• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸ್ವದೇಶಿ ಜಿಪಿಎಸ್ ನ ನಾವಿಕ್ ಯೋಜನೆ ಪೂರ್ಣ: ಉಪಗ್ರಹ ನಭಕ್ಕೆ ಸೇರಿಸಿದ ಇಸ್ರೋ

TNN Correspondent Posted On April 12, 2018
0


0
Shares
  • Share On Facebook
  • Tweet It

ದೆಹಲಿ: ನಿರಂತರ ಹೊಸ ಸಂಶೋಧನೆಯಲ್ಲಿ ತೊಡಗುತ್ತಾ, ತಂತ್ರಜ್ಞಾನದಲ್ಲಿ ಭಾರತವನ್ನು ಸ್ವಾವಲಂಭನೆಯ ಹಾದಿಯತ್ತ ಕರೆದ್ಯೊಯುತ್ತಿರುವ ಇಸ್ರೋ ಇದೀಗ ಮತ್ತೊಂದು ಮಹತ್ತರ ಸಾಧನೆಯನ್ನು ಮಾಡಿದೆ. ಸ್ವದೇಶಿ ಜಿಪಿಎಸ್‌ ಕಾರ್ಯಾಚರಣೆಗೆ ಅಭಿವೃದ್ಧಿಪಡಿಸಿರುವ ರೀಜನಲ್‌ ನ್ಯಾವಿಗೇಷನ್‌ ಉಪಗ್ರಹ ಸಿಸ್ಟಂ (ನಾವಿಕ್‌)ಉಪಗ್ರಹಗಳ ಸಮೂಹಕ್ಕೆ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿ ನಾವಿಕ್ ಯೋಜನೆಯನ್ನು ಪೂರ್ಣ ಮಾಡಿದೆ.

ಬೆಳಗ್ಗೆ 4.04 ಗಂಟೆಗೆ ಇಸ್ರೋದ  ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಪಿಎಸ್‌ಎಲ್‌ವಿ -ಸಿ41 ಮೂಲಕ ಐಆರ್‌ಎನ್‌ಎಸ್‌ಎಸ್‌ -1I ಉಪಗ್ರಹ ಯಶಸ್ವಿಯಾಗಿ ನಭೋ ಮಂಡಲಕ್ಕೆ ಸೇರಿಸಿದೆ. ಈ ಉಪಗ್ರಹ ನ್ಯಾವಿಗೇಷನ್‌ ಮತ್ತು ರೇಂಜಿಂಗ್‌ ಕಾರ್ಯಾಚರಣೆ ನಡೆಸಲಿದ್ದು, ಉಡಾವಣೆಯಾದ ನಿಗಧಿಯಂತೆ ಉಪಗ್ರಹ 19 ನಿಮಿಷದಲ್ಲಿ ಕಕ್ಷೆ ಸೇರಿದೆ.

ಈ ಉಪ್ರಗಹವನ್ನು ಬೆಂಗಳೂರು ಅಲ್ಫಾ ಡಿಸೈನ್‌ ಟೆಕ್ನಾಲಜಿಸ್‌ ಇಸ್ರೊ ಸಹಭಾಗಿತ್ವದಲ್ಲಿ ರೂಪಿಸಿದ್ದು, ಕಕ್ಷೆಯಲ್ಲಿ ದೋಷಯುಕ್ತ ಕಾರ್ಯ ನಿರ್ವಹಣೆಯಲ್ಲಿರುವ ಐಆರ್‌ಎನ್‌ಎಸ್‌ಎಸ್‌-1I ಎ ಬದಲಿಗೆ ಪಿಎಸ್‌ಎಲ್‌ವಿ-ಸಿ4 1,425 ಕೆ.ಜಿ ತೂಕ ಹೊಂದಿದೆ.
ಬಹು ನಿರೀಕ್ಷಿತ, ಮತ್ತು ಸ್ವದೇಶಿ ಜಿಪಿಆರ್ ಎಸ್ ಹೊಂದಲು ಆರಂಭಿಸಿದ್ದ ನಾವಿಕ್ ಯೋಜನೆಯ ಕೊನೆಯ ಹಂತ ಪೂರ್ಣಗೊಂಡಿದೆ. ಫೂಲ್‌ಪ್ರೂಫ್‌ ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಗ್ನಲ್‌ಗಳನ್ನು ಒದಗಿಸಲು ಏಂಟು ಉಪಗ್ರಹಗಳನ್ನು ನಭಕ್ಕೆ ಸೇರಿಸಬೇಕಿತ್ತು. ಗುರುವಾರ ಆ ಯೋಜನೆಯ ಕೊನೆಯ ಉಪಗ್ರಹ ನಭಕ್ಕೆ ಸೇರಿಸಿದ್ದು, ನಾವಿಕ್ ಯೋಜನೆ ಪೂರ್ಣಗೊಂಡಿದೆ.

0
Shares
  • Share On Facebook
  • Tweet It




Trending Now
ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
Tulunadu News February 18, 2026
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
  • Popular Posts

    • 1
      ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • 2
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!

  • Privacy Policy
  • Contact
© Tulunadu Infomedia.

Press enter/return to begin your search