• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಶೋಭಾ ಕರಂದ್ಲಾಜೆಯ ಸುಳ್ಳು ಪ್ರಚಾರದಿಂದ ಕೇಂದ್ರ ನಾಯಕರು ಗರಂ!

TNN Correspondent Posted On July 18, 2017
0


0
Shares
  • Share On Facebook
  • Tweet It

ಅದರ ಬದಲು ಮೋದಿ ಅಭಿವೃದ್ಧಿ ಪುಸ್ತಕ ಹಿಡಿದು ಹೊರಡಿ ಎಂದು ತಾಕೀತು!

ಇದೇ ಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ನಾನೇ ಮುಖ್ಯಮಂತ್ರಿ ಎಂದು ಗರಿಗರಿ ಕೋಟು ಹೊಲೆಸಿ ತಯಾರಾಗುತ್ತಿರುವ ಯಡಿಯೂರಪ್ಪನವರಿಗೆ ಮೂಲೆಯಲ್ಲೆಲ್ಲೋ ಒಂದು ಸಣ್ಣ ಆತಂಕ ಇದೆ. ಅದೇನೆಂದರೆ ಇಲೆಕ್ಷನ್ ನಡೆದು ಫಲಿತಾಂಶ ಬರುವ ಹೊತ್ತಿಗೆ ತಮಗೆ 75 ಆಗಿರುತ್ತದೆ. ಅದರ ನಂತರ ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದರೂ ಅದಕ್ಕೆ ವಾರಂಟಿ ಪಿರೀಡ್ ಎಂದು ಇರುತ್ತದೆ. ಆದ್ದರಿಂದ ಒಂದು ಸಣ್ಣ ಪ್ರಮಾದ ನಡೆದರೂ ತಮ್ಮನ್ನು ವಿಧಾನಸೌಧದ ಮೂರನೇ ಮಹಡಿಯಿಂದ ಮುನ್ನೂರು ಕಿಲೋ ಮೀಟರ್ ಆಚೆ ಬಿಸಾಡಲು ಈ ಗುಜರಾತಿಗಳು ಹಿಂಜರಿಯುವುದಿಲ್ಲ, ಆದ್ದರಿಂದ ತಾನು ಇಳಿಯುವ ಹೊತ್ತಿಗೆ ತನ್ನ ಸ್ಥಾನದಲ್ಲಿ ಕುಳಿತುಕೊಳ್ಳಲು ರಾಜ್ಯದಲ್ಲಿ ಹೈಕಮಾಂಡ್ ಸಮೀಕ್ಷೆ ನಡೆಸಿ ಯಾರಾದರೂ ಬೇರೆ ನಾಯಕರು ಸಿಕ್ಕಿದರೆ ಅದರ ನಂತರ ಈ ವಿಧಾನಸೌಧದ ಮೂರನೇ ಮಹಡಿ ತಮಗೆ ಆಷಾಢಕ್ಕೋ, ಶ್ರಾವಣಕ್ಕೋ ತವರು ಮನೆಯವರು ಕರೆದರೆ ಹೋಗುವುದಕ್ಕೆ ಮಾತ್ರ ಸೀಮಿತವಾಗುತ್ತೆ ಎಂದು ತಿಳಿದಿದೆ.

