• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂಗಳು ಅಸಹಿಷ್ಣುಗಳು ಎನ್ನುವವರೇ, ಮುಸ್ಲಿಂ ಮಹಿಳೆಗೆ ರಕ್ತ ಕೊಟ್ಟು ಪ್ರಾಣ ಉಳಿಸಿದ ಈ ಹಿಂದೂ ಬಗ್ಗೆ ಏನೆನ್ನುತ್ತೀರಿ?

TNN Correspondent Posted On May 27, 2018


  • Share On Facebook
  • Tweet It

ಹಿಂದೂಗಳು ಎಂದರೆ ಅನ್ಯಧರ್ಮಗಳ ವಿರೋಧಿಗಳು, ತಮ್ಮ ಧರ್ಮವನ್ನು ಹಾಗೂ ಧರ್ಮೀಯರನ್ನು ಮಾತ್ರ ಪ್ರೀತಿಸುವವರು, ಅನ್ಯಧರ್ಮದ ಬಗ್ಗೆ ಸೈರಣೆ ಹೊಂದಿದವರು, ಹಿಂದುತ್ವ ಮುನ್ನೆಲೆಗೆ ಬರುತ್ತಿದ್ದು, ಬೇರೆ ಧರ್ಮೀಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಲವು ಕೆಲಸವಿಲ್ಲದ ಬುದ್ಧಿಜೀವಿಗಳು, ಎಡಬಿಡಗಂಗಿಗಳು, ಸೋ ಕಾಲ್ಡ್ ಪ್ರಗತಿಪರರು ಆಗಾಗ ಬೊಬ್ಬೆ ಹಾಕುವ ಮೂಲಕ ಧರ್ಮ, ಧರ್ಮೀಯರ ನಡುವೆಯೇ ತಂದಿಡುವ ಕೆಲಸ ಮಾಡುತ್ತಾರೆ.

ಆದರೆ ಇದು ಸುಳ್ಳು ಎಂಬುದು ಹಿಂದಿನಿಂದಲೂ ಸಾಬೀತಾಗುತ್ತಲೇ ಬಂದಿದೆ. ಹೀಗೆ ಹಿಂದೂಗಳು ಅನ್ಯ ಧರ್ಮೀಯರನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಮೂಡುಬಿದರೆಯಲ್ಲಿ ನೂತನ ನಿದರ್ಶನವೊಂದು ಸಿಕ್ಕಿದೆ.

ಆ ಮುಸ್ಲಿಂ ಗರ್ಭಿಣಿಯ ಹೆಸರು ಫಾತಿಮಾ. ನಗರದ ಜಿ.ಎ.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಕೆಗೆ ರಕ್ತದ ಅವಶ್ಯಕತೆ ಇತ್ತು. ಆಸ್ಪತ್ರೆಯ ಬ್ಲಡ್ ಬ್ಯಾಂಕಿನಲ್ಲಿ ರಕ್ತವಿರದ ಕಾರಣ, ನಿಮಗೆ ಯಾರಿಗಾದರೂ ಪರಿಚಯ ಇದ್ದರೆ ಒಂದು ಯೂನಿಟ್ ರಕ್ತದಾನ ಮಾಡುತ್ತಾರಾ ಕೇಳಿ ಎಂದು ಕುಟುಂಬಸ್ಥರಿಗೆ ಹೇಳಿದ್ದರು.

ಅದು ರಾತ್ರಿ ವೇಳೆಯಾಗಿದ್ದರಿಂದ ಮೂಡುಬಿದರೆಯ ರಕ್ತದಾನಿಗಳಿಗೆ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ, ಒಂದಿಬ್ಬರಿಗೆ ಕೇಳಿದ್ದರೂ ರಕ್ತ ಸಿಕ್ಕಿರಲಿಲ್ಲ. ಅತ್ತ ಫಾತಿಮಾ ಸ್ಥಿತಿಯೂ ಮತ್ತಷ್ಟು ಗಂಭೀರವಾಗತೊಡಗಿತು.

ಕೊನೆಯ ಆಯ್ಕೆ ಎಂಬಂತೆ ಕನೆಕ್ಟ್ ಮೂಡುಬಿದರೆ ಅಪ್ಲಿಕೇಶನ್ ಗೆ ಮಾಹಿತಿ ನೀಡಲಾಗಿದೆ. ಆಗ ಬೆಳಗ್ಗೆ 5 ಗಂಟೆಗೆ ಯೋಗೇಶ್ ಕೊಡ್ಯಡ್ಕ ಎಂಬ ಹಿಂದೂ ಯುವಕ ಬಂದು ಮುಸ್ಲಿಂ ಮಹಿಳೆಗೆ ರಕ್ತ ನೀಡಿ ಆಕೆಯ ಜೀವ ಉಳಿಸಿದ್ದಾನೆ. ಆ ಮೂಲಕ ಧರ್ಮ ಸಹಿಷ್ಣುತೆ ಮೆರೆದಿದ್ದಾನೆ. ಇನ್ನಾದರೂ ಹಿಂದೂಗಳ ಬಗ್ಗೆ ಇರುವ ಅಪನಂಬಿಕೆ ಬಿಡಿ.

 

  • Share On Facebook
  • Tweet It


- Advertisement -


Trending Now
ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
Tulunadu News July 5, 2022
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Tulunadu News July 4, 2022
Leave A Reply

  • Recent Posts

    • ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
  • Popular Posts

    • 1
      ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • 2
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 3
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 4
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 5
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search