• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕುದ್ರೋಳಿಯ ಅಲ್ ಅಮೀನ್ ರಸ್ತೆಗೆ ಹೋಗಿ ಬನ್ನಿ ಶಾಸಕರೇ

Kiran Posted On March 26, 2018
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಫ್ಲೆಕ್ಸ್ ಗಳನ್ನು ರಸ್ತೆಗಳಲ್ಲಿ ಎರಡೆರಡು ನಿಲ್ಲಿಸಿ ಪಬ್ಲಿಸಿಟಿ ಪಡೆದುಕೊಳ್ಳುತ್ತಿರುವ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೋ ಅವರು ಒಮ್ಮೆ ಕುದ್ರೋಳಿಗೆ ಬರಬೇಕು. ಅಲ್ಲಿನ ಅಲ್ ಅಮೀನ್ ರಸ್ತೆಯಲ್ಲಿರುವ ಅಂಗನವಾಡಿ ಎದುರಿನ ಜಾಗವನ್ನು ನೋಡಬೇಕು. ನರಕ ಎಂದರೆ ಏನು ಎನ್ನುವುದು ಅವರಿಗೆ ಅರ್ಥವಾಗುತ್ತದೆ. ಹತ್ತಾರು ಮನೆಯವರು ನಿತ್ಯ ನಡೆದಾಡುವ ರಸ್ತೆಯೊಂದು ಸಂಪೂರ್ಣ ಡ್ರೈನೇಜ್ ತ್ಯಾಜ್ಯದೊಂದಿಗೆ ಮುಚ್ಚಿ ಹೋಗಿದೆ. ಆ ಪ್ರದೇಶಕ್ಕೆ ಹೋದವರು ತಮ್ಮ ನೆಂಟರಿಷ್ಟರ ಮನೆಗೆ ಹೋಗಬೇಕಾದರೆ ರಸ್ತೆ ಎಲ್ಲಿ ಎಂದು ಕೇಳಿದಾಗ ಡ್ರೈನೇಜ್ ತ್ಯಾಜ್ಯ ಹೆಪ್ಪುಗಟ್ಟಿರುವ ರಸ್ತೆಯೊಂದನ್ನು ತೋರಿಸಿದ್ದಕ್ಕೆ ಅತಿಥಿಗಳು ಹಾಗೆ ಹಿಂದಕ್ಕೆ ಹೋಗಿದ್ದಾರೆ ಎಂದರೆ ಪರಿಸ್ಥಿತಿ ಹೇಗಿದೆ ಎಂದು ನೀವೆ ಅರ್ಥಮಾಡಿಕೊಳ್ಳಿ.

ತ್ಯಾಜ್ಯವೇ ಸುರಿದು ಮಾಡಿದಂತಿರುವ ಈ ರಸ್ತೆಯ ಎದುರು ಅಂಗನವಾಡಿ ಕೇಂದ್ರವಿದೆ. ಅನೇಕ ಪುಟಾಣಿಗಳು ಅಲ್ಲಿ ಬರುತ್ತಾರೆ. ಬಾಗಿಲು ಮುಚ್ಚಿಯೇ ನಾವು ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ ಎಂದು ಅಲ್ಲಿನ ಶಿಕ್ಷಕರು ಹೇಳುತ್ತಾರೆ. ಡ್ರೈನೇಜ್ ಹೆಪ್ಪುಗಟ್ಟಿ ನಿಂತಿರುವುದರಿಂದ ಸ್ಥಳೀಯರು ಅದರ ಮೇಲೆನೆ ಹಲಗೆಯನ್ನು ಇಟ್ಟು ಬ್ಯಾಲೆನ್ಸ್ ಮಾಡಿ ರಸ್ತೆಯ ಮೇಲೆ ಹೋಗುತ್ತಿದ್ದಾರೆ. ಶಾಲೆಗೆ ಹೋಗುವ ಮಕ್ಕಳು ಶುಭ್ರ ಸಮವಸ್ತ್ರ ಧರಿಸಿ ಹೋಗುವಾಗ ಕಾಲು ಜಾರಿದರೆ ಆವತ್ತು ಕ್ಲಾಸಿಗೆ ಹೋಗಲಾರದ ಪರಿಸ್ಥಿತಿ ಇದೆ. ಅಕ್ಕಪಕ್ಕದಲ್ಲಿ ಅನೇಕ ಮನೆಗಳು ಇದ್ದು ಜನ ಕಿಟಕಿ ಮುಚ್ಚಿದರೂ ವಾಸನೆ ತಡೆಯಲಾರದೆ ಊಟ ಮಾಡದ ಪರಿಸ್ಥಿತಿ ಇದೆ. ಅನೇಕ ಜನರಿಗೆ ಇಲ್ಲಿ ಮಲೇರಿಯಾ, ಡೆಂಗ್ಯೂ ಸಾಮಾನ್ಯವಾಗಿದೆ.

ಈ ಬಗ್ಗೆ ಇಲ್ಲಿನ ಕಾರ್ಪೋರೇಟರ್ ಅವರು ಮೌನವಾಗಿರುವುದರಿಂದ ಜನ ಏನು ಮಾಡಲು ತೋಚದೆ ನರಕದ ಬದುಕನ್ನು ಕಾಣುತ್ತಿದ್ದಾರೆ. ಡ್ರೈನೇಜ್ ಒಡೆದು ನಿತ್ಯ ತ್ಯಾಜ್ಯ ಹೊರಗೆ ಬರುವುದೇ ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯರ ಮತ್ತು ಶಾಸಕರ ಸಾಧನೆಯಾದರೆ ಅದನ್ನು ಕೂಡ ಫ್ಲೆಕ್ಸ್ ನಲ್ಲಿ ಬರೆದು ಹಾಕಬಹುದಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಾಗರಿಕರು.

 

0
Shares
  • Share On Facebook
  • Tweet It




Trending Now
ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
Kiran February 25, 2026
ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
Kiran February 25, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
  • Popular Posts

    • 1
      ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • 2
      ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • 3
      ಕೇರಳ ಇನ್ನು ಮುಂದೆ ಕೇರಳಂ!
    • 4
      ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!

  • Privacy Policy
  • Contact
© Tulunadu Infomedia.

Press enter/return to begin your search