• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಸ್ತೆ ಕಾಮಗಾರಿಯ ಭ್ರಷ್ಟ ಗುತ್ತಿಗೆದಾರರಿಗೆ ಸಚಿವ ನಿತಿನ್ ಗಡ್ಕರಿ ಹೇಗೆ ಎಚ್ಚರಿಕೆ ನೀಡಿದ್ದಾರೆ ನೋಡಿ!

TNN Correspondent Posted On May 20, 2018


  • Share On Facebook
  • Tweet It

ಭೋಪಾಲ್: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಪ್ರಸ್ತುತ 400ಕ್ಕೂ ಅಧಿಕ ರಸ್ತೆ ಯೋಜನೆಗಳು ಮುಗಿಯುವ ಹಂತದಲ್ಲಿದ್ದರೆ, 200 ಯೋಜನೆಗಳಿಗೆ ಚಾಲನೆ ನೀಡುವ ಚಿಂತನೆಯಲ್ಲಿ ಸರ್ಕಾರವಿದೆ.

ಹೀಗೆ ಯಾವುದೇ ಸರ್ಕಾರಗಳು ಯೋಜನೆಗಳನ್ನೇನೋ ಜಾರಿಗೆ ತರುತ್ತವೆ. ಆದರೆ ಆ ಯೋಜನೆಗಳು ಎಷ್ಟರಮಟ್ಟಿಗೆ ಜಾರಿಗೆ ಬಂದವು, ಎಷ್ಟರಮಟ್ಟಿಗೆ ಕಾಮಗಾರಿ ಗುಣಮಟ್ಟದಿಂದ ಕೂಡಿದೆ, ಗುತ್ತಿಗೆದಾರರು ಹೇಗೆ ಕಾಮಗಾರಿ ಪೂರ್ಣಗೊಳಿಸಲು ಬದ್ಧತೆ ತೋರಿಸುತ್ತಾರೆ ಎಂಬುದನ್ನು ಗಮನಹರಿಸುವುದು ತುಸು ಕಷ್ಟಸಾಧ್ಯ.

ಆದರೆ ಈ ಮಾತಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿರುದ್ಧವಾಗಿದ್ದು, ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿದರೆ, ರಸ್ತೆ ಯೋಜನೆಗಳಲ್ಲಿ ಭ್ರಷ್ಟಾಚಾರ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸುವ ರಸ್ತೆ ಯೋಜನೆಗಳು ಸಮರ್ಪಕವಾಗಿ ಜಾರಿಗೊಳಿಸಬೇಕು. ಇದಕ್ಕಾಗಿ ಗುತ್ತಿಗೆದಾರರು ಬದ್ಧತೆ ತೋರಿಸಬೇಕು. ಒಂದು ವೇಳೆ ಗುತ್ತಿಗೆದಾರರು ಅಕ್ರಮ ಎಸಗಿದರೆ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ರಸ್ತೆ ಯೋಜನೆಗಳು ದೇಶದ ಅಭಿವೃದ್ಧಿಯನ್ನು ಬಿಂಬಿಸುತ್ತವೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ರಸ್ತೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ರಸ್ತೆ ಕಾಮಗಾರಿಗಳಿಗೆ ನೀಡುವ ಹಣ ಗುತ್ತಿಗೆದಾರರದ್ದಲ್ಲ, ಯೋಜನೆಗೆ ಸೀಮಿತವಾದ ಹಣ ಅದೇ ಕಾರಣಕ್ಕೆ ಮಾತ್ರ ಬಳಸಬೇಕು ಎಂದು ಸೂಚಿಸಿದ್ದಾರೆ.

 

  • Share On Facebook
  • Tweet It


- Advertisement -


Trending Now
ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
Tulunadu News October 3, 2023
ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
Tulunadu News October 2, 2023
Leave A Reply

  • Recent Posts

    • ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
    • ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
    • ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?
    • ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
  • Popular Posts

    • 1
      ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
    • 2
      ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
    • 3
      ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?
    • 4
      ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
    • 5
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search