• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭಾರತೀಯ ಸೈನಿಕರಿಗೆ ಶೀಘ್ರದಲ್ಲೇ ದೊರೆಯಲಿದೆ ಹೈಟೆಕ್ ರಕ್ಷಣಾ ಕವಚ

TNN Correspondent Posted On May 13, 2018
0


0
Shares
  • Share On Facebook
  • Tweet It

ದೆಹಲಿ: ಗಡಿಯಲ್ಲಿ ಮತ್ತು ಭಾರತದಲ್ಲಿ ದೇಶದ್ರೋಹಿಗಳ ವಿರುದ್ಧ ಹೋರಾಡುವ ಸೈನಿಕರಿಗೆ ಸಾಮಾನ್ಯ ಬುಲೆಟ್ ಅಷ್ಟೇ ಅಲ್ಲ ಎಕೆ 47 ಗನ್ ಮತ್ತು ಹಾರ್ಡ್ ಸ್ಟೀಲ್ ಹೊಂದಿರುವ ಬುಲೆಟ್ ಗಳಿಂದಲೂ ಯಾವುದೇ ಹಾನಿಯಾಗದಂತ ಜಾಕೆಟ್ ಗಳನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಸೈನಿಕರ ರಕ್ಷಣೆಗೆ ದೊರೆಯಲಿವೆ ಎಂದು ಸೈನ್ಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದಲ್ಲೇ ಆಘಾತಕಾರಿಯಾಗಿರುವ ಎಕೆ 47 ಗನ್ ನಿಂದ ರಕ್ಷಣೆ ನೀಡುವಂತ ಬುಲೆಟ್ ಫ್ರೂಫ್ ಜಾಕೆಟ್ ಗಳು ಈ ಮುಂಚೆ ಇರಲಿಲ್ಲ. ಭಾರತದಲ್ಲಿ ಕೇವಲ ಸಾಮಾನ್ಯ ಗನ್ ಗಳಿಂದ ರಕ್ಷಿಸುವ ಜಾಕೆಟ್ ಗಳನ್ನು ಮಾತ್ರ ಸಿದ್ಧಪಡಿಸಲಾಗುತ್ತಿತ್ತು. ಇದೀಗ ಸಿದ್ಧಪಡಿಸುತ್ತಿರುವ ವಿಶೇಷ  ಜಾಕೆಟ್ ಗಳಿಂದ ದೇಹದ ನಾಲ್ಕು ಭಾಗದಲ್ಲಿ ರಕ್ಷಣೆ ದೊರೆಯಲಿದ್ದು, ಸೈನಿಕರಿಗೆ ಯಾವುದೇ ಗಾಯಗಳು ಆಗದಂತೆ ರಕ್ಷಣೆ ಒದಗಿಸುತ್ತವೆ. ಇಂಡಿಯನ್ ಡಿಫೇನ್ಸ್ ಮೆಟಿರಿಯಲ್ಸ್ ಆಂಡ್ ಸ್ಟೋರ್ಸ್ ರಿಸರ್ಚ್ ಆ್ಯಂಡ್ ಡೆವಲಪ್ ಮೆಂಟ್ ಎಸ್ಟಾಬ್ಲಿಷಮೆಂಟ್ ಸಂಸ್ಥೆ ನಿರಂತರವಾಗಿ ಐದು ವರ್ಷ ಸಂಶೋಧನೆ ನಡೆಸಿ ಈ ಜಾಕೆಟ್ ಗಳನ್ನು ಸಿದ್ಧಪಡಿಸಿದ್ದು, ಯಾವುದೇ ದಿಕ್ಕಿನಿಂದ ಗುಂಡು ಬಂದರೂ ಸೈನಿಕರನ್ನು ರಕ್ಷಿಸುತ್ತದೆ.

ಸೈನಿಕರ ಕುತ್ತಿಗೆ, ಹಿಂಬಾಗ, ಎದೆಯ ಭಾಗ ಮತ್ತು ತೊಡೆಯ ಭಾಗದಲ್ಲೂ ರಕ್ಷಣೆ ನೀಡುವಂತೆ ಸಿದ್ಧಪಡಿಸಲಾಗಿದೆ. ಈ ಜಾಕೆಟ್ ಗಳು ಕಡಿಮೆ ಭಾರವನ್ನು ಹೊಂದಿದ್ದು, ಸೈನಿಕರ ಕಾರ್ಯಾಚರಣೆಗೆ, ಕಾರ್ಯಗಳಿಗೆ ಯಾವುದೇ ಅಡ್ಡಿ ಪಡಿಸುವುದಿಲ್ಲ. 10.4 ಕಿಲೋ ಭಾರವಿದ್ದು,  ವಿಶ್ವದ ಪ್ರಮುಖ ದೇಶಗಳು ಬಳಸುವ ಬುಲೆಟ್ ಫ್ರೂಫ್ ಜಾಕೆಟ್ ಗಳಿಗಿಂತ ಉತ್ತಮ ಮತ್ತು ಕಡಿಮೆ ಭಾರ ಹೊಂದಿವೆ ಎನ್ನುತ್ತಾರೆ ಅಧಿಕಾರಿಗಳು.

0
Shares
  • Share On Facebook
  • Tweet It




Trending Now
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
  • Popular Posts

    • 1
      ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • 2
      ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ

  • Privacy Policy
  • Contact
© Tulunadu Infomedia.

Press enter/return to begin your search