• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭಾರತೀಯ ಸೈನಿಕರಿಗೆ ಶೀಘ್ರದಲ್ಲೇ ದೊರೆಯಲಿದೆ ಹೈಟೆಕ್ ರಕ್ಷಣಾ ಕವಚ

TNN Correspondent Posted On May 13, 2018


  • Share On Facebook
  • Tweet It

ದೆಹಲಿ: ಗಡಿಯಲ್ಲಿ ಮತ್ತು ಭಾರತದಲ್ಲಿ ದೇಶದ್ರೋಹಿಗಳ ವಿರುದ್ಧ ಹೋರಾಡುವ ಸೈನಿಕರಿಗೆ ಸಾಮಾನ್ಯ ಬುಲೆಟ್ ಅಷ್ಟೇ ಅಲ್ಲ ಎಕೆ 47 ಗನ್ ಮತ್ತು ಹಾರ್ಡ್ ಸ್ಟೀಲ್ ಹೊಂದಿರುವ ಬುಲೆಟ್ ಗಳಿಂದಲೂ ಯಾವುದೇ ಹಾನಿಯಾಗದಂತ ಜಾಕೆಟ್ ಗಳನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಸೈನಿಕರ ರಕ್ಷಣೆಗೆ ದೊರೆಯಲಿವೆ ಎಂದು ಸೈನ್ಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದಲ್ಲೇ ಆಘಾತಕಾರಿಯಾಗಿರುವ ಎಕೆ 47 ಗನ್ ನಿಂದ ರಕ್ಷಣೆ ನೀಡುವಂತ ಬುಲೆಟ್ ಫ್ರೂಫ್ ಜಾಕೆಟ್ ಗಳು ಈ ಮುಂಚೆ ಇರಲಿಲ್ಲ. ಭಾರತದಲ್ಲಿ ಕೇವಲ ಸಾಮಾನ್ಯ ಗನ್ ಗಳಿಂದ ರಕ್ಷಿಸುವ ಜಾಕೆಟ್ ಗಳನ್ನು ಮಾತ್ರ ಸಿದ್ಧಪಡಿಸಲಾಗುತ್ತಿತ್ತು. ಇದೀಗ ಸಿದ್ಧಪಡಿಸುತ್ತಿರುವ ವಿಶೇಷ  ಜಾಕೆಟ್ ಗಳಿಂದ ದೇಹದ ನಾಲ್ಕು ಭಾಗದಲ್ಲಿ ರಕ್ಷಣೆ ದೊರೆಯಲಿದ್ದು, ಸೈನಿಕರಿಗೆ ಯಾವುದೇ ಗಾಯಗಳು ಆಗದಂತೆ ರಕ್ಷಣೆ ಒದಗಿಸುತ್ತವೆ. ಇಂಡಿಯನ್ ಡಿಫೇನ್ಸ್ ಮೆಟಿರಿಯಲ್ಸ್ ಆಂಡ್ ಸ್ಟೋರ್ಸ್ ರಿಸರ್ಚ್ ಆ್ಯಂಡ್ ಡೆವಲಪ್ ಮೆಂಟ್ ಎಸ್ಟಾಬ್ಲಿಷಮೆಂಟ್ ಸಂಸ್ಥೆ ನಿರಂತರವಾಗಿ ಐದು ವರ್ಷ ಸಂಶೋಧನೆ ನಡೆಸಿ ಈ ಜಾಕೆಟ್ ಗಳನ್ನು ಸಿದ್ಧಪಡಿಸಿದ್ದು, ಯಾವುದೇ ದಿಕ್ಕಿನಿಂದ ಗುಂಡು ಬಂದರೂ ಸೈನಿಕರನ್ನು ರಕ್ಷಿಸುತ್ತದೆ.

ಸೈನಿಕರ ಕುತ್ತಿಗೆ, ಹಿಂಬಾಗ, ಎದೆಯ ಭಾಗ ಮತ್ತು ತೊಡೆಯ ಭಾಗದಲ್ಲೂ ರಕ್ಷಣೆ ನೀಡುವಂತೆ ಸಿದ್ಧಪಡಿಸಲಾಗಿದೆ. ಈ ಜಾಕೆಟ್ ಗಳು ಕಡಿಮೆ ಭಾರವನ್ನು ಹೊಂದಿದ್ದು, ಸೈನಿಕರ ಕಾರ್ಯಾಚರಣೆಗೆ, ಕಾರ್ಯಗಳಿಗೆ ಯಾವುದೇ ಅಡ್ಡಿ ಪಡಿಸುವುದಿಲ್ಲ. 10.4 ಕಿಲೋ ಭಾರವಿದ್ದು,  ವಿಶ್ವದ ಪ್ರಮುಖ ದೇಶಗಳು ಬಳಸುವ ಬುಲೆಟ್ ಫ್ರೂಫ್ ಜಾಕೆಟ್ ಗಳಿಗಿಂತ ಉತ್ತಮ ಮತ್ತು ಕಡಿಮೆ ಭಾರ ಹೊಂದಿವೆ ಎನ್ನುತ್ತಾರೆ ಅಧಿಕಾರಿಗಳು.

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Tulunadu News June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Tulunadu News June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search