14 ವರ್ಷದ ಬುಡಕಟ್ಟು ಬಾಲಕಿ ಮೇಲೆ ಮುಸ್ಲಿಂ ವ್ಯಕ್ತಿಯ ಅತ್ಯಾಚಾರ, ಕೊಲೆ, ಎಲ್ಲಿದ್ದಾರೆ ಬುದ್ಧಿಜೀವಿಗಳು?
![](https://tulunadunews.com/wp-content/uploads/2018/03/rape-1.jpg)
ಡಿಸ್ಪುರ: ದೇಶದಲ್ಲಿ ಹಲವು ಭಾಗಗಳಲ್ಲಿ ಇಸ್ಲಾಂ ಮೂಲಭೂತವಾದ, ಬಲವಂತದ ಮತಾಂತರ, ಆಮಿಷವೊಡ್ಡಿ ಕ್ರಿಶ್ಚಿಯನ್ನರು ಮಾಡುವ ಮತಾಂತರಗಳು ಹಿಂದೂಗಳನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬೆನ್ನಲ್ಲೇ, ಅಸ್ಸಾಮಿನಲ್ಲಿ ಬುಡಕಟ್ಟು ಜನಾಂಗದ ಬಾಲಕಿಯೊಬ್ಬಳ ಮೇಲೆ ಮುಸ್ಲಿಂ ಯುವಕನೊಬ್ಬ ಅತ್ಯಾಚಾರವೆಸಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಅಸ್ಸಾಂ ರಾಜ್ಯದ ಹೈಲಾಕಂಡಿ ಜಿಲ್ಲೆ ಬೆಸ್ತೋರಾ ಪುರ್ಬಶ್ರೀ ಎಂಬಲ್ಲಿ ಬಾಲಕಿ ಆಗತಾನೆ ಶಾಲೆಯಿಂದ ಬಂದಿದ್ದು, ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ಬಾಲಕ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಲ್ಲದೆ, ಕೊಲೆ ಮಾಡಿದ್ದಾನೆ. ಈತನನ್ನು ಜಾಶಿಮ್ ಉದ್ದೀನ್ ಬೋರ್ದುಯಾನ್ ಎಂದು ಗುರುತಿಸಲಾಗಿದೆ.
ಬಾಲಕಿಯ ಪೋಷಕರು ಕೆಲಸ ಮುಗಿಸಿ ಮನೆಗೆ ಬಂದಾಗ ಬಾಲಕಿಯ ಕೊಲೆಯಾಗಿದ್ದು ತಿಳಿದಿದೆ. ಆದರೆ ಬಾಲಕಿಯ ಬಟ್ಟೆ ಹರಿದಿದ್ದನ್ನು ನೋಡಿ ಬೆಚ್ಚಿಬಿದ್ದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ತಿಳಿದಿದೆ.
ಜಾಶಿಮ್ ಉದ್ದೀನ್ ಬೋರ್ದುಯಾನ್ ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಆದರೆ ಹೀಗೆ ಬುಡಕಟ್ಟು ಜನಾಂಗದ ಬಾಲಕಿಯೊಬ್ಬಳ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬಅತ್ಯಾಚಾರ ಎಸಗಿ, ಕೊಲೆ ಮಾಡಿರುವುದನ್ನು ದೇಶದ ಯಾವುದೇ ಬುದ್ಧಿಜೀವಿಗಳು, ಪ್ರಗತಿಪರರು, ಜೀವಪರರು ಪ್ರಶ್ನಿಸುತ್ತಿಲ್ಲ ಎಂಬುದು ಅವರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ.
Leave A Reply