• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜಮ್ಮು-ಕಾಶ್ಮೀರದಲ್ಲಿ ಉಗ್ರರ ನಿಗ್ರಹಕ್ಕೆ ಸೇನೆ ಎಂತಹ ಯೋಜನೆ ರೂಪಿಸಿದೆ ಗೊತ್ತಾ?

TNN Correspondent Posted On May 21, 2018
0


0
Shares
  • Share On Facebook
  • Tweet It

ಜಮ್ಮು-ಕಾಶ್ಮೀರ ಎಂದರೇನೆ ಹಾಗೆ. ಅಲ್ಲಿ ಯಾವಾಗ ಯಾವ ಉಗ್ರರು ದಾಳಿ ಮಾಡುತ್ತಾರೋ, ಗುಂಡಿನ ಸುರಿಮಳೆಗೈಯುತ್ತಾರೋ ಗೊತ್ತಾಗುವುದಿಲ್ಲ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಣಿವೆ ರಾಜ್ಯದಲ್ಲಿ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ. ಇತ್ತೀಚೆಗೆ ಬರ್ಹಾನ್ ವಾನಿ ಸಹಚರರೆಲ್ಲರನ್ನೂ ಕೊಂದ ಶ್ರೇಯಸ್ಸು ಭಾರತೀಯ ಸೈನ್ಯಕ್ಕೇ ಸಲ್ಲಬೇಕು.

ಆದರೆ ಹೀಗೆ, ಉಗ್ರರನ್ನು ಹುಡುಕಿ ಹುಡುಕಿ ಏನೋ ಕೊಲ್ಲಲಾಗುತ್ತಿದೆಯಾದರೂ, ಉಗ್ರರನ್ನು ಸಂಪೂರ್ಣವಾಗಿ ನಿಗ್ರಹ ಮಾಡಲಾಗುತ್ತಿಲ್ಲ. ಕಳೆದ ಏಳು ತಿಂಗಳಲ್ಲಿ ಕಾಶ್ಮೀರದಲ್ಲಿ 70 ಉಗ್ರರ ಹತ್ಯೆ ಮಾಡಿದರೂ ಇಂದಿಗೂ ಉಗ್ರರು ದಾಳಿ ಮಾಡುತ್ತಲೇ ಇದ್ದಾರೆ.

ಆದರೆ ಉಗ್ರರು ಚಾಪೆ ಕೆಳಗೆ ನೂಕಿದರೆ, ಭಾರತೀಯ ಸೈನ್ಯ ರಂಗೋಲಿ ಕೆಳಗಡೆಯೇ ನುಗ್ಗಲು ಅಣಿಯಾಗಿದೆ. ಹೌದು, ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ನಿಗ್ರಹ ಮಾಡಲು ಭಾರತೀಯ ಸೈನ್ಯ ನೂತನ ಯೋಜನೆ ರೂಪಿಸಿದ್ದು, ಉಗ್ರರನ್ನು ಕೊಲ್ಲುವ ಬದಲು ಜೀವಂತವಾಗಿ ಹಿಡಿಯಲು ಮುಂದಾಗಿದೆ.

ಯಾವುದೇ ಉಗ್ರರನ್ನು ಹತ್ಯೆ ಮಾಡುವುದರಿಂದ ಅವರ ಜೀವ ಹೋಗುತ್ತದೆಯೇ ವಿನಾ, ಅವರು ಎಷ್ಟು ಉಗ್ರರನ್ನು ನೇಮಿಸಿದ್ದಾರೆ, ಆ ಉಗ್ರ ತನ್ನ ಕುಟುಂಬದವರನ್ನೂ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದಾನಾ, ಉಗ್ರರ ಮುಂದಿನ ದಾಳಿ ಕುರಿತ ಯೋಜನೆ ಯಾವುದು ಎಂಬುದರ ಕುರಿತು ಪತ್ತೆ ಹಚ್ಚಲು ಭಾರತೀಯ ಸೇನೆ ಈ ಯೋಜನೆ ರೂಪಿಸಿದೆ.

ಹಾಗಾಗಿ, ಉಗ್ರರು ಅಡಗಿರುವ ಸೇನಾನೆಲೆಯನ್ನು ಪತ್ತೆ ಹಚ್ಚಿ, ಎಷ್ಟು ಸಾಧ್ಯವೋ ಅಷ್ಟು ಸಾಧ್ಯವಾದಷ್ಟು ಉಗ್ರರನ್ನು ಜೀವಂತವಾಗಿ ಹಿಡಿಯುವುದು ಸೇನೆಯ ಮುಂದಿನ ಯೋಜನೆಯಾಗಿದೆ, ಹೀಗೆ ಸೆರೆಸಿಕ್ಕ ಉಗ್ರರನ್ನು ಹಿಡಿದು ತಂದು, ಅವರಿಗೆ ಚಿತ್ರಹಿಂಸೆ ನೀಡಿ ಬಾಯಿಬಿಡಿಸುವ ಯೋಜನೆಯನ್ನು ಸೇನೆ ಹಾಕಿಕೊಂಡಿದೆ.

0
Shares
  • Share On Facebook
  • Tweet It




Trending Now
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
Tulunadu News March 2, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
  • Popular Posts

    • 1
      ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • 2
      ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • 3
      ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • 4
      ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

  • Privacy Policy
  • Contact
© Tulunadu Infomedia.

Press enter/return to begin your search