• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಇನ್ನು ನಿವೃತ್ತಿಯ ದಿನದಂತೆ ಪಿಎಫ್ ಮೊತ್ತ ಕೈ ಸೇರಲಿದೆ!

TNN Correspondent Posted On July 21, 2017
0


0
Shares
  • Share On Facebook
  • Tweet It

ಇನ್ನು ನೀವು ನಿವೃತ್ತರಾದ ದಿನದಂದೇ ನಿಮಗೆ ಸಿಗಬೇಕಾದ ಪಿಎಫ್ ಮೊತ್ತ ಹಾಗೂ ಪಿಂಚಣಿಗೆ ಸಂಬಂಧಪಟ್ಟ ಸೌಲಭ್ಯಗಳು ಆವತ್ತೆ ಅಂತಿಮಗೊಳ್ಳಲಿವೆ. ಈ ಮೂಲಕ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕೇಂದ್ರ ಸರಕಾರ ಬಾಳಿನ ಮುಸ್ಸಂಜೆಯಲ್ಲಿರುವ ಪ್ರಜೆಗಳ ಮುಖದಲ್ಲಿ ದೊಡ್ಡ ಹರುಷ ತಂದಿದೆ. ಇಲ್ಲಿಯ ತನಕ ಏನಾಗಿತ್ತು ಎಂದರೆ ಒಬ್ಬ ನೌಕರ ತನ್ನ ನಿವೃತ್ತಿಯ ನಂತರ ಆಗಾಗ ಪಿಎಫ್ ಆಫೀಸಿಗೆ ಹೋಗಿ ಯಾವಾಗ ತನ್ನ ಹಣ ಸಿಗುತ್ತೆ ಎಂದು ಕಾಯುತ್ತಾ ಕೂರಬೇಕಿತ್ತು. ಅನೇಕ ಬಾರಿ ಚಪ್ಪಲಿ ಸವೆದರೂ ಹಣ ಇಂತದ್ದೇ ದಿನದಂದು ಸಿಗುತ್ತದೆ ಎನ್ನುವ ಯಾವ ಗ್ಯಾರಂಟಿ ಇರಲಿಲ್ಲ. ಇದರಿಂದ ಪ್ರತಿಬಾರಿ ತಮ್ಮ ಹಣೆಬರಹವನ್ನು ಶಪಿಸುತ್ತಾ ಹಿರಿಯರು ಪಿಎಫ್ ಮತ್ತು ಪಿಂಚಣಿ ಹಣ ಮತ್ತು ಗ್ರಾಚುಯಿಟಿ ಸೌಲಭ್ಯದ ಬಗ್ಗೆ ನೋವಿನಿಂದ ಕೊರಗುತ್ತಿದ್ದರು.

