೇ ರಾಜ್ಯವನ್ನು ದುಃಖತಪ್ತರನ್ನಾಗಿಸಿದೆ. ಇನ್ನು ಆ ಕುಟುಂಬದ ಪರಿಸ್ಥಿತಿ ಹೇಗಾಗಿರಬೇಡ?

ಸ್ವಾಮಿ ಗೌಡ ಎಂಬುವವರ ಪುತ್ರನಾಗಿರುವ ಚಂದ್ರು ಐದು ವರ್ಷಗಳ ಹಿಂದೆ ಸೈನ್ಯ ಸೇರಿದ್ದರು. ಕಳೆದ ವರ್ಷವಷ್ಟೇ ಅಕ್ಕನ ಮಗಳ ಜತೆ ಮದುವೆಯಾಗಿದ್ದ ಚಂದ್ರು ಇನ್ನೆರಡು ತಿಂಗಳಲ್ಲಿ ಮಗು ಎತ್ತಿ ಮುದ್ದಾಡುವ ತವಕದಲ್ಲಿದ್ದ. ಆದರೆ ವಿಧಿಯ ಆಟಕ್ಕೆ ಆ ವೀರ ಯೋಧ ಹುತಾತ್ಮನಾಗಿ ಹೋದನಲ್ಲ ಎಂಬ ಬೇಸರ ಎಲ್ಲರಲ್ಲೂ ಕಾಡುತ್ತಿದೆ. ಛೇ!

0
Shares
  • Share On Facebook
  • Tweet It




Trending Now
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Tulunadu News January 7, 2026
ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
Tulunadu News January 6, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
  • Popular Posts

    • 1
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 2
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 3
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • 4
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • 5
      ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ

  • Privacy Policy
  • Contact
© Tulunadu Infomedia.

Press enter/return to begin your search