• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚೀನಾ ನೆಲದಲ್ಲಿ ನಿಂತು, ಅದೇ ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರು ಹೇಗೆ ತಪರಾಕಿ ನೀಡಿದ್ದಾರೆ ನೋಡಿ!

TNN Correspondent Posted On June 11, 2018
0


0
Shares
  • Share On Facebook
  • Tweet It

ಶಾಂಘೈ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇಡೀ ವಿಶ್ವದಲ್ಲೇ ಭಾರತದ ಖ್ಯಾತಿ ದ್ವಿಗುಣವಾಗುತ್ತಿದೆ. ಅದಕ್ಕೆ ಕಾರಣ ಮೋದಿ ಪ್ರಭಾವ ಹಾಗೂ ದೇಶ ಅಭಿವೃದ್ಧಿಯಾಗುತ್ತಿರುವುದೇ ಇದೆ. ಹಾಗಂತ ಎಂದಿಗೂ ನರೇಂದ್ರ ಮೋದಿ ಅವರು ವಿಶ್ವದ ಎದುರು ಕೈಚಾಚಿ ನಿಲ್ಲುವುದಾಗಲಿ, ಯಾರನ್ನೇ ಬೇಡಿಕೊಳ್ಳುವುದಾಗಲಿ ಮಾಡಿಲ್ಲ. ಇಂತಹ ಸ್ವಾಭಿಮಾನಿ ಪ್ರಧಾನಿ ಇರುವುದರಿಂದಲೇ ಭಾರತ ವಿಶ್ವವಿಖ್ಯಾತವಾಯಿತು ಎಂದರೂ ಅತಿಶಯೋಕ್ತಿಯೇನಲ್ಲ.

ಈಗ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದು, ಚೀನಾ ನೆಲ್ಲದಲ್ಲಿ ನಿಂತು, ಅದೇ ನೆಲದಲ್ಲಿ ಆ ರಾಷ್ಟ್ರಕ್ಕೆ ತಪರಾಕಿ ನೀಡುವ ಮೂಲಕ ನರೇಂದ್ರ ಮೋದಿ ಎಲ್ಲರ ಗಮನ ಸೆಳೆದಿದ್ದಾರೆ ಹಾಗೂ ಭಾರತದ ದೃಢ ನಿರ್ಧಾರದ ಬಗ್ಗೆ ಸಂದೇಶ ಸಾರಿದ್ದಾರೆ.

ಹೌದು, ಭಾನುವಾರವಷ್ಟೇ ಚೀನಾದ ಕಿಂಗ್ಡಾವೋದಲ್ಲಿ ನಡೆದ 18ನೇ ಶಾಂಘೈ ಸಹಕಾರ ಸಂಸ್ಥೆಯ 18ನೇ ಸಭೆಯಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರು ಚೀನಾದ ಮಹತ್ತರ ಒಂದು ಪ್ರದೇಶ, ಒಂದು ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಎಸ್ಸಿಒ 8 ಸದಸ್ಯ ರಾಷ್ಟ್ರಗಳಲ್ಲಿ ಏಳು ರಾಷ್ಟ್ರಗಳು ಚೀನಾದ ಒಆರ್ ಒಪಿ ಯೋಜನೆಗೆ ಬೆಂಬಲೆ ಸೂಚಿಸಿವೆ. ಆದರೆ ನರೇಂದ್ರ ಮೋದಿ ಅವರು ಮಾತ್ರ ಪಾಕ್ ಆಕ್ರಮಿತ ಕಾಶ್ಮೀರ ಸೇರಿ ಭಾರತದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡದೇ ಇರುವ ಮೂಲಕ ದಿಟ್ಟತನ ಮೆರೆದಿದ್ದಾರೆ.

ಹಾಗಂತ ನರೇಂದ್ರ ಮೋದಿ ಅವರೇನು ಚೀನಾದ ವಿರೋಧ ಕಟ್ಟಿಕೊಟ್ಟಿಲ್ಲ. ಬದಲಾಗಿ ಎಸ್ಸಿಒ ಸಭೆಯ ನಡುವೆಯೇ ಚೀನಾ ಜತೆ ಎರಡು ಒಪ್ಪಂದ ಮಾಡಿಕೊಂಡಿದ್ದಾರೆ. ಬ್ರಹ್ಮಪುತ್ರ ನದಿ ನೀರಿನ ದತ್ತಾಂಶ ನೀಡುವ ಹಾಗೂ ಭಾರತದಿಂದ ಚೀನಾಕ್ಕೆ ಬಾಸುಮತಿ ಅಕ್ಕಿ ಹೊರತಾದ ಅಕ್ಕಿ ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಒಆರ್ ಒಬಿ ವಿಷಯದಲ್ಲಿ ಮಾತ್ರ ಮೋದಿ ತಮ್ಮ ಕಠಿಣ ನಿಲುವನ್ನು ಸಡಿಲಗೊಳಿಸದೆ ಹೆಮ್ಮೆ ಮೂಡಿಸಿದ್ದಾರೆ. ಅದೂ ಚೀನಾದ ನೆಲದಲ್ಲೇ ನಿಂತು, ಚೀನಾಕ್ಕೆ ತಪರಾಕಿ ನೀಡುವುದು ಎಂದರೆ ಸುಮ್ಮನೆಯಾ?

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!

  • Privacy Policy
  • Contact
© Tulunadu Infomedia.

Press enter/return to begin your search