• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಜೈಲಿನಲ್ಲಿ ಶಿಕ್ಷೆ ಅನುಭವಿಸುತಿರೋ ಲಾಲು ಯಾದವ್ ಭೇಟಿ ಮಾಡೋ ರಾಗಾ ಸಾಚಾತನ ಎಂಥಾದ್ದು?

ತೇಜಸ್ವಿ ಪ್ರತಾಪ ಮೈಸೂರು Posted On May 1, 2018
0


0
Shares
  • Share On Facebook
  • Tweet It

ರಾಜ್ಯದಲ್ಲಿ ಚುನಾವಣೆ ಬಿಸಿ ತೀವ್ರವಾಗಿರೋ ಕಾಲದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ನಡೆದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಡಳಿತ ನೀಡದಿರುವುದು ಒಂದೆಡೆಯಾದರೇ, ಬಲಿಷ್ಠ ನಾಯಕತ್ವವಿಲ್ಲದೆ ಒದ್ದಾಡುತ್ತಿದೆ. ಇನ್ನು ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು. ಮೋದಿ, ಷಾ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಹರಸಾಹಸ ಪಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಉರುಳಿಸುತ್ತಿರುವ ದಾಳಗಳು ಅದಕ್ಕೆ ತಿರುಗುಬಾಣವಾಗುತ್ತಿರುವುದು ಪದೇ ಪದೆ ಸಾಬೀತಾಗುತ್ತಿದೆ.

ಕರ್ನಾಟಕದಲ್ಲಿ ಐದು ವರ್ಷ ಆಡಳಿತ ನಡೆಸಿದ್ದೇ ಸಾಧನೆ ಎಂಬಂತೆ ಬಿಂಬಿಸುತ್ತಿರುವ ಸಿಎಂ ಸೇರಿ ಎಲ್ಲ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಿಯಂತ್ರಣದಲ್ಲಿ ವಿಫಲರಾಗಿರುವುದು ಲೋಕಾಯುಕ್ತ ಮುಚ್ಚಿಸಿದಾಗಲೇ ಸಾಬೀತಾಗಿದೆ. ಅಲ್ಲದೇ ಬಿಜೆಪಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ಸಿಗರು ನಿರಂತರವಾಗಿ ಜೈಲಿಗೆ ಹೋಗಿ ಬಂದವರು ಎಂಬ ಆರೋಪ ಮಾಡುತ್ತಿದ್ದಾರೆ. ಬಿಎಸ್ ವೈ ಅವರ ವಿರುದ್ಧದ ಪ್ರಕರಣಗಳಲ್ಲಿ ಕೋರ್ಟ್ ಖುಲಾಸೆ ನೀಡಿದೆ ಎಂಬ ಅರಿವು ಇದ್ದರೂ, ಕಾಂಗ್ರೆಸ್ಸಿಗರು ಜಾಣಮೌನ ವಹಿಸುತ್ತಿದ್ದಾರೆ. ಇತ್ತ ಆರೋಪ ಮುಕ್ತ ಬಿಎಸ್ ವೈ ವಿರುದ್ಧ ಬೊಗಳೇ ಬಿಡುವ ಕಾಂಗ್ರೆಸ್ಸಿಗರ ಯುವರಾಜ ರಾಹುಲ್ ಗಾಂಧಿ, ಮೇವು ಹಗರಣದ ಅಪರಾಧಿ, ಜೈಲಿನಲ್ಲೇ ಜೀವನ ನಡೆಸುತ್ತಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸುತ್ತಾರೆ. ದೆಹಲಿಯ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನಲ್ಲಿ ರಾಗಾ ಲಾಲುರನ್ನು ಭೇಟಿ ಮಾಡಿದ್ದಾರೆ. ಇದು ಕಾಂಗ್ರೆಸ್ಸಿಗರ ಎಡಬಿಡಂಗಿತನಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಆರೋಪ ಮುಕ್ತರು ಮತ್ತು ಕೋರ್ಟ್ ನಿಂದ ಛೀ ಮಾರಿ ಹಾಕಿಸಿಕೊಂಡು ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ವ್ಯಕ್ತಿಯ ಮಧ್ಯೆ ಅದೆಷ್ಟು ಭಿನ್ನತೆ ಇದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ರಾಹುಲ್ ಗಾಂಧಿ ಜೈಲುವಾಸಿ ಲಾಲು ಪ್ರಸಾಧ್ ಯಾದವ್ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಎಷ್ಟು ಸಾಚಾತನದಿಂದ ಕೂಡಿದೆ ಎಂಬುದು ಸಾಬೀತು ಮಾಡಿದೆ. ಬಿಎಸ್ ಯಡಿಯೂರಪ್ಪ ವಿರುದ್ಧದ ಭಾಗಶಃ ಪ್ರಕರಣಗಳಿಗೆ ಕೋರ್ಟ್ ಇತಿಶ್ರೀ ಹಾಡಿದೆ. ಅವರನ್ನು ವಿನಾಕಾರಣ ಪ್ರಕರಣಗಳಲ್ಲಿ ಸಿಲುಕಿಸಿರುವುದು ಕೋರ್ಟ್ ನಿಂದಲೇ ತಿಳಿದುಬಂದಿದೆ.

ಇತ್ತ ದೇಶ ಆತಂಕದ ಸ್ಥಿತಿಯಲ್ಲಿ ಗಡಿಯಲ್ಲಿ ಸೈನಿಕರು ಗುದ್ದಾಡುತ್ತಿರುವಾಗ ಚೀನಾ ರಾಯಭಾರಿಯೊಂದಿಗೆ ಮಾತುಕತೆಗೆ ಇಳಿಯುವ ರಾಹುಲ್ ಗಾಂಧಿ ಸೇರಿ ಇಡೀ ಕಾಂಗ್ರೆಸ್ ಮತ್ತು ಎಡಬಿಡಂಗಿಗಳ ಗ್ಯಾಂಗ್ ತಮ್ಮ ಸಾಚಾತನವನ್ನು ಕೇವಲ ಮಾತಿನಲ್ಲಿ ತೋರಿಸದೇ ಕೃತಿಯಲ್ಲೂ ಇಳಿಸಬೇಕು.

0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
ತೇಜಸ್ವಿ ಪ್ರತಾಪ ಮೈಸೂರು November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
ತೇಜಸ್ವಿ ಪ್ರತಾಪ ಮೈಸೂರು November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search