• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಗೌರಿ ಲಂಕೇಶ್ ಅವರಿಗೆ ಕರಗುವ ಮನ ಈ ಸಂಪಾದಕನ ಹತ್ಯೆಗೆ ಏಕೆ ಮಿಡಿಯುವುದಿಲ್ಲ?

ನವೀನ್ ಶೆಟ್ಟಿ ಮಂಗಳೂರು Posted On June 15, 2018
0


0
Shares
  • Share On Facebook
  • Tweet It

ರಾಜ್ಯಮಟ್ಟದ ಹಾಗೂ ದಿನಪತ್ರಿಕೆಗಳ ಮಧ್ಯೆ ಕಳೆದೇ ಹೋಗಿದ್ದ ಲಂಕೇಶ್ ಪತ್ರಿಕೆ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆ ನಡೆಸುತ್ತಿದ್ದ ಗೌರಿ ಲಂಕೇಶ್ ಅವರ ಹತ್ಯೆಯಾದಾಗ ದೇಶದ ಹಲವೆಡೆಯಿಂದ ಜೀವಪರರು ಆಗಮಿಸಿದ್ದರು. ಎಲ್ಲಿದ್ದರೋ ಪ್ರಕಾಶ್, ಸೀದಾ ಬೆಂಗಳೂರಿಗೆ ಬಂದವರೇ, ಏನಾಗ್ತಿದೆರೀ ಕರ್ನಾಟಕದಲ್ಲಿ ಎಂದು ಪ್ರಶ್ನಿಸಿದರು. ರಾಜ್ಯದ ಹಲವೆಡೆಯಿಂದ ಬಂದ ಬುದ್ಧಿಜೀವಿಗಳು ನಾನು ಗೌರಿ ಅಭಿಯಾನ ನಡೆಸಿದರು. ಪರೋಕ್ಷವಾಗಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು. ಅಸಹಿಷ್ಣುತೆಯ ಬೊಬ್ಬೆ ಹಾಕಿದರು.

ಆದರೆ ಜಮ್ಮು-ಕಾಶ್ಮೀರದ ಪ್ರಮುಖ ದಿನಪತ್ರಿಕೆಯಾದ, ವೆಬ್ ಸೈಟ್ ಪತ್ರಿಕೋದ್ಯಮದಲ್ಲೂ ಜಾಗೃತವಾಗಿದ್ದ, ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯತೆಯ ಪ್ರತಿನಿಧಯಾಗಿರುವ, ದೇಶ ಪ್ರೇಮ ಎತ್ತಿ ಹಿಡಿಯುವ, ಪ್ರತ್ಯೇಕತಾವಾದಿಗಳ ನಿಜಬಣ್ಣ ಬಯಲು ಮಾಡುವ ರೈಸಿಂಗ್ ಕಾಶ್ಮೀರ ಪತ್ರಿಕೆಯ ಸಂಪಾದಕ ಶುಜಾತ್ ಭುಕಾರಿ ಹತ್ಯೆ ಮಾಡಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಒಬ್ಬ ಪತ್ರಿಕಾ ಸಂಪಾದಕನ ಹತ್ಯೆ ಮಾಡಲಾಗಿದೆ ಎಂದರೆ, ಆತ ದೇಶದ ಪರ ಹಾಗೂ ಉಗ್ರವಾದ, ಪ್ರತ್ಯೇಕತವಾದದ ವಿರೋಧವಾಗಿರುವವರೇ ಎಂದು ಅರ್ಥ. ಹಾಗೆಯೇ ರೈಸಿಂಗ್ ಕಾಶ್ಮಿರ ಪತ್ರಿಕೆಯ ಸಂಪಾದಕರಾಗಿ ಶುಜಾತ್ ಭುಕಾರಿ ಮಾಡುತ್ತಿದ್ದರು. ದೇಶದ ಸಮಗ್ರತೆ ಸಾರುವ ಲೇಖನ, ವರದಿಗಳು ಪ್ರಕಟವಾಗುತ್ತಿದ್ದವು. ಇದನ್ನು ಸಹಿಸದ ಕೆಲವರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಆದರೆ ಇಂತಹ ಒಬ್ಬ ಸಂಪಾದಕನ ಹತ್ಯೆಯಾದರೂ ದೇಶದಲ್ಲಿರುವ ಬುದ್ಧಿಜೀವಿಗಳಲ್ಲಿ ಒಬ್ಬರೇ ಒಬ್ಬರೂ ಸಂತಾಪ ಸೂಚಿಸಿಲ್ಲ. ಯಾವ ಪ್ರಕಾಶ್ ರೈ ಸಹ ಏನಾಗ್ತಿದೆರೀ ಕಾಶ್ಮೀರದಲ್ಲಿ ಎಂದು ಕೂಗು ಹಾಕಿಲ್ಲ. ಯಾವ ಜೀವಪರನೂ ಹತ್ಯೆಕೋರರ ವಿರುದ್ಧ ಒಂದೂ ಮಾತನಾಡಿಲ್ಲ. ಯಾರೂ ನಾನು ಶುಜಾತ್ ಭುಕಾರಿ ಎಂದು ಬೋರ್ಡ್ ಹಿಡಿದು ಪ್ರತಿಭಟನೆ ಮಾಡುತ್ತೇವೆ ಎಂದು ಮುಂದೆ ಬಂದಿಲ್ಲ. ಯಾಕೆ? ಗೌರಿ ಲಂಕೇಶ್ ಹತ್ಯೆಗೆ ಕರಗುವ ಮನ, ಈ ಸಂಪಾದಕನ ಹತ್ಯೆಗೆ ಏಕೆ ಮಿಡಿಯುವುದಿಲ್ಲ? ಉತ್ತರಿಸುವಿರಾ ಬುದ್ಧಿಜೀವಿಗಳೇ?

0
Shares
  • Share On Facebook
  • Tweet It




Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
ನವೀನ್ ಶೆಟ್ಟಿ ಮಂಗಳೂರು January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
ನವೀನ್ ಶೆಟ್ಟಿ ಮಂಗಳೂರು January 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
  • Popular Posts

    • 1
      ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • 2
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 3
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 4
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!

  • Privacy Policy
  • Contact
© Tulunadu Infomedia.

Press enter/return to begin your search