• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜಮ್ಮು-ಕಾಶ್ಮೀರದಲ್ಲಿ ಉಗ್ರರ ನಿಗ್ರಹಕ್ಕೆ ಸೇನೆ ಎಂತಹ ಯೋಜನೆ ರೂಪಿಸಿದೆ ಗೊತ್ತಾ?

TNN Correspondent Posted On May 21, 2018
0


0
Shares
  • Share On Facebook
  • Tweet It

ಜಮ್ಮು-ಕಾಶ್ಮೀರ ಎಂದರೇನೆ ಹಾಗೆ. ಅಲ್ಲಿ ಯಾವಾಗ ಯಾವ ಉಗ್ರರು ದಾಳಿ ಮಾಡುತ್ತಾರೋ, ಗುಂಡಿನ ಸುರಿಮಳೆಗೈಯುತ್ತಾರೋ ಗೊತ್ತಾಗುವುದಿಲ್ಲ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಣಿವೆ ರಾಜ್ಯದಲ್ಲಿ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ. ಇತ್ತೀಚೆಗೆ ಬರ್ಹಾನ್ ವಾನಿ ಸಹಚರರೆಲ್ಲರನ್ನೂ ಕೊಂದ ಶ್ರೇಯಸ್ಸು ಭಾರತೀಯ ಸೈನ್ಯಕ್ಕೇ ಸಲ್ಲಬೇಕು.

ಆದರೆ ಹೀಗೆ, ಉಗ್ರರನ್ನು ಹುಡುಕಿ ಹುಡುಕಿ ಏನೋ ಕೊಲ್ಲಲಾಗುತ್ತಿದೆಯಾದರೂ, ಉಗ್ರರನ್ನು ಸಂಪೂರ್ಣವಾಗಿ ನಿಗ್ರಹ ಮಾಡಲಾಗುತ್ತಿಲ್ಲ. ಕಳೆದ ಏಳು ತಿಂಗಳಲ್ಲಿ ಕಾಶ್ಮೀರದಲ್ಲಿ 70 ಉಗ್ರರ ಹತ್ಯೆ ಮಾಡಿದರೂ ಇಂದಿಗೂ ಉಗ್ರರು ದಾಳಿ ಮಾಡುತ್ತಲೇ ಇದ್ದಾರೆ.

ಆದರೆ ಉಗ್ರರು ಚಾಪೆ ಕೆಳಗೆ ನೂಕಿದರೆ, ಭಾರತೀಯ ಸೈನ್ಯ ರಂಗೋಲಿ ಕೆಳಗಡೆಯೇ ನುಗ್ಗಲು ಅಣಿಯಾಗಿದೆ. ಹೌದು, ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ನಿಗ್ರಹ ಮಾಡಲು ಭಾರತೀಯ ಸೈನ್ಯ ನೂತನ ಯೋಜನೆ ರೂಪಿಸಿದ್ದು, ಉಗ್ರರನ್ನು ಕೊಲ್ಲುವ ಬದಲು ಜೀವಂತವಾಗಿ ಹಿಡಿಯಲು ಮುಂದಾಗಿದೆ.

ಯಾವುದೇ ಉಗ್ರರನ್ನು ಹತ್ಯೆ ಮಾಡುವುದರಿಂದ ಅವರ ಜೀವ ಹೋಗುತ್ತದೆಯೇ ವಿನಾ, ಅವರು ಎಷ್ಟು ಉಗ್ರರನ್ನು ನೇಮಿಸಿದ್ದಾರೆ, ಆ ಉಗ್ರ ತನ್ನ ಕುಟುಂಬದವರನ್ನೂ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದಾನಾ, ಉಗ್ರರ ಮುಂದಿನ ದಾಳಿ ಕುರಿತ ಯೋಜನೆ ಯಾವುದು ಎಂಬುದರ ಕುರಿತು ಪತ್ತೆ ಹಚ್ಚಲು ಭಾರತೀಯ ಸೇನೆ ಈ ಯೋಜನೆ ರೂಪಿಸಿದೆ.

ಹಾಗಾಗಿ, ಉಗ್ರರು ಅಡಗಿರುವ ಸೇನಾನೆಲೆಯನ್ನು ಪತ್ತೆ ಹಚ್ಚಿ, ಎಷ್ಟು ಸಾಧ್ಯವೋ ಅಷ್ಟು ಸಾಧ್ಯವಾದಷ್ಟು ಉಗ್ರರನ್ನು ಜೀವಂತವಾಗಿ ಹಿಡಿಯುವುದು ಸೇನೆಯ ಮುಂದಿನ ಯೋಜನೆಯಾಗಿದೆ, ಹೀಗೆ ಸೆರೆಸಿಕ್ಕ ಉಗ್ರರನ್ನು ಹಿಡಿದು ತಂದು, ಅವರಿಗೆ ಚಿತ್ರಹಿಂಸೆ ನೀಡಿ ಬಾಯಿಬಿಡಿಸುವ ಯೋಜನೆಯನ್ನು ಸೇನೆ ಹಾಕಿಕೊಂಡಿದೆ.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search