• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜ್ಯೋತಿ ಸರ್ಕಲ್ ನಲ್ಲಿ ಒಂದೆರಡು ದಿನ ಸಿಗ್ನಲ್ ಫ್ರೀ? ಇದು ರಾಹುಲ್ “ಭಾಗ್ಯ”ವೇ?

Shrikanth Posted On March 19, 2018


  • Share On Facebook
  • Tweet It

ಮಂಗಳೂರಿನ ಜ್ಯೋತಿ ವೃತ್ತದ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಸಿಗ್ನಲ್ ಒಂದೆರಡು ದಿನಗಳ ಕಾಲ ಕಾಂಗ್ರೆಸ್ ಬಂಟಿಂಗ್ಸ್ ನಿಂದ ಮುಚ್ಚಿ ಹೋಗಿದೆ. ಹಾಗಾಗಿ ವಾಹನ ಸವಾರರು ತಮ್ಮ ವಾಹನಗಳನ್ನು ಯರ್ರಾಬಿರ್ರಿಯಾಗಿ ಚಲಾಯಿಸಿದರೂ ಹೇಳೋರಿಲ್ಲ-ಕೇಳೋರಿಲ್ಲ. ಅಕಸ್ಮಾತ್ ಟ್ರಾಫಿಕ್ ಪೊಲೀಸ್ ಕೇಳಿದರೆ ಸಿಗ್ನಲ್ ಕಾಣಿಸ್ತಾ ಇಲ್ವಲಾ ನಾನೇನ್ ಮಾಡ್ಲಿ ಅಂತ ಹೇಳಿದರೆ ಪೊಲೀಸರತ್ರನೂ ಉತ್ತರ ಇರ್ಲಿಕ್ಕಿಲ್ಲ.

ಅಲ್ಲ ಮಾರಾಯ್ರೆ, ರಾಹುಲ್ ಗಾಂಧಿ ಬರುವುದಾದ್ರೆ ಊರಿಡೀ ಸಿಂಗಾರ ಮಾಡಿಕೊಳ್ಳಲಿ. ಯಾರೂ ಏನೂ ಕೇಳುವುದಿಲ್ಲ. ಆದರೆ ಹೋಗಿ ಹೋಗಿ ಪ್ರಮುಖ ರಸ್ತೆಗಳಲ್ಲಿರುವ ಸಿಗ್ನಲ್ ವ್ಯವಸ್ಥೆಗೆ ಅಡ್ಡವಾಗಿ ಸಿಂಗಾರ ಮಾಡೋದಾ?

ಅಷ್ಟಕ್ಕೂ ಅಂಬೇಡ್ಕರ್ ಸರ್ಕಲ್ ಸಿಗ್ನಲ್ ಎಷ್ಟು ಮುಖ್ಯವಾಗಿದೆ ಗೊತ್ತಾ?

ವಾಹನಗಳು, ಬಂಟ್ಸ್ ಹಾಸ್ಟೆಲ್ ಕಡೆಯಿಂದ ಬಂದು ಹಂಪನಕಟ್ಟೆ ಅಥವಾ ಕಂಕನಾಡಿ ಕಡೆ ಹೋಗುತ್ತವೆ. ವಾಹನಗಳು ಕಂಕನಾಡಿ ಕಡೆಯಿಂದ ಬಂದು ಸ್ಟೇಟ್ ಬ್ಯಾಂಕ್ ಅಥವಾ ಬಂಟ್ಸ್ ಹಾಸ್ಟೆಲ್ ಕಡೆ ಹೋಗುತ್ತವೆ. ವಾಹನಗಳು ಬಾವುಟ ಗುಡ್ಡೆಯಿಂದ ಬಂದು ಬಂಟ್ಸ್ ಹಾಸ್ಟೆಲ್ ಅಥವಾ ಕಂಕನಾಡಿ ಕಡೆ ಹೋಗುತ್ತವೆ.ಇಂತಹ ವಾಹನ ದಟ್ಟಣೆ ಇರುವ ವೃತ್ತ ಅಂಬೇಡ್ಕರ್ ಸರ್ಕಲ್, ಇದೇ ಸರ್ಕಲ್ ಪಕ್ಕದಲ್ಲಿ ಕೆ.ಎಂ.ಸಿ ಆಸ್ಪತ್ರೆಯೂ ಇದೆ. ಹೆಣ್ಣು ಮಕ್ಕಳ ಕಾಲೇಜೂ ಇದೆ. ಹಾಗಾಗಿ ವಾಹನಗಳ ಹೊರತಾಗಿ ಪಾದಚಾರಿಗಳ ಸಂಖ್ಯೆಯೂ ಹೆಚ್ಚಿದೆ.

ಇಂತಹ ಪ್ರಮುಖ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿರುವುದರಿಂದ ಅದನ್ನು ತಡೆಗಟ್ಟಲು ಸಿಗ್ನಲ್ ವ್ಯವಸ್ಥೆ ಮಾಡಲಾಗಿದೆ. ಸಿಗ್ನಲ್ ಬ್ರೇಕ್ ಮಾಡುವವರನ್ನು ಪತ್ತೆ ಹಚ್ಚಲು ಸಿ.ಸಿ. ಕ್ಯಾಮರಾ ಹಾಗೂ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಲಾಗಿದೆ. ಇಷ್ಟೆಲ್ಲಾ ಇದ್ದು ಸರಿಯಾಗಿ ಸಿಗ್ನಲ್ ಕಾಣಿಸದಂತೆ ಅದರ ಮುಂದೆ-ಹಿಂದೆ ಮೇಲೆ-ಕೆಳಗೆ ಕಾಂಗ್ರೆಸ್ ಪಕ್ಷ ತನ್ನ ಬಂಟಿಂಗ್ಸ್ ಹಾಕಿಕೊಂಡು ಸಾರ್ವಜನಿಕರನ್ನು ಅಣಕಿಸುತ್ತಿದೆ.

ನಾಳೆ ಈ ಸರ್ಕಲ್ ನಲ್ಲಿ ಅನಿವಾರ್ಯವಾಗಿ ಸಿಗ್ನಲ್ ರೂಲ್ಸ್ ಬ್ರೇಕ್ ಆಗಿ ಯಾವುದಾದರೂ ಅವಘಡ ಸಂಭವಿಸಿದರೆ ಅದರ ಜವಾಬ್ದಾರಿಯನ್ನು ರಾಹುಲ್ ಗಾಂಧಿ ಹೊರುತ್ತಾರಾ? ಜಿಲ್ಲಾ ಸಚಿವರು ಹೊರುತ್ತಾರಾ? ಅಥವಾ ಶಾಸಕರು ಹೊರುತ್ತಾರಾ?ಯಾರೂ ಹೊರುವುದಿಲ್ಲ. ಅವರು ಹೊರುವುದು ನಮ್ಮ ಶವ ಮಾತ್ರ. ಅದೂ ಕೂಡಾ ಧರ್ಮ ಆಧಾರಿತವಾಗಿ!

  • Share On Facebook
  • Tweet It


- Advertisement -


Trending Now
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Shrikanth June 24, 2022
ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
Shrikanth June 24, 2022
Leave A Reply

  • Recent Posts

    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
    • ಪಚ್ಚನಾಡಿಯ ದಲಿತರ ಜಾಗದಲ್ಲಿ ಕಟ್ಟಿದ ಮನೆಗಳಿಗೆ ಯಾರು ಗತಿ!
  • Popular Posts

    • 1
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 2
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 3
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 4
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • 5
      ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search