• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ವೇದವ್ಯಾಸ ಕಾಮತ್ ಅವರಿಗೆ ಕೆಎಎಸ್ ಕಿರೀಟ ಇಲ್ಲದಿರಬಹುದು, ಅಭಿವೃದ್ಧಿಯ ತುಡಿತ ಇದೆ…

Hanumantha Kamath Posted On April 24, 2018
0


0
Shares
  • Share On Facebook
  • Tweet It

ಮಂಗಳೂರು ನಗರ ದಕ್ಷಿಣದಲ್ಲಿ ಯೋಗೀಶ್ ಭಟ್ ಅವರು ರೂಪುರೇಶೆ ಮಾಡಿಟ್ಟು ಹೋಗಿದ್ದ ಮತ್ತು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮುಗಿಸುವುದಕ್ಕಾಗಿ ಬರೊಬ್ಬರಿ ಐದು ವರ್ಷಗಳನ್ನು ತೆಗೆದ ಜೆ ಆರ್ ಲೋಬೋ ಅವರಿಗೆ ತಮ್ಮದೇ ಯಾವುದಾದರೂ ಯೋಜನೆ ತರಲು ಹೇಳಿದರೆ ಅದೆಷ್ಟು ವರ್ಷಗಳು ಬೇಕಾಗಬಹುದು ಎನ್ನುವ ಪ್ರಶ್ನೆಯೊಂದಿಗೆ ಈ ಬಾರಿಯ ಚುನಾವಣೆ ಹೊಸ್ತಿಲಿಗೆ ಬಂದು ಮುಟ್ಟಿದೆ. ಮಂಗಳೂರು ನಗರ ದಕ್ಷಿಣದಲ್ಲಿ ಈ ಬಾರಿ ಭಾರತೀಯ ಜನತಾ ಪಾರ್ಟಿ ಯುವ ನಾಯಕನಿಗೆ ಟಿಕೆಟ್ ನೀಡಿದೆ. ನಲ್ವತ್ತರ ಗಡಿಯಲ್ಲಿರುವ ಡಿ ವೇದವ್ಯಾಸ್ ಕಾಮತ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಿಂದ ಬಂದವರು. ಸಂಘದ ಶಿಸ್ತು ಮತ್ತು ಸಂಯಮ ಮತ್ತು ಸಂಘಟನಾ ಸಾಮರ್ತ್ಯ ರಕ್ತಗತವಾಗಿ ಬಂದಿದೆ. ಅದರೊಂದಿಗೆ ಸಮಾಜದಲ್ಲಿರುವ ದುರ್ಬಲ, ಅಸಹಾಯಕ ಜನರಿಗೆ ಸಹಾಯ ಮಾಡಬೇಕೆಂಬ ತುಡಿತ ಚಿಕ್ಕವಯಸ್ಸಿನಲ್ಲಿಯೇ ಇತ್ತು.

