• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅರಸೊತ್ತಿಗೆ ಅಳಿದರೂ ಅಮರರಾದ ಮೈಸೂರು ಅರಸರೆಲ್ಲಿ, ಅಧಿಕಾರದಲ್ಲಿರುವಾಗಲೇ ಬೇಸರ ತಂದ ಸಿದ್ದರಾಮಯ್ಯ ಎಲ್ಲಿ?

ವಿಶಾಲ್ ಗೌಡ ಕುಶಾಲನಗರ Posted On March 14, 2018


  • Share On Facebook
  • Tweet It

ಮೈಸೂರು ಅರಸರ ಕೊಡುಗೆ…

ಮೈಸೂರು ಅರಮನೆ ನಿರ್ಮಾಣ

ಮೈಸೂರು ವಿಶ್ವವಿದ್ಯಾಲಯ

ಕೃಷ್ಣರಾಜ ಸಾಗರ ಅಣೆಕಟ್ಟು

ಮೈಸೂರು ಬ್ಯಾಂಕ್

ಕನ್ನಡದ ಏಳಿಗೆಗೆ ಕನ್ನಡ ಸಾಹಿತ್ಯ ಪರಿಷತ್

ಮೈಸೂರು ಸ್ಯಾಂಡಲ್ ಸಾಬೂನು ಫ್ಯಾಕ್ಟರಿ

ಕೋಲಾರ ಚಿನ್ನದ ಗಣಿ ಆರಂಭ

ಬೆಂಗಳೂರು ಸೆಂಟ್ರಲ್ ಕಾಲೇಜು

ಮಹಾರಾಜಾ ಕಾಲೇಜು…

ಸಿದ್ದರಾಮಯ್ಯನವರ ಸಾಧನೆ

3500 ರೈತರ ಆತ್ಮಹತ್ಯೆ

22ಕ್ಕೂ ಅಧಿಕ ಹಿಂದೂಗಳ ಹತ್ಯೆ

ಗೌರಿಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆ

ಲೋಕಾಯುಕ್ತ ನಿರ್ನಾಮ

ಹದಗೆಟ್ಟ ಕಾನೂನು ಸುವ್ಯವಸ್ಥೆ

ಅಪರಾಧ ಪ್ರಕರಣದಲ್ಲಿ ರಾಜ್ಯದ ಶ್ರೇಯಾಂಕ 2 (ದಕ್ಷಿಣ ಭಾರತ)

ದಕ್ಷ ಅಧಿಕಾರಿಗಳಿಗೆ ವರ್ಗಾವಣೆಯ ಶಿಕ್ಷೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೊಂದು ಪ್ರಮಾದ, ಅಜ್ಞಾನದ ಘೋಷಣೆಯೊಂದನ್ನು ಮಾಡಿಕೊಳ್ಳುವ ಮೂಲಕ ರಾಜ್ಯದ ಜನರಿಂದ ಟೀಕೆಗೊಳಗಾಗುತ್ತಿದ್ದಾರೆ. ಅಷ್ಟೇ ಏಕೆ, ಮೈಸೂರು ಅರಸ ಯದುವೀರರೇ ಮೈಸೂರು ಅರಸರ ಸಾಧನೆ ಜನರಿಗೆ ಗೊತ್ತು ಎನ್ನುವ ಮೂಲಕ ಸಿದ್ದರಾಮಯ್ಯನವರಿಗೆ ಸರಿಯಾಗಿಯೇ ಛಾಟಿ ಬೀಸಿದ್ದಾರೆ.

ಖಂಡಿತವಾಗಿಯೂ ಒಬ್ಬ ನಾಯಕ ಇನ್ನೊಬ್ಬ ನಾಯಕನಿಗೆ ಹೋಲಿಸಿಕೊಳ್ಳುವುದು ತಪ್ಪಲ್ಲ. ಆದರೆ ಹಾಗೆ ಹೋಲಿಸಿಕೊಳ್ಳುವ ಮುನ್ನ ಅವರ ಸಮಾನರು ನಾವೇ? ನಾವು ರಾಜ್ಯಕ್ಕೆ ಮಾಡಿರುವುದು ಏನು? ನಾವು ಕಡಿದು ಕಟ್ಟೆ ಹಾಕಿರುವುದು ಏನು? ಇದಕ್ಕೆ ನಾವೆಷ್ಟು ಯೋಗ್ಯರು ಎಂದು ಯೋಚಿಸುವುದು ಬೇಡವೇ?