ಅದಕ್ಕಾಗಿ ತಾನು ಸಿಎಂ ಖುರ್ಚಿ ಬಿಟ್ಟು ಹೋಗುವಾಗ ಅದಕ್ಕೆ ಟವೆಲ್ ಹಾಕಿ ಹೋಗಲು ಅವರು ತಮ್ಮದೇ ಪಾಳಯದ ಸೇನಾಧಿಪತಿಯನ್ನು ಹುಡುಕುತ್ತಿದ್ದಾರೆ. ಅದು ಯಾರು ಗೊತ್ತಾ? ಸಂಶಯವೇ ಇಲ್ಲ. ಶೋಭಾ ಕರಂದ್ಲಾಜೆ. ಶೋಭಾಳನ್ನು ತಾವು ಹೋದಲ್ಲೆಲ್ಲ ಕರೆದುಕೊಂಡು ಹೋಗುತ್ತಿರುವ ಬಿಎಸ್ ವೈ ತಮ್ಮ ಭಾಷಣಕ್ಕಿಂತಲೂ ಆಕೆಯ ಮಾತಿಗೆ ಮಾಧ್ಯಮಗಳಲ್ಲಿ ಹೆಚ್ಚು ಜಾಗ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಏನಾದರೂ ಹೊಡಿ ಬಡಿ ಮಾತನಾಡು, ಪೊಲೀಸರ ಧಮ್ಮಿನ ವಿಷಯ ತೆಗಿ, ಯುವಕರಿಗೆ ಖುಷಿಯಾಗುತ್ತೆ ಎಂದು ಯಡಿಯೂರಪ್ಪ, ಶೋಭಾಳಿಗೆ ಹೇಳಿದಂತಿದೆ. ಅದಕ್ಕೆ ಅವಸರಕ್ಕೆ ಬಿದ್ದಿರುವ ಶೋಭಾ ” ಕಾಂಗ್ರೆಸ್ ಅಧಿಕಾರದಲ್ಲಿದ್ದ ಹತ್ಯೆಯಾದ ಸಂಘ ಪರಿವಾರದ ಯುವಕರ ಪಟ್ಟಿ” ಹಿಡಿದುಕೊಂಡು ಸಂಸತ್ತಿನಲ್ಲಿ ತಿರುಗುತ್ತಿದ್ದಾರೆ. ಬಹುಶ: ನೂರರಲ್ಲಿ 20 ಜನರಿಗೆ ಮಾತ್ರ ಖುಷಿಯಾಗುವ ಇಂತಹ ಹತ್ಯಾ ವಿಷಯಗಳನ್ನು ಪಕ್ಕಕ್ಕೆ ಇಟ್ಟು ಮೋದಿ ಮಾಡಿರುವ ಸಾವಿರಾರು ಯೋಜನೆಗಳನ್ನು ಜನರಿಗೆ ತಿಳಿಸಿದ್ದರೆ ಇಷ್ಟೊತ್ತಿಗೆ ನೂರರಲ್ಲಿ 80 ಜನರಿಗೆ ಖುಷಿಯಾಗುತ್ತಿತ್ತು. ಅದರ ಬದಲು ಈ ಅಂತೆ ಕಂತೆ ಸುದ್ದಿಗಳಿಗೆ ಸಮಯ ವ್ಯರ್ಥ ಮಾಡುವುದರಿಂದ ಆಗುವುದೇನೂ ಇಲ್ಲ ಎಂದು ಕೇಂದ್ರದ ಮುಖಂಡರು ಶೋಭಾಗೆ ಹೇಳಿ ಕಳುಹಿಸಿದ್ದಾರೆ ಎಂದು ಬಿಜೆಪಿಯ ವಿಶ್ವಾಸಾರ್ಹನಿಯ ಮೂಲಗಳು ತಿಳಿಸಿವೆ. ಇನ್ನು ಶೋಭಾ ಪಟ್ಟಿಯನ್ನು ಸರಿಯಾಗಿ ನೋಡಿದರೆ ಅದರಲ್ಲಿ ಕಾಂಗ್ರೆಸ್ಸಿಗೆ ಸಂಬಂಧವೇ ಇಲ್ಲದಂತಹ ಕೊಲೆಗಳು ಕೂಡ ಇವೆ. ಇದಕ್ಕೆ ಭರ್ಜರಿ ಪ್ರಚಾರ ಕೊಡುವ ಬದಲು ಶೋಭಾ ಮೋದಿಯವರ ಸಾಧನೆಯ ಪುಸ್ತಕವನ್ನು ಒಂದು ಗಂಟೆ ಓದಿದರೆ ಜನ ಏನೂ ನಿರೀಕ್ಷಿಸುತ್ತಿದ್ದಾರೆ ಎಂದು ಶೋಭಾಳಿಗೆ ಗೊತ್ತಾಗುತ್ತಿತ್ತು ಎಂದು ಬಿಜೆಪಿಯ ದೆಹಲಿ ನಾಯಕರು ತಮ್ಮೊಳಗೆ ಮಾತನಾಡಿಕೊಂಡಿದ್ದು ಯಡಿಯೂರಪ್ಪನವರ ಕಿವಿಗೂ ಬಿದ್ದಿದೆ.

0
Shares
  • Share On Facebook
  • Tweet It




Trending Now
ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
Tulunadu News January 2, 2026
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
Tulunadu News January 1, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
  • Popular Posts

    • 1
      ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • 2
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 3
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search