• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅರ್ಜುನ್ ಅಮೃತಾ ಮದುವೆ ಹೇಗಿತ್ತು? ಇಲ್ಲಿದೆ ಅರ್ಜುನ್ ಅಮೃತಾಳ ಜಾತಕ!

TNN Correspondent Posted On July 21, 2017


  • Share On Facebook
  • Tweet It

ನಾಯಕಿ ನಾಯಕನ ಬಗ್ಗೆ ಅಪಾರ್ಥ ಮಾಡಿಕೊಳ್ಳುವುದರ ಮೂಲಕ ಸಿನಿಮಾಗೆ ಚಾಲನೆ ಸಿಗುತ್ತದೆ. ಹೀಗೆ ಮೆಲ್ಲನೆ ಸಾಗುವ ಸಿನಿಮಾ ಬೇರೆ ಬೇರೆ ವಿಷಯಗಳನ್ನು ಮೆಲುಕು ಹಾಕುವುದರ ಮೂಲಕ ಪ್ರೇಕಕ್ಷರಲ್ಲಿ ಕುತೂಹಲವನ್ನು ಹೆಚ್ಚು ಮಾಡುತ್ತಾ ಸಾಗುತ್ತದೆ. ಸಿನಿಮಾದಲ್ಲಿ ಕಾಮಿಡಿ, ಬೇಜಾರು, ಖುಷಿ ಎಲ್ಲದರ ಮಿಶ್ರಣವನ್ನು ಸರಿಯಾಗಿ ಒಂದು ಪ್ಯಾಕೇಜ್ ನಲ್ಲಿ ಕೊಡುವುದರ ಮೂಲಕ ಚಿತ್ರದ ನಿರ್ದೇಶಕ ರಘು ಶೆಟ್ಟಿ ಯಶಸ್ವಿಯಾಗಿದ್ದಾರೆ. ಮದುವೆ ಹೇಗೆ ನಡೆಯುತ್ತದೆ? ಯಾರಾ ಮದುವೆ ನಡೆಯುತ್ತದೆ? ಅರ್ಜುನ್ ಅಮೃತಾಳನ್ನು ಮದುವೆ ಆಗುವನೆ ಎಂಬುವ ಕುತೂಹಲವೇ ಚಿತ್ರದ ಕಥಾವಸ್ತು!
ಕೇವಲ ಕಾಮಿಡಿ ಮಾತ್ರವಲ್ಲ ಯಾವುದೇ ಪಾತ್ರವನ್ನು ಸರಿಯಾಗಿ ನಿಭಾಯಿಸಬಲ್ಲೇ ಎಂದು ನಮ್ಮ ತುಳು ಚಿತ್ರ ರಂಗದ ಕುಸುಲ್ದರಸೆ ನವೀನ್ ಡಿ ಪಡೀಲ್ ಏಸ ಚಿತ್ರದ ನಂತರ ಮತ್ತ್ಮೊಮ್ಮೆ ಸಾಬೀತು ಪಡಿಸಿದ್ದಾರೆ.  ಚಿತ್ರದಲ್ಲಿ ಭೋಜ್ ರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಸತೀಶ್ ಬಂದಾಳೆ, ಉಮೇಶ್ ಮಿಜಾರ್ ಅವರ ಕಾಮಿಡಿ ಚೆನ್ನಾಗಿ ಮೂಡಿ ಬಂದಿದ್ದು ನಿಮ್ಮನ್ನು ನಗಿಸುವುದರಲ್ಲಿ ಎರಡು ಮಾತಿಲ್ಲ. ಚಿತ್ರದ ನಾಯಕ ಅನೂಪ್ ಸಾಗರ್ ನಾಯಕಿ ಆರಾಧ್ಯ ಶೆಟ್ಟಿ ಚೆನ್ನಾಗಿ ನಟಿಸಿದ್ದು ತುಳು ಸಿನಿಮಾ ರಂಗದ ಭರವಸೆಯ ಜೋಡಿ ಎಂದು ಭೇಷ್ ಅನ್ನಿಸಿ ಕೊಂಡಿದ್ದಾರೆ.
ಚಿತ್ರದ ಹಾಡುಗಳು ಹಾಗೂ ಅದರ ಚಿತ್ರೀಕರಣ ಬಹಳಷ್ಟು ಸುಂದರವಾಗಿ ಮೂಡಿಬಂದಿದ್ದು ಚಿತ್ರದ ಕ್ಯಾಮರ ತಂಡದ ಕೆಲಸ ಮೆಚ್ಚಲೇ ಬೇಕು. ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ಕಾಣಿಸಿಕೊಳ್ಳುವ ಅನುರಾಗ್ ಬಂಗೇರ ಉತ್ತಮವಾಗಿ ಅಭಿನಯಿಸಿದ್ದು ತಮ್ಮ ಸಿನಿಮಾ ರಂಗದ ಪ್ರಯಾಣದ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡಿದ್ದಾರೆ.  ನಾಯಕ-ನಾಯಕಿಯ ಹಾಗೂ ಚಿತ್ರದ ಎಲ್ಲ ಕಲಾವಿದರ ಉಡುಪುಗಳ ವೈವಸ್ಥೆ ಹಾಗೂ ಅದರ ಅಂದ-ಚೆಂದವನ್ನು ಡಿಸೈನರ್ ಮಂತ್ರದ ಜೀವನ ಗಟ್ಟಿ ಹೆಚ್ಚಿಸಿಕೊಟ್ಟಿದಾರೆ.
ಒಟ್ಟಿನಲ್ಲಿ ಕಾಮಿಡಿ ಮಾತ್ರವಲ್ಲದೆ ಸಂತೋಷ, ಬೇಜಾರು, ಸಂಭ್ರವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ತುಳು ಚಿತ್ರರಂಗದಲ್ಲಿ ಕಾಮಿಡಿ ಮಾತ್ರವಲ್ಲದೆ ಇಂತಹ ಸಿನಿಮಾಗಳು ಹೆಚ್ಚಾಗಿ ಬರಬೇಕು ಎನ್ನುವುದು ಸಿನಿಪ್ರಿಯರ ಅನಿಸಿಕೆ. ಪ್ರೇಕ್ಷಕರ ಪ್ರಕಾರ ಸಿನಿಮಾ ಸ್ವಲ್ಪ ಮಟ್ಟಿಗೆ ನಿಧಾನವಾದರು ಸಿನಿಮಾದಲ್ಲಿ ಹೊಸತನವಿದೆ ಅನ್ನುವ ಮಾತು ಕೇಳಿ ಬರುತ್ತಿದೆ. ಅರ್ಜುನ್-ಅಮೃತಾ ಮದುವೆ ನೋಡಲು ಹೋದವರಿಗೆ ಯಾರಾ ಮದುವೆ ನೋಡಲು ಸಿಗುತ್ತದೆ ಅನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್! ಅಂತು-ಇಂತು ಇಷ್ಟು ದಿನದಿಂದ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದ ಚಿತ್ರ ಇಂದು ತೆರೆ ಕಂಡಿದೆ.
  • Share On Facebook
  • Tweet It


- Advertisement -


Trending Now
ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
Tulunadu News May 22, 2025
ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
Tulunadu News May 22, 2025
Leave A Reply

  • Recent Posts

    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
    • ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
    • ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
  • Popular Posts

    • 1
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 2
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • 3
      ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • 4
      ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • 5
      ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search