• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗೋಮಾತೆಯನ್ನು ಮಳೆಯಲ್ಲಿ ನಿಲ್ಲಿಸಿದವನಿಗೆ 10 ದಿನ ಜೈಲುವಾಸ, 3 ಸಾವಿರ ದಂಡ ವಿಧಿಸಿದ ಕೋರ್ಟ್

TNN Correspondent Posted On June 4, 2018
0


0
Shares
  • Share On Facebook
  • Tweet It

ಮುಂಬೈ: 28 ಗೋವುಗಳನ್ನು ಮಳೆಯಲ್ಲಿ ನಿಲ್ಲಿಸಿ, ಯಾವುದೇ ಸೂಕ್ತ ವ್ಯವಸ್ಥೆ ಕಲ್ಪಿಸದ ವ್ಯಕ್ತಿಗೆ ಮುಂಬೈ ಮೆಟ್ರೋಪಾಲಿಟಿಯನ್ ಕೋರ್ಟ್ ಶಿಕ್ಷೆ ನೀಡುವ ಮೂಲಕ ಗೋಮಾತೆಯ ರಕ್ಷಣೆಯ ಮಹತ್ವ ಸಾರಿದೆ.    76 ವರ್ಷದ ಗೋಪಾಲ ಪುಲ್ಸುಂಗೆ ಶಿಕ್ಷೆಗೆ ಒಳಪಟ್ಟವರು. ಇವರು 28 ಗೋವುಗಳಿಗೆ ಆಶ್ರಯ ಕಲ್ಪಿಸದೇ ಮಳೆಯಲ್ಲಿಯೇ ಕಟ್ಟಿ ನಿಲ್ಲಿಸಿದ್ದರಿಂದ ಈ ಶಿಕ್ಷೆಯನ್ನು ನೀಡಲಾಗಿದೆ.

ಪ್ರಾಣಿಗಳ ಮೇಲೆ ಕ್ರೌರ್ಯ ನಿಯಂತ್ರಣ ಕಾಯಿದೆ ಪ್ರಕಾರ ‘ಪ್ರಾಣಿಗಳಿಗೆ ಹಿಂಸೆ ನೀಡಿದ ಆರೋಪದಲ್ಲಿ 10 ದಿನಗಳ ಜೈಲುವಾಸ ಮತ್ತು ಮೂರು ಸಾವಿರ ದಂಢ ವಿಧಿಸಲಾಗಿದೆ. ಎಎಚ್ ಕಾಶಿಕರ್ ಎಂಬುವವರು ನೀಡಿರುವ ದೂರನ್ನು ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.

ಜೀವನಕ್ಕಾಗಿ ಗೋವುಗಳನ್ನು ಆಶ್ರಯಿಸಿರುವ ವ್ಯಕ್ತಿಯ ಅವುಗಳಿಗೆ ಸೂಕ್ತ ರಕ್ಷಣೆ ನೀಡದಿರುವ ಕುರಿತು 2013ರಲ್ಲೇ  ದೂರು ದಾಖಲಿಸಲಾಗಿತ್ತು. ಗೋವುಗಳನ್ನು ಸಾಕಿದ ಗೋಪಾಲ ಪುಲ್ಸುಂಗೆ ಅವರ ನಿತ್ಯ ಗೋವುಗಳನ್ನು ಪಾದಚಾರಿ ಮಾರ್ಗದಲ್ಲಿ ಕಟ್ಟುತ್ತಿದ್ದರು. ಅಲ್ಲದೇ ಮಳೆಯಲ್ಲೂ ಅವುಗಳನ್ನು ಅಲ್ಲಿಯೇ ನಿಲ್ಲಿಸುತ್ತಿದ್ದರು. ಇದರಿಂದ ಗೋವುಗಳಿಗೆ ತೀವ್ರ ಹಿಂಸೆಯಾಗುತ್ತಿದೆ ಎಂದು ದೂರು ನೀಡಲಾಗಿತ್ತು. ಈ ಕುರಿತು ನಾಲ್ಕು ಸಾಕ್ಷಿಗಳನ್ನು ಪಡೆದಿರುವ ಕೋರ್ಟ್ ಆರೋಪ ಸಾಬೀತಾಗಿದೆ ಎಂದು ತಿಳಿಸಿದೆ.

2013 ಜೂನ್ 28ರಂದು 28 ಗೋವುಗಳನ್ನು ಕಾಲಾಚೌಕಿ ಪ್ರದೇಶದ ಮೆಟ್ರೋ ಪಾಲಿಟಿಯನ್ ರೈಲು ಸೇತುವೆ ಬಳಿ ಕಟ್ಟಿದ್ದರು. ಅವುಗಳಿಗೆ ಯಾವುದೇ ರಕ್ಷಣೆ ನೀಡಿಲ್ಲ. ಇದರಿಂದ ಗೋವುಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪೀಪಲ್ ಆನಿಮಲ್ ಆರ್ಗನೈಸೇಷನ್ ಸಂಸ್ಥೆಯ ಚೇತನ ಶರ್ಮಾ ಅವರು ಇವರ ವಿರುದ್ಧ ದೂರು ನೀಡಿದ್ದರು.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!

  • Privacy Policy
  • Contact
© Tulunadu Infomedia.

Press enter/return to begin your search