• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಡನ್ನಾಗಿ ರಜೆ ಕೊಟ್ಟರೆ ಪೋಷಕರು ಅತಂತ್ರ!

Hanumantha Kamath Posted On June 8, 2018


  • Share On Facebook
  • Tweet It

ನಿಮ್ಮ ಮಗು ಶಾಲೆಗೆ ಹೋಗಿರುತ್ತದೆ. ನೀವು ಉದ್ಯೋಗಕ್ಕೆ ಹೋಗಿರುತ್ತೀರಿ. ನಿಮ್ಮ ಮೊಬೈಲಿಗೆ ಮೇಸೇಜ್ ಒಂದು ಬರುತ್ತದೆ. ಶಾಲೆಗಳಿಗೆ ಇವತ್ತು ಮತ್ತು ನಾಳೆ ರಜೆ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎನ್ನುವ ಸಂದೇಶ ಅದು. ನಿಮ್ಮ ಹೆಂಡ್ತಿ ಗೃಹಿಣಿಯಾಗಿದ್ದರೆ ನೀವು ಅವರಿಗೆ ಫೋನ್ ಮಾಡಿ ಮಗುವನ್ನು ಶಾಲೆಯಿಂದ ಕರೆದುಕೊಂಡು ಬನ್ನಿ ಎನ್ನಬಹುದು. ಆದರೆ ಇವತ್ತಿನ ದಿನಗಳಲ್ಲಿ ದಂಪತಿಗಳಿಬ್ಬರು ಉದ್ಯೋಗಕ್ಕೆ ತೆರಳುವುದರಿಂದ ಮತ್ತು ನಗರದಲ್ಲಿ ವಿಭಕ್ತ ಕುಟುಂಬದಲ್ಲಿ ಇರುವುದರಿಂದ ಮಗುವನ್ನು ತಕ್ಷಣ ಶಾಲೆಯಿಂದ ಕರೆದುಕೊಂಡು ಬರುವುದು ಯಾರು ಎಂದು ಗೊಂದಲ ಉಂಟಾಗುತ್ತದೆ. ಅನೇಕ ಬಾರಿ ಬೆಳಿಗ್ಗೆ 8 ಗಂಟೆಯೊಳಗೆ ನೀವೆ ಮಗುವನ್ನು ಶಾಲೆಗೆ ಬಿಟ್ಟಿರುತ್ತೀರಿ. ಕೆಲವರು ರಿಕ್ಷಾ ಅಥವಾ ಓಮಿನಿಯಲ್ಲಿ ಕಳುಹಿಸಿರುತ್ತಾರೆ. ರಿಕ್ಷಾ ಅಥವಾ ಒಮಿನಿಯವ ಬೆಳಿಗ್ಗೆ 8 ಗಂಟೆಗೆ ಬಿಟ್ಟು ಸಂಜೆ ಕರೆದುಕೊಂಡು ಹೋಗುವುದರಿಂದ 9 ಗಂಟೆಗೆ ಶಾಲಾ ಮುಖ್ಯೋಪಾಧ್ಯಾಯರು ಇವತ್ತು ಶಾಲೆ ಇಲ್ಲ, ರಜೆ ಎಂದು ಪೋಷಕರಿಗೆ ಮೇಸೇಜ್ ಮಾಡಿದರೆ ಮಾಡುವುದಾದರೂ ಏನು?

