• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತಂದೆಯ ವೀರಗಾಥೆಯನ್ನು ಅಜ್ಜನ ಮೂಲಕ ಕೇಳಿ ತಾನೂ ಸೇನೆ ಸೇರಿದ ವೀರನ ಕತೆಯಿದು…

TNN Correspondent Posted On June 16, 2018
0


0
Shares
  • Share On Facebook
  • Tweet It

ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸೈನ್ಯದಲ್ಲಿದ್ದರೆ ಆ ಕುಟುಂಬವೇ ಹೆಮ್ಮೆ ಪಡುತ್ತದೆ. ಆದರೆ ಅದೇ ಸೈನಿಕ ಯುದ್ಧದಲ್ಲಿ ಹುತಾತ್ಮನಾದರೆ ಇಡೀ ಕುಟುಂಬ ಏಕೆ, ದೇಶವೇ ಕಣ್ಣಿರಿಡುತ್ತದೆ. ಆದರೂ ದೇಶಕ್ಕಾಗಿ ಹುತಾತ್ಮನಾದನಲ್ಲ ಯೋಧ ಎಂದು ಹೆಮ್ಮೆಪಡುತ್ತೇವೆ. ಅಷ್ಟರಮಟ್ಟಿಗೆ ಯೋಧನ ತ್ಯಾಗ ದೇಶದಲ್ಲಿ ಸ್ಮರಣಾರ್ಹವಾಗಿದೆ.

ಆದರೆ ಆ ಯೋಧ 1996ರಲ್ಲಿ ಜಮ್ಮುಕಾಶ್ಮೀರದಲ್ಲಿ ಹುತಾತ್ಮನಾದಾಗಾಗ ಆ ಪುಟ್ಟ ಮಗುವಿಗೆ ಕೇವಲ 9 ತಿಂಗಳು ವಯಸ್ಸು. ಅಪ್ಪನ ಎದೆಗೆ ಒದ್ದು ಆಟವಾಡೋ ವಯಸ್ಸಲ್ಲಿ ತಂದೆಯನ್ನೇ ಕಳೆದುಕೊಂಡ ಆ ಮಗುವಿಗೆ ವಿಧಿಯೇ ದ್ರೋಹ ಬಗೆದಿತ್ತು. ಇಷ್ಟಾದರೂ ಈ ಮಗುವಿನ ಆ ಮಹಾತಾಯಿ ಇದ್ದೊಬ್ಬ ಮಗನನ್ನೂ ಸೇನೆಗೆ ಸೇರಿಸುವ ನಿಶ್ಚಿಯ ಮಾಡಿ ದಿಟ್ಟತನ ಮೆರೆದರು.

ಈ ಕತೆ ಬಿಎಸ್ಎಫ್ ಡೆಪ್ಯೂಟಿ ಕಮಾಂಡರ್ ಆಗಿದ್ದ ಸುಭಾಶ್ ಶರ್ಮಾ ಪುತ್ರ ಕ್ಷಿತಿಜ್ ಶರ್ಮಾರದ್ದು. ಈತನೂ ತಂದೆಯಂತೆಯೇ ಸೇನೆಯಲ್ಲಿ ಸೇರಿ ದೇಶಸೇವೆ ಮಾಡಲಿ ಎಂದು ಶಪಥಗೈದ ಆ ತಾಯಿ ಹೆಸರು ಬಬಿತಾ ಶರ್ಮಾ. 22 ವರ್ಷದ ಕ್ಷಿತಿಜ್ ಶರ್ಮಾ ಮೊನ್ನೆಯಷ್ಟೆಯೇ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ) ಪರೀಕ್ಷೆಯಲ್ಲಿ ಉತ್ತೀರ್ಣನಾಗಿ, ಲೆಫ್ಟಿನೆಂಟ್ ಕಮಾಂಡರ್ ಎನಿಸಿದ್ದಾನೆ.

ನನ್ನ ಗಂಡ ಹುತಾತ್ಮನಾದ ಬಳಿಕ ನಾನೊಬ್ಬ ವಿಧವೆ ಎಂದು ದುಃಖಪಡುತ್ತ ಕೂರಲಿಲ್ಲ. ದೇಶಕ್ಕಾಗಿ ಮಡಿದ ನನ್ನ ಗಂಡನ ಬಗ್ಗೆ ನನಗೆ ಇಂದಿಗೂ ಹೆಮ್ಮೆಯಿದೆ. ಅಂತಹ ಹೆಮ್ಮೆಪಡುವ ಯೋಧನಂತೆಯೇ ನನ್ನ ಮಗನೂ ಸೇನೆ ಸೇರಲಿ ಎಂದು ಆಗಲೇ ಶಪಥ ಮಾಡಿದೆ ಎನ್ನುತ್ತಾರೆ ಬಬಿತಾ ಶರ್ಮಾ.

ಇತ್ತ ಕ್ಷಿತಿಜ್ ಶರ್ಮಾನೂ ಅಷ್ಟೇ, ನನ್ನ ತಂದೆಯ ದಿಟ್ಟತನದ ಬಗ್ಗೆ ನನ್ನ ತಾತ ವಿವರಿಸಿ ಹೇಳುತ್ತಿದ್ದರು. ಅವರ ಮಾತು ಕೇಳಿದಾಗಲೆಲ್ಲ, ತಂದೆಯ ಕೊಡುಗೆ ನೆನಪಾದಾಗಲೆಲ್ಲ ನಾನೂ ದೇಶಕ್ಕಾಗಿ ಏನಾದರೂ ಮಾಡಬೇಕು ಎನಿಸುತ್ತಿತ್ತು. ಅಮ್ಮನ ಆಸೆಯೂ ಅದೇ ಆಗಿದ್ದರಿಂದ ನಾನೂ ಸೇನೆಗೆ ಸೇರಿದೆ ಅಂತಾರೆ. ಈ ಕುಟುಂಬಕ್ಕೊಂದು ಸೆಲ್ಯೂಟ್ ಇರಲಿ.

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Tulunadu News July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Tulunadu News July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search