• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನರೇಂದ್ರ ನಾಯಕ್ ಕ್ಷಮೆಯಾಚಿಸಲಿ ಅಥವಾ ಮಾನನಷ್ಟ ಮೊಕದ್ದಮೆ ಎದುರಿಸಲಿ…

Hanumantha Kamath Posted On March 29, 2018
0


0
Shares
  • Share On Facebook
  • Tweet It

ನಾನು ಮೊನ್ನೆ ಸೋಮವಾರ ಸುದ್ದಿಗೋಷ್ಟಿ ಮಾಡಿರುವ ವಿಷಯ ನಿಮಗೆ ಈಗಾಗಲೇ ಹೇಳಿದ್ದೇನೆ. ನನ್ನನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಎಳೆದು ತರಲು ಹರಸಾಹಸ ಪಡುತ್ತಿರುವ ವಿಚಾರವಾದಿ ಪ್ರೋ|ನರೇಂದ್ರ ನಾಯಕ್ ಅವರ ನಡೆಯನ್ನು ಅಲ್ಲಿ ಖಂಡಿಸಿದ್ದೇನೆ. ಆದರೆ ಈಗ ನರೇಂದ್ರ ನಾಯಕ್ ಅವರು ತಾನು ಹಾಗೆ ಹೇಳಿಯೇ ಇಲ್ಲ, ಹನುಮಂತ ಕಾಮತ್ ಬಗ್ಗೆ ಮಾತನಾಡಲೇ ಇಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ನನ್ನನ್ನು ಮತ್ತು ದೇವಳವನ್ನು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಎಳೆದು ತರದೇ ಇದ್ದರೆ ನಾನ್ಯಾಕೆ ಸುದ್ದಿಗೋಷ್ಟಿ ಮಾಡಬೇಕಿತ್ತು? ಅವರು ನನ್ನ ಬಗ್ಗೆ ಮತ್ತು ದೇವಳದ ಬಗ್ಗೆ ಹಗುರವಾಗಿ ಮಾತನಾಡದೇ ಇದ್ದರೆ ನಾನು ಮಂಗಳೂರಿನ ಪ್ರೆಸ್ ಕ್ಲಬ್ ತನಕ ಹೋಗುವ ಅಗತ್ಯವೇ ಇರಲಿಲ್ಲ. ನನಗೆ ಅನಗತ್ಯವಾಗಿ ಪಬ್ಲಿಸಿಟಿ ಪಡೆಯುವ ಹಪಾಹಪಿ ಇಲ್ಲ. ನನ್ನನ್ನು ಅನಾವಶ್ಯಕವಾಗಿ ವಿವಾದಕ್ಕೆ ಎಳೆಯದೇ ಹೋದರೆ ನಾನು ಆ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಆದರೆ ಇಲ್ಲಿ ಹಾಗೇ ಇರಲಿಲ್ಲ. ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ದಕ್ಷ ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ತನಿಖೆ ಮಾಡಿ ಸೈ ಎನಿಸಿಕೊಂಡ ನಂತರವೂ ಪದೇ ಪದೇ ಇದರಲ್ಲಿ ಯಾರನ್ಯಾರನೋ ಕೆಣಕುವ ಕೆಲಸವನ್ನು ನರೇಂದ್ರ ನಾಯಕ್ ಮತ್ತು ಕೆಲವರು ಮಾಡುತ್ತಾ ಬರುತ್ತಿದ್ದಾರೆ.

ಹೇಳುವುದು ನಂತರ ಹೇಳಿಲ್ಲ ಎನ್ನುವುದು ಚಾಳಿನಾ…

ಮೊನ್ನೆ ಮಾರ್ಚ್ 21ರಂದು ಅದನ್ನು ಅವರು ಮತ್ತೆ ಮಾಡಿದ್ದಾರೆ. ಪ್ರತಿಭಟನಾರ್ಥವಾಗಿ ನಡೆದ ಸಭೆಯಲ್ಲಿ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಎತ್ತಿದ್ದಾರೆ. ನರೇಂದ್ರ ನಾಯಕ್ ಆ ಸಭೆಯಲ್ಲಿ ನನ್ನ ಹೆಸರನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಹೆಸರನ್ನು ಎಳೆದು ತಂದ ಬಗ್ಗೆ ಇಂಗ್ಲೀಷ್ ಪತ್ರಿಕೆಯ ವೆಬ್ ಸೈಟ್ ನಲ್ಲಿ ಸುದ್ದಿ ಬಂದಿದೆ. ನಾನು ಅದರ ವರದಿಗಾರರಿಗೆ ಫೋನ್ ಮಾಡಿ ವಿಚಾರಿಸಿದ್ದೇನೆ. ಅವರು “ಹೌದು, ನಿಮ್ಮ ಹೆಸರನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ವಿಷಯವನ್ನು ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಬಗ್ಗೆ ಮಾತನಾಡುತ್ತಾ ಪ್ರಸ್ತಾಪಿಸಿದ್ದಾರೆ” ಎಂದಿದ್ದಾರೆ. ಅದರ ನಂತರವೇ ನಾನು ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಕೊಡಬೇಕೆಂದು ನಿರ್ಧರಿಸಿದ್ದು ಮತ್ತು ಸುದ್ದಿಗೋಷ್ಟಿ ಮಾಡಲು ತೀರ್ಮಾನಿಸಿದ್ದು. ಅದರಂತೆ ಪ್ರೆಸ್ ಕ್ಲಬ್ ಹೋಗಿ ಪತ್ರಿಕೆಗಳ ಮತ್ತು ಟಿವಿ ವರದಿಗಾರರ ಎದುರು ನನ್ನ ವಾದವನ್ನು ಇಟ್ಟಿದ್ದೇನೆ. ಅದು ಪ್ರಮುಖ ಪತ್ರಿಕೆಗಳಲ್ಲಿ ಬಂದಿದೆ. ಈಗ ನರೇಂದ್ರ ನಾಯಕ್ ಅವರು ನನ್ನ ವಿರುದ್ಧ ಮಾತನಾಡಿಲ್ಲ ಎಂದಾದರೆ ಅದನ್ನು ಕೂಡ ಬಹಿರಂಗ ಪಡಿಸಲಿ. ಕೇವಲ ಒಂದು ಪತ್ರಿಕೆಯಲ್ಲಿ ಹೇಳುವ ಮೂಲಕ ಅದು ತುಂಬಾ ಜನರಿಗೆ ತಲುಪಲಾರದು. ಅವರು ನಾನು ಮಾಡಿದ ಹಾಗೆ ಸುದ್ದಿಗೋಷ್ಟಿ ಮಾಡಿ “ಹನುಮಂತ ಕಾಮತ್ ಅವರು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಯಾವ ರೀತಿಯಲ್ಲಿಯೂ ಭಾಗಿದಾರರಲ್ಲ, ಅವರನ್ನು ಈ ಪ್ರಕರಣದಲ್ಲಿ ನಾನು ಎಳೆದದ್ದು ನನ್ನ ತಪ್ಪು. ಪೊಲೀಸ್ ತನಿಖೆಯಲ್ಲಿ ಆರೋಪಿಗಳೆನಿಸಿದವರನ್ನು ಬಿಟ್ಟು ಬೇರೆಯವರನ್ನು ತಾನು ಆರೋಪಿಗಳಂತೆ ಚಿತ್ರಿಸುವುದನ್ನು ಇನ್ನು ಮುಂದೆ ಬಿಡುತ್ತೇನೆ. ಹಾಗೆ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ಕೂಡ ಈ ಕೊಲೆ ಪ್ರಕರಣದಲ್ಲಿ ಎಳೆಯುವುದಿಲ್ಲ. ಆ ದೇವಳಕ್ಕೂ ಈ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ನನಗೆ ಗೊತ್ತಿದೆ” ಎಂದು ಹೇಳಲಿ. ಆಗ ಅದು ಎಲ್ಲ ಪತ್ರಿಕೆಗಳಲ್ಲಿ ಬರುತ್ತದೆ. ಅದು ಬಿಟ್ಟು ಬಹಿರಂಗವಾಗಿ ಭಾಷಣ ಮಾಡುವಾಗ ಹೆಸರು ಹೇಳಿ ಅವಹೇಳನ ಮಾಡುವುದು ನಂತರ ನಾನು ಹಾಗೆ ಹೇಳಿಯೇ ಇಲ್ಲ ಎಂದು ಹೇಳಿದರೆ ಆಗಲ್ಲ.

ದೇವಸ್ಥಾನದ ಒಳಗೆ ಚಪ್ಪಲಿ ಹಾಕುವ ದರ್ಪ ಯಾಕೆ..

ಅದರೊಂದಿಗೆ ನರೇಂದ್ರ ನಾಯಕ್ ಅವರು ತಾವು ಮೊನ್ನೆ ಮಾಡಿದ ಸಭೆಯಲ್ಲಿ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ಈ ಕೊಲೆ ಪ್ರಕರಣದಲ್ಲಿ ಎಳೆದು ತಂದದ್ದು ಕೂಡ ಎಲ್ಲರಿಗೂ ಗೊತ್ತಿರುವ ವಿಷಯ. ಅದರ ಅಗತ್ಯ ಏನಿತ್ತು? ಈಗ ಅದಕ್ಕೂ ನರೇಂದ್ರ ನಾಯಕ್ ಉತ್ತರ ಕೊಡಬೇಕು. ನರೇಂದ್ರ ನಾಯಕ್ ಅವರು ದೇವರನ್ನು ನಂಬುವುದಿಲ್ಲ. ಅವರು ದೇವರನ್ನು ನಂಬದೇ ಇರುವುದು ಅವರ ವೈಯಕ್ತಿಕ ವಿಷಯ. ಅವರನ್ನು ನಂಬಿ ಎಂದು ನಾವೇನೂ ಒತ್ತಾಯ ಮಾಡಲು ಹೋಗುವುದಿಲ್ಲ. ಆದರೆ ನಾವು ದೇವರನ್ನು ನಂಬುವ ಜನ. ದೇವರ ಬಗ್ಗೆ, ದೇವಸ್ಥಾನಗಳ ಬಗ್ಗೆ ನಮಗೆ ಅಪರಿಮಿತ ಭಕ್ತಿ ಇದೆ. ನಾವು ಸಣ್ಣ ಮಕ್ಕಳಿರುವಾಗಲೇ ನಮ್ಮ ತಂದೆ, ತಾಯಿ ನಮಗೆ ದೇವಸ್ಥಾನದ ಒಳಗೆ ಹೋಗುವಾಗ ಚಪ್ಪಲಿಯನ್ನು ಹೊರಗೆ ಇಟ್ಟು ಹೋಗಬೇಕು ಎಂದು ಕಲಿಸಿರುತ್ತಾರೆ. ನಾವು ನಂತರ ನಮ್ಮ ಮಕ್ಕಳಿಗೆ ಈ ಬಗ್ಗೆ ಹೇಳಿಕೊಟ್ಟಿರುತ್ತೇವೆ. ನಮಗೆ ದೇವಸ್ಥಾನ ಎಂದರೆ ಅದು ಬೇರೆ ಕಟ್ಟಡಗಳಂತೆ ಅಲ್ಲ. ಅಲ್ಲಿ ನಮ್ಮ ಧಾರ್ಮಿಕ ಶ್ರದ್ಧೆ ಇದೆ. ವಿಶ್ವಾಸ ಇದೆ. ಅಲ್ಲಿ ಚಪ್ಪಲಿ ಹಾಕಿ ಒಳಗೆ ನಡೆಯುವುದೆಂದರೆ ಕಲ್ಪಿಸಿಕೊಳ್ಳುವುದು ಕೂಡ ಮಹಾಅಪರಾಧ ಎಂದುಕೊಂಡವರು ನಾವು. ಆದರೆ ನರೇಂದ್ರ ನಾಯಕ್ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಒಳಗೆ ಸೀದಾ ಚಪ್ಪಲಿ ಹಾಕಿಕೊಂಡು ಬರುವುದಕ್ಕೆ ಯತ್ನಿಸಿದಾಗ ಅದನ್ನು ತಡೆದ್ದದ್ದು ಶ್ರೀ ವಿಠೋಭ ದೇವಸ್ಥಾನದ ಸಿಬ್ಬಂದಿ. ಆ ಬಗ್ಗೆ ಕೂಡ ನಾನು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದೇನೆ. ಅದಕ್ಕೆ ನರೇಂದ್ರ ನಾಯಕ್ ಯಾವ ಉತ್ತರವನ್ನು ಕೂಡ ಕೊಟ್ಟಿಲ್ಲ. ಇವರು ಚಪ್ಪಲಿ ಹಾಕಿ ದೇವಸ್ಥಾನದ ಒಳಗೆ ಬರಲು ಪ್ರಯತ್ನಿಸಿಲ್ಲ ಎಂದು ಹೇಳಲಿ.
ಒಟ್ಟಿನಲ್ಲಿ ನಾನು ಹೇಳುವುದಿಷ್ಟೇ, ನನ್ನ ಹೆಸರನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಎಳೆದು ತಂದದ್ದಕ್ಕೆ ನರೇಂದ್ರ ನಾಯಕ್ ಬಹಿರಂಗವಾಗಿ ಸುದ್ದಿಗೋಷ್ಟಿ ಮಾಡಿ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಾನು ತೀರ್ಮಾನಿಸಲಿದ್ದೇನೆ. ಇನ್ನು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತದ ವಿಷಯದಲ್ಲಿ ವರದರಾಯ ಪ್ರಭು ಅವರು ಹಸ್ತಕ್ಷೇಪ ಮಾಡಿ ತೊಂದರೆ ಕೊಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು ಎಂದು ದೇವಳದ ಆಸ್ತಿಕ ವೃಂದ ಮಹಿಳೆಯರನ್ನು ಸೇರಿ ಸುಮಾರು 40 ಜನ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಟ್ಟಿದ್ದಾರೆ. ಆ ಬಗ್ಗೆ ನಾಳೆ ಬರೆಯುತ್ತೇನೆ..

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search