ಮಂಗಳೂರು ಚಲೋ…

ಕೆಲವು ವ್ಯಕ್ತಿಗಳು ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಮಾಜ ಸೇವೆ ಮಾಡುತ್ತಾರೆ. ನಾಲ್ಕು ಜನ ಪಾಪದವರಿಗೆ ಹಣ ಕೊಟ್ಟು ಫೋಟೋ ತೆಗೆದು ಅದನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಎಷ್ಟು ಲಾಭವಾಯಿತು ಎಂದೇ ನೋಡುತ್ತಾರೆ. ಸಮಾಜ ಸೇವೆಯನ್ನು ಚುನಾವಣೆಯಲ್ಲಿ ಗೆಲ್ಲಲು ಅಸ್ತ್ರವನ್ನಾಗಿ ಮಾಡುತ್ತಾರೆ. ಆದರೆ ವೇದವ್ಯಾಸ ಕಾಮತ್ ಅಥವಾ ಆಪ್ತರ ವಲಯದಲ್ಲಿ ಬಾಬು ಅಥವಾ ಬಾಬಣ್ಣ ಎಂದೇ ಕರೆಯಲ್ಪಡುವ ಈ ಮನುಷ್ಯ ಚುನಾವಣೆ ಅಥವಾ ರಾಜಕೀಯ ಎನ್ನುವ ಶಬ್ದದ ಸೆಳೆತಕ್ಕೆ ಒಳಗಾಗುವ ಮೊದಲೇ ಸಮಾಜ ಸೇವೆಗೆ ಹೊರಟವರು. ಕಾಲೇಜು ದಿನಗಳು ಮುಗಿದ ಬಳಿಕ ಸಮಾನ ಮನಸ್ಕ ಯುವಕರ ತಂಡ ಪರಮ ಪೂಜ್ಯನೀಯ ಕಾಶೀಮಠಾಧೀಶರಾಗಿದ್ದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸಲಹೆ ಮತ್ತು ಆರ್ಶೀವಾದದಿಂದ ಒಂದು ಸಮಾಜಸೇವಾ ಸಂಘಟನೆಯನ್ನು ಪ್ರಾರಂಭಿಸಿದ್ದು ವೇದವ್ಯಾಸರ ಸಾಮಾಜಿಕ ಕಾಳಜಿಗೆ ಸಾಕ್ಷಿ. ಅದೇ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್. ಪ್ರತಿ ತಿಂಗಳು ಅನೇಕ ಜನ ಅಶಕ್ತರಿಗೆ ತಿಂಗಳ ವೈದ್ಯಕೀಯ ಖರ್ಚಿಗಾಗಿ ಪಿಂಚಣಿಯ ರೂಪದಲ್ಲಿ ಈ ಟ್ರಸ್ಟ್ ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲದೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ತನಕ ಓದಿಸುವ ಕೆಲಸವನ್ನು ಡಿ ವೇದವ್ಯಾಸ ಕಾಮತ್ ಮಾಡುತ್ತಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದರೂ ಜಾತಿ, ಮತ, ಭೇದವಿಲ್ಲದೆ ಗೆಳೆಯರನ್ನು ಸಂಪಾದಿಸಿರುವ ವೇದವ್ಯಾಸ ಕಾಮತ್ ಅವರ ಮುಖ್ಯ ಸಾಮರ್ತ್ಯವೇ ಸಂಘಟನಾ ಶಕ್ತಿ. ಬಿಜೆಪಿಯ ಯಾವುದೇ ಕಾರ್ಯಕ್ರಮವಿರಲಿ ವೇದಿಕೆಯ ಮೇಲೆ ಕಡಿಮೆ, ವೇದಿಕೆಯ ಹಿಂದೆ ಹಗಲಿರುಳು ಶ್ರಮಿಸುವುದು ಇವರ ಶೈಲಿ. ಹಿಂದಿನ ಬಾರಿ “ಮಂಗಳೂರು ಚಲೋ” ಕಾರ್ಯಕ್ರಮ ಆಯೋಜನೆಯಾದಾಗ ರಾತ್ರಿಯೀಡಿ ಬೇರೆ ಬೇರೆ ಪ್ರದೇಶದಿಂದ ಬರುತ್ತಿದ್ದ ಕಾರ್ಯಕರ್ತರ ವಸತಿ ಜವಾಬ್ದಾರಿ ತೆಗೆದುಕೊಂಡು ದುಡಿದು ರಾತ್ರಿ ಮಲಗದೇ ಬೆಳಿಗ್ಗೆ ಉಪಹಾರ ಕೂಡ ಸೇವಿಸಲು ಸಮಯ ಇಲ್ಲದೆ ತಲೆಸುತ್ತಿ ಬಂದು ವೈದ್ಯರಿಂದ ವಿಶ್ರಾಂತಿಯ ಸಲಹೆ ಪಡೆದುಕೊಂಡಿದ್ದರು. ಆದರೂ ವಿಶ್ರಾಂತಿ ಮಾಡದೇ ಕಾರ್ಯಕ್ರಮ ಮುಗಿಯುವ ತನಕ ಇದ್ದು, ಪೊಲೀಸರ ಲಾಠಿ ಚಾರ್ಜ್ ನಿಂದ ಗಾಯಗೊಂಡ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ವಿವಿಧ ಆಸ್ಪತ್ರೆಗೆ ಓಡಾಡಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಮಲ್ಪೆಯಲ್ಲಿ ಬಿಜೆಪಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಕಾರ್ಯಕರ್ತರ ಮೇಲೆ ಬೆಂಗ್ರೆಯಲ್ಲಿ ಕಲ್ಲಿನ ದಾಳಿಗಳಾದಾಗ ತಡರಾತ್ರಿ ಆಸ್ಪತ್ರೆಗೆ ಭೇಟಿಕೊಟ್ಟು ಅವರ ಆರೋಗ್ಯ ವಿಚಾರಿಸಿದ್ದರು.

ಪಕ್ಷ ಸಂಘಟನೆಗೆ ಸದಾ ಹೋರಾಟ..

