• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಕ್ಸಲಿಸಂಗೆ ಪ್ರಚೋದನೆ ನೀಡುತ್ತಿದ್ದ, ಕೆಂಪು ಉಗ್ರರ ಮಾಸ್ಟರ್ ಮೈಂಡ್ ನನ್ನು ಬಂಧಿಸಿದ ಪೊಲೀಸರು

TNN Correspondent Posted On June 13, 2018
0


0
Shares
  • Share On Facebook
  • Tweet It

ರಾಯಪುರ: ಛತ್ತಿಸಗಢ್ ಸೇರಿ ದೇಶಾಧ್ಯಂತ ನಡೆಯುತ್ತಿರುವ ಮಾವೋವಾದಿಗಳ ಅಟ್ಟಹಾಸದ ದುಷ್ಕೃತ್ಯಗಳಿಗೆ ಬೆಂಬಲ ನೀಡುತ್ತ, ನಕ್ಸಲಿಸಂಗೆ ತನ್ನ ಪ್ರಖರ ಬರಹಳಗ ಮೂಲಕ ಮುಗ್ದರನ್ನು ಕಾಡಿಗೆ ಅಟ್ಟುತ್ತಿದ್ದ ಮಾವೋವಾದಿಗ ಮಾಸ್ಟರ್ ಮೈಂಡ್ ಅಭಯದೇವದಾಸ್ ನಾಯಕ್ ನನ್ನು ಛತ್ತೀಸಗಡ್ ಪೊಲೀಸರು ಬಂಧಿಸಿದ್ದಾರೆ.

ಈತ ಮಾವೋವಾದಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಾವೋವಾದಿಗಳಿಗೆ ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಪಿಐ(ಮಾವೋಯಿಸ್ಟ್) ವಿಭಾಗದಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದ. ಮಾವೋವಾದಿಗಳಿಗೆ ಪ್ರಚೋಧನಕಾರಿ ಲೇಖನಗಳನ್ನು ಬರೆಯುವುದು, ಮಾಧ್ಯಮ ಪ್ರಕಟಣೆಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತಿದ್ದ ಎನ್ನಲಾಗಿದೆ.

35 ವರ್ಷದ ಅಭಯ ದೇವದಾಸ್ ನಾಯಕ್ 15 ರಾಷ್ಟ್ರಗಳನ್ನು ಇದುವರೆಗೆ ಭೇಟಿ ಮಾಡಿದ್ದು, ಸಕ್ರಿಯವಾಗಿರುವ ಮಾವೋ ಕ್ರಾಂತಿಕಾರಿಗಳ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಈತನ ವಿರುದ್ಧ ಭಾರತ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದು, 2017 ಮೇ ಅರೆಸ್ಟ್ ವಾರೆಂಟ್ ಸಹ ನೀಡಲಾಗಿತ್ತು. ಜೂನ್ ಒಂದರನ್ನು ದೆಹಲಿಯ ಏರ್ ಪೋರ್ಟ್ ನಲ್ಲಿ ಬಂಧಿಸಲಾಗಿದೆ.

ದೇವದಾಸ ಅರ್ಬನ್ ಮಾವೋವಾದಿಗಳ(ನಗರದಲ್ಲಿರುವ ನಕ್ಸಲರು) ಜೊತೆ ಮಹತ್ವದ ಸಂಪರ್ಕ ಹೊಂದಿದ್ದಾನೆ. ದೇವದಾಸ್ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೋರಾಟಕ್ಕೆ ಇಳಿದಿದ್ದು, ಆತನ ರಕ್ಷಣಾ ಚಾತುರ್ಯ ಮಹತ್ವದ್ದಾಗಿದ್ದು, ಕಮ್ಯುನಿಸ್ಟ್ ಮಾವೋವಾದಿಗಳೊಂದಿಗೆ ಆನ್ ಲೈನ್ ಮೂಲಕ ವ್ಯವಹಾರ ಮಾಡುತ್ತಿದ್ದ. ಅಂತರ್ಜಾಲದ ಮೂಲಕವೇ ನಕ್ಸಲರ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ. ಮಾಧ್ಯಮ ಪ್ರಕಟಣೆಗಳನ್ನು ಈತ ಪ್ರಕಟಿಸುತ್ತಿದ್ದ ಎಂದು ಬಸ್ತಾರ ಪ್ರದೇಶದ ಐಜಿ ವಿವೇಕಾನಂದ ಸಿನ್ಹಾ ತಿಳಿಸಿದ್ದಾರೆ.

ಎರಡು ವರ್ಷದಿಂದ ಈತನ ಬೆನ್ನು ಬಿದ್ದಿರುವ ಪೊಲೀಸರ ಕೈಗೆ ಇದೀಗ ಸಿಕ್ಕು ಬಿದ್ದಿದ್ದಾನೆ. 2017ರಲ್ಲಿ ಲಕ್ಸಂಬರ್ಗ್, ಬೆಲ್ಜಿಯಂ, ಫ್ರಾನ್ಸ್, ನೆದರ್ ಲ್ಯಾಂಡ್, ಇಂಗ್ಲೆಡ್,  ಮೆಕ್ಸಿಕೋ, ಗುಟೇಮಾಲಾ, ಕಾಂಬೋಡಿಯಾ, ಸಿಂಗಾಪುರ, ರಷ್ಯಾ, ಇಂಡೋನೇಷಿಯಾ ಸೇರಿ 15 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾನೆ. ಈತನ ವಿರುದ್ಧ ಲುಕ್ ಔಟ್ ಹೊರಡಿಸಿದ್ದು, ಇದೀಗ ಬಂಧಿಸಲಾಗಿದೆ.

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search