• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಿಂದೂಗಳು ಅಸಹಿಷ್ಣುಗಳು ಎನ್ನುವವರೇ, ಮುಸ್ಲಿಂ ಮಹಿಳೆಗೆ ರಕ್ತ ಕೊಟ್ಟು ಪ್ರಾಣ ಉಳಿಸಿದ ಈ ಹಿಂದೂ ಬಗ್ಗೆ ಏನೆನ್ನುತ್ತೀರಿ?

TNN Correspondent Posted On May 27, 2018
0


0
Shares
  • Share On Facebook
  • Tweet It

ಹಿಂದೂಗಳು ಎಂದರೆ ಅನ್ಯಧರ್ಮಗಳ ವಿರೋಧಿಗಳು, ತಮ್ಮ ಧರ್ಮವನ್ನು ಹಾಗೂ ಧರ್ಮೀಯರನ್ನು ಮಾತ್ರ ಪ್ರೀತಿಸುವವರು, ಅನ್ಯಧರ್ಮದ ಬಗ್ಗೆ ಸೈರಣೆ ಹೊಂದಿದವರು, ಹಿಂದುತ್ವ ಮುನ್ನೆಲೆಗೆ ಬರುತ್ತಿದ್ದು, ಬೇರೆ ಧರ್ಮೀಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಲವು ಕೆಲಸವಿಲ್ಲದ ಬುದ್ಧಿಜೀವಿಗಳು, ಎಡಬಿಡಗಂಗಿಗಳು, ಸೋ ಕಾಲ್ಡ್ ಪ್ರಗತಿಪರರು ಆಗಾಗ ಬೊಬ್ಬೆ ಹಾಕುವ ಮೂಲಕ ಧರ್ಮ, ಧರ್ಮೀಯರ ನಡುವೆಯೇ ತಂದಿಡುವ ಕೆಲಸ ಮಾಡುತ್ತಾರೆ.

ಆದರೆ ಇದು ಸುಳ್ಳು ಎಂಬುದು ಹಿಂದಿನಿಂದಲೂ ಸಾಬೀತಾಗುತ್ತಲೇ ಬಂದಿದೆ. ಹೀಗೆ ಹಿಂದೂಗಳು ಅನ್ಯ ಧರ್ಮೀಯರನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಮೂಡುಬಿದರೆಯಲ್ಲಿ ನೂತನ ನಿದರ್ಶನವೊಂದು ಸಿಕ್ಕಿದೆ.

ಆ ಮುಸ್ಲಿಂ ಗರ್ಭಿಣಿಯ ಹೆಸರು ಫಾತಿಮಾ. ನಗರದ ಜಿ.ಎ.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಕೆಗೆ ರಕ್ತದ ಅವಶ್ಯಕತೆ ಇತ್ತು. ಆಸ್ಪತ್ರೆಯ ಬ್ಲಡ್ ಬ್ಯಾಂಕಿನಲ್ಲಿ ರಕ್ತವಿರದ ಕಾರಣ, ನಿಮಗೆ ಯಾರಿಗಾದರೂ ಪರಿಚಯ ಇದ್ದರೆ ಒಂದು ಯೂನಿಟ್ ರಕ್ತದಾನ ಮಾಡುತ್ತಾರಾ ಕೇಳಿ ಎಂದು ಕುಟುಂಬಸ್ಥರಿಗೆ ಹೇಳಿದ್ದರು.

ಅದು ರಾತ್ರಿ ವೇಳೆಯಾಗಿದ್ದರಿಂದ ಮೂಡುಬಿದರೆಯ ರಕ್ತದಾನಿಗಳಿಗೆ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ, ಒಂದಿಬ್ಬರಿಗೆ ಕೇಳಿದ್ದರೂ ರಕ್ತ ಸಿಕ್ಕಿರಲಿಲ್ಲ. ಅತ್ತ ಫಾತಿಮಾ ಸ್ಥಿತಿಯೂ ಮತ್ತಷ್ಟು ಗಂಭೀರವಾಗತೊಡಗಿತು.

ಕೊನೆಯ ಆಯ್ಕೆ ಎಂಬಂತೆ ಕನೆಕ್ಟ್ ಮೂಡುಬಿದರೆ ಅಪ್ಲಿಕೇಶನ್ ಗೆ ಮಾಹಿತಿ ನೀಡಲಾಗಿದೆ. ಆಗ ಬೆಳಗ್ಗೆ 5 ಗಂಟೆಗೆ ಯೋಗೇಶ್ ಕೊಡ್ಯಡ್ಕ ಎಂಬ ಹಿಂದೂ ಯುವಕ ಬಂದು ಮುಸ್ಲಿಂ ಮಹಿಳೆಗೆ ರಕ್ತ ನೀಡಿ ಆಕೆಯ ಜೀವ ಉಳಿಸಿದ್ದಾನೆ. ಆ ಮೂಲಕ ಧರ್ಮ ಸಹಿಷ್ಣುತೆ ಮೆರೆದಿದ್ದಾನೆ. ಇನ್ನಾದರೂ ಹಿಂದೂಗಳ ಬಗ್ಗೆ ಇರುವ ಅಪನಂಬಿಕೆ ಬಿಡಿ.

 

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search