• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚುನಾವಣೆಯಲ್ಲಿ ಸಿಪಿಎಂ ಸೋಲುತ್ತಲೇ ಮಾಣಿಕ್ ಸರ್ಕಾರ್ ಗೆ ಬಂಗಲೆ ಆಸೆ ಹುಟ್ಟಿತೇ?

TNN Correspondent Posted On April 18, 2018
0


0
Shares
  • Share On Facebook
  • Tweet It

ಕೋಲ್ಕತ್ತಾ: ಮಾಣಿಕ್ ಸರ್ಕಾರ್ ಸುಮಾರು ಎರಡು ದಶಕಕ್ಕೂ ಹೆಚ್ಚು ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾದರೂ ಸ್ವಂತದ್ದೊಂದು ಮನೆ ಹೊಂದಿಲ್ಲ, ಇನ್ನೂ ಬಸ್ಸಿನಲ್ಲಿಯೇ ಓಡಾಡುತ್ತಾರೆ ಎಂಬುದು ಎಲ್ಲರೂ ಅಭಿಮಾನಪಡುವ ವಿಷಯವಾಗಿತ್ತು. ಅವರೂ ಸಾಧಾರಣವಾಗಿ ಹೀಗೆಯೇ ಇದ್ದ ಕಾರಣ ಜನ ಮತ ಹಾಕುತ್ತಿದ್ದರು. ಅಷ್ಟಕ್ಕೂ ಗ್ರಾಪಂ ಅಧ್ಯಕ್ಷನೇ ಕಾರಿನಲ್ಲಿ ತಿರುಗಾಡುವ ಈ ಕಾಲದಲ್ಲಿ ಮುಖ್ಯಮಂತ್ರಿಯಾದರೂ ಆಟೋ ಬಸ್ಸಿನಲ್ಲಿ ಓಡಾಡುವುದು ಶ್ಲಾಘನೀಯ ಸಂಗತಿಯೇ ಆಗಿತ್ತು.

ಆದರೆ ಇಂತ ಮಾಣಿಕ್ ಸರ್ಕಾರ್ ಅವರಿಗೆ ಸಿಪಿಎಂ ಚುನಾವಣೆಯಲ್ಲಿ ಮಕಾಡೆ ಮಲಗಿದ ಬಳಿಕ, ಸೋಲುಂಡ ಬಳಿಕ ಬಂಗಲೆ, ಕಾರಿನ ಅವಶ್ಯಕತೆ ಬಿತ್ತೇ? ಇಷ್ಟು ದಿನ ಇಲ್ಲದೆ ಇದ್ದ ಬಯಕೆಗಳು ಈಗ ಏಕೆ ಜನ್ಮತಾಳಿವೆ? ಏಕೆ ಮಾಣಿಕ್ ಸರ್ಕಾರ್ ಕಾರು, ಬಂಗಲೆ ಬಯಸುತ್ತಿದ್ದಾರೆ? ಅಂದರೆ ಇಷ್ಟು ದಿನ ಅವರು ನಡೆಸಿದ ಸರಳ ಜೀವನ ಮತ ಪಡೆಯಲು, ಜನರ ಓಲೈಸಲು ಮಾಡಲಾಗುತ್ತಿತ್ತೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಹೌದು, ಚುನಾವಣೆಯಲ್ಲಿ ಸಿಪಿಎಂ ಸೋಲುಂಡು ಬಿಜೆಪಿ-ಐಪಿಎಫ್ ಟಿ ಸರ್ಕಾರ ರಚನೆಯಾದ ಬಳಿಕ ಮನೆಯೇ ಇಲ್ಲದ ಮಾಣಿಕ್ ಸರ್ಕಾರ ಸಿಪಿಎಂ ಪಕ್ಷದ ಕಚೇರಿಯಲ್ಲಿ ಪತ್ನಿ ಜತೆ ಹೋಗಿ ವಾಸವಿದ್ದರು. ಆದರೆ ಈಗ ತಮಗೊಂದು ಬಂಗಲೆ ಹಾಗೂ ಕಾರಿನ ವ್ಯವಸ್ಥೆ ಮಾಡಬೇಕು ಎಂದು ಮಾಣಿಕ್ ಸರ್ಕಾರ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಖಂಡಿತವಾಗಿಯೂ ಪ್ರತಿಪಕ್ಷದ ನಾಯಕನಾಗಿ ಮಾಣಿಕ್ ಸರ್ಕಾರ್ ಅವರು ತಮಗೊಂದು ನಿವಾಸ, ವಾಹನ ಪಡೆಯಲು, ಅದಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುವ ಎಲ್ಲ ಹಕ್ಕುಗಳೂ ಇವೆ. ಆದರೆ, ವಾಸ ಮಾಡಲು ಬಂಗಲೆಯೇ ಬೇಕು, ಓಡಾಡಲು ಕಾರೇ ಬೇಕು ಹಾಗೂ ಆ ನಿವಾಸ ಮುಖ್ಯಮಂತ್ರಿ ನಿವಾಸದ ಬಳಿಯೇ ಬೇಕು ಎಂದು ಮಾಣಿಕ್ ಸರ್ಕಾರ್ ಬೇಡಿಕೆ ಇಟ್ಟಿರುವುದು ಜನ ಅಚ್ಚರಿಪಡುವಂತಾಗಿದೆ,

ಅದರಲ್ಲೂ ಎರಡು ದಶಕದವರೆಗೆ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸ್ವಂತದ ಮನೆ ಇಲ್ಲದೆ, ಆಟೋದಲ್ಲಿ ಓಡಾಡಿ ಈಗ ಚುನಾವಣೆಯಲ್ಲಿ ಸೋತ ಬಳಿಕ ಮಾಣಿಕ್ ಸರ್ಕಾರ್ ಅವರಲ್ಲಿದ್ದ ಸರಳ ವ್ಯಕ್ತಿತ್ವ, ಸರಳತನ ಸತ್ತುಹೋಗಿ ಐಷಾರಾಮಿ ಜೀವನ ಬಯಸುತ್ತಿದೆಯಾ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ. ಇದಕ್ಕೆ ಮಾಣಿಕ್ ಸರ್ಕಾರ್ ಅವರೇ ಉತ್ತರಿಸಬೇಕು.

0
Shares
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search