ರಜೆ ಕೊಡುವುದು ತಪ್ಪಲ್ಲ…

ತೂಫಾನ್ ಬರುತ್ತದೆ, ಧಾರಾಕಾರ ಮಳೆ ಸುರಿಯುತ್ತದೆ ಎಂದು ಜಿಲ್ಲಾಧಿಕಾರಿಗಳು ರಜೆ ಕೊಡುವುದು ತಪ್ಪಲ್ಲ. ಮಳೆಯಿಂದ ಆಗುವ ಅನಾಹುತವನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ಹೀಗೆ ಮಾಡುತ್ತಾರೆ. ಆದರೆ ನಾನು ಹೇಳುವುದು ಏನೆಂದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಜಿಲ್ಲೆಯ ಅಷ್ಟೂ ಶಾಲೆಗಳ ಮುಖ್ಯೋಪಾಧ್ಯಾಯರ ಮೊಬೈಲ್ ನಂಬ್ರ ಇರಬೇಕು. ಒಂದು ವೇಳೆ ಇಲ್ಲದಿದ್ದರೆ ತೆಗೆದುಕೊಂಡು ಇಡಬೇಕು. ನಾಳೆ ಬೆಳಿಗ್ಗೆ ಸಿಕ್ಕಾಪಟ್ಟೆ ಪ್ರಕೃತಿ ವಿಕೋಪ ಸಂಭವಿಸಲಿದೆ ಎಂದು ಹವಾಮಾನ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ಬಂದ ಕೂಡಲೇ ತಕ್ಷಣ ಇಬ್ಬರೂ ಸಮಾಲೋಚಿಸಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ರಜೆ ಕೊಡುವ ತೀರ್ಮಾನವನ್ನು ಜಿಲ್ಲಾಧಿಕಾರಿಗಳು ತೆಗೆದುಕೊಂಡ ಕೂಡಲೇ ತಮ್ಮ ಕಚೇರಿಯಿಂದ ಎಲ್ಲಾ ಮುಖ್ಯೋಪಾಧ್ಯಾಯರ ಮೊಬೈಲಿಗೆ ರಜೆಯ ಆದೇಶವನ್ನು ನೀಡಬೇಕು. ಇದರಿಂದ ಏನಾಗುತ್ತದೆ ಎಂದರೆ ರಾತ್ರಿಯೇ ಮುಖ್ಯೋಪಾಧ್ಯಾಯರು ಅದನ್ನು ಎಲ್ಲಾ ಪೋಷಕರ ಮೊಬೈಲಿಗೆ ಕಳುಹಿಸಲು ಅಗತ್ಯ ಇರುವ ವ್ಯವಸ್ಥೆ ಮಾಡಲು ಸಹಾಯವಾಗುತ್ತದೆ. ಆಗ ರಾತ್ರಿಯೇ ಪೋಷಕರಿಗೆ ನಾಳೆ ಬೆಳಿಗ್ಗೆ ಮಗುವನ್ನು ಶಾಲೆಗೆ ಕಳುಹಿಸಲು ಇಲ್ಲ ಎಂದು ಕನ್ಫರ್ಮ್ ಆಗುತ್ತದೆ. ಇದರಿಂದ ಮಗು ಮನೆಯಲ್ಲಿ ಉಳಿಯುತ್ತದೆ.

ರಿಸ್ಕ್ ತಪ್ಪಿಸುವುದಕ್ಕೆ ಸಹಕಾರಿ…

ಆದರೆ ಬೆಳಿಗ್ಗೆ ಶಾಲೆಗೆ ಬಂದ ಮಕ್ಕಳನ್ನು ಅವರ ಪೋಷಕರು ಬರುವ ತನಕ ಶಿಕ್ಷಕರು ಕಾಯಬೇಕು. ಸ್ವಲ್ಪ ದೊಡ್ಡ ಮಕ್ಕಳು ಏನು ಮಾಡುತ್ತಾರೆ ಎಂದರೆ ಹೇಗೂ ರಜೆ ಕೊಟ್ಟಿದ್ದಾರೆ ಗಮ್ಮತ್ ಮಾಡೋಣ ಎಂದು ಹತ್ತಿರದ ಕೆರೆಯಲ್ಲಿಯೋ ನದಿಯಲ್ಲಿಯೋ ಈಜಾಡಲು ಹೋದರೆ ಅದನ್ನು ನೋಡುವವರು ಯಾರು? ತಂದೆ, ತಾಯಿ ಕೆಲಸಕ್ಕೆ ಹೋಗಿರುತ್ತಾರೆ, ಟೀಚರ್ಸ್ ಶಾಲೆಯಿಂದ ಕಳುಹಿಸಿರುತ್ತಾರೆ. ಈ ರಿಸ್ಕ್ ಕೂಡ ಇದೆ. ಆದ್ದರಿಂದ ಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಳಿತುಕೊಂಡು ಇಂತಹ ಸಮಸ್ಯೆ ಮತ್ತೆ ಕ್ರಿಯೇಟ್ ಆಗದಂತೆ ನೋಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನ್ನದು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search