• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸ್ವದೇಶಿ ಜಿಪಿಎಸ್ ನ ನಾವಿಕ್ ಯೋಜನೆ ಪೂರ್ಣ: ಉಪಗ್ರಹ ನಭಕ್ಕೆ ಸೇರಿಸಿದ ಇಸ್ರೋ

TNN Correspondent Posted On April 12, 2018


  • Share On Facebook
  • Tweet It

ದೆಹಲಿ: ನಿರಂತರ ಹೊಸ ಸಂಶೋಧನೆಯಲ್ಲಿ ತೊಡಗುತ್ತಾ, ತಂತ್ರಜ್ಞಾನದಲ್ಲಿ ಭಾರತವನ್ನು ಸ್ವಾವಲಂಭನೆಯ ಹಾದಿಯತ್ತ ಕರೆದ್ಯೊಯುತ್ತಿರುವ ಇಸ್ರೋ ಇದೀಗ ಮತ್ತೊಂದು ಮಹತ್ತರ ಸಾಧನೆಯನ್ನು ಮಾಡಿದೆ. ಸ್ವದೇಶಿ ಜಿಪಿಎಸ್‌ ಕಾರ್ಯಾಚರಣೆಗೆ ಅಭಿವೃದ್ಧಿಪಡಿಸಿರುವ ರೀಜನಲ್‌ ನ್ಯಾವಿಗೇಷನ್‌ ಉಪಗ್ರಹ ಸಿಸ್ಟಂ (ನಾವಿಕ್‌)ಉಪಗ್ರಹಗಳ ಸಮೂಹಕ್ಕೆ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿ ನಾವಿಕ್ ಯೋಜನೆಯನ್ನು ಪೂರ್ಣ ಮಾಡಿದೆ.

ಬೆಳಗ್ಗೆ 4.04 ಗಂಟೆಗೆ ಇಸ್ರೋದ  ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಪಿಎಸ್‌ಎಲ್‌ವಿ -ಸಿ41 ಮೂಲಕ ಐಆರ್‌ಎನ್‌ಎಸ್‌ಎಸ್‌ -1I ಉಪಗ್ರಹ ಯಶಸ್ವಿಯಾಗಿ ನಭೋ ಮಂಡಲಕ್ಕೆ ಸೇರಿಸಿದೆ. ಈ ಉಪಗ್ರಹ ನ್ಯಾವಿಗೇಷನ್‌ ಮತ್ತು ರೇಂಜಿಂಗ್‌ ಕಾರ್ಯಾಚರಣೆ ನಡೆಸಲಿದ್ದು, ಉಡಾವಣೆಯಾದ ನಿಗಧಿಯಂತೆ ಉಪಗ್ರಹ 19 ನಿಮಿಷದಲ್ಲಿ ಕಕ್ಷೆ ಸೇರಿದೆ.

ಈ ಉಪ್ರಗಹವನ್ನು ಬೆಂಗಳೂರು ಅಲ್ಫಾ ಡಿಸೈನ್‌ ಟೆಕ್ನಾಲಜಿಸ್‌ ಇಸ್ರೊ ಸಹಭಾಗಿತ್ವದಲ್ಲಿ ರೂಪಿಸಿದ್ದು, ಕಕ್ಷೆಯಲ್ಲಿ ದೋಷಯುಕ್ತ ಕಾರ್ಯ ನಿರ್ವಹಣೆಯಲ್ಲಿರುವ ಐಆರ್‌ಎನ್‌ಎಸ್‌ಎಸ್‌-1I ಎ ಬದಲಿಗೆ ಪಿಎಸ್‌ಎಲ್‌ವಿ-ಸಿ4 1,425 ಕೆ.ಜಿ ತೂಕ ಹೊಂದಿದೆ.
ಬಹು ನಿರೀಕ್ಷಿತ, ಮತ್ತು ಸ್ವದೇಶಿ ಜಿಪಿಆರ್ ಎಸ್ ಹೊಂದಲು ಆರಂಭಿಸಿದ್ದ ನಾವಿಕ್ ಯೋಜನೆಯ ಕೊನೆಯ ಹಂತ ಪೂರ್ಣಗೊಂಡಿದೆ. ಫೂಲ್‌ಪ್ರೂಫ್‌ ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಗ್ನಲ್‌ಗಳನ್ನು ಒದಗಿಸಲು ಏಂಟು ಉಪಗ್ರಹಗಳನ್ನು ನಭಕ್ಕೆ ಸೇರಿಸಬೇಕಿತ್ತು. ಗುರುವಾರ ಆ ಯೋಜನೆಯ ಕೊನೆಯ ಉಪಗ್ರಹ ನಭಕ್ಕೆ ಸೇರಿಸಿದ್ದು, ನಾವಿಕ್ ಯೋಜನೆ ಪೂರ್ಣಗೊಂಡಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search