• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂಗಳು ಅಸಹಿಷ್ಣುಗಳು ಎನ್ನುವವರೇ, ಮುಸ್ಲಿಂ ಮಹಿಳೆಗೆ ರಕ್ತ ಕೊಟ್ಟು ಪ್ರಾಣ ಉಳಿಸಿದ ಈ ಹಿಂದೂ ಬಗ್ಗೆ ಏನೆನ್ನುತ್ತೀರಿ?

TNN Correspondent Posted On May 27, 2018


  • Share On Facebook
  • Tweet It

ಹಿಂದೂಗಳು ಎಂದರೆ ಅನ್ಯಧರ್ಮಗಳ ವಿರೋಧಿಗಳು, ತಮ್ಮ ಧರ್ಮವನ್ನು ಹಾಗೂ ಧರ್ಮೀಯರನ್ನು ಮಾತ್ರ ಪ್ರೀತಿಸುವವರು, ಅನ್ಯಧರ್ಮದ ಬಗ್ಗೆ ಸೈರಣೆ ಹೊಂದಿದವರು, ಹಿಂದುತ್ವ ಮುನ್ನೆಲೆಗೆ ಬರುತ್ತಿದ್ದು, ಬೇರೆ ಧರ್ಮೀಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಲವು ಕೆಲಸವಿಲ್ಲದ ಬುದ್ಧಿಜೀವಿಗಳು, ಎಡಬಿಡಗಂಗಿಗಳು, ಸೋ ಕಾಲ್ಡ್ ಪ್ರಗತಿಪರರು ಆಗಾಗ ಬೊಬ್ಬೆ ಹಾಕುವ ಮೂಲಕ ಧರ್ಮ, ಧರ್ಮೀಯರ ನಡುವೆಯೇ ತಂದಿಡುವ ಕೆಲಸ ಮಾಡುತ್ತಾರೆ.

ಆದರೆ ಇದು ಸುಳ್ಳು ಎಂಬುದು ಹಿಂದಿನಿಂದಲೂ ಸಾಬೀತಾಗುತ್ತಲೇ ಬಂದಿದೆ. ಹೀಗೆ ಹಿಂದೂಗಳು ಅನ್ಯ ಧರ್ಮೀಯರನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಮೂಡುಬಿದರೆಯಲ್ಲಿ ನೂತನ ನಿದರ್ಶನವೊಂದು ಸಿಕ್ಕಿದೆ.

ಆ ಮುಸ್ಲಿಂ ಗರ್ಭಿಣಿಯ ಹೆಸರು ಫಾತಿಮಾ. ನಗರದ ಜಿ.ಎ.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಕೆಗೆ ರಕ್ತದ ಅವಶ್ಯಕತೆ ಇತ್ತು. ಆಸ್ಪತ್ರೆಯ ಬ್ಲಡ್ ಬ್ಯಾಂಕಿನಲ್ಲಿ ರಕ್ತವಿರದ ಕಾರಣ, ನಿಮಗೆ ಯಾರಿಗಾದರೂ ಪರಿಚಯ ಇದ್ದರೆ ಒಂದು ಯೂನಿಟ್ ರಕ್ತದಾನ ಮಾಡುತ್ತಾರಾ ಕೇಳಿ ಎಂದು ಕುಟುಂಬಸ್ಥರಿಗೆ ಹೇಳಿದ್ದರು.

ಅದು ರಾತ್ರಿ ವೇಳೆಯಾಗಿದ್ದರಿಂದ ಮೂಡುಬಿದರೆಯ ರಕ್ತದಾನಿಗಳಿಗೆ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ, ಒಂದಿಬ್ಬರಿಗೆ ಕೇಳಿದ್ದರೂ ರಕ್ತ ಸಿಕ್ಕಿರಲಿಲ್ಲ. ಅತ್ತ ಫಾತಿಮಾ ಸ್ಥಿತಿಯೂ ಮತ್ತಷ್ಟು ಗಂಭೀರವಾಗತೊಡಗಿತು.

ಕೊನೆಯ ಆಯ್ಕೆ ಎಂಬಂತೆ ಕನೆಕ್ಟ್ ಮೂಡುಬಿದರೆ ಅಪ್ಲಿಕೇಶನ್ ಗೆ ಮಾಹಿತಿ ನೀಡಲಾಗಿದೆ. ಆಗ ಬೆಳಗ್ಗೆ 5 ಗಂಟೆಗೆ ಯೋಗೇಶ್ ಕೊಡ್ಯಡ್ಕ ಎಂಬ ಹಿಂದೂ ಯುವಕ ಬಂದು ಮುಸ್ಲಿಂ ಮಹಿಳೆಗೆ ರಕ್ತ ನೀಡಿ ಆಕೆಯ ಜೀವ ಉಳಿಸಿದ್ದಾನೆ. ಆ ಮೂಲಕ ಧರ್ಮ ಸಹಿಷ್ಣುತೆ ಮೆರೆದಿದ್ದಾನೆ. ಇನ್ನಾದರೂ ಹಿಂದೂಗಳ ಬಗ್ಗೆ ಇರುವ ಅಪನಂಬಿಕೆ ಬಿಡಿ.

 

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
Tulunadu News March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Tulunadu News March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search