ಹೀಗೆ ಹಿಂದೆ ಮುಂದೆ ಯೋಚಿಸಿದೆ ನಾಲಿಗೆ ಹರಿಬಿಟ್ಟರೆ ಏನಾಗುತ್ತದೆ ಎಂದರೆ, ಅದಕ್ಕೆ ಸಿದ್ದರಾಮಯ್ಯನವರೇ ಸಾಕ್ಷಿ. ಹೌದು. ಮಾತಿನ ಭರದಲ್ಲಿ ಅಥವಾ ಉದ್ದೇಶಪೂರ್ವಕವಾಗಿಯೋ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾನೂ ಮೈಸೂರು ಅರಸರಂತೆಯೇ ಉತ್ತಮವಾಗಿ ಆಡಳಿತ ನಡೆಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಹಾಗಾದರೆ ಕರ್ನಾಕಟಕ್ಕೆ ಮೈಸೂರು ಅರಸರು ಎಷ್ಟು ಕೊಡುಗೆ ನೀಡಿದ್ದಾರೋ, ಅದರಷ್ಟೇ ಸಿದ್ದರಾಮಯ್ಯನವರು ನೀಡಿದ್ದಾರೆಯೇ? ಸಿದ್ದರಾಮಯ್ಯನವರ ಆಡಳಿತದಲ್ಲಿ ಶತಮಾನದಷ್ಟು ಆಡಳಿತ ನಡೆಸಿದ ಮೈಸೂರು ಅರಸರಷ್ಟು ಸುಧಾರಣೆಯಾಗಿದೆಯೇ? ಸಿದ್ದರಾಮಯ್ಯನವರು ಮಾಡಿಕೊಂಡ ಹೋಲಿಕೆ ಸರಿಯಾಗಿದೆಯೇ? ಹಾಗಾದರೆ ಯದುವೀರರೇಕೆ ಪರೋಕ್ಷವಾಗಿ ಸಿದ್ದರಾಮಯ್ಯರಿಗೆ ಟಾಂಗ್ ನೀಡಿದರು?

ನೀವೇ ಯೋಚನೆ ಮಾಡಿ, ಕೆಆರ್ ಎಸ್ ಅಣೆಕಟ್ಟು ಕಟ್ಟಿ ಲಕ್ಷಾಂತರ ರೈತರಿಗೆ ಬೆಳಕಾದ ಮೈಸೂರು ಅರಸರು ಎಲ್ಲಿ, 3500 ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ?’

ಹಾಗೆ ಸುಮ್ಮನೆ ಯೋಚಿಸಿ, ಕನ್ನಡದ ಅಭಿವೃದ್ಧಿಗಾಗಿ ಕನ್ನಡ ಶಾಲೆ ತೆರೆದ, ಕನ್ನಡ ಸಾಹಿತ್ಯ ಪರಿಷತ್ ರಚಿಸಿ ಕನ್ನಡದ ಏಳಿಗೆಗೆ ನಿಂತ ಮೈಸೂರು ಅರಸರು ಎಲ್ಲಿ, ಕನ್ನಡ ಶಾಲೆ ಮುಚ್ಚಿಸಲು ಆದೇಶಿಸಿದ ಸಿಎಂ ಸಿದ್ದರಾಮಯ್ಯ ಎಲ್ಲಿ?

ಒಂದು ಸಲ ಯೋಚನೆ ಮಾಡಿ ನೋಡಿ, ವೈಜ್ಞಾನಿಕವಾಗಿ ಮೈಸೂರನ್ನು ನಿರ್ಮಿಸಿದ ಅರಸರು ಎಲ್ಲಿ, ಬೆಂಗಳೂರು ತುಂಬ ಕಸ ತುಂಬಿದರೂ ವಿಲೇವಾರಿ ಮಾಡಿಸದ, ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿದರೂ ಇತ್ತ ತಲೆ ಹಾಕದ ಸಿದ್ದರಾಮಯ್ಯ ಯಾವ ಸೀಮೆಯವರು?