ಬಿಜೆಪಿಯ ಕಾರ್ಯಕ್ರಮಗಳಿಗೆ ಬೇರೆ ಬೇರೆ ಕಡೆಯಿಂದ ಒತ್ತಡ ತಂದು ಕಾರ್ಯಕ್ರಮ ವಿಫಲಗೊಳಿಸಲು ಸಂಚು ನಡೆಸುತ್ತಿದ್ದವರು ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಛಾತಿ ತೋರಿಸುವ ವೇದವ್ಯಾಸರ ಬಗ್ಗೆ ಯುವ ಕಾರ್ಯಕರ್ತರಲ್ಲಿಯೂ ಸೆಳೆತವಿದೆ. ವೇದವ್ಯಾಸ ಕಾಮತ್ ಅವರಿಗೆ ಟಿಕೆಟ್ ಸಿಕ್ಕಿದರೆ ನಮ್ಮ ಅಭ್ಯಂತರವಿಲ್ಲ, ಅದು ಬಿಟ್ಟು ಯಾರಿಗೋ ಪಕ್ಷಕ್ಕೆ ಕೆಲಸ ಮಾಡದೇ ಕೇವಲ ವೇದಿಕೆಯಲ್ಲಿ ಕಾಣಿಸಿಕೊಳ್ಳುವವರಿಗೆ ಟಿಕೆಟ್ ಕೊಟ್ಟರೆ ನಾವು ಕೆಲಸ ಮಾಡೊಲ್ಲ ಎಂದವರೆಷ್ಟೋ ಜನ. ಅವರಿಗೆ ಟಿಕೆಟ್ ಸಿಗುವುದು ತಡವಾದಾಗ ಎಷ್ಟೋ ಮನೆಗಳಲ್ಲಿ ಹೆಂಗಸರು, ಹಿರಿಯರು ಸಿಡಿಮಿಡಿಗೊಂಡು ಮಾತನಾಡಿದ್ದು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾದಾಗ ಸ್ವತ: ವೇದವ್ಯಾಸರಿಗೆ ಆಶ್ಚರ್ಯವಾದ್ದದ್ದು ಇದೆ. ಇನ್ನು ರಾಜಕೀಯದಲ್ಲಿ ಕುತಂತ್ರ ಮಾಡಲು ಗೊತ್ತಿಲ್ಲದೇ ಇವರ ಮೈನಸ್ ಪಾಯಿಂಟ್. ಇವರಿಂದ ಉಪಕಾರ ಪಡೆದವರು ಹಿಂದಿನಿಂದ ಇವರ ಬಗ್ಗೆ ಟೀಕೆ, ಅವಹೇಳನ ಮಾಡಿದರೂ “ಪರ್ವಾಗಿಲ್ಲ, ನಾನು ದೇವರು ಕೊಟ್ಟ ಶಕ್ತಿಯಿಂದ ಸಹಾಯ ಮಾಡಿದೆ, ಇದರಲ್ಲಿ ನನ್ನದು ಎನ್ನುವುದು ಏನೂ ಇಲ್ಲ. ಸಹಾಯ ಪಡೆದುಕೊಂಡವರಿಗೆ ಒಳ್ಳೆಯದಾಗಲಿ” ಎಂದು ಹಾರೈಸುವಷ್ಟು ಅವರ ಮುಗ್ಧತನ ನೋಡಿದಾಗ ಅನೇಕ ಬಾರಿ ಆಶ್ಚರ್ಯವಾಗುತ್ತದೆ.
ನಿಮಗೆ ಮಂಗಳೂರು ನಗರ ದಕ್ಷಿಣದಲ್ಲಿ ನಿಜಕ್ಕೂ ಅಭಿವೃದ್ಧಿಯೇ ಆಗಬೇಕು ಎಂದು ಮನಸ್ಸಿದ್ದರೆ ಈ ಬಾರಿ ವೇದವ್ಯಾಸ್ ಕಾಮತ್ ಅವರನ್ನು ಆಯ್ಕೆ ಮಾಡಿದರೆ ಒಳ್ಳೆಯದು ಎನ್ನುವುದು ಎಲ್ಲರ ಅಭಿಪ್ರಾಯ. ಏಕೆಂದರೆ ವೇದವ್ಯಾಸರಿಗೆ ಮಂಗಳೂರು ಹೇಗೆ ಅಭಿವೃದ್ಧಿಯಾಗಬೇಕು ಎನ್ನುವುದರ ಬಗ್ಗೆ ಕಾಮನ್ ಸೆನ್ಸ್ ಇದೆ. ಅವರಿಗೆ ಕೆಎಎಸ್ ಎನ್ನುವ ಕಿರೀಟ ಇಲ್ಲದೇ ಇರಬಹುದು. ಆದರೆ ಏನು ಮಾಡಿದರೆ ಏನಾಗುತ್ತದೆ ಎನ್ನುವ ಪರಿಜ್ಞಾನ ಇದೆ. ಮಂಗಳೂರಿಗೆ ಭಾಗ್ಯ ಇದ್ದರೆ ಅವರಂತಹ ಯುವಶಕ್ತಿಯ ಕೈಯಲ್ಲಿ ಅಧಿಕಾರ ಕೊಟ್ಟು ಸ್ಮಾರ್ಟ್ ಸಿಟಿ ಅನುಷ್ಟಾನಕ್ಕೆ ಬರುವುದನ್ನು ನೋಡಬಹುದು.

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search