• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭಾರತದ ಧ್ವಜ ಹೊತ್ತು ಲಕ್ಷಾಂತರ ಕಿ.ಮೀ. ನಡೆಯುತ್ತಿರುವ ಈ ವ್ಯಕ್ತಿಯ ಆಶಯವೇನು ಗೊತ್ತಾ?

TNN Correspondent Posted On April 16, 2018
0


0
Shares
  • Share On Facebook
  • Tweet It

ಭಾರತ, ಭಾರತದ ಧ್ವಜ, ಭಾರತದ ಗೀತೆ ಎಂದರೆ ಪ್ರತಿ ದೇಶಭಕ್ತ ಭಾರತೀಯನ ರೋಮವೂ ಎದ್ದುನಿಲ್ಲುತ್ತದೆ ಎಂಬುದಕ್ಕೆ ನಿದರ್ಶನವೊಂದು ಸಿಕ್ಕಿದ್ದು, ಹರಿಯಾಣದ ವ್ಯಕ್ತಿಯೊಬ್ಬ ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಭಾರತದ ಧ್ವಜ ಹೊತ್ತು ದೇಶಾದ್ಯಂತ ಲಕ್ಷಾಂತರ ಕಿ.ಮೀ. ಸಂಚರಿಸಿದ್ದಾನೆ.

ಹೌದು, 83 ವರ್ಷದ ಬಾಗಿಚ ಸಿಂಗ್ ಕಳೆದ 25 ವರ್ಷದಲ್ಲಿ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 5.70 ಲಕ್ಷ ಕಿ.ಮೀ. ನಡೆದಿದ್ದಾರೆ. ಸುಮ್ಮನೆ ಹೆಸರಿಗಾಗಿ, ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಸಿಂಗ್ ಹೀಗೆ ಮಾಡಿಲ್ಲ.

ಬದಲಾಗಿ ದೇಶಾದ್ಯಂತ ಯುವಕರು ತಂಬಾಕು, ಡ್ರಗ್ಸ್, ಮದ್ಯ ಸೇವನೆಯ ದಾಸರಾಗಿರುವುದನ್ನು ಕಂಡು ಬೇಸರಗೊಂಡ ಈತ 1993ರಿಂದ ಇದುವರೆಗೆ ದೇಶಾದ್ಯಂತ ಕಾಲ್ನಡಿಗೆ ಮೂಲಕ ಸಂಚರಿಸಿ ಜಾಗೃತಿ ಮೂಡಿಸಿದ್ದಾರೆ.

ಅದಕ್ಕಾಗಿ ಇವರು ಬಳಸಿಕೊಂಡಿರುವ ಅಸ್ತ್ರ ದೇಶಪ್ರೇಮ. ಸುಮಾರು 90 ಕೆಜಿ ಭಾರದ, 15 ಅಡಿ ಉದ್ದದ ಕಂಬಗಳಿಗೆ ಭಾರತದ ಧ್ವಜ ಕಟ್ಟಿರುವ ಇವರು ಅದನ್ನು ಹೊತ್ತುಕೊಂಡು ಊರು ಊರು ಸುತ್ತುತ್ತಿದ್ದಾರೆ.

ದೇಶದ ಯುವಜನತೆ ಚಟಗಳ ದಾಸರಾದರೆ ಸದೃಢ ಭಾರತದ ಸೃಷ್ಟಿಯಾಗುವುದು ಹೇಗೆ ಎಂಬ ಪ್ರಶ್ನೆ ಮೂಡಿತು. ಹಾಗಾಗಿ ಇವರೆಲ್ಲರಿಗೂ ಜಾಗೃತಿ ಮೂಡಿಸಲು ನನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟು ದೇಶಾದ್ಯಂತ ಸಂಚರಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಯುವಕರು ಚಟಗಳ ದಾಸರಾಗಬಾರದು ಎಂಬುದೇ ನನ್ನ ಆಶಯ ಎನ್ನುತ್ತಾರೆ ಬಾಗಿಚ ಸಿಂಗ್.

ತಲೆ ನೋವು ಬಂದರೆ ನಾಲ್ಕು ದಿನ ರಜೆ ಹಾಕುವ ನಾವು, ಸಿಗರೇಟು, ಹಾಲ್ಕೋಹಾಲ್ ಎಂದು ಆರೋಗ್ಯ ಕೆಡಿಸಿಕೊಳ್ಳುವ ನಾವು, ಅರ್ಧ ಕಿಲೋ ಮೀಟರ್ ದೂರ ಎಂದರೂ ಆಟೋ ಹಿಡಿಯುವ ನಾವು, ನಮಗಾಗಿ ಲಕ್ಷಾಂತರ ಕಿಲೋ ಮೀಟರ್ ಕಾಲ್ನಡಿಗೆಯಲ್ಲೆ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರಿಗೊಂದು ಸಲಾಮ್ ಹೇಳೋಣ, ಅವರ ಆಶಯ ಪಾಲಿಸೋಣ.

0
Shares
  • Share On Facebook
  • Tweet It




Trending Now
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Tulunadu News September 16, 2025
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
  • Popular Posts

    • 1
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 2
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 3
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 4
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 5
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

  • Privacy Policy
  • Contact
© Tulunadu Infomedia.

Press enter/return to begin your search