ರಾಜ್ಯದ ನಾಗರಿಕನೇ ಯೋಚಿಸು, ಗಲ್ಲಿಗೊಂದು ಕೆರೆ, ಜಲಮೂಲಗಳ ಸಂರಕ್ಷಣೆ ಮಾಡಿದ ಮೈಸೂರು ಅರಸರಿಗೂ, ಬೆಳ್ಳಂದೂರು ಕೆರೆ ಹೊತ್ತಿ ಉರಿದ ಮೇಲೆ ಕೆರೆ ರಕ್ಷಣೆ ಮಾತನಾಡುವ ಸಿದ್ದರಾಮಯ್ಯನವರಿಗೂ ತಾಳಮೇಳ ಜೋಡಿಯಾಗುತ್ತದೆಯೇ?

ಪ್ರಬುದ್ಧ ನಾಗರಿಕರೇ ಒಮ್ಮೆ ಮಿದುಳಿಗೆ ಸಾಣೆ ಹಿಡಿಯಿರಿ, ಸರ್.ಎಂ.ವಿಶ್ವೇಶ್ವರಯ್ಯ, ದಿವಾನ್ ಪೂರ್ಣಯ್ಯ ಅವರಂತಹ ದಕ್ಷ ಆಡಳಿತಗಾರರನ್ನು ಪೋಷಣೆ ಮಾಡಿದ ಮೈಸೂರಿನ ಹೆಮ್ಮೆಯ ಅರಸು ಎಲ್ಲಿ, ದಕ್ಷ ಅಧಿಕಾರಿಗಳಿಗೆ ವರ್ಗಾವಣೆಯ ಶಿಕ್ಷೆ ನೀಡುವ ದರ್ಪದ ಸಿದ್ದರಾಮಯ್ಯನವರು ಎಲ್ಲಿ?

ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ದೇವಸ್ಥಾನ ನಿರ್ಮಾಣ, ಕೃತಿ ರಚನೆ, ಕಲೆ ಪೋಷಣೆಯಲ್ಲಿ ತೊಡಗಿದ್ದ ಮೈಸೂರು ಅರಸರು ಆಕಾಶದ ಸಮಾನ, ಮತಾಂಧ ಟಿಪ್ಪು ಜಯಂತಿ ಆಚರಿಸಿದ, ಲಿಂಗಾಯತ ಪ್ರತ್ಯೇಕ ಧರ್ಮದ ಪರ ಬ್ಯಾಟಿಂಗ್ ಮಾಡಿದ, ಒಂದೇ ಸಮುದಾಯದ ಪರ ಯೋಜನೆ ತಂದು ಒಡಕುಂಟು ಮಾಡಿದ, ಕಲ್ಲಡ್ಕದಲ್ಲಿ ಓದುತ್ತಿದ್ದ ಹಿಂದೂ ಮಕ್ಕಳ ಅನ್ನ ಕಿತ್ತುಕೊಂಡ ಸಿದ್ದರಾಮಯ್ಯ ಅರಸರ ಆಡಳಿತಕ್ಕೆ ಹೋಲಿಸಿದರೆ ತೃಣಸಮಾನ.

ಶತಮಾನದವರೆಗೆ ಒಂದು ಸಾಮ್ರಾಜ್ಯವನ್ನು ದಕ್ಷತೆಯಿಂದ ಆಳಿದ ಅರಸರಿಗೆ ಸರಿಸಮಾನರಾಗಿ, ಮೂರು ಮತ್ತೊಂದು ಭಾಗ್ಯ ಜಾರಿಗೊಳಿಸಿದ ಸಿದ್ದರಾಮಯ್ಯನವರು ಹೋಲಿಸಿಕೊಳ್ಳುತ್ತಾರೆಂದರೆ ಇವರ ಮನಸ್ಸಲ್ಲಿ ಎಷ್ಟು ದರ್ಪವಿರಬೇಕು? ಯದುವೀರರೇಕೆ ಸಿದ್ದರಾಮಯ್ಯರಿಗೆ ಪರೋಕ್ಷ ಛಾಟಿ ಬೀಸಿದ್ದಾರೆಂದು ಈಗ ಅರ್ಥವಾಯಿತಲ್ಲವೇ?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
ವಿಶಾಲ್ ಗೌಡ ಕುಶಾಲನಗರ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
ವಿಶಾಲ್ ಗೌಡ ಕುಶಾಲನಗರ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search