ಆದರೆ ನರೇಂದ್ರ ಮೋದಿಯವರು ತಮ್ಮ ಸರಕಾರ ಭಾರತದ ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ವಿಐಪಿ ಎಂದೇ ಪರಿಗಣಿಸಿದ್ದೇವೆ ಎಂದು ಹೇಳಿದ್ದು ಮಾತ್ರವಲ್ಲ, ಈಗ ಮಾಡಿ ಕೂಡ ತೋರಿಸುತ್ತಿದ್ದಾರೆ. ಅದರಂತೆ ಬಾಳ ಮುಸ್ಸಂಜೆಯಲ್ಲಿ ಆರಾಮದಿಂದ ಇರಬೇಕಾಗಿರುವ ನಿವೃತ್ತಿ ಜೀವನವನ್ನು ಸಂತೋಷದಿಂದ ಕಳೆಯಬೇಕಾಗಿರುವ ನಾಗರಿಕರಿಗೆ ಇನ್ನೂ ನಿವೃತ್ತಿಯ ದಿನವೇ ತಮ್ಮ ಎಲ್ಲಾ ದಾಖಲೆ ಪತ್ರಗಳ ವಿಲೇವಾರಿ ನಡೆದು ಅವರು ನೆಮ್ಮದಿಯಿಂದ ಮನೆಗೆ ತೆರಳುವ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ರಾಜ್ಯಸಭೆಯಲ್ಲಿ ಸದಸ್ಯರೊಬ್ಬರ ಲಿಖಿತ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಇಪಿಎಫ್ ಕಚೇರಿಯಲ್ಲಿ ಕರ್ಥವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಎಂಪ್ಲಾಯೀಸ್ ಪ್ರಾವಿಂಡೆಂಟ್ ಫಂಡ್ 1952 ಮತ್ತು ಎಂಪ್ಲಾಯೀಸ್ ಪೆನ್ಸನ್ ಸ್ಕೀಮ್ 1995 ಅಡಿಯಲ್ಲಿ ಎಲ್ಲಾ ಸೌಲಭ್ಯವನ್ನು ತಕ್ಷಣವೇ ಜಾರಿಗೆ ಬರುವಂತೆ ನೀಡಬೇಕು ಎಂದು ಕೇಂದ್ರ ಸರಕಾರ ಸೂಚಿಸಿರುವುದಾಗಿ ಲಿಖಿತವಾಗಿ ಉತ್ತರ ನೀಡಿದ್ದಾರೆ. ಇನ್ನೂ ಪೇಮೆಂಟ್ ಆಫ್ ಗ್ರಾಚುಯಿಟಿ ಆಕ್ಟ್ 1972 ಪ್ರಕಾರ ಮಾಲೀಕರು ನಿಯಮ ಪ್ರಕಾರ 30 ದಿನಗಳ ಒಳಗೆ ಆ ಸೌಲಭ್ಯವನ್ನು ನೀಡಲು ಕೂಡ ಆದೇಶಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಮೋದಿಯವರು ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ದೊಡ್ಡ ಹೆಜ್ಜೆ ಇದಾಗಿತ್ತು ಎಂದು ಹೇಳಿದ ಸಚಿವರು ನಿವೃತ್ತಿ ಹೊಂದಿದ ನಂತರ ಯಾವುದೇ ಆರ್ಥಿಕ ಸಮಸ್ಯೆಯನ್ನು ಹೊಂದದೆ ಹಿರಿಯರು ತಮ್ಮ ನಿವೃತ್ತಿ ಜೀವನವನ್ನು ಎಂಜಾಯ್ ಮಾಡಬೇಕು ಎನ್ನುವುದು ಮೋದಿ ಚಿಂತನೆ ಎಂದು ನಂತರ ಮಧ್ಯಮದವರೊಂದಿಗೆ ಅಭಿಪ್ರಾಯ ಪಟ್ಟರು.

ಕೇಂದ್ರದ ಈ ಸ್ಪಷ್ಟ ಆದೇಶದಿಂದ 48.85 ಲಕ್ಷ ಕೇಂದ್ರದ ನೌಕರರಿಗೆ ಮತ್ತು ಒಟ್ಟು 55.51 ಲಕ್ಷ ಪಿಂಚಣಿದಾರರಿಗೆ ತಮ್ಮ ಜೀವನಕ್ಕೆ ಇನ್ನಷ್ಟು ಭದ್ರತೆ ಕೊಟ್ಟಂತೆ ಆಗಿದೆ. ಕೇಂದ್ರದ ಖಡಕ್ ಸೂಚನೆಯ ಬಳಿಕ ಇಪಿಎಫ್ ಕಚೇರಿಗಳು ಕೂಡ ಉದ್ಯೋಗಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ಈ ಮೂಲಕ ಸುಮಾರು ನಾಲ್ಕು ಕೋಟಿ ನಾಗರಿಕರಿಗೆ ಸಹಾಯ ಸಿಗುತ್ತಿದೆ. ಅದರಲ್ಲಿ ಒಂದು ಸೌಲಭ್ಯ ಏನೆಂದರೆ ನಿರ್ದಿಷ್ಟ ಮೊತ್ತವನ್ನು ಉದ್ಯೋಗಿ ತನ್ನ ಆರೋಗ್ಯದ ಖರ್ಚಿಗಾಗಿ ಡ್ರಾ ಮಾಡಬಹುದು ಎನ್ನುವುದು ಗಮನಾರ್ಹ. ಇನ್ನು ಸ್ವಂತ ಮನೆ ಖರೀದಿಗಾಗಿ ಇಪಿಎಫ್ ನ 90% ಹಣವನ್ನು ಡ್ರಾ ಮಾಡುವ ಸೌಲಭ್ಯ ಇದೆ. ಅದರೊಮದಿಗೆ ಜೀವನ ಭದ್ರತೆಗಾಗಿ 50 ಸಾವಿರ ಪ್ರತ್ಯೇಕ ಇಡುವ ಕಾರ್ಯವನ್ನು ಕೂಡ ಇಲಾಖೆ ಮಾಡಲಿದೆ.

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search