• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಇಸ್ಲಾಂ ಕುರಿತು ಜಮ್ಮುವಿನಲ್ಲಿ ಈ ಹಿಂದೂವಿಗೆ ಇರುವ ಸಹಿಷ್ಣುತೆ ಕುರಿತು ಯಾರೂ ಏಕೆ ಸುದ್ದಿ ಮಾಡಲ್ಲ?

TNN Correspondent Posted On June 10, 2018
0


0
Shares
  • Share On Facebook
  • Tweet It

ಶ್ರೀನಗರ: ದೇಶದಲ್ಲಿ ಹಿಂದೂಗಳು ಎಂದರೆ ಅಸಹಿಷ್ಣುಗಳು, ಪರ ಧರ್ಮೀಯರನ್ನು ಸಹಿಸುವುದಿಲ್ಲ ಎಂದೇ ಕೆಲವರು ಬಿಂಬಿಸುತ್ತಾರೆ. ದೇಶ, ರಾಷ್ಟ್ರೀಯತೆ ಹಾಗೂ ಪರಧರ್ಮೀಯರ ಸೈರಣೆ ಮಾಡುವುದು ಹಿಂದೂಗಳಿಗೆ ಬರುವುದಿಲ್ಲ ಎಂಬ ಮಿಥ್ಯವನ್ನು ಬಿತ್ತುತ್ತಿದ್ದಾರೆ. ಆದರೆ ಅವರಿಗೇನು ಗೊತ್ತು ಹಿಂದೂಗಳು ಇತಿಹಾಸದಲ್ಲಿ ಎಂದಿಗೂ ಪರ ಧರ್ಮೀಯರ ಮೇಲೆ ದಾಳಿ ಮಾಡಿಲ್ಲ ಎಂದು? ಅಥವಾ ಗೊತ್ತಿದ್ದರೂ ಹಿಂದೂಗಳನ್ನು ಕೆಟ್ಟದಾಗಿ ಬಿಂಬಿಸುತ್ತಾರೇನೋ?

ಆದರೂ ಹಿಂದೂಗಳು ಮಾತ್ರ ಪರ ಧರ್ಮೀಯರನ್ನು, ಪರ ಧರ್ಮವನ್ನು ಗೌರವಿಸುತ್ತಲೇ ಬಂದಿದ್ದಾರೆ. ಈಗ ಹಿಂದೂಗಳ ಇಂಥ ಧರ್ಮ ಸಹಿಷ್ಣುಗೆ ಜಮ್ಮುವಿನಲ್ಲಿ ಜೀವಂತ ನಿದರ್ಶನವೊಂದು ದೊರೆತಿದೆ.

ಹೌದು, ಜಮ್ಮುವಿನಲ್ಲಿ ವಾಸಿಸುತ್ತಿರುವ ಸುರೇಶ್ ಅಬ್ರೋಲ್ ಅವರು ಇಸ್ಲಾಂ ಧರ್ಮದ ಮೇಲಿರುವ ಗೌರವದ ಹಿನ್ನೆಲೆಯಲ್ಲಿ ಇಸ್ಲಾಂ ಹಾಗೂ ಕುರ್ರಾನ್ ಕುರಿತ ಪುರಾತನ ಹಸ್ತಪ್ರತಿ ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಜಮ್ಮು-ಕಾಶ್ಮೀರ ಸಾಂಸ್ಕೃತಿಕ ಅಕಾಡೆಮಿ ಆಯೋಜಿಸಿದ್ದ ಇಸ್ಲಾಮಿಕ್ ವಸ್ತು ಪ್ರದರ್ಶನದಲ್ಲಿ ಈ ಹಿಂದೂ ಸಂಗ್ರಹಿಸಿರುವ ಹಸ್ತಪ್ರತಿಗಳು ಎಲ್ಲರ ಗಮನ ಸೆಳೆದಿವೆ.

ಸುರೇಶ್ ಅಬ್ರೋಲ್ ಬರೋಬ್ಬರಿ ಒಂದು ಶತಮಾನದ ಹಿಂದಿನ ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದು, ಇಸ್ಲಾಂ ಧರ್ಮದ ಪ್ರಾಮುಖ್ಯತೆ, ಇಸ್ಲಾಮಿನ ಸಂದೇಶ ಸಾರುವ ಹಲವು ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ.

ಆದರೆ ದೇಶದಲ್ಲಿ ಹಿಂದೂಗಳು ಗೋರಕ್ಷಣೆಗೆ ಮುಂದಾದರೆ ಅದನ್ನು ದೌರ್ಜನ್ಯ ಎನ್ನುತ್ತಾರೆ, ಹಿಂದುತ್ವ ಎಂದರೆ ಬೇರೆ ಧರ್ಮದ ಬಗ್ಗೆ ಸೈರಣೆ ಇಲ್ಲದವರು ಎಂದು ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಆದರೆ ಇದೇ ಹಿಂದೂವೊಬ್ಬ ಇಸ್ಲಾಂ ಧರ್ಮದ ಮೇಲಿನ ಗೌರವದಿಂದ ಹೀಗೆ ನೂರಾರು ವರ್ಷಗಳ ಹಸ್ತಪ್ರತಿ ಸಂಗ್ರಹಿಸಿ ಸೌಹಾರ್ದತೆ ಮೆರೆದಿರುವ ಕುರಿತು ಬಹುತೇಕ ಮಾಧ್ಯಮಗಳು ವರದಿ ಮಾಡಲ್ಲ. ಯಾವ ಜಾತ್ಯತೀತ, ಪ್ರಗತಿಪರರೂ ಇದನ್ನು ಶ್ಲಾಘಿಸುವುದಿಲ್ಲ.

 

0
Shares
  • Share On Facebook
  • Tweet It




Trending Now
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
Tulunadu News March 11, 2026
ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
Tulunadu News March 11, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
  • Popular Posts

    • 1
      ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • 2
      ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • 3
      ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search