• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕುದ್ರೋಳಿಯ ಅಲ್ ಅಮೀನ್ ರಸ್ತೆಗೆ ಹೋಗಿ ಬನ್ನಿ ಶಾಸಕರೇ

Kiran Posted On March 26, 2018
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಫ್ಲೆಕ್ಸ್ ಗಳನ್ನು ರಸ್ತೆಗಳಲ್ಲಿ ಎರಡೆರಡು ನಿಲ್ಲಿಸಿ ಪಬ್ಲಿಸಿಟಿ ಪಡೆದುಕೊಳ್ಳುತ್ತಿರುವ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೋ ಅವರು ಒಮ್ಮೆ ಕುದ್ರೋಳಿಗೆ ಬರಬೇಕು. ಅಲ್ಲಿನ ಅಲ್ ಅಮೀನ್ ರಸ್ತೆಯಲ್ಲಿರುವ ಅಂಗನವಾಡಿ ಎದುರಿನ ಜಾಗವನ್ನು ನೋಡಬೇಕು. ನರಕ ಎಂದರೆ ಏನು ಎನ್ನುವುದು ಅವರಿಗೆ ಅರ್ಥವಾಗುತ್ತದೆ. ಹತ್ತಾರು ಮನೆಯವರು ನಿತ್ಯ ನಡೆದಾಡುವ ರಸ್ತೆಯೊಂದು ಸಂಪೂರ್ಣ ಡ್ರೈನೇಜ್ ತ್ಯಾಜ್ಯದೊಂದಿಗೆ ಮುಚ್ಚಿ ಹೋಗಿದೆ. ಆ ಪ್ರದೇಶಕ್ಕೆ ಹೋದವರು ತಮ್ಮ ನೆಂಟರಿಷ್ಟರ ಮನೆಗೆ ಹೋಗಬೇಕಾದರೆ ರಸ್ತೆ ಎಲ್ಲಿ ಎಂದು ಕೇಳಿದಾಗ ಡ್ರೈನೇಜ್ ತ್ಯಾಜ್ಯ ಹೆಪ್ಪುಗಟ್ಟಿರುವ ರಸ್ತೆಯೊಂದನ್ನು ತೋರಿಸಿದ್ದಕ್ಕೆ ಅತಿಥಿಗಳು ಹಾಗೆ ಹಿಂದಕ್ಕೆ ಹೋಗಿದ್ದಾರೆ ಎಂದರೆ ಪರಿಸ್ಥಿತಿ ಹೇಗಿದೆ ಎಂದು ನೀವೆ ಅರ್ಥಮಾಡಿಕೊಳ್ಳಿ.

ತ್ಯಾಜ್ಯವೇ ಸುರಿದು ಮಾಡಿದಂತಿರುವ ಈ ರಸ್ತೆಯ ಎದುರು ಅಂಗನವಾಡಿ ಕೇಂದ್ರವಿದೆ. ಅನೇಕ ಪುಟಾಣಿಗಳು ಅಲ್ಲಿ ಬರುತ್ತಾರೆ. ಬಾಗಿಲು ಮುಚ್ಚಿಯೇ ನಾವು ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ ಎಂದು ಅಲ್ಲಿನ ಶಿಕ್ಷಕರು ಹೇಳುತ್ತಾರೆ. ಡ್ರೈನೇಜ್ ಹೆಪ್ಪುಗಟ್ಟಿ ನಿಂತಿರುವುದರಿಂದ ಸ್ಥಳೀಯರು ಅದರ ಮೇಲೆನೆ ಹಲಗೆಯನ್ನು ಇಟ್ಟು ಬ್ಯಾಲೆನ್ಸ್ ಮಾಡಿ ರಸ್ತೆಯ ಮೇಲೆ ಹೋಗುತ್ತಿದ್ದಾರೆ. ಶಾಲೆಗೆ ಹೋಗುವ ಮಕ್ಕಳು ಶುಭ್ರ ಸಮವಸ್ತ್ರ ಧರಿಸಿ ಹೋಗುವಾಗ ಕಾಲು ಜಾರಿದರೆ ಆವತ್ತು ಕ್ಲಾಸಿಗೆ ಹೋಗಲಾರದ ಪರಿಸ್ಥಿತಿ ಇದೆ. ಅಕ್ಕಪಕ್ಕದಲ್ಲಿ ಅನೇಕ ಮನೆಗಳು ಇದ್ದು ಜನ ಕಿಟಕಿ ಮುಚ್ಚಿದರೂ ವಾಸನೆ ತಡೆಯಲಾರದೆ ಊಟ ಮಾಡದ ಪರಿಸ್ಥಿತಿ ಇದೆ. ಅನೇಕ ಜನರಿಗೆ ಇಲ್ಲಿ ಮಲೇರಿಯಾ, ಡೆಂಗ್ಯೂ ಸಾಮಾನ್ಯವಾಗಿದೆ.

ಈ ಬಗ್ಗೆ ಇಲ್ಲಿನ ಕಾರ್ಪೋರೇಟರ್ ಅವರು ಮೌನವಾಗಿರುವುದರಿಂದ ಜನ ಏನು ಮಾಡಲು ತೋಚದೆ ನರಕದ ಬದುಕನ್ನು ಕಾಣುತ್ತಿದ್ದಾರೆ. ಡ್ರೈನೇಜ್ ಒಡೆದು ನಿತ್ಯ ತ್ಯಾಜ್ಯ ಹೊರಗೆ ಬರುವುದೇ ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯರ ಮತ್ತು ಶಾಸಕರ ಸಾಧನೆಯಾದರೆ ಅದನ್ನು ಕೂಡ ಫ್ಲೆಕ್ಸ್ ನಲ್ಲಿ ಬರೆದು ಹಾಕಬಹುದಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಾಗರಿಕರು.

 

0
Shares
  • Share On Facebook
  • Tweet It




Trending Now
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Kiran December 9, 2025
ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
Kiran December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
  • Popular Posts

    • 1
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 2
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 3
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search