• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭಾರತದ ಧ್ವಜ ಹೊತ್ತು ಲಕ್ಷಾಂತರ ಕಿ.ಮೀ. ನಡೆಯುತ್ತಿರುವ ಈ ವ್ಯಕ್ತಿಯ ಆಶಯವೇನು ಗೊತ್ತಾ?

TNN Correspondent Posted On April 16, 2018
0


0
Shares
  • Share On Facebook
  • Tweet It

ಭಾರತ, ಭಾರತದ ಧ್ವಜ, ಭಾರತದ ಗೀತೆ ಎಂದರೆ ಪ್ರತಿ ದೇಶಭಕ್ತ ಭಾರತೀಯನ ರೋಮವೂ ಎದ್ದುನಿಲ್ಲುತ್ತದೆ ಎಂಬುದಕ್ಕೆ ನಿದರ್ಶನವೊಂದು ಸಿಕ್ಕಿದ್ದು, ಹರಿಯಾಣದ ವ್ಯಕ್ತಿಯೊಬ್ಬ ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಭಾರತದ ಧ್ವಜ ಹೊತ್ತು ದೇಶಾದ್ಯಂತ ಲಕ್ಷಾಂತರ ಕಿ.ಮೀ. ಸಂಚರಿಸಿದ್ದಾನೆ.

ಹೌದು, 83 ವರ್ಷದ ಬಾಗಿಚ ಸಿಂಗ್ ಕಳೆದ 25 ವರ್ಷದಲ್ಲಿ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 5.70 ಲಕ್ಷ ಕಿ.ಮೀ. ನಡೆದಿದ್ದಾರೆ. ಸುಮ್ಮನೆ ಹೆಸರಿಗಾಗಿ, ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಸಿಂಗ್ ಹೀಗೆ ಮಾಡಿಲ್ಲ.

ಬದಲಾಗಿ ದೇಶಾದ್ಯಂತ ಯುವಕರು ತಂಬಾಕು, ಡ್ರಗ್ಸ್, ಮದ್ಯ ಸೇವನೆಯ ದಾಸರಾಗಿರುವುದನ್ನು ಕಂಡು ಬೇಸರಗೊಂಡ ಈತ 1993ರಿಂದ ಇದುವರೆಗೆ ದೇಶಾದ್ಯಂತ ಕಾಲ್ನಡಿಗೆ ಮೂಲಕ ಸಂಚರಿಸಿ ಜಾಗೃತಿ ಮೂಡಿಸಿದ್ದಾರೆ.

ಅದಕ್ಕಾಗಿ ಇವರು ಬಳಸಿಕೊಂಡಿರುವ ಅಸ್ತ್ರ ದೇಶಪ್ರೇಮ. ಸುಮಾರು 90 ಕೆಜಿ ಭಾರದ, 15 ಅಡಿ ಉದ್ದದ ಕಂಬಗಳಿಗೆ ಭಾರತದ ಧ್ವಜ ಕಟ್ಟಿರುವ ಇವರು ಅದನ್ನು ಹೊತ್ತುಕೊಂಡು ಊರು ಊರು ಸುತ್ತುತ್ತಿದ್ದಾರೆ.

ದೇಶದ ಯುವಜನತೆ ಚಟಗಳ ದಾಸರಾದರೆ ಸದೃಢ ಭಾರತದ ಸೃಷ್ಟಿಯಾಗುವುದು ಹೇಗೆ ಎಂಬ ಪ್ರಶ್ನೆ ಮೂಡಿತು. ಹಾಗಾಗಿ ಇವರೆಲ್ಲರಿಗೂ ಜಾಗೃತಿ ಮೂಡಿಸಲು ನನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟು ದೇಶಾದ್ಯಂತ ಸಂಚರಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಯುವಕರು ಚಟಗಳ ದಾಸರಾಗಬಾರದು ಎಂಬುದೇ ನನ್ನ ಆಶಯ ಎನ್ನುತ್ತಾರೆ ಬಾಗಿಚ ಸಿಂಗ್.

ತಲೆ ನೋವು ಬಂದರೆ ನಾಲ್ಕು ದಿನ ರಜೆ ಹಾಕುವ ನಾವು, ಸಿಗರೇಟು, ಹಾಲ್ಕೋಹಾಲ್ ಎಂದು ಆರೋಗ್ಯ ಕೆಡಿಸಿಕೊಳ್ಳುವ ನಾವು, ಅರ್ಧ ಕಿಲೋ ಮೀಟರ್ ದೂರ ಎಂದರೂ ಆಟೋ ಹಿಡಿಯುವ ನಾವು, ನಮಗಾಗಿ ಲಕ್ಷಾಂತರ ಕಿಲೋ ಮೀಟರ್ ಕಾಲ್ನಡಿಗೆಯಲ್ಲೆ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರಿಗೊಂದು ಸಲಾಮ್ ಹೇಳೋಣ, ಅವರ ಆಶಯ ಪಾಲಿಸೋಣ.

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search