• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಉಗ್ರರೊಂದಿಗೆ ಕೈಜೋಡಿಸಿದ ಮಗನನ್ನೇ ಕೊಂದು ಬಿಡಿ ಎಂದ ತಾಯಿ

TNN Correspondent Posted On April 10, 2018
0


0
Shares
  • Share On Facebook
  • Tweet It

ಗುವಾಹಟಿ: ದೇಶದ್ರೋಹಿಗಳು, ಭಯೋತ್ಪಾದಕರಿಗೆ ತಮ್ಮ ಕುಟುಂಬದಲ್ಲೇ ಸೂಕ್ತ ಬೆಲೆ, ನೆಲೆ ಇಲ್ಲ ಎಂಬುದನ್ನು ಅಸ್ಸಾಮನ ಕುಟುಂಬವೊಂದು ಸಾಬೀತು ಪಡಿಸಿದೆ. ಹೆತ್ತ ಮಗ ದೇಶದ್ರೋಹಿ ಕಾರ್ಯದಲ್ಲಿ ಭಾಗಿಯಾಗಿದ್ದಾನೆ ಎಂಬುದು ತಿಳಿದ ತಾಯಿಯೇ ಆತನನ್ನು ಗುಂಡಿಕ್ಕಿ ಕೊಂದು ಬಿಡಿ ಎಂದು ಕೇಳಿಕೊಂಡಿದ್ದಾರೆ. ಅಸಾಮ್ ನಲ್ಲಿ ಕಳೆದ 2017 ರ ಜುಲೈನಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸೇರಿರುವ ವರದಿ ಕೇಳಿರುವ ಪೋಷಕರು ಮತ್ತು ಆತನ ತಾಯಿ ಆತನನ್ನು ಗುಂಡಿಕ್ಕಿ ಕೊಂದು ಬಿಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಅಸ್ಸಾಂನ ಹೋಜೈ ಜಿಲ್ಲೆಯ ಜಮುನ್ಮುಖ ಗ್ರಾಮದ ಇಬ್ರಾಹ್ಮಿ ಜಮನ್ ಅವರ ಮಗ ಖಮರ್ ಉಜ್ಮಾನ್ ಭಯೋತ್ಪಾದಕ ಸಂಘಟನೆ ಸೇರಿದ ವ್ಯಕ್ತಿ. ಈತ ಕಳೆದ 2017ರ ಜುಲೈನಿಂದ ಕಾಣೆಯಾಗಿದ್ದ, ಇತ್ತೀಚೆಗೆ ಈತ ಗನ್ ಹೊಂದಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೇ ಚಿತ್ರಕ್ಕೆ ಆತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾನೆ ಮತ್ತು ಆತನ ಗುಪ್ತ ಹೆಸರು ಡಾ.ಹುರೈರಾಃ ಎಂಬ ಅಡಿ ಬರಹ ನೀಡಲಾಗಿತ್ತು.

ಮಗನ ಚಿತ್ರವನ್ನು ನೋಡಿ ತಾಯಿ ಗುರುತು ಹಿಡಿದ್ದಿದ್ದು, ಈತನೇ ನನ್ನ ಮಗ. ಮೊದಲಿಗಿಂತಲು ಸ್ವಲ್ಪ ಸಣ್ಣಾಗಿದ್ದಾನೆ. ನಮ್ಮ ಮಗ ಭಯೋತ್ಪಾದಕರೊಂದಿಗೆ ಕೈಜೋಡಿಸಿದ್ದೇ ಆದರೆ ಆತನಿಗೆ ಗುಂಡಿಕಿ ಕೊಂದು ಬಿಡಬೇಕು. ದೇಶದ್ರೋಹಿಯನ್ನು ನನ್ನ ಮಗ ಎಂದು ಹೇಳಿಕೊಳ್ಳಲು ನನಗೆ ಆಗುವುದಿಲ್ಲ ಎಂದು ಆತನ ತಾಯಿ ತೆಹೆರಾ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಮರ್ ಉಜ್ಮಾನ್ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕಾಶ್ಮೀರದ ಪೊಲೀಸರೊಂದಿಗೆ ಮಾತುಕತೆ ನಡೆಸಲಾಗಿದೆ. ಆತನನ್ನು ಮರಳಿ ಮನೆಗೆ ಕರೆದುಕೊಂಡು ಬರುವತ್ತ ಚಿಂತನೆ ನಡೆಸಲಾಗುತ್ತಿದೆ ಎಂದು ಅಸ್ಸಾಂ ಡಿಜಿಪಿ ಮುಖೇಶ್ ಸಹಾಯ್ ತಿಳಿಸಿದ್ದಾರೆ.

ಜಮಾನ್ ಪದವಿ ವಿದ್ಯಾರ್ಥಿಯಾಗಿದ್ದು, ಚಾಣಾಕ್ಷ ವಿದ್ಯಾರ್ಥಿಯಾಗಿದ್ದ. ಕಳೆದ ವರ್ಷ ಜಮ್ಮು ಕಾಶ್ಮೀರಕ್ಕೆ ಕುಟುಂಬ ಪ್ರವಾಸ ಹೋದಾಗ  ಆತ ಕಳೆದು ಹೋಗಿದ್ದ. ಆದರೆ ಆತ ಭಯೋತ್ಪಾದಕರೊಂದಿಗೆ ಕೈಜೋಡಿಸಿದ್ದು ತಿಳಿದಿರಲಿಲ್ಲ ಎಂದು ಸಹೋದರ ಮಫೀದುಲ್ ಹೇಳುತ್ತಾರೆ.

0
Shares
  • Share On Facebook
  • Tweet It




Trending Now
ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
Tulunadu News March 17, 2026
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
Tulunadu News March 11, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
  • Popular Posts

    • 1
      ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.

  • Privacy Policy
  • Contact
© Tulunadu Infomedia.

Press enter/return to begin your search