• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಿಧಿ ಎಷ್ಟು ಕ್ರೂರ, ಮಗುವನ್ನು ಮುದ್ದಾಡಬೇಕಿದ್ದ ಯೋಧ ದೇಶಕ್ಕಾಗಿ ಹುತಾತ್ಮನಾದ

TNN Correspondent Posted On March 15, 2018
0


0
Shares
  • Share On Facebook
  • Tweet It

ಹಾಸನ: ಆ ಯೋಧ ತನ್ನ ವಂಶದ ಕುಡಿಯನ್ನು ಮುದ್ದಾಡಬೇಕಿತ್ತು. ಆದರೆ ಪತ್ನಿಯ ಸೀಮಂತ ಮುಗಿಸಿ, ‘ಭಯ ಪಡಬೇಡ ಕೆಲವೇ ದಿನಗಳಲ್ಲಿ ಬರುವೆ’ ಎಂದು ಹೋದವ ಯೋಧ ಮರಳಿ ಬಂದಿದ್ದು ಮಾತ್ರ ಹುತಾತ್ಮ ಪಟ್ಟ ಧರಿಸಿ. ಮಗುವನ್ನು ಮುದ್ದಾಡುವ ಭಾಗ್ಯ ಆತನಿಗೆ ಇಲ್ಲದಾಗಿದೆ. ಛತ್ತಿಸಗಢ್ ದಲ್ಲಿ ಮಾವೋವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಒಂಬತ್ತು ಸೈನಿಕರಲ್ಲಿ ಮಗುವನ್ನು ಮುದ್ದಾಡಬೇಕಿದ್ದ ಹಾಸನ ಜಿಲ್ಲೆಯ ಅರಕೂಲಗೂಡಿನ ಹರದೂರಿನ ಯೋಧ ಎಚ್.ಎಸ್. ಚಂದ್ರು ಒಬ್ಬರು. ವಿಧಿ ಮಗುವನ್ನು ಮುದ್ದಾಡಬೇಕಿದ್ದ ಯೋಧನನ್ನು ಬಲಿ ತೆಗೆದುಕೊಂಡು ಬಿಟ್ಟಿದೆ.

ಛತ್ತಿಗಡದ ಅರಣ್ಯದಲ್ಲಿ ಮಾವೋವಾಧಿಗಳ ವಿರುದ್ಧ ಕಾರ್ಯಾಚರಣೆಗೆ ತೆರಳುವ ವೇಳೆಯಲ್ಲಿ ನಕ್ಸಲರು ಸ್ಫೋಟಿಸಿದ ನೆಲಬಾಂಬ್ ನಿಂದ ಯೋಧ ಚಂದ್ರು ಸೇರಿ 9 ಯೋಧರು ಹುತಾತ್ಮರಾಗಿದ್ದರು. ಮನೆಗೆ ಆಶ್ರಯವಾಗಿದ್ದ, ದೇಶಕ್ಕೆ ರಕ್ಷಕನಾಗಿದ್ದ, ಗ್ರಾಮಕ್ಕೆ ಮಾದರಿಯಾಗಿದ್ದ 26 ವಯಸ್ಸಿನ ಚಂದ್ರು ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿದಕ್ಕೆ ಇಡೀ ಗ್ರಾಮ, ಕುಟುಂಬದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.

2015 ಮದುವೆಯಾಗಿದ್ದ ಚಂದ್ರು ಛತ್ತೀಸಗಢ್ ದಲ್ಲಿ ಪತ್ನಿಯೊಂದಿಗೆ ವಾಸಿಸಿದ್ದರು. ಫೆ.17ರಂದು ಹರದೂರಿಗೆ ಬಂದಿದ್ದರು. ಪತ್ನಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪತ್ನಿಗೆ ಮತ್ತೆ ಬರುವೇ ಭಯ ಪಡಬೇಡ. ಹೊಸ ಮನೆಗೆ ಮಗುವಿನೊಂದಿಗೆ ಪ್ರವೇಶ ಮಾಡೋಣ ಎಂದು ಹೇಳಿ ಹೋಗಿದ್ದರು. ಆದರೆ ನಕ್ಸಲರ ಅಟ್ಟಹಾಸಕ್ಕೆ ಚಂದ್ರು ಬಲಿಯಾಗಿದ್ದು, ಇಡೀ ಹರದೂರು ಶೋಕದಲ್ಲಿ ಮುಳುಗುವಂತೆ ಮಾಡಿದೆ. ಆತ್ಮೀಯ ಗೆಳೆಯನನ್ನು ಕಳೆದುಕೊಂಡ ಚಂದ್ರು ಸ್ನೇಹಿತರ ಕಣ್ಣಾಲಿಗಳು ತೇವಗೊಂಡಿವೆ. ಚಂದ್ರು ಇನ್ನಿಲ್ಲ ಎಂಬ ಸುದ್ದಿ ಉಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ.

ಭಾರತದ ಸೈನ್ಯದ ಹೆಮ್ಮೆಯೇ ಅಂಥಾದ್ದು, ಆದರೆ ಕುಟುಂಬದ ಸೌಖ್ಯಗಳನ್ನು ಮರೆತು ನಮ್ಮ ಸೈನಿಕರು ಜೀವ ಪಣಕ್ಕಿಟ್ಟು ಹೋರಾಡುತ್ತಾರೆ. ಇತ್ತ ಅವರ ಕುಟುಂಬ ಸೈನ್ಯದಲ್ಲಿ ಕೆಲಸ ಮಾಡುವ ಯೋಧನನ್ನು ನೆನಪಿಸಿಕೊಳ್ಳುತ್ತ, ಗೌರವಾಧರಗಳಿಂದ ಜೀವನ ಸಾಗಿಸುತ್ತೇ. ಆದರೆ ಆತ ಇನ್ನಿಲ್ಲ ಎಂದಾಗ ಮಾತ್ರ ದುಖಃ ತಡೆದುಕೊಳ್ಳಲಾದೀತೆ. ಚಂದ್ರು ನಂತ ಯೋಧನ ಕುಟುಂಬಕ್ಕೊಂದು ಸಲಾಮ್ ಹೇಳಲೇಬೇಕು.

0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Tulunadu News February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್

  • Privacy Policy
  • Contact
© Tulunadu Infomedia.

Press enter/return to begin your search