• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚುನಾವಣೆಯಲ್ಲಿ ಸಿಪಿಎಂ ಸೋಲುತ್ತಲೇ ಮಾಣಿಕ್ ಸರ್ಕಾರ್ ಗೆ ಬಂಗಲೆ ಆಸೆ ಹುಟ್ಟಿತೇ?

TNN Correspondent Posted On April 18, 2018
0


0
Shares
  • Share On Facebook
  • Tweet It

ಕೋಲ್ಕತ್ತಾ: ಮಾಣಿಕ್ ಸರ್ಕಾರ್ ಸುಮಾರು ಎರಡು ದಶಕಕ್ಕೂ ಹೆಚ್ಚು ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾದರೂ ಸ್ವಂತದ್ದೊಂದು ಮನೆ ಹೊಂದಿಲ್ಲ, ಇನ್ನೂ ಬಸ್ಸಿನಲ್ಲಿಯೇ ಓಡಾಡುತ್ತಾರೆ ಎಂಬುದು ಎಲ್ಲರೂ ಅಭಿಮಾನಪಡುವ ವಿಷಯವಾಗಿತ್ತು. ಅವರೂ ಸಾಧಾರಣವಾಗಿ ಹೀಗೆಯೇ ಇದ್ದ ಕಾರಣ ಜನ ಮತ ಹಾಕುತ್ತಿದ್ದರು. ಅಷ್ಟಕ್ಕೂ ಗ್ರಾಪಂ ಅಧ್ಯಕ್ಷನೇ ಕಾರಿನಲ್ಲಿ ತಿರುಗಾಡುವ ಈ ಕಾಲದಲ್ಲಿ ಮುಖ್ಯಮಂತ್ರಿಯಾದರೂ ಆಟೋ ಬಸ್ಸಿನಲ್ಲಿ ಓಡಾಡುವುದು ಶ್ಲಾಘನೀಯ ಸಂಗತಿಯೇ ಆಗಿತ್ತು.

ಆದರೆ ಇಂತ ಮಾಣಿಕ್ ಸರ್ಕಾರ್ ಅವರಿಗೆ ಸಿಪಿಎಂ ಚುನಾವಣೆಯಲ್ಲಿ ಮಕಾಡೆ ಮಲಗಿದ ಬಳಿಕ, ಸೋಲುಂಡ ಬಳಿಕ ಬಂಗಲೆ, ಕಾರಿನ ಅವಶ್ಯಕತೆ ಬಿತ್ತೇ? ಇಷ್ಟು ದಿನ ಇಲ್ಲದೆ ಇದ್ದ ಬಯಕೆಗಳು ಈಗ ಏಕೆ ಜನ್ಮತಾಳಿವೆ? ಏಕೆ ಮಾಣಿಕ್ ಸರ್ಕಾರ್ ಕಾರು, ಬಂಗಲೆ ಬಯಸುತ್ತಿದ್ದಾರೆ? ಅಂದರೆ ಇಷ್ಟು ದಿನ ಅವರು ನಡೆಸಿದ ಸರಳ ಜೀವನ ಮತ ಪಡೆಯಲು, ಜನರ ಓಲೈಸಲು ಮಾಡಲಾಗುತ್ತಿತ್ತೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಹೌದು, ಚುನಾವಣೆಯಲ್ಲಿ ಸಿಪಿಎಂ ಸೋಲುಂಡು ಬಿಜೆಪಿ-ಐಪಿಎಫ್ ಟಿ ಸರ್ಕಾರ ರಚನೆಯಾದ ಬಳಿಕ ಮನೆಯೇ ಇಲ್ಲದ ಮಾಣಿಕ್ ಸರ್ಕಾರ ಸಿಪಿಎಂ ಪಕ್ಷದ ಕಚೇರಿಯಲ್ಲಿ ಪತ್ನಿ ಜತೆ ಹೋಗಿ ವಾಸವಿದ್ದರು. ಆದರೆ ಈಗ ತಮಗೊಂದು ಬಂಗಲೆ ಹಾಗೂ ಕಾರಿನ ವ್ಯವಸ್ಥೆ ಮಾಡಬೇಕು ಎಂದು ಮಾಣಿಕ್ ಸರ್ಕಾರ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಖಂಡಿತವಾಗಿಯೂ ಪ್ರತಿಪಕ್ಷದ ನಾಯಕನಾಗಿ ಮಾಣಿಕ್ ಸರ್ಕಾರ್ ಅವರು ತಮಗೊಂದು ನಿವಾಸ, ವಾಹನ ಪಡೆಯಲು, ಅದಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುವ ಎಲ್ಲ ಹಕ್ಕುಗಳೂ ಇವೆ. ಆದರೆ, ವಾಸ ಮಾಡಲು ಬಂಗಲೆಯೇ ಬೇಕು, ಓಡಾಡಲು ಕಾರೇ ಬೇಕು ಹಾಗೂ ಆ ನಿವಾಸ ಮುಖ್ಯಮಂತ್ರಿ ನಿವಾಸದ ಬಳಿಯೇ ಬೇಕು ಎಂದು ಮಾಣಿಕ್ ಸರ್ಕಾರ್ ಬೇಡಿಕೆ ಇಟ್ಟಿರುವುದು ಜನ ಅಚ್ಚರಿಪಡುವಂತಾಗಿದೆ,

ಅದರಲ್ಲೂ ಎರಡು ದಶಕದವರೆಗೆ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸ್ವಂತದ ಮನೆ ಇಲ್ಲದೆ, ಆಟೋದಲ್ಲಿ ಓಡಾಡಿ ಈಗ ಚುನಾವಣೆಯಲ್ಲಿ ಸೋತ ಬಳಿಕ ಮಾಣಿಕ್ ಸರ್ಕಾರ್ ಅವರಲ್ಲಿದ್ದ ಸರಳ ವ್ಯಕ್ತಿತ್ವ, ಸರಳತನ ಸತ್ತುಹೋಗಿ ಐಷಾರಾಮಿ ಜೀವನ ಬಯಸುತ್ತಿದೆಯಾ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ. ಇದಕ್ಕೆ ಮಾಣಿಕ್ ಸರ್ಕಾರ್ ಅವರೇ ಉತ್ತರಿಸಬೇಕು.

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Tulunadu News December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search