• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯೋಗಿ ಆದಿತ್ಯನಾಥರ ನೋಟಿಸ್ ಗೆ ಮಣಿದ ಮಾಯಾವತಿ, ಕೊನೆಗೂ ಸರ್ಕಾರಿ ಬಂಗಲೆ ತೊರೆದ ಕುಮಾರಿ

TNN Correspondent Posted On June 3, 2018
0


0
Shares
  • Share On Facebook
  • Tweet It

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳವರೆಗೂ ಆಡಳಿತ ನಡೆಸಿದ ಬಳಿಕವೂ, ಅಧಿಕಾರದಿಂದ ಇಳಿದ ಬಳಿಕವೂ ಹಲವು ರಾಜಕಾರಣಿಗಳು ಸರ್ಕಾರಿ ಬಂಗಲೆಯಲ್ಲಿ ಆರಾಮವಾಗಿ ವಾಸಿಯಾಗಿದ್ದರು. ಆದರೆ ವ್ಯಕ್ತಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ್ದ ಸುಪ್ರೀಂ ಕೋರ್ಟ್ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ರಾಜಕಾರಣಿಗಳಿಗೆ ಸೂಚಿಸಿತ್ತು.

ಸುಪ್ರೀಂ ಕೋರ್ಟೇ ಗಂಟು ಮೂಟೆ ಕಟ್ಟುವಂತೆ ಆದೇಶ ನೀಡಿದ್ದರೂ, ಮುಲಾಯಂ ಸಿಂಗ್ ಯಾದವ್, ಮಾಯಾವತಿ ಸೇರಿ ಹಲವು ರಾಜಕಾರಣಿಗಳು ಇನ್ನೂ ಸರ್ಕಾರಿ ಬಂಗಲೆಯಲ್ಲೇ ವಾಸ ಮಾಡಿದ್ದರು. ಆದರೆ ಯೋಗಿ ಆದಿತ್ಯನಾಥರು ಸುಮ್ಮನಿರಬೇಕಲ್ಲ, ಯಾರು ಅಧಿಕಾರವಿಲ್ಲದಿದ್ದರೂ ಸರ್ಕಾರಿ ಬಂಗಲೆಯಲ್ಲಿದ್ದಾರೋ, ಅವರೆಲ್ಲ ಕೂಡಲೇ ಗಂಟು ಮೂಟೆ ಕಟ್ಟಬೇಕು ಎಂದು ನೋಟಿಸ್ ಕಳುಹಿಸಿದ್ದರು.

ಹೀಗೆ ಯೋಗಿ ಆದಿತ್ಯನಾಥರು ಕಳುಹಿಸಿದ ನೋಟಿಸ್ ನಂತೆ ಅನಿವಾರ್ಯವಾಗಿ ಮುಲಾಯಂ ಸಿಂಗ್ ಸೇರಿ ಹಲವು ರಾಜಕಾರಣಿಗಳು ಸರ್ಕಾರಿ ಬಂಗಲೆ ಖಾಲಿ ಮಾಡಿದ್ದರು. ಆದರೂ ಮಾಯಾವತಿಯವರು ಮಾತ್ರ ಬಂಗಲೆ ಖಾಲಿ ಮಾಡಿರಲಿಲ್ಲ.

ಅದೂ ಅಲ್ಲದೆ, ಸರ್ಕಾರಿ ಬಂಗಲೆಯಲ್ಲೇ ಉಳಿಯುವ ದೃಷ್ಟಿಯಿಂದ ಉಪಾಯ ಮಾಡಿದ್ದ ಮಾಯಾವತಿ, ತಾವು ವಾಸಿಸಿದ್ದ ಸರ್ಕಾರಿ ಬಂಗಲೆಯ ಹೆಸರನ್ನು ಬಿಎಸ್ಪಿ ಸಂಸ್ಥಾಪಕರಾದ ಕಾನ್ಶಿರಾಮ್ ಹೆಸರಲ್ಲಿ, ಕಾನ್ಶಿರಾಂ ಯಾದ್ಗಾರ್ ವಿಶ್ರಾಮ್ ಸ್ಥಳ ಎಂದು ಹೆಸರಿಟ್ಟಿದ್ದಲ್ಲದೆ, ಅದೊಂದು ಸ್ಮಾರಕ ಎಂದು ಕರೆದಿದ್ದರು.

ಆದರೆ ಕೊನೆಗೂ ಸುಪ್ರೀಂ ಕೋರ್ಟ್ ಆದೇಶ ಹಾಗೂ ಉತ್ತರ ಪ್ರದೇಶ ಸರ್ಕಾರದ ನೋಟಿಸ್ ಗೆ ಮಣಿದಿರುವ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ತಾವು ತಂಗಿದ್ದ 13 ಎ ಮಾಲ್ ಅವೆನ್ಯೂ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಪ್ರಸ್ತುತ ತಮ್ಮ ವಸತಿಯನ್ನು ಮಾಯಾವತಿಯವರು 9 ಮಾಲ್ ಅವೆನ್ಯೂಗೆ ಸ್ಥಳಾಂತರಿಸಿದ್ದಾರೆ. ಅಂತೂ ಸುಪ್ರೀಂ ಕೋರ್ಟ್ ಆದೇಶ ಹಾಗೂ ಉತ್ತರ ಪ್ರದೇಶ ಸರ್ಕಾರದ ಕ್ರಮದಂತೆ, ಅವಧಿ ಮುಗಿದರೂ ಸರ್ಕಾರಿ ಬಂಗಲೆಯಲ್ಲಿ ತಿಂದುಂಡು ವಾಸವಾಗಿದ್ದ ರಾಜಕಾರಣಿಗಳು ಕಾಲ್ಕೀಳುವಂತಾಗಿದೆ.

 

0
Shares
  • Share On Facebook
  • Tweet It




Trending Now
ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
Tulunadu News March 5, 2026
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
  • Popular Posts

    • 1
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!

  • Privacy Policy
  • Contact
© Tulunadu Infomedia.

Press enter/return